ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡುನಲ್ಲಿ ಸಂವಿಧಾನ ದಿನಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸಂವಿಧಾನ ದಿನಾಚರಣೆಯ ಮಹತ್ವ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಕೊಡುಗೆಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಎಲ್ಲಾ ವಿದ್ಯಾರ್ಥಿಗಳು ಮತ್ತು ಎಲ್ಲಾ ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಾಮೂಹಿಕವಾಗಿ ಓದಿದರು.

ನ.27 ರಿಂದ ಡಿ 2 ರ ತನಕ ಶಾಸಕಿ ಭಾಗೀರಥಿ ಮುರುಳ್ಯ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಿಗೆ ಅಧ್ಯಯನ ಪ್ರವಾಸ

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನ.27 ರಿಂದ ಡಿ.2ರ ತನಕ ವಿಧಾನ ಸಭೆಯ ವಸತಿ ಸೌಕರ್ಯಗಳ ಸಮಿತಿಯ ವತಿಯಿಂದ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಉಪ ಸಭಾಧ್ಯಕ್ಷರು ಹಾಗೂ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಸಮಿತಿ ಸದಸ್ಯರಾದ ಶಾಸಕಿ ಭಾಗೀರಥಿ ಮುರುಳ್ಯ ಸೇರಿ ಒಟ್ಟು...
Ad Widget

ಪಂಬೆತ್ತಾಡಿ : ಚಿಗುರು ಗೆಳೆಯರ ಬಳಗ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಅಶ್ವಥ್ ಬಾಬ್ಲುಬೆಟ್ಟು, ಕಾರ್ಯದರ್ಶಿಯಾಗಿ ರಮೇಶ್ ಮಡಿವಾಳಮಜಲು, ಖಜಾಂಜಿಯಾಗಿ ತೀರ್ಥೆಶ್ ಮಡಪ್ಪಾಡಿ

ಚಿಗುರು ಗೆಳೆಯರ ಬಳಗ ಪಂಬೆತ್ತಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ನ.24 ರಂದು ಪದಗ್ರಹಣ ಕಾರ್ಯಕ್ರಮ ನಡೆಯಿತು.ಗೌರವಾಧ್ಯಕ್ಷರಾಗಿ ಶ್ರೀನಿವಾಸ ಬಿ., ನೂತನ ಅಧ್ಯಕ್ಷರಾಗಿ ಅಶ್ವಥ್ ಬಾಬ್ಲುಬೆಟ್ಟು, ಕಾರ್ಯದರ್ಶಿಯಾಗಿ ರಮೇಶ್ ಮಡಿವಾಳಮಜಲು, ಉಪಾಧ್ಯಕ್ಷರಾಗಿ ಶರಣ್ಯಕುಮಾರ್ ಮಡಪ್ಪಾಡಿ, ಜತೆಕಾರ್ಯದರ್ಶಿ ಮೋಹನ್ ದಾಸ್ ಮಡಿವಾಳ ಮಜಲು, ಖಜಾಂಜಿಯಾಗಿ ತೀರ್ಥೆಶ್ ಮಡಪ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿಗದ್ದೆ, ಕ್ರೀಡಾ...

ಅಲಂಕಾರು ಎಸ್.ಎಚ್ ಸ್ಪೋರ್ಟ್ಸ್ ಝೋನ್ ಶುಭಾರಂಭ

ಅಲಂಕಾರು ಸಿ.ಎ ಬ್ಯಾಂಕ್ ಸಮೀಪದ ಲಕ್ಷ್ಮಿ ರಾಮ್ ಕಾಂಪ್ಲೆಕ್ಸ್ ನಲ್ಲಿ ಶರೀಫ್.ಬಿ.ಹೆಚ್ ಮಾಲೀಕತ್ವದ ಎಸ್.ಎಚ್ ಸ್ಪೋರ್ಟ್ಸ್ ಝೋನ್ ಶುಭಾರಂಭಗೊಂಡಿತ್ತು.ಇಲ್ಲಿ ಎಲ್ಲಾ ತರದ ಸ್ಪೋರ್ಟ್ಸ್ ಐಟಂಗಳು ,ವಿನೂತನ ಶೈಲಿಯ ಟ್ರೋಫಿಗಳು ,ನಿಮ್ಮ ಕನಸಿನ ಅತ್ಯಾಕರ್ಷಕ ವಿನ್ಯಾಸದ ಕಸ್ಟಮೈಸ್ ಜರ್ಸಿಗಳು,ಮನಮೋಹಕ ಶೈಲಿಯ ಕಸ್ಟಮೈಸ್ ಮೆಮೆಂಟೋಗಳು,ಸನ್ಮಾನ ಕಾರ್ಯಕ್ರಮದ ವಸ್ತುಗಳು,ಶಾಲಾ ಕಾಲೇಜುಗಳ ಕ್ರೀಡಾ ಸಾಮಾಗ್ರಿಗಳು,ಮಕ್ಕಳ ಕ್ರೀಡಾ ಸಮವಸ್ತ್ರಗಳು,ಫೋಟೋ ಫ್ರೇಮ್ ಗಳು ಮತ್ತು...

ಯುವ ಉದ್ಯಮಿ ಗುರು ಪ್ರಸಾದ್ ಪಂಜ ಸಾರಥ್ಯದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ, ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ತಾರಾಯಿ”ಅತೀ ಶೀಘ್ರದಲ್ಲಿ ಮಾರುಕಟ್ಟೆಗೆ

ಅಂತರಾಷ್ಟ್ರೀಯ ಗುಣ ಮಟ್ಟದ, ಕ್ಯಾಂಸ್ಕೋ ತಯಾರಿಕೆಯ “ತಾರಾಯಿ” ಕೊಬ್ಬರಿ ಎಣ್ಣೆ ಅತೀ ಶೀಘ್ರ ಮಾರುಕಟ್ಟೆಗೆ ಬರಲಿದೆ. ಸಾಮಾಜಿಕ ಕಾರ್ಯಗಳಿಂದ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಯುವ ಉದ್ಯಮಿ ಗುರು ಪ್ರಸಾದ್‌ ಪಂಜ ಕ್ಯಾಂಪ್ಕೋ ಸಂಸ್ಥೆಯ ಜತೆ ಒಪ್ಪಂದ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತುಳು ಹೆಸರು,...

ಸುಳ್ಯ : ಮೆಸ್ಕಾಂ ಜನ‌ಸಂಪರ್ಕ ಸಭೆ – ಪವರ್ ಮ್ಯಾನ್ ಗಳ ನಿಯೋಜನೆಗೆ ಆಗ್ರಹಿಸಿ ಮಂಡೆಕೋಲು ಗ್ರಾಮಸ್ಥರ ಮನವಿ

ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಜಾಲ್ಸೂರು ಸೆಕ್ಷನ್ ಹಾಗೂ ಮಂಡೆಕೋಲು ಗ್ರಾಮದ ವಿದ್ಯುತ್ ಸಮಸ್ಯೆಗಳ ಬಗ್ಗೆ ಹಾಗೂ ಖಾಯಂ ಪವರ್ ಮ್ಯಾನ್ ಗಳನ್ನು ನೇಮಿಸುವಂತೆ ಆಗ್ರಹಿಸಿ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಮುಂದಿನ ಎರಡು ತಿಂಗಳೊಳಗೆ ಪವರ್ ಮ್ಯಾನ್ ಗಳ ಸಮಸ್ಯೆ ಪರಿಹರಿಸುವುದಾಗಿ ಈ ಸಂದರ್ಭದಲ್ಲಿ ಇ.ಇ ರವರು ಆಶ್ವಾಸನೆ...

ಪಂಜದಲ್ಲಿ ಪಂಜ -ಮಂಗಳೂರು ಸೀನಿಯರ್ ಚೇಂಬರ್ ಸ್ನೇಹ ಸಮ್ಮಿಲನ

ಸುಬ್ರಹ್ಮಣ್ಯ ನ.25: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪಂಜ ಹಾಗೂ ಮಂಗಳೂರು ಲೀಜನ್ ಗಳ ಸ್ನೇಹ ಸಮ್ಮಿಲನ ರವಿವಾರ ಪಂಜ ಲಯನ್ಸ್ ಕ್ಲಬ್ ಸೇವಾ ಸದನದಲ್ಲಿ ಜರಗಿತು.ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಸೀನಿಯರ್ ಚೇಂಬರ್ ಲಿಜನ್ ಅಧ್ಯಕ್ಷ ದತ್ತಾತ್ರೇಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ. ಅರವಿಂದರಾವ್ ಕೇದಿಗೆ ಉಪಸ್ಥಿತರಿದ್ದರು ವೇದಿಕೆಯಲ್ಲಿ ಸೀನಿಯರ್ ಚೇಂಬರ್ ರಾಷ್ಟ್ರೀಯ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಂದ ಕುಟುಂಬ ಸಮ್ಮಿಲನ ಹಾಗೂ ಮಾಹಿತಿ ಕಾರ್ಯಕ್ರಮ

ಸುಬ್ರಹ್ಮಣ್ಯ ನ.24: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ಏನೇ ಕಲ್ಲು ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಬಂದ ದಾರಿ ಹಾಗೂ ಅದರ ಸಂಪೂರ್ಣ ಮಾಹಿತಿ ಕಾರ್ಯಕ್ರಮ ನಡೆಯಿತು.ರೋಟರಿ ಜಿಲ್ಲೆ 31 81 ರ ಪೂರ್ವ ಜಿಲ್ಲಾ ಕಾರ್ಯದರ್ಶಿ ಹಾಗೂ ತರಬೇತುದಾರರಾದ ಮೈಸೂರಿನ ಕೆ.ಎಂ. ಹರೀಶ್ ಅವರು ಅಂತರರಾಷ್ಟ್ರೀಯ...

ಸುಬ್ರಹ್ಮಣ್ಯದಲ್ಲಿ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

ಸುಬ್ರಹ್ಮಣ್ಯ ನ.25: ಕುಕ್ಕೆ ಫ್ರೆಂಡ್ಸ್ ಸುಬ್ರಮಣ್ಯ ಹಾಗೂ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಆಶಯದಲ್ಲಿ ಎರಡನೇ ವರ್ಷದ ಆಹ್ವಾನಿತ ಎಂಟು ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ ಶನಿವಾರ ಸಂಜೆ ಸುಬ್ರಹ್ಮಣ್ಯದ ಕಾಶಿ ಕಟ್ಟೆ ಸರ್ಕಲ್ ಬೆಳೆಯ ಮೈದಾನದಲ್ಲಿ ನಡೆಯಿತು.ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಬ್ರಹ್ಮಣ್ಯದ ಉದ್ಯಮಿ ಯಜ್ಞೇಶ್ ಆಚಾರ್...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಮಯ ಸೇವೆಗಳಲ್ಲಿ ವ್ಯತ್ಯಯ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಡಿ.12 ರವರೆಗೆ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನೆರವೇರಲಿದ್ದು, ಜಾತ್ರೋತ್ಸವದ ನಿಮಿತ್ತ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರ ಸೇವೆಯು ನ.25 ರಿಂದ ಡಿ.12ರ ತನಕ ನೆರವೇರುವುದಿಲ್ಲ. ಡಿ.13 ರಿಂದ ಸರ್ಪ ಸಂಸ್ಕಾರ ಸೇವೆ ಆರಂಭವಾಗಲಿದೆ. ಆದರೆ ಇತರ...
Loading posts...

All posts loaded

No more posts

error: Content is protected !!