- Tuesday
- May 5th, 2026
ಕಳೆದ ಮೂವತ್ತು ವರುಷಗಳಿಂದ ಮಂಜೇಶ್ವರದ ಹೊಸಂಗಡಿಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ನೇತ್ರತ್ವದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಕಾರ್ಯಾಚರಿಸುತ್ತಿದ್ದು ಗಡಿನಾಡಿನ ಜನರಿಗೆ ಉತ್ತಮ ದಂತ ಚಿಕಿತ್ಸೆ ನೀಡುತ್ತಾ ಬಂದಿದೆ.ವಕ್ರದಂತ ಚಿಕಿತ್ಸೆ,ಬೇರುನಾಳ ಚಿಕಿತ್ಸೆ,ಇಂಪ್ಲಾಂಟ್ ಚಿಕಿತ್ಸೆ ಹೀಗೆ ಎಲ್ಲಾ ಪರಿಣಿತ ವೈದ್ಯರ ಸೇವೆ ಲಭ್ಯವಿರುತ್ತದೆ.ಇದೀಗ ಹೊಸದಾಗಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಮತ್ತು ಸ್ಲೀಪ್ ಕ್ಲಿನಿಕ್...
ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಒತ್ತೆಕೋಲ ಉತ್ಸವ”ವು ನಡೆಯಲಿದ್ದು, ಫೆ.08 ಆದಿತ್ಯವಾರದಂದು ಗೊನೆ ಮುಹೂರ್ತ ಹಾಗೂ ಫೆ.12 ಗುರುವಾರದಂದು ಸಂಕ್ರಮಣ ಪೂಜೆ ನೆರವೇರಲಿದೆ.ಒತ್ತೆಕೋಲ ಉತ್ಸವದ ಮೊದಲನೇ ದಿನವಾದ ಫೆ.15 ಆದಿತ್ಯವಾರದಂದು ಪ್ರಾತಃಕಾಲ 5:00 ಗಂಟೆಗೆ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30ಕ್ಕೆ ಗಣಪತಿ ಹೋಮ, ಬೆಳಿಗ್ಗೆ 10:00...
ದಕ್ಷಿಣ ಭಾರತದ ಪ್ರಸಿದ್ಧ ವಾಗ್ಮಿ, ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ರಾಗಿ 9 ವರ್ಷಗಳ ಸುದೀರ್ಘ ಸೇವೆ, ಸರ್ವ ಧರ್ಮ ಸೌಹಾರ್ದತೆಯ ಸಮನ್ವಯ ಕಾರರಾಗಿ ಕೇರಳ ಸರ್ಕಾರ ದಿಂದ ನಿಯುಕ್ತಿ ಗೊಂಡು ಸೇವೆ ಸಲ್ಲಿಸಿದ್ದ ಮುಳ್ಳೂರ್ ಕೆರೆ ಮಹಮ್ಮದ್ ಅಲಿ ಸಖಾಫಿ ಯವರನ್ನು ಸುಳ್ಯ ದ ಹರ್ಲಡ್ಕ ವಿಲ್ಲಾ ದಲ್ಲಿ ಸುಳ್ಯದ ಪ್ರಮುಖರು...
ಬೆಳ್ಳಾರೆ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯುಜ.30 ರಂದು ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕಟ್ಟಡದಲ್ಲಿ ಜರುಗಿತು.ನಾಡಗೀತೆಯೊಂದಿಗೆ ಗ್ರಾಮಸಭೆಯು ಆರಂಭವಾಯಿತು.ಪಂಚಾಯತ್ ಪಿ.ಡಿ.ಒ ಪ್ರವೀಣ್ ಕುಮಾರ್ ಸಿ.ವಿ ಸ್ವಾಗತಿಸಿ ಜಮಾ ಖರ್ಚುಗಳ ವರದಿ ಮಂಡಿಸಿದರು.ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪುಜೇರಿ ನೋಡಲ್ ಅಧಿಕಾರಿಯಾಗಿದ್ದರು.ಈ ಮಧ್ಯೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ...
“ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರು, ಮುಚ್ಚಿ ಹೋಗಿದ್ದ ಶಾಲೆಯನ್ನು ಮತ್ತೆ ತೆರೆಸಿ ಮುನ್ನಡೆಸಿದ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಬೆಂಡೋಡಿ ರವರು ಇಂದು(ಜ.31) ನಿವೃತ್ತಿ ಹೊಂದಲಿದ್ದಾರೆ.ಕಳೆದ 31 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ...
ದೇವಚಳ್ಳ ಗ್ರಾಮಪಂಚಾಯತ್ ವ್ಯಾಪ್ತಿಯ ಮೆದು ರಸ್ತೆ ಯನ್ನು ಶ್ರೀಮತಿ ಅನಿತಾ ಪಾರೆಪ್ಪಾಡಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ನಾಗೇಶ್ ಪಾರೆಪ್ಪಾಡಿ ರಿಬ್ಬನ್ ಎಳೆದು ರಸ್ತೆಗೆ ಚಾಲನೆ ನೀಡಿ, ಅರುಣ ಮೆದು ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ಪ್ರಶಾಂತ್ ಮೆದು, ಹಾಗೂ ದುರ್ಗಾದಾಸ್ ಮೆತ್ತಡ್ಕ ಅಲ್ಲದೇ ಪ್ರಸನ್ನ ಮೆದು, ವೆಂಕಟ್ರಮಣ...
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ.) ಮಂಗಳೂರು ಇದರ ವತಿಯಿಂದ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯ ನಂತೂರು ಮಂಗಳೂರು ಇಲ್ಲಿ ದಿನಾಂಕ ೨೯/೦೧/೨೦೨೬ ಗುರುವಾರ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ| ಮುರಲೀ ಮೋಹನ ಚೂಂತಾರು ಇವರು ಮಕ್ಕಳಿಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಟೂತ್ಬ್ರಷ್, ಟೂತ್ ಪೇಸ್ಟಗಳ ಬಗ್ಗೆ...
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಇದರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಫೆ.14 ಮತ್ತು 15 ರಂದು ಎರಡು ದಿನಗಳ ಕಾಲ ಸಂಜೆ 5:45 ರಿಂದ ರಾತ್ರಿ 9:15 ರವರೆಗೆ “ರಂಗಸಂಭ್ರಮ 2026” ವೈವಿಧ್ಯಮಯ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ. ಮಾಜಿ ಸಚಿವರಾದ ಎಸ್.ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಭರತನಾಟ್ಯ ಕಲಾವಿದೆಯಾಗಿರುವ...
ಸುಬ್ರಹ್ಮಣ್ಯ ಜನವರಿ 29 : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯು ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಭೆಯನ್ನು ಉದ್ದೇಶಿಸಿ ಕಾರ್ಪೊರೇಟ್ ಕಚೇರಿಯ ಮೆಸ್ಕಾಂ ಅಧೀಕ್ಷಕರಾದ ಇಂಜಿನಿಯರ್ ಕೃಷ್ಣರಾಜ್ ಅವರು ಮಾತನಾಡುತ್ತಾ “ಗ್ರಾಮೀಣ ಮಟ್ಟದ ಮೆಸ್ಕಾಂ ಗ್ರಾಹಕರ ವಿದ್ಯುತ್...
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ "ಕಾನೂನು ಅರಿವು" ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಕುಮಾರ್ ಕೊಡ್ತುಗುಳಿ ಅಧ್ಯಕ್ಷರು ವಕೀಲರ ಸಂಘ ಸುಳ್ಯ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ ವ್ಯೂ ವಿದ್ಯಾ ಸಂಸ್ಥೆ ಅಧ್ಯಕ್ಷ...
Loading posts...
All posts loaded
No more posts
