- Friday
- July 17th, 2026
ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ ಇದರ ಮಹಾಸಭೆ ಅ 07 ರಂದು ಶಿವಗೌರಿ ಕಲಾಮಂದಿರ ಪಡ್ಪಿನಂಗಡಿಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಹಸೈನಾರ್ ಎಂ ಕೆ., ಅಧ್ಯಕ್ಷರಾಗಿ ಜಮಾಲ್ ಪಡ್ಪಿನಂಗಡಿ, ಉಪಾಧ್ಯಕ್ಷರಾಗಿ ರಫೀಕ್ ಮುಚ್ಚಿಲ, ಕಾರ್ಯದರ್ಶಿಯಾಗಿ ನಝೀರ್ ಮುಚ್ಚಿಲ, ಜೊತೆ ಕಾರ್ಯದರ್ಶಿಗಳಾಗಿ ಇಮ್ತಿಯಾಜ್ ಪಡ್ಪಿನಂಗಡಿ ಹಾಗೂ ಫಾರೂಕ್ ಮರಕ್ಕಡ, ಖಜಾಂಚಿಯಾಗಿ ತನ್ಸೀರ್ ಅಡಿಬಾಯಿ, ಮೀಡಿಯಾ ಸಲಹೆಗಾರರಾಗಿ ...
ನೆಹರು ಮೆಮೋರಿಯಲ್ ಕಾಲೇಜ್ ಸಮಾಜ ಕಾರ್ಯ ವಿಭಾಗದಿಂದ ಒಂದು ದಿನದ ಕ್ಷೇತ್ರ ಅಧ್ಯಯನಕ್ಕಾಗಿ ಕಡಮಾಜೆ ಫಾರ್ಮ್ ಗೆ ಇತ್ತೀಚೆಗೆ ಭೇಟಿ ನೀಡಲಾಯಿತು. ಕೃಷಿ ಚಟುವಟಿಕೆಯಲ್ಲಿ ಬೇರೆ ಬೇರೆ ಪ್ರಾಣಿ ಸಾಕಾಣಿಕೆಗಳ ಪ್ರಯೋಜನಗಳು , ಸಂಪನ್ಮೂಲಗಳ ಮರು ಬಳಕೆಯ ಪ್ರಾತ್ಯೇಕ್ಷಿಕೆ ಹಾಗೂ ಸರಕಾರದಿಂದ ದೊರಕುವ ಸೌಲಭ್ಯಗಳು , ಹಾಗೂ ಸವಾಲುಗಳ ಬಗ್ಗೆ ಮಾಹಿತಿಯನ್ನು ಕಡಮಾಜೆ ಫಾರ್ಮ್ ನ...
ದೇವಚಳ್ಳ ಗ್ರಾಮದ ದೇವ ಪಾಲೇಪ್ಪಾಡಿ ಪದ್ಮಾವತಿ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಲೋಕಯ್ಯ,ಲವಪ್ಪ, ಧರ್ಮಪಾಲ, ದಾಮೋದರ, ಜಗದೀಶ ಪುತ್ರಿಯರಾದ ಕುಸುಮಾವತಿ ಮೋಹಿನಿ, ಹಿತಾಕ್ಷಿ, ಹರಿಣಾಕ್ಷಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಹರಿಹರಪಲ್ಲತ್ತಡ್ಕದಲ್ಲಿ ಸ್ಟುಡಿಯೋ ನಡೆಸುತ್ತಿದ್ದ ಹಾಗೂ ಗ್ರಾ.ಪಂ.ಸದಸ್ಯರಾಗಿದ್ದ ದಿವಾಕರ ಮುಂಡಾಜೆ ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನಪತ್ರಿಕೆಗಳ ವಿತರಕರಾಗಿದ್ದ ಅವರು ಮಂಜಾನೆ ಅಂಗಡಿಗೆ ಕಾರಿನಲ್ಲಿ ಬರುತ್ತಿರುವ ವೇಳೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಇವರು ಮಾಸ್ಟರ್ ಎಂದೇ ಫೇಮಸ್ ಆಗಿದ್ದರು. ಪ್ರಸ್ತುತ ಫೋಟೋ ಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದರು. ಮೃತರು ತಂದೆ ಐತ್ತಪ್ಪ ಗೌಡ,...
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಮಂಗಳವಾರ ಮರ್ದಾಳದ ಬೆಥನಿ ವಿಶೇಷ ಮಕ್ಕಳ ಶಾಲೆಗೆ ಮಕ್ಕಳ ವಿದ್ಯಾಭ್ಯಾಸದ ಅಭಿವೃದ್ಧಿಗಾಗಿ ಧನಸಹಾಯವನ್ನು ಮಾಡಲಾಯಿತು.ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರವರ ಈ ದಿನ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಹಾಗೂ ಭೋಜನ ವ್ಯವಸ್ಥೆಯನ್ನು ಕೂಡ ಮಾಡಲಾಯಿತು. ಸರಳವಾಗಿ ನಡೆದ ಸಮಾರಂಭದ ಬೆಥನಿ ವಿಶೇಷ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ದಿನಾಂಕ 10 ಅಕ್ಟೋಬರ್ 2024ರಂದು ಶಾರದಾ ಪೂಜೆ ಹಾಗೂ ಆಯುಧ ಪೂಜಾ ಕಾರ್ಯಕ್ರಮವು ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ ಟಿ ಅವರು ಹಣತೆ ಬೆಳಗುವುದರೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ದೇವಸ್ಥಾನದ ಪುರೋಹಿತರಾದ ಶ್ರೀ ಪ್ರಸನ್ನ ಹೊಳ್ಳ ಅವರ ನೇತೃತ್ವದಲ್ಲಿ ಶಾರದ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ , ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜೆ.ಸಿ.ಐ ಪಂಜ ಪಂಚಶ್ರೀ ವತಿಯಿಂದ ದಿನಾಂಕ 14.10.2024 ರಂದು ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರವನ್ನು ಪದವಿ ವಿದ್ಯಾಲಯದ ಆಯ್ದ 30 ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿ ಇ ಎಂ ಜೀವನ್ ಮಲ್ಕಜೆ, ಜೆ ಸಿ ಐ ಪಂಜ...
ಬರಹ : ಡಾ. ಮುರಲೀ ಮೋಹನ್ ಚೂಂತಾರು ಪ್ರತಿ ವರ್ಷ ಅಕ್ಟೋಬರ್-16 ರಂದು ವಿಶ್ವ ಆಹಾರ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. 1945 ಅಕ್ಟೋಬರ್-16 ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಅಮೇರಿಕಾದಲ್ಲಿ ಆರಂಭಗೊಳಿಸಲಾಯಿತು. ಆಹಾರದ ರಕ್ಷಣೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನ ಎಂದು ಆಚರಿಸಿ...
ಮಲೆನಾಡು ಜನ ಹಿತ ರಕ್ಷಣವೇದಿಕೆಯ ಇದರ ವತಿಯಿಂದ ಸುಳ್ಯ ತಾಲೂಕು ಕಚೇರಿ ಬಳಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸಭೆ ನಡೆಸಿ ರೈತರು ಬಳಿಕ ವರದಿ ಜಾರಿ ಆಗದಂತೆ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಲೆನಾಡು ಜನಹಿತ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಮಾತನಾಡಿ ಕಸ್ತೂರಿ ರಂಗನ್ ವರದಿ ಜಾರಿ ಯಿಂದ ಆಗುವ...
ಪ್ರತಿಷ್ಠಿತ ವಸ್ತ್ರ ಮಳಿಗೆ ಪುತ್ತೂರಿನ ರಾಧಾ'ಸ್ ಫ್ಯಾಮಿಲಿ ಶೋ ರೂಂನಲ್ಲಿ ಆಫರ್ಗಳ ಬಿಗ್ಬಾಸ್ ಕೊಡುಗೆಗಳ ಸುರಿಮಳೆಯೊಂದಿಗೆ ರಾಧಾ'ಸ್ ಉತ್ಸವ'ದಲ್ಲಿ ಅಮೋಘ ಡಿಸ್ಕೊಂಟ್ ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶವಿದ್ದು, ಪ್ರಥಮ ವಾರದ ಡ್ರಾ ಅ.14ರಂದು ಮಳಿಗೆಯಲ್ಲಿ ನಡೆಯಿತು. ಸವಿತಾ ಬಾಲಕೃಷ್ಣ ಕಲ್ಲಾರೆ ಪ್ರಥಮ ಬಹುಮಾನದ ಡ್ರಾ ನಡೆಸಿಕೊಟ್ಟರು. ಇತರ ಬಹುಮಾನಗಳ ಡ್ರಾವನ್ನು ಮಕ್ಕಳು...
Loading posts...
All posts loaded
No more posts
