43 ವರ್ಷಗಳ ಇತಿಹಾಸವಿರುವ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ

ಜೇಸಿಐ ಸುಳ್ಯ ಪಯಸ್ವಿನಿ(ರಿ.) ಸುಳ್ಯ ಇದರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, 43 ವರ್ಷದ ಇತಿಹಾಸವಿರುವ ಜೇಸಿಐ ಭಾರತ ವಲಯ 15ರ ಪ್ರತಿಷ್ಠಿತ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ 2026ನೇ ಸಾಲಿನಲ್ಲಿ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಸಾಹಿತಿ, ಲೇಖಕಿ, ಸಂಘಟಕಿ, ಜೇಸಿ. ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು 44ನೇ ಅಧ್ಯಕ್ಷರಾಗಿ ನಿಯೋಜನೆಗೊಂಡಿರುತ್ತಾರೆ. ನಿಕಟಪೂರ್ವ...

ನಾಗಪಟ್ಟಣ ಸದಾಶಿವ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ರಚನೆಯು ಜಿಲ್ಲಾ  ಧಾರ್ಮಿಕ ಪರಿಷತ್ ನ ನಿರ್ಣಯದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 25 ರನ್ವಯ ಆದೇಶದಂತೆ  ಮುಂದಿನ 3 ವರ್ಷಗಳ ಅವಧಿಗೆ ರಚನೆಗೊಂಡಿದ್ದು, ನೂತನ ಸಮಿತಿಗೆ ಜ.1 ರಂದು ಆಡಳಿತಾಧಿಕಾರಿ ಸೃಜನ್ ಎ. ಜಿ. ಯವರು ಅಧಿಕಾರ...
Ad Widget

ಕನ್ನಡ ಪೆರಾಜೆ ಶಾಲೆಯಲ್ಲಿ ಶಾಸಕ ಪೊನ್ನಣ್ಣ ಅವರಿಂದ ಎಲ್‌.ಕೆ.ಜಿ ಕೊಠಡಿ ಉದ್ಘಾಟನೆ

ಪೆರಾಜೆ : ಕನ್ನಡ ಪೆರಾಜೆ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಎಲ್.ಕೆ.ಜಿ ತರಗತಿ ಕೊಠಡಿಯನ್ನು ಶಾಸಕರಾದ ಪೊನ್ನಣ್ಣರವರು ಡಿ.31 ರಂದು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಶಾಲೆಯ ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ವಿನುತಾ, ಸ್ಥಳೀಯರಾದ ಸುರೇಶ್ ಪೆರುಮುಂಡ,ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾಂಗ್ರೆಸ್...

ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಶ್ರೀಮತಿ ಶೋಭಾ ಜೀವನ್  ತೇರ್ಗಡೆ

ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಶ್ರೀಮತಿ ಶೋಭಾ ಜೀವನ್  ತೇರ್ಗಡೆಯಾಗಿದ್ದಾರೆ. ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕಿಯಾಗಿರುವ ಇವರು ಗುತ್ತಿಗಾರು ಗ್ರಾಮದ ಅಡ್ಡನಪಾರೆ ಜನಾರ್ಧನ ಗೌಡ ಹಾಗೂ ರತ್ನಾವತಿ ದಂಪತಿಗಳ ಪುತ್ರಿ. ಕಲ್ಲುಗುಂಡಿ ಸವೇರಪುರ ಶಾಲೆಯ ಶಿಕ್ಷಕ, ಅರಂತೋಡು ಗ್ರಾಮದ ಮೇಲಡ್ತಲೆ ಜೀವನ್ ರವರ ಪತ್ನಿ.

ಕವನ : ಹೊಸ ವರುಷದ ಹೊಸ್ತಿಲಲ್ಲಿ…✍️ಉಲ್ಲಾಸ್ ಕಜ್ಜೋಡಿ

ಈ ವರುಷದ ಕೊನೆಯಲ್ಲಿ, ಹೊಸ ವರುಷದ ಹೊಸ್ತಿಲಲ್ಲಿ ನಿಂತಿರುವೆವು ನಾವಿಂದು ಸಂತೋಷದಿಂದ, ಒಂದಿಷ್ಟು ಸಂತಾಪದಿಂದ...ಸಂತಾಪವಿದ್ದರೂ ಸಂತೋಷದಿಂದಲೇ ಈ ವರುಷಕೆ ಬೀಳ್ಕೊಟ್ಟು ಹೊಸ ವರುಷಕೆ ಮುಂದಡಿಯಿಟ್ಟು ಸಾಗಬೇಕಿದೆ ನಾವಿಂದು, ಕಾಲದ ನಿಯಮದಂತೆ ಮುನ್ನಡೆಯಬೇಕಿದೆ ನಾವಿಂದು, ಹೊಸ ಭರವಸೆಗಳ ಜೊತೆಗೆ ಹಳೆಯ ನೆನಪುಗಳ ಹೊತ್ತು...ಕಳೆದೋಗುವ ವರುಷದಲಿ ಕಳೆದಂತ ಕ್ಷಣಗಳನು ಕಳೆದೋಗದಂತೆ ನೆನಪಿನ ಬುತ್ತಿಯಲಿ ಜೋಪಾನವಾಗಿರಿಸಿ ಸಾಗೋಣ ನಾವಿಂದು ಹೊಸ...

ಬೆಳ್ಳಾರೆ : ಜ.3 ಹಾಗೂ 4ರಂದು ನೆಟ್ಟಾರು ಶಾಲಾ ವಾರ್ಷಿಕೋತ್ಸವ ಮತ್ತು ಬೆಳ್ಳಿಹಬ್ಬ ಸಂಭ್ರಮ “ಅಕ್ಷಯ ಪಥ-2026”

ಬೆಳ್ಳಾರೆ ಗ್ರಾಮದ ಅಕ್ಷಯ ಯುವಕ ಮಂಡಲ(ರಿ.) ನೆಟ್ಟಾರು, ಅಕ್ಷತಾ ಮಹಿಳಾ ಮಂಡಲ ನೆಟ್ಟಾರು ಹಾಗೂ ದ.ಕ.ಜಿ.ಪಂ ಹಿ.ಪ್ರಾ ಶಾಲೆ ನೆಟ್ಟಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಬೆಳ್ಳಿಹಬ್ಬ ಸಂಭ್ರಮ ಅಕ್ಷಯ ಪಥ ಕಾರ್ಯಕ್ರಮವು ಜ.3 ಮತ್ತು 4 ರಂದು ಅಕ್ಷಯ ಬಯಲು ರಂಗಮಂದಿರ ನೆಟ್ಟಾರಿನಲ್ಲಿ ಜರುಗಲಿದೆ.ಜ 3 ರಂದು ಪೂರ್ವಾಹ್ನ ಗಂಟೆ 9:00ಕ್ಕೆ...

ವಿಜಯಕುಮಾರ್ ಸುಳ್ಯ ರಿಗೆ “ಮರಾಟಿ ಸಾಧಕರು-2025” ಪುರಸ್ಕಾರ

ಡಿ.28ನೇ ಆದಿತ್ಯವಾರದಂದು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ  ಸಂರಕ್ಷಣಾ ಸಮಿತಿ(ರಿ.) ಮಂಗಳೂರು ಇದರ ವತಿಯಿಂದ ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ನಡೆದ “ಮರಾಟಿ ಸಂಭ್ರಮ-2025”  ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಜಯಕುಮಾರ್ ಸುಳ್ಯ ಇವರಿಗೆ “ಮರಾಟಿ ಸಾಧಕರು-2025” ಎಂಬ ಪುರಸ್ಕಾರವನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.

“ವಿದ್ಯಾರ್ಥಿಗಳು ಗುರು ಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಯಶಸ್ಸು ಸಾಧ್ಯ” : ಅನ್ಸಾರ್ ; ಬೆಳ್ಳಾರೆ ಜ್ಞಾನದೀಪದಲ್ಲಿ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ ತರಬೇತಿ

“ಮಕ್ಕಳ ವರ್ತನೆಗಳನ್ನು ಬದಲಾಯಿಸಿ ಉತ್ತಮ ಶಿಕ್ಷಣ ನೀಡುವುದು ಜವಾಬ್ದಾರಿಯುತ ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳು ತನ್ನ ಹೆತ್ತವರ ಹಾಗೂ ಗುರುಹಿರಿಯರ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ” ಎಂದು ಕೌನ್ಸಿಲಿಂಗ್ ತಜ್ಞ, ಮನೋವಿಶ್ಲೇಷಕ ಅನ್ಸರ್ ಮುಡಿಪು ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ಹದಿಹರೆಯದವರ ಸಬಲೀಕರಣ ಮತ್ತು ಪೋಷಕರ...

ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ಕನಸಿನ ರಸ್ತೆಗೆ 30ವರ್ಷಗಳ ಬಳಿಕ  ಕಾಂಕ್ರೀಟೀಕರಣ- ವಿರಾಜಪೇಟೆ ಶಾಸಕ ಪೊನ್ನಣ್ಣರಿಂದ ಉದ್ಘಾಟನೆ

ಕಾನೂನು ತೊಡಕುಗಳಿಂದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ 25 ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳದೆ 30ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ 6 ಲಕ್ಷ  ಅನುದಾನದಲ್ಲಿ ಕಾಂಕ್ರೀಟೀಕರಣಗೊಳ್ಳುವುದರ ಮೂ ಲಕ 30ವರ್ಷಗಳ ಬಳಿಕ 25 ಮನೆಗಳ ಫಲಾನುಭವಿಗಳ ಕನಸು-ನನಸಾಗಿದ್ದು, ಸೋಮವಾರ ಅವರು ರಸ್ತೆಯನ್ನು ಉದ್ಘಾಟಿಸಿದರು.ಪೆರಾಜೆ ಗ್ರಾಮದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ 25 ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಸುಮಾರು...

ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದ ಪದಗ್ರಹಣ – ಅಧ್ಯಕ್ಷರಾಗಿ ಶಶಿ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೆ.ಜಿ, ಕೋಶಾಧಿಕಾರಿಯಾಗಿ ವಸಂತಿ ಹರೀಶ್‌ ರಾವ್

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದ ಪದಪ್ರದಾನ ಸಮಾರಂಭ ಡಿಸೆಂಬರ್ 30ರಂದು ಅರಂಬೂರಿನ ಗ್ರ್ಯಾಂಡ್ ರಸಪಾಕ ಸಭಾಂಗಣದಲ್ಲಿ ನಡೆಯಿತು.ಸಭಾ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಉದ್ಘಾಟಿಸಿ ಶುಭಹಾರೈಸಿದರು.  ಸಭಾಧ್ಯಕ್ಷತೆಯನ್ನು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಮಾಜಿ ಗವರ್ನರ್ ಎಂ.ಬಿ...
Loading posts...

All posts loaded

No more posts

error: Content is protected !!