Ad Widget

ಚೆಂಬು : ಭಗವಾನ್ ಸಂಘ ಊರುಬೈಲು ವತಿಯಿಂದ ಸೇತುವೆಗಳ ಸ್ವಚ್ಚತೆ

ಆಗಸ್ಟ್ ಒಂದರಿಂದ ಹದಿನೈದರವರೆಗಿನ “ಸ್ವಚ್ಚ ಭಾರತ್ ಪಾಕ್ಷಿಕ ಅಭಿಯಾನ” ಯೋಜನೆ ಅಂಗವಾಗಿ ನೆಹರು ಯುವ ಕೇಂದ್ರ, ಮಡಿಕೇರಿ ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ ,ಊರುಬೈಲು, ಇದರ ಸದಸ್ಯರು ಆಗಸ್ಟ್ 1ರಂದು ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಚಗೊಳಿಸಿ ,ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.
ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ಯತೀಶ್ ಹನಿಯಡ್ಕ ಸಂಘದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಸ್ವಚ್ಚತಾ ಪ್ರತಿಜ್ಞಾವಿಧಿ ಭೋದಿಸಿದರು. ಬಳಿಕ ಗ್ರಾಮದ ಬಾಲಂಬಿ ,ಕೂಡಡ್ಕ ,ಕೆಲ್ಸಿಕಾನ ,ದೇವಾಲಯ ಮತ್ತು ಏಣಿಯಾರು ಸೇತುವೆಗಳನ್ನು ಶುಚಿಗೊಳಿಸಲಾಯಿತು.
ಅಭಿಯಾನದ ನೇತೃತ್ವವನ್ನು ಪಯಸ್ವಿನಿ ಸೊಸೈಟಿ ಅಧ್ಯಕ್ಷರಾದ ಯನ್.ಸಿ ಅನಂತ್ ಊರುಬೈಲು, ಸಂಘದ ಅದ್ಯಕ್ಷ ಶ್ರೀ ದಿನೇಶ್ ಸಣ್ಣಮನೆ ವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!