ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾಗಿ ಚಂದ್ರಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ, ಖಜಾಂಜಿಯಾಗಿ ಎ.ಟಿ.ಕುಸುಮಾಧರ ಆಯ್ಕೆ

ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿಜಯ ಕುಮಾರ್ ರೈ, ಉಪಾಧ್ಯಕ್ಷರಾಗಿ ಸುಳ್ಯದ ಚಂದ್ರಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ, ಖಜಾಂಜಿಯಾಗಿ ಸುಳ್ಯದ ಎ.ಟಿ.ಕುಸುಮಾಧರ. ಹಾಗೂ ರಾಜ್ಯ ಪ್ರತಿನಿಧಿಯಾಗಿ ಪದ್ಮನಾಭ ರೈ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಯೇನೆಕಲ್ಲು ಸೊಸೈಟಿ ಚುನಾವಣೆ – ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

‌ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಯೇನೆಕಲ್ಲು ಇದರ ಆಡಳಿತ ಮಂಡಳಿಗೆ ಜ.27 ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಜ.16 ರಂದು ನಾಮಪತ್ರ ಸಲ್ಲಿಸಿದರು. ಸಾಮಾನ್ಯ ಕ್ಷೇತ್ರಕ್ಕೆ ಭವಾನಿಶಂಕರ ಪೂಂಬಾಡಿ, ಭರತ್ ನೆಕ್ರಾಜೆ, ದುರ್ಗಪ್ರಸಾದ್ ಪರಮಲೆ, ಶಿವಪ್ರಸಾದ್ ಮಾದನಮನೆ, ಗೋಪಾಲ ಗೌಡ ಮಾಣಿಬೈಲು, ರಮೇಶ್ ಹೊಸೊಳಿಕೆ, ಮಹಿಳಾ ಕ್ಷೇತ್ರಕ್ಕೆ ಶ್ರೀಮತಿ ವಿಶಾಲಾಕ್ಷಿ...
Ad Widget

ಜಿ. ಎಲ್ ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ ವಜ್ರಾಭರಣಗಳ ಉತ್ಸವ ಜ.26 ವರೆಗೆ

ಜಿ ಎಲ್ ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ ಗ್ಲೋ ಫೆಸ್ಟ್ ಡಿ.23 ರಿಂದ ಪ್ರಾರಂಭವಾಗಿದ್ದು ಜ.26 ರವರೆಗೆ ನಡೆಯಲಿದೆ. ವಜ್ರಾಭರಣ ಗಳು ರೂ.3,500 ರಿಂದ ಪ್ರಾರಂಭ ಗೊಂಡಿರುತ್ತದೆ. ವಜ್ರಾಭರಣಗಳ ಮೇಲೆ ರೂ.8,000 ವರೆಗೆ ( ಪ್ರತೀ ಕ್ಯಾರೆಟ್ ಮೇಲೆ ರಿಯಾಯಿತಿ) ಹಾಗೂ ರೂ.25,000 ಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡುಗೊರೆಯನ್ನು ನೀಡಲಾಗುವುದು. ಗ್ರಾಹಕರು ಈ...

ಕುಲ್ಕುಂದ : ಸ್ಕೂಟಿ – ಕಾರು ಅಪಘಾತ – ಸವಾರನಿಗೆ ಗಂಭೀರ ಗಾಯ

ಸುಬ್ರಹ್ಮಣ್ಯದ ಕುಲ್ಕುಂದ ಬಳಿ ಕಾರು-ದ್ವಿಚಕ್ರ ನಡುವೆ ಅಪಘಾತ ಸಂಭವಿಸಿ ಉಪನ್ಯಾಸಕರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜ.15 ಸಂಜೆ ನಡೆದಿದೆ.ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಎಸ್.ಎಸ್.ಪಿ.ಯು ಕಾಲೇಜಿನ ಉಪನ್ಯಾಸಕ ಶ್ರೀಧರ ಪುತ್ರನ್ ಗಂಭೀರ ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಹ ಸವಾರೆ ಭವ್ಯ ಎಂಬವರು ಸಣ್ಣ ಪ್ರಮಾಣದ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.‌ಅಪಘಾತದ...

ಕಲ್ಮಡ್ಕ: ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ – ಸಮನ್ವಯ ರಂಗ ಮತ್ತೆ ಆಡಳಿತಕ್ಕೆ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಜ.15 ರಂದು ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡಿದ್ದು ಉದಯಕುಮಾರ್ ಬೆಟ್ಟ ನೇತೃತ್ವದ ಸಮನ್ವಯ ರಂಗ ಮತ್ತೆ ಆಡಳಿತಕ್ಕೇರಿದೆ. ಸಮನ್ವಯ ರಂಗದ 10 ಹಾಗೂ ಸಹಕಾರ ರಂಗದ ಇಬ್ಬರು ಗೆಲುವು ಸಾಧಿಸಿದ್ದಾರೆ ಸಮನ್ವಯ ರಂಗದ ಪಿ ಉದಯಕುಮಾರ್ ಬೆಟ್ಟ, ಅಶೋಕ ಜಿ., ತೃಪ್ತಿ ಯು., ರವಿಕಿರಣ...

ನಡುಗಲ್ಲು : ಯುವಕ ಮಂಡಲದ ಕಟ್ಟಡ ನಿರ್ಮಾಣದ ಸಹಾಯಾರ್ಥ ಲಕ್ಕಿ ಕೂಪನ್ ಬಿಡುಗಡೆ

ಜವಾಹರ್ ಯುವಕ ಮಂಡಲ ಮತ್ತು ಶ್ರೀ ದುರ್ಗಾ ಯುವತಿ ಮಂಡಲ ನಡುಗಲ್ಲು, ಇದರ ನೂತನ ಕಟ್ಟಡ ಸಹಾಯರ್ಥವಾಗಿ ಲಕ್ಕಿ ಕೂಪನ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜವಾಹರ್ ಯುವಕ ಮಂಡಲದ ಅಧ್ಯಕ್ಷ ಕುಶನ್ ಉತ್ರಂಬೆ, ಕಾರ್ಯದರ್ಶಿ ಯನಿತ್ ಕುಮಾರ್ ಪಡ್ರೆ, ಕೋಶಾಧಿಕಾರಿ ಯುವರಾಜ ತಂಟೆಪ್ಪಾಡಿ, ಶ್ರೀ ದುರ್ಗಾ ಯುವತಿ ಮಂಡಲದ ಅಧ್ಯಕ್ಷೆ ಉಮೇಶ್ವರಿ ನೆಲ್ಲಿಪುಣಿ...

ನಾಲ್ಕೂರು : ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ಗ್ರಾಮ ಪಂಚಾಯತ್ ಅನುದಾನದ ಮೂಲಕ ನಿರ್ಮಾಣಗೊಂಡಿರುವ ನೂತನ ಬಸ್ ತಂಗುದಾಣ, ಆಟೋರಿಕ್ಷಾ ನಿಲ್ದಾಣ ಹಾಗೂ ಸಾರ್ವಜನಿಕ ಶೌಚಾಲಯದ ಉದ್ಘಾಟನಾ ಸಮಾರಂಭವು ಜ.14 ರಂದು ನಡೆಯಿತು.ಸಭಾ ಕಾರ್ಯಕ್ರಮ ಹಾಗೂ ನೂತನ ಬಸ್ ತಂಗುದಾಣವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು.ನೂತನ...

ಸುಬ್ರಹ್ಮಣ್ಯ ಲೋಕೋಪಯೋಗಿ ವಿಶೇಷ ಉಪ ವಿಭಾಗ ಸ್ಥಳಾಂತರ ಉದ್ಘಾಟನೆ

ಸುಬ್ರಹ್ಮಣ್ಯ ಜ.15 : ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ವಿಶೇಷ ಉಪ ವಿಭಾಗ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಆದಿ ಸುಬ್ರಹ್ಮಣ್ಯದ ಅನಘ ವಸತಿ ಗೃಹದ ಕಟ್ಟಡದಲ್ಲಿ ಇಲ್ಲಿಯವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಬುಧವಾರ ಕಾಶಿಕಟ್ಟೆ ಬಳಿಯ ಆಶ್ಲೇಷ ವಸತಿ ಗೃಹದ ನೆಲ ಅಂತಸ್ತಿನ ಕೊಠಡಿಯಲ್ಲಿ ಉದ್ಘಾಟನೆಗೊಂಡಿತು. ಬೆಳಿಗ್ಗೆ ಕುಲ್ಕುಂದ ಬಸವೇಶ್ವರ ದೇವಸ್ಥಾನದ ಅರ್ಚಕ ಗಣೇಶ್...

ಹರಿಹರ ಪಳ್ಳತ್ತಡ್ಕ : ಜ.19 ರಂದು ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘದ ಚುನಾವಣೆ – ಮೂರು ತಂಡಗಳಿಂದ ಪ್ರಬಲ ಸ್ಪರ್ಧೆ – ಕಣದಲ್ಲಿ 35 ಮಂದಿ ಆಕಾಂಕ್ಷಿಗಳು

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಜ.19 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ಬಳಗ, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ವಿನುಪ್ ಮಲ್ಲಾರ ಮತ್ತು ಪ್ರದೀಪ್.ಕೆ.ಯಲ್. ನೇತೃತ್ವದ ತಂಡ ಸೇರಿದಂತೆ ಒಟ್ಟು 35 ಮಂದಿ ಆಕಾಂಕ್ಷಿಗಳು ಚುನಾವಣಾ ಕಣದಲ್ಲಿದ್ದಾರೆ.ಒಟ್ಟು 39...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜ.16 ರಿಂದ‌ 21 ರ ತನಕ ವಾರ್ಷಿಕ ಜಾತ್ರೆ, ಜ.19ರಂದು ಬ್ರಹ್ಮರಥೋತ್ಸವ, ಪೆರುವಾಜೆ ಬೆಡಿ ಪ್ರದರ್ಶನ

ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವವು ಜ.16 ರಿಂದ ಜ.21 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಜ.16ರಂದು ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಉಗ್ರಾಣ ಮುಹೂರ್ತ, ಮಹಾಪೂಜೆ, ಪ್ರಸಾದ , ಅನ್ನಸಂತರ್ಪಣೆ ನಡೆಯಲಿದೆ. ಸಂಜೆ‌ 3...
Loading posts...

All posts loaded

No more posts

error: Content is protected !!