Ad Widget

ಬೆಳ್ಳಾರೆ : ಖಾಸಗಿ ರಸ್ತೆಯಲ್ಲಿ ಅಳವಡಿಸಿದ್ದ ಬೀದಿ ದೀಪ ತೆರವು ಮಾಡಿದ ಪಿಡಿಒ – ಜಾಲತಾಣದಲ್ಲಿ ಸುಳ್ಳು ಆರೋಪಕ್ಕೆ ಅಧ್ಯಕ್ಷರಿಂದ ಸ್ಪಷ್ಟನೆ

ಬೆಳ್ಳಾರೆ ಕೊಳಂಬಳ ಅರ್ನಾಡಿ ಎಂಬಲ್ಲಿ ಖಾಸಗಿ ರಸ್ತೆಗೆ ಪಂಚಾಯತ್ ಬೀದಿದೀಪ ಅಳವಡಿಸಿದ್ದನ್ನು ಪಿಡಿಒ ನೇತೃತ್ವದಲ್ಲಿ ತೆರವು ಮಾಡಲಾಗಿತ್ತು. ಈ ಕುರಿತು ಸರಿಯಾದ ಕ್ರಮ ಕೈಗೊಂಡಿದ್ದರೂ ಪಿಡಿಒ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ರು.

ಬಿಜೆಪಿ ಕಾರ್ಯಕರ್ತನ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಗೆ ಹೋಗುವ ಬೀದಿ ದೀಪ ತೆರವುಗೊಳಿಸಿದ್ದಾರೆ. ಅನಿಲ್ ರೈ ಕುಮ್ಮಕ್ಕಿನಿಂದ ಗ್ರಾಂ ಪಂ. ಬೆಳ್ಳಾರೆ ಪಿಡಿಒ ಭವ್ಯ ಅವರು ಸಾರ್ವಜನಿಕ ಬೀದಿ ದೀಪವನ್ನುವ ಕಡಿತಗೊಳಿಸಿದ್ದಾರೆ. ಬಿಜೆಪಿ ಆಡಳಿತಕ್ಕೆ ಪ್ರತಿ ವಿಷಯದಲ್ಲಿಯೂ ತೊಂದರೆಯನ್ನು ಕೊಡುವುದು ಪೀಡಿಸುವ ಉದ್ದೇಶವಾಗಿರುತ್ತದೆ .ಈ ಸಾರ್ವಜನಿಕ ರಸ್ತೆಯಲ್ಲಿ ಹಲವು ಸಲ ಅಪಘಾತಗಳಾಗಿದ್ದು, ಆತ್ಮಹತ್ಯೆ ಆಗಿತ್ತು. ಸಾರ್ವಜನಿಕ ದಾರಿಹೋಕರಿಗೆ ಭಯದ ವಾತಾವರಣ ನಿರ್ಮಾಣಗೊಂಡಿದೆ. ಸಾರ್ವಜನಿಕರು ಸಂಬಂಧಪಟ್ಟವರು ಪಿಡಿಒ ಎತ್ತಂಗಡಿ ಮಾಡಬೇಕಾಗಿದೆ ಎಂದು ಜಾಲತಾಣದಲ್ಲಿ ಬರೆಯಲಾಗಿದೆ.
ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಪನ್ನೆ ಅವರು ಅಮರಸುದ್ದಿಗೆ ಪ್ರತಿಕ್ರಿಯಿಸಿದ್ದು ಅವರ ಮನೆಗೆ ಹೂಗುವ ವೈಯಕ್ತಿಕ ರಸ್ತೆಯಲ್ಲಿ ಬೀದಿದೀಪ ಅಳವಡಿಸಲಾಗಿತ್ತು. ಆ ಕಾರಣಕ್ಕೆ ಅದನ್ನು ತೆರವುಗೊಳಿಸಿದ್ದಾರೆ. ಅದನ್ನು ಮುಖ್ಯ ರಸ್ತೆಯಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!