ದೇವಾಲಯ ಸಂಸ್ಕಾರ, ಸಂಸ್ಕೃತಿ ಸಾರುವ ಪ್ರಧಾನ ಕೇಂದ್ರ – ಎಡನೀರು ಶ್ರೀ

ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕಾದುದು ನಮ್ಮ ಕರ್ತವ್ಯ. ದೇವಾಲಯಗಳು ಸಂಸ್ಕಾರ, ಸಂಸ್ಕೃತಿ ಸಾರುವ ಪ್ರಧಾನ ಕೇಂದ್ರ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಯುವಜನತೆಯಲ್ಲಿ ಧಾರ್ಮಿಕ ಶ್ರದ್ಧೆ...

ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ,ನೂತನ ಬಸ್ಸು ಆಗಮನ.

ಅಜ್ಜಾವರ ಗ್ರಾಮದ ಹಲವು ವರ್ಷಗಳ ಬೇಡಿಕೆಯಾದಸುಳ್ಯ ಅಡ್ಕಾರ್,ಪೇರಾಲು ಮಾರ್ಗವಾಗಿ ಅಡ್ಪಂಗಾಯಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು ಆದರೆ ಅದು ಸಾಧ್ಯವಾಗದೇ ಇದ್ದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ನೇತೃತ್ವದಲ್ಲಿ ಅಧಿಕಾರಿಗಳಿಗೆ ತಿಳಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ನಡೆದ ಗ್ರಾಮ ಮಟ್ಟದ ವಿಲೇವಾರಿ ಸಭೆಯಲ್ಲಿಯು ಪ್ರತಿಧ್ವನಿಸಿದ ಪರಿಣಾಮವಾಗಿ ಸಾರ್ವಜನಿಕರಿಗೆ ಮತ್ತು...
Ad Widget

ಕುಕ್ಕೆ : ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಹೊಂದಿದ ಜುಬಿನ್ ಮೊಹಾಪಾತ್ರ ರಿಗೆ ಅಭಿನಂದನೆ

ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಹೊಂದಿರುತ್ತಾರೆ. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಗಳು ಆಗಿರುವ ಜುಬಿನ್ ಮೊಹಪಾತ್ರ ರನ್ನು ಶ್ರೀ ದೇವಳದ ಆಡಳಿತ ಕಚೇರಿಯಲ್ಲಿ ಅಭಿನಂದಿಸಲಾಯಿತು. ಪದೋನ್ನತಿ ಹೊಂದಿದ ಅಧಿಕಾರಿಯನ್ನು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಗೌರವಿಸಿದರು.ಈ ಸಂದರ್ಭ ಶ್ರೀ ದೇವಳದ...

ದಶಮಾನೋತ್ಸವದ ಸಂಭ್ರಮದಲ್ಲಿ ಪೈಂಬೆಚ್ಚಾಲು ಅಜ್ಮೀರ್ ಮೌಲಿದ್

ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ದಟ್ಟ ಕಾನನದ ಮಧ್ಯೆಯಿರುವ ಪುಟ್ಟದಾದೊಂದು ಊರು.ಸುತ್ತಲೂ ಬೆಟ್ಟಗುಡ್ಡಗಳು ಅದರ ಮಧ್ಯೆ ಮೂರು ಸಣ್ಣ ಹೊಳೆಗಳು ಹರಿದು ಒಟ್ಟು ಸೇರಿ ಒಂದು ದೊಡ್ಡಹೊಳೆಯಾಗಿ ಹರಿದು ಪಯಸ್ವಿನಿ ನದಿ ಸೇರುತ್ತದೆ. ಹೊಳೆಸುತ್ತಲೂ ಅಡಿಕೆ ತೋಟಗಳು ಮತ್ತು ಹತ್ತಾರು ಮನೆಗಳು ಅದರ ಮಧ್ಯೆ ಕಂಗೊಳಿಸುವ ಭವ್ಯವಾದ ಮಸೀದಿ ಮತ್ತು ಮದ್ರಸಗಳು.ಸರಿಯಾದ ಮೂಲತ ಸೌಕರ್ಯವಿಲ್ಲದಿದ್ದರೂ ಅದನ್ನೇ ಸವಾಲಾಗಿ...

ಸುಳ್ಯ: ಕುಕ್ಕನ್ನೂರು ದೈವಗಳ ಭಂಡಾರ ಆಗಮನ – ಧ್ವಜಾರೋಹಣ – ಸುಳ್ಯ ಪುರದೊಡೆಯನಿಗೆ ಜಾತ್ರಾ ಸಂಭ್ರಮ

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಜ.03 ರಂದು ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು, ಸಂಜೆ ಪನ್ನೇಬೀಡು ನಾಲ್ಕು ಸ್ಥಾನ ಚಾವಡಿನಿಂದ ಬಲ್ಲಾಳರ ಪಯ್ಯೊಲಿ ತರಲಾಯಿತು, ರಾತ್ರಿ ಕುಕ್ಕನ್ನೂರು ದೈವಗಳ ಭಂಡಾರ ಆಗಮನ ದ ಬಳಿಕ ತಂತ್ರಿಗಳು ವಿವಿಧ ಧಾರ್ಮಿಕ ವಿಧಿ ವಿಧಾನ ಗಳನ್ನೂ ನೆರವೇರಿಸಿ ಧ್ವಜಾರೋಹಣ ನಡೆಯಿತು.

ಬೆಳ್ಳಾರೆಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್,ಜೇಸಿಐ ಬೆಳ್ಳಾರೆ, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗ ಮಂಗಳೂರು ಇವುಗಳ...

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಮೃತ್ಯು – ಆರೋಪಿ ಬೈಕ್ ಸವಾರ ದೋಷಮುಕ್ತ

ಕಳೆದ ವರ್ಷ ಜಾಲ್ಸುರು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಬೈಕ್ ಚಾಲಕ ರಾಜಶೇಖರ ಎಂಬತನನ್ನು ದೋಷ ಮುಕ್ತ ಗೊಳಿಸಿ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯ ಆದೇಶಿಸಿದೆ.ದಿನಾಂಕ : 28-12-2023ರಂದು ಬೆಳಿಗ್ಗೆ ಮಾಣಿ - ಮೈಸೂರು ಹೆದ್ದಾರಿ ರಸ್ತೆಯ ಸುಳ್ಯದ ಜಾಲ್ಸೂರು ಪೇಟೆಯ ಫಾರೆಸ್ಟು ಚೆಕ್ ಪೋಸ್ಟ್ ...

ಕುಶಾಲಪ್ಪ ಗೌಡ ಪೇರಾಲುಮೂಲೆ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಮೂಲೆ ಗಂಗಮ್ಮ-ಚಂಗಪ್ಪ ದಂಪತಿಗಳ ಚತುರ್ಥ ಪುತ್ರರಾದ ಕುಶಾಲಪ್ಪ ಗೌಡ ಪೇರಾಲು ಮೂಲೆ ರವರು ಜ.02 ರಂದು ನಿಧನರಾದರು.ಮೃತರಿಗೆ 47 ವರ್ಷ ವಯಸ್ಸಾಗಿತ್ತು.ಮೃತರು ಸಹೋದರರಾದ ಚಿನ್ನಪ್ಪ ಗೌಡ, ಗೋಪಾಲಕೃಷ್ಣ, ಪರಮೇಶ್ವರ್ ಗೌಡ, ಸಹೋದರಿಯರಾದ ಶ್ರೀಮತಿ ರಾಜೀವಿ, ಶ್ರೀಮತಿ ಅನಿತಾ ಹಾಗೂ ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸುಳ್ಯ : ನೂತನ ಬ್ರಹ್ಮರಥ ಆಗಮನ ಹಿನ್ನೆಲೆಯಲ್ಲಿ ಹಳೆ ರಥ ನವೀಕರಣಕ್ಕಾಗಿ ಕೋಟೆಶ್ವರಕ್ಕೆ

ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಡಾ. ಕೆ.ವಿ‌. ಚಿದಾನಂದ ರವರು ನೂತನ ಬ್ರಹ್ಮರಥ ಸಮರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಹಳೆಯ ರಥವನ್ನು ನವೀಕರಣಕ್ಕಾಗಿ ಕೋಟೇಶ್ವರಕ್ಕೆ ಶಿಪ್ಟ್ ಮಾಡಲಾಗಿದೆ. ಈ ಹಳೆ ರಥವನ್ನು ನವೀಕರಿಸಿ ದೇವಸ್ಥಾನದ ಒಳಾಂಗಣದಲ್ಲಿ ಬಂಡಿ ರಥವನ್ನಾಗಿ ಮಾರ್ಪಾಡು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಸುಳ್ಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿಯಾಗಿದ್ದ ಸಂತೋಷ್ ಕುಮಾರ್ ರೈ ನಿಧನ.

ಸುಳ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾರಿಯಾಗಿ ಕೆಲಸ ನಿರ್ವಹಿಸಿ ವರ್ಗಾವಣೆ ಗೊಂಡು ಬಳಿಕ ಇದೀಗ ಬಿಜಾಪುರದಲ್ಲಿ ಜಿಲ್ಲಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಕುಮಾರ್ ರೈ ಯವರು ಇಂದು ಮುಂಜಾನೆ ಹೃದಯಾಘಾತದಿಂದ ನಿದನರಾದರು ಇವರು ಮೂಲತಃ ಸವಣೂರಿನವರು ಎಂದು ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Loading posts...

All posts loaded

No more posts

error: Content is protected !!