- Tuesday
- July 14th, 2026
ಸುಳ್ಯ ದ ಕೋರ್ಟ್ ಹಿಂಭಾಗದ ವಿದ್ಯಾರ್ಥಿನಿ ನಿಲಯದ ಬಳಿ ಇರುವ ಟ್ರಾನ್ಸ್ಪೋರ್ಮರ್ ಮೇಲೆ ಮರದ ಗೆಲ್ಲೊಂದು ಬಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನಿಸಿಸುತ್ತಿರುವ ಕುರಿತು ಈ ಹಿಂದೆ ಫೋಟೋ ಸಹಿತ ವರದಿ ಪ್ರಕಟಿಸಿತ್ತು ನಿನ್ನೆ ಮೆಸ್ಕಾಂ ಇಲಾಖೆಯವರು ಕ್ರೇನ್ ಮೂಲಕ ಮರದ ಗೆಲ್ಲನ್ನು ತುಂಡರಿಸಿದ್ದು ಮಳೆಗಾಲದಲ್ಲಿ ಆಗಬಹುದಾದಂತ ಸಂಭಾವ್ಯ ಅಪಾಯವನ್ನು ಇಲಾಖೆಗೆ ಆಗಬಹುದಾದ ನಷ್ಟ ತಪ್ಪಿಸಿದೆ
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಡಿ.27 ಶುಕ್ರವಾರದಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾದ ದಾಖಲಾತಿಗಳ ವಿವರಗಳು ಈ ಕೆಳಗಿನಂತಿವೆ.10 ವರ್ಷಗಳ ಹಿಂದಿನ ಆಧಾರ್ ಕಾರ್ಡ್...
ಕರ್ನಾಟಕ ಸರಕಾರವು ಹಲವು ಇಲಾಖೆಗಳಿಗೆ ನಾಮನಿರ್ದೇಶಕ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದು ಇದರಲ್ಲಿ ಸುಳ್ಯ ತಾಲೂಕು ಪಂಚಾಯಿತಿ ಕೆಡಿಪಿ ಇದರ ನಾಮ ನಿರ್ದೇಶನದ ಸದಸ್ಯರಾಗಿ ಸುಳ್ಯದಲ್ಲಿ ವಕೀಲರು ಹಾಗೂ ನೋಟರಿಯಾಗಿ ಸೇವೆ ಸಲ್ಲಿಸುತ್ತಿರುವ ಅಲೆಟ್ಟಿಯ ಧರ್ಮಪಾಲ ಕೊಯಂಗಾಜೆ, ಐವರ್ನಾಡಿನ ಜಯಪ್ರಕಾಶ್ ನೆಕ್ರಪ್ಪಾಡಿ, ಗುತ್ತಿಗಾರಿನ ಪರಮೇಶ್ವರ ಕೆಂಬಾರೆ, ಜಾಲ್ಸೂರಿನ ತೀರ್ಥರಾಮ ಬಾಳಾಜೆ, ಅರಂತೋಡಿನ ಆಶ್ರಫ್ ಗುಂಡಿ, ಬೆಳ್ಳಾರೆಯ ಶಕುಂತಳಾ...
ಅಡಿಕೆ ತೋಟದಲ್ಲಿ ಪತ್ತೆಯಾದ ವ್ಯಕ್ತಿಯನ್ನು ಮರಳಿ ಕುಟುಂಬದೊಂದಿಗೆ ಸೇರಿಸಿದ “ಸ್ಥಳೀಯರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು” ; ಉಚಿತವಾಗಿ ಸೇವೆ ನೀಡಿದ ಗುತ್ತಿಗಾರಿನ “ಅಮರ ಅಂಬುಲೆನ್ಸ್” ಮಾಹಿತಿ ತಿಳಿದ ತಕ್ಷಣ ಸ್ಪಂದಿಸಿದ “ಹರಿಹರ ಪಳ್ಳತ್ತಡ್ಕ ಗ್ರಾ.ಪಂ” ಡಿ.24 ರಂದು ಹರಿಹರ ಪಳ್ಳತ್ತಡ್ಕದ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಸಂಗಮ ಕ್ಷೇತ್ರದಲ್ಲಿ ಪೂಜೆಯ ಸಂದರ್ಭದಲ್ಲಿ ಸ್ಥಳೀಯರ ಅಡಿಕೆ...
ಸಂಪಾಜೆಯ ಚೆಡಾವು ಬಳಿ ಕಂಟೈನರ್ ಸ್ಕೂಟಿಗೆ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸಿದ್ಧಾಪುರದಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಸಂಪಾಜೆ ಕೊಯನಾಡಿನ ಚೆಡಾವು ಬಳಿ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟರೇ ಗಂಭೀರ ಗಾಯಗೊಂಡ...
ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಸುಳ್ಯ ಚೆನ್ನಕೇಶವ ದೇವರಿಗೆ ಬ್ರಹ್ಮರಥ ಕೊಡುಗೆಯಾಗಿ ನೀಡುತ್ತಿದ್ದು,ಡಿ.23 ರಂದು ನೂತನ ಬ್ರಹ್ಮರಥಕ್ಕೆ ರಥಪೂಜೆ ನಡೆಯಿತು. ಇಂದು ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕುಂಭಾಶಿಯಿಂದ ಬ್ರಹ್ಮರಥ ಸುಳ್ಯದತ್ತ ಹೊರಟಿದೆ. ಇಂದು ಸಂಜೆ ಪುತ್ತೂರು ತಲುಪಲಿರುವ ಬ್ರಹ್ಮರಥ, ನಾಳೆ ಮಧ್ಯಾಹ್ನ ದ ವೇಳೆಗೆ ಜಾಲ್ಸೂರು ತಲುಪಲಿದೆ. ಅಲ್ಲಿಂದ ವಾಹನ...
ಸುಳ್ಯ ಸೀಮೆಯ ಬಜಪ್ಪಿಲ ಶ್ರೀ ಇರುವೆರ್ ಉಳ್ಳಾಕುಲು ಧೂಮಾವತಿ ಹಾಗೂ ಉಪದೈವಗಳ ಕ್ಷೇತ್ರವು ಜೀರ್ಣೋದ್ಧಾರಗೊಂಡು ದ. 22 ರಂದು ಬೆಳಗ್ಗೆ 10-23 ರ ಕುಂಭ ಲಗ್ನದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶಾಭಿಷೇಕವು ಕುಂಟಾರು ವೇ.ಮೂ. ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಜಪ್ಪಿಲ ಕ್ಷೇತ್ರ ವ್ಯಾಪ್ತಿಯ ಹಾಗೂ ತೊಡಿಕಾನ ಸೀಮೆಯ ಸಾವಿರಾರು...
ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿ.23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಈ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ. ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ...
ಸುಳ್ಯ : ಮಡಿಕೇರಿ ತಾಲೂಕು ಎಂ. ಚೆಂಬು ಗ್ರಾಮದ ಕುಕ್ಕೇಟಿ ಜತ್ತಪ್ಪ ಗೌಡ ಭಾನುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 68 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಪುಷ್ಪಾವತಿ ಮಕ್ಕಳಾದ ವನಿತಾ ಪ್ರಸಾದ್, ಕಿಶೋರ್, ಭವಾನಿಶಂಕರ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರಕಾರ ನಿವಾರಣೆ ಮಾಡಿದೆ. ಕಸ್ತೂರಿ ರಂಗನ್ ವರಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಶತಮಾನಗಳಿಂದ ಇಲ್ಲಿ ಜನರು ವಾಸಿಸುತ್ತಿದ್ದಾರೆ, ಮತ್ತು ಅರಣ್ಯದಂಚಿನ ಜನರೇ ಅರಣ್ಯ ರಕ್ಷಿಸುತ್ತಿದ್ದಾರೆ ಅರಣ್ಯ ರಕ್ಷಣೆಗೆ ಈಗಾಗಲೇ ನಮ್ಮಲ್ಲಿ ಯೋಜನೆಗಳಿವೆ. ಜನರ, ಜನಪ್ರತಿನಿಧಿಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಕೇಂದ್ರಕ್ಕೆ...
Loading posts...
All posts loaded
No more posts
