ಅರಂತೋಡು:-ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಕ್ರಮ

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಸುರೇಶ್ ವಾಗ್ಲೆ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಗಾಯತ್ರಿ ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮಾರ್ಗದರ್ಶನ ನೀಡಿದರು ಅರ್ಥಶಾಸ್ತ್ರ ಉನ್ಯಾಸಕ ಶ್ರೀ...

ಹರಿಹರ ಪಳ್ಳತ್ತಡ್ಕ : ಜ.19 ರಂದು ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘದ ಚುನಾವಣೆ – ಜ.07 ರಿಂದ ನಾಮಪತ್ರ ಸಲ್ಲಿಕೆ ಆರಂಭ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಜನ ನಿರ್ದೇಶಕರ ಸ್ಥಾನಕ್ಕೆ ಜ.19 ರಂದು ಚುನಾವಣೆ ನಡೆಯಲಿದ್ದು, ಜ.07 ಅಂದರೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ.ಸಾಮಾನ್ಯ ಕ್ಷೇತ್ರಕ್ಕೆ 06, ಹಿಂದುಳಿದ ವರ್ಗ 'ಎ' ಗೆ 01, ಹಿಂದುಳಿದ ವರ್ಗ 'ಬಿ' ಗೆ 01, ಪರಿಶಿಷ್ಟ ಜಾತಿ ಮೀಸಲು 01, ಪರಿಶಿಷ್ಟ ಪಂಗಡ...
Ad Widget

ಐವರ್ನಾಡು ಮಾಡತಕ್ಕಾನ ಸ್ಪೋರ್ಟ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಕಲಂದರ್ ಷರೀಫ್ – ಕಾರ್ಯದರ್ಶಿಯಾಗಿ ಚರಣ್ ಪರ್ಲಿಕಜೆ

ಐವರ್ನಾಡು ಮಾಡತಕ್ಕಾನ ಸ್ಪೋರ್ಟ್ಸ್ ಕ್ಲಬ್ ಇದರ ಮಹಾಸಭೆಯು ಜ. 5ರಂದು  ಕ್ಲಬ್ಬಿನ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷರಾದ ಚೇತನ್ ಪರ್ಲಿಕಜೆ ಸಭೆಯ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಕಾರ್ಯದರ್ಶಿ ರಾಘವೇಂದ್ರ ಪಾತಿಕಲ್ಲು ಲೆಕ್ಕಪತ್ರ ಮಂಡಿಸಿದರು. 2025ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ವಿ.ಕೆ ಕಲಂದರ್ ಷರೀಫ್ ಹಾಗೂ ಕಾರ್ಯದರ್ಶಿಯಾಗಿ ಚರಣ್ ಪರ್ಲಿಕಜೆ ಇವರನ್ನು ಆಯ್ಕೆ ಮಾಡಲಾಯಿತು....

ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ,ಸುಳ್ಯದ ಸ್ಪರ್ಧಿ ಶಶ್ಮಿ ಭಟ್ ಭಾಗಿ.

ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -2025 ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯು ಬೆಂಗಳೂರು ಸ್ಲರ್ಪ್ ಅಕಾಡೆಮಿಯಲ್ಲಿ ನಡೆಯುತ್ತಿದ್ದು ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥನ ಬಹುಮಾನ ಪಡೆದ ತಂಡಗಳನ್ನು ಮಂಗಳೂರು ಜಂಟಿ ಸಹಾಯಕ ಕೃಷಿ ನಿರ್ದೇಶಕ ಕಛೇರಿಯ ಧನಲಕ್ಷ್ಮೀ ಡಿ. ಎನ್ ಇವರ ನೇತೃತ್ವದಲ್ಲಿ ಬೆಂಗಳೂರಿನ ಸ್ಪರ್ಧೆಯಲ್ಲಿ ಭಾಗವಹಿಸಲಾಯಿತು.ಮಂಗಳೂರಿನಲ್ಲಿ...

ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲಾ ವಾರ್ಷಿಕ ಕ್ರೀಡೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ

ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ, ಪೋಷಕ ವೃಂದ, ಶಿಕ್ಷಕ ವೃಂದ,ಹಿರಿಯವಿದ್ಯಾರ್ಥಿ ಸಂಘ,ಊರ ಮತ್ತು ಪರವೂರ ವಿದ್ಯಾಭಿಮಾನಿಗಳ ಸಹಭಾಗಿತ್ವದೊಂದಿಗೆ ಶಾಲಾ ವಾರ್ಷಿಕೋತ್ಸವ ಮತ್ತು ಶ್ರೀಮತಿ ನಳಿನಿ ಹೊನ್ನಪ್ಪ ಕೊಂದಾಳ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಇವರಿಗೆ ಗುರುವಂದನಾ ಕಾರ್ಯಕ್ರಮ ಜ.4 ರಂದು ನಡೆಯಿತು.. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಎನ್.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರು. ಶ್ರೀಮತಿ ಮೋಹಿನಿ...

ನಾಳೆ (ಜ. 08) ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ರೈತರಿಂದ ಬೃಹತ್ ಪ್ರತಿಭಟನೆ

ಕಸ್ತೂರಿ ರಂಗನ್ ವರದಿ ವಿರೋಧಿಸಿ, ಗಡಿ ಗುರುತು ಹಾಗೂ ಜಂಟಿಸರ್ವೇ ಆಗಬೇಕೆಂಬ ವಿಚಾರವಾಗಿ ಸುಬ್ರಹ್ಮಣ್ಯ ವಲಯದ ಅಡಿಯಲ್ಲಿ ಬರುವ ಕೃಷಿಕರಿಂದ ಜ. 08 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಅಡಿಯಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು ಈ ಪ್ರತಿಭಟನೆಯ ನಂತರದ ದಿನಗಳಲ್ಲಿ ಪಂಜ,ಸುಳ್ಯ ಹಾಗೂ ಉಪ್ಪಿನಂಗಡಿಯಲ್ಲಿಯೂ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಧರಣಿ...

ದೇವಚಳ್ಳ ಶಾಲಾ ಶತಮಾನೋತ್ಸವ ಸಂಭ್ರಮಕ್ಕೆ ಭರದ ಸಿದ್ಧತೆ – ಜ.08 ರಂದು ಆಮಂತ್ರಣ ಬಿಡುಗಡೆ

ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇದರ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಅಭಿವೃದ್ಧಿ ಕೆಲಸ ಭರದಿಂದ ನಡೆಯುತ್ತಿದೆ. ಶಾಲಾ ಪರಿಸರವನ್ನು ಸುಂದರವಾಗಿಸಲು ಗಾರ್ಡನ್ ನಿರ್ಮಿಸಲಾಗಿದೆ. ರಂಗಮಂದಿರದ ಛಾವಣಿ ನಿರ್ಮಾಣ ಭರದಿಂದ ನಡೆಯುತ್ತಿದೆ. ಜ.08 ರಂದು ಶಾಲಾ ಶತಮಾನೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.8 ರಂದು ಪೂ.10 ಗಂಟೆಗೆ ಶಾಲೆಯಲ್ಲಿ ಗಣ್ಯರ...

ಸುಳ್ಯ: ಪುರದೊಡೆಯನಿಗೆ ಜಾತ್ರಾ ಸಂಭ್ರಮ , ಜನವರಿ 10 ರಂದು ವೈಭವದ ಬ್ರಹ್ಮ ರಥೋತ್ಸವ

ಸುಳ್ಯದ ಪುರದೊಡೆಯ ಶ್ರೀ ಚನ್ನಕೇಶವನಿಗೆ ಜಾತ್ರಾ ಸಂಭ್ರಮ ಸುಮಾರು 300 ವರ್ಷಗಳ ನಂತರ ನೂತನವಾಗಿ ಆಗಮಿಸಿದ ವಿಶೇಷವಾದ ಬ್ರಹ್ಮರಥ ಸಮರ್ಪಣೆಯ ನಂತರದ ಪ್ರಥಮ ಜಾತ್ರಾ ಮಹೋತ್ಸವ ಇದಾಗಿದ್ದು ಬ್ರಹ್ಮರಥವು ವಿಶೇಷ ಆಕರ್ಷಣೀಯ ಕೇಂದ್ರವಾದ ಕಾರಣ ತಾಲ್ಲೂಕಿನ ಮೂಲೆ ಮೂಲೆಗಳಿಂದ ಅತಿ ಹೆಚ್ಚು ಜನರು ಜಾತ್ರೆಗೆ ಆಗಮಿಸಿ. ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ ದಿನಾಂಕ 07-01-2025ನೇ ಮಂಗಳವಾರ ರಾತ್ರಿ ಉತ್ಸವ...

ಸಮಹಾದಿ ರಿಫಾಯಿ ಯೂತ್ ಫೆಡರೇಷನ್ (RYF) ಸಮಿತಿ ರಚನೆ : ಅಧ್ಯಕ್ಷರಾಗಿ ಮಹಮ್ಮದ್ ಬಶೀರ್ ರಾಗಿಪೇಟೆ – ಪ್ರಧಾನ ಕಾರ್ಯದರ್ಶಿ ಮುಸ್ತಫಾ ಸಮಹಾದಿ ಆಯ್ಕೆ

ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಅಧೀನದಲ್ಲಿ ರಿಫಾಯಿ ಯೂತ್ ಫೆಡರೇಶನ್ ಸಮಹಾದಿ ಎಂಬ ನೂತನ ಯುವಕರ ಸಂಘಟನೆಯನ್ನು ರಚಿಸಲಾಯಿತು.ಇದರ ರೂಪೀಕರಣ ಸಭೆಯು ಬೈತಡ್ಕ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಇದರ ಅಧ್ಯಕ್ಷರಾದ ಬಿ.ಪಿ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಮಹಾದಿ ಮಸೀದಿಯಲ್ಲಿ ನಡೆಯಿತು. ಮಸೀದಿ ಖತೀಬರಾದ ಬಹು| ರಫೀಕ್ ನಿಝಾಮಿ ಉಸ್ತಾದ್ ರು ಪ್ರಾಸ್ತಾವಿಕವಾಗಿ...

ಪೆರಾಜೆ : ತೋಟಕ್ಕೆ ಆನೆ ದಾಳಿ – ಅಪಾರ ಕೃಷಿ ನಷ್ಟ

ಪೆರಾಜೆ ಗ್ರಾಮದ ಬಂಗಾರಕೋಡಿ ಪರಿಸರದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ನಷ್ಟ ಮಾಡಿರುವ ಘಟನೆ ವರದಿಯಾಗಿದೆ. ಬಂಗಾರಕೋಡಿ ಜಯರಾಮ ಎಂಬವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿರುವ ಕಾಡಾನೆಗಳು ಅಪಾರ ಪ್ರಮಾಣದ ಬಾಳೆಗಿಡಗಳು,ತೆಂಗು, ಅಡಿಕೆ ಗಿಡಗಳನ್ನು ನಾಶ ಮಾಡಿರುವ ಬಗ್ಗೆ ವರದಿಯಾಗಿದೆ.
Loading posts...

All posts loaded

No more posts

error: Content is protected !!