ಸಂಸದ ಕ್ಯಾ. ಚೌಟ ಅವರ “ಬ್ಯಾಕ್ ಟು ಊರು” ಪರಿಕಲ್ಪನೆಗೆ ಮತ್ತೊಂದು ಯಶಸ್ಸು – ಮಂಗಳೂರಿನಲ್ಲಿ 300 ಕೋಟಿ ಹೂಡಿಕೆಗೆ ಜರ್ಮನಿಯ ಕಂಪೆನಿ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯ " ಬ್ಯಾಕ್ ಟು ಊರು" ಭಾಗವಾಗಿ ಜರ್ಮನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಈಟ್ಯಾಗ್ ಎನರ್ಜಿಟೆಕ್ನಿಕ್ ಪ್ರೈವೆಟ್ ಲಿಮಿಟೆಡ್( ಯುರೋಪಿಯನ್ ಟೆಕ್ನಾಲಜಿ ಅಲೆಯೆನ್ಸ್ ಗ್ರೂಪ್) ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ 300 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಉತ್ಪಾದನಾ ಘಟಕ ಸ್ಥಾಪಿಸುವ ಜತೆಗೆ...

ಕಾಯರ್ತೊಡಿ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ –  ದೇವರ ಭೂತ ಬಲಿ, ಕಟ್ಟೆ ಪೂಜೆ – ಜ.28 ರಂದು ದೇವರ ದರ್ಶನ ಬಲಿ

ಸುಳ್ಯ ದ ಕಾಯರ್ತೊಡಿ ಶ್ರೀ ಮಹಾವಿಷ್ಣು ದೇವಸ್ಥಾನ ದ ವೈಭವದ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಶ್ರೀ ದೇವರ ಭೂತ ಬಲಿ ನಡೆದು ನಂತರ ದೇವರ ಕಟ್ಟೆ ಪೂಜೆ ನೆರವೇರಲಿದೆ ದೇವಳದ ಆಡಳಿತ ಸಮಿತಿ,ಊರ ಪರವೂರ ಭಕ್ತಾದಿಗಳು. ಪಾಲ್ಗೊಂಡು ಶ್ರೀ ದೇವರ ಕೃಪೆ ಗೆ ಪಾತ್ರರಾದರು.ಜ.28 ರಂದು ಬೆಳಿಗ್ಗೆ ದೇವರ ಶ್ರೀ ಬಲಿ ,ದರ್ಶನ ಬಲಿ...
Ad Widget

ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡಿನಲ್ಲಿ ಧರ್ಮ ನಡಾವಳಿ

ಕಾಣಿಯೂರು : ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡಿನಲ್ಲಿ ಜ.26 ಮತ್ತು 27 ರಂದು ಶ್ರೀ ಧರ್ಮದೈವಗಳ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ನಡೆಯಿತು. ಜ.26 ರಂದು ಬೆಳಗ್ಗೆ ಗಣಹೋಮ, ಮುಡಿಪು ಪೂಜೆ, ಸಂಜೆ ಭಂಡಾರ ತೆಗೆಯುವುದು, ಅನ್ನ ಸಂತರ್ಪಣೆ, ರಾತ್ರಿ 10.30 ರಿಂದ ಪರಿವಾರ ದೈವಗಳ ನೇಮ ನಡೆಯಿತು. ಜ.27 ರಂದು ಮುಂಜಾನೆ 5...

ಮಂಡೆಕೋಲು : ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು – ವಿಜಯೋತ್ಸವ

ಮಂಡೆಕೋಲು ಸಹಕಾರ ಸಂಘದ ಆಡಳಿತ ಮಂಡಳಿಗೆ ಜ.27 ರಂದು ಚುನಾವಣೆ ನಡೆದಿದ್ದು ಬಿಜೆಪಿಯ ಎಲ್ಲಾ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಭರ್ಜರಿ ಗೆಲುವು ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೇಶವಮೂರ್ತಿ ಹೆಬ್ಬಾರ್, ಪುರುಷೋತ್ತಮ ಕಾಡುಸೊರಂಜ, ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮಂಡೆಕೋಲು, ಆಶಿಕ್ ದೇವರಗುಂಡ, ಲಿಂಗಪ್ಪ ಬದಿಕಾನ, ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ...

ಪೆರಾಜೆ ಜ್ಯೋತಿ ಪ್ರೌಢಶಾಲೆಯ ಜವಾಬ್ದಾರಿ ತೆಗೆದುಕೊಂಡ ಬೆಂಗಳೂರಿನ ಪ್ರಣವ ಫೌಂಡೇಶನ್

"ಪೆರಾಜೆಯ ಜ್ಯೋತಿ ಪ್ರೌಢಶಾಲೆಯನ್ನು ಇನ್ನು ಮುಂದಕ್ಕೆ ಬೆಂಗಳೂರಿನ ಪ್ರಣವ ಫೌಂಡೇಶನ್ ನೋಡಿಕೊಳ್ಳಲಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಜ್ಯೋತಿ ವಿದ್ಯಾಸಂಘವು ಪ್ರಣವ ಫೌಂಡೇಶನ್ ಗೆ ಆಡಳಿತವನ್ನು ಬಿಟ್ಟುಕೊಟ್ಟಿದೆ. " ಎಂದು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾಗಿದ್ದ ಡಾ. ಎನ್. ಎ. ಜ್ಞಾನೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜ್ಯೋತಿ ಪ್ರೌಢಶಾಲೆ ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆ. ಅಲ್ಲಿ ಸರಕಾರಿ ಸಂಬಳ ಪಡೆಯುತ್ತಿದ್ದ...

ಬೆಳ್ಳಾರೆ: ಸ್ನೇಹಶ್ರೀ ಮಹಿಳಾ ಮಂಡಲ- ದಶ ಸಂಭ್ರಮದ ಕೃತಜ್ಞತಾ ಸಭೆ

ಜನವರಿ 26ರಂದು ಬೆಳ್ಳಾರೆಯ ಸ್ನೇಹಶ್ರೀ ಮಹಿಳಾ ಮಂಡಲದ ದಶ ಸಂಭ್ರಮದ ಕೃತಜ್ಞತಾ ಸಭೆಯು ಸ್ನೇಹಿತರ ಕಲಾಸಂಘದ ಕಚೇರಿಯಲ್ಲಿ ನಡೆಯಿತು.ಸಭಾಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷರಾದ ಪೂರ್ಣಿಮಾ ಪಡ್ಪು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಮರಣ ಸಂಚಿಕೆ ಸಮಿತಿಯ ಪ್ರಧಾನ ಸಂಚಾಲಕರಾದ ಕೊರಗಪ್ಪ ನಾಯ್ಕ ಕುರುಂಬುಡೇಲು ಇವರು ದಶ ಸಂಭ್ರಮದ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತಾ ಮಾತುಗಳೊಂದಿಗೆ ಅಭಿನಂದಿಸಿದರು.ನಂತರ...

ಕೊಲ್ಲಮೊಗ್ರು : ಶ್ರೀ ಅಗ್ನಿ ಗುಳಿಗರಾಜ ದೈವಸ್ಥಾನದಲ್ಲಿ ಶ್ರಮದಾನ

ಶ್ರೀ ಅಗ್ನಿಗುಳಿಗರಾಜ ದೈವಸ್ಥಾನ ಗಾಣಿಗಮಜಲು ಚಾಳೆಪ್ಪಾಡಿ ಇಲ್ಲಿ ವಾರ್ಷಿಕ ನೇಮೋತ್ಸವ ಪ್ರಯುಕ್ತ ನಿನ್ನೆ ಊರಿನ ಭಕ್ತಾದಿಗಳು ಹಾಗೂ ಶ್ರೀ ಕ್ಷೇತ್ರ ದ.ಗ್ರಾ.ಯೋ ಕೊಲ್ಲಮೊಗ್ರು ಬಿ ಒಕ್ಕೂಟ ಇದರ ವತಿಯಿಂದ ಧಾರ್ಮಿಕ ಶ್ರದ್ದಾ ಕೇಂದ್ರ ಸ್ವಚ್ಛತೆ ಕಾರ್ಯಕ್ರಮದಡಿ ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಅಗ್ನಿ ಗುಳಿಗರಾಜ ದೈವಸ್ಥಾನದ ಅಧ್ಯಕ್ಷರು ಚಂದ್ರಶೇಖರ ಕೋನಡ್ಕ ಹಾಗೂ ಸದಸ್ಯರಾದ ಕಾತ್ಯಯಿನಿ ಚಾಳೆಪ್ಪಾಡಿ, ಹೇಮಂತ್...

ಭರತನಾಟ್ಯ ಸ್ನಾತಕೋತ್ತರ ಪದವಿ: ಚೈತನ್ಯ ಕೋಟೆಗೆ ಅವಳಿ ಚಿನ್ನದ ಪದಕ

ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇಲ್ಲಿ ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ (ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ) ವ್ಯಾಸಂಗ ಮಾಡುತ್ತಿದ್ದ ವಿದುಷಿ ಚೈತನ್ಯ ಕೋಟೆ ಅವರು ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ವಿ.ವಿಗೆ ಪ್ರಥಮ ರ‍್ಯಾಂಕ್ ಗಳಿಸಿ ಅವಳಿ ಚಿನ್ನದ ಪದಕ ಪಡೆದಿದ್ದಾರೆ.ಇವರು...

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಹೊಸ ವಿನ್ಯಾಸ, ವಿನೂತನ ಕಲೆಕ್ಷನ್

ಸುಪ್ರಸಿದ್ಧ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಹಬ್ಬಗಳ ಸಂಭ್ರಮವನ್ನು ಇಮ್ಮಡಿಗೊಳಿಸಲು ಮಾರುಕಟ್ಟೆಯಲ್ಲಿ ಕಣ್ಮನ ಸೆಳೆಯುವ ಹೊಸ ವಿನ್ಯಾಸದ ವಿನೂತನ ಕಲೆಕ್ಷನ್ ಮಾರುಕಟ್ಟೆಯಲ್ಲಿ ದೊರಕಲಿದ್ದು. ಗ್ರಾಹಕರು ಹೊಸ ವಿನ್ಯಾಸದ ಆಭರಣಗಳನ್ನು ಖರೀದಿಸಿ ಸಂಭ್ರಮಿಸಬೇಕಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಜ್ವರಗಳ ರಾಜ ಮೆದುಳು ಜ್ವರ – ಜಪಾನೀಸ್ ಎನ್‍ಸೆಫಲೈಟಿಸ್

ಜಪಾನೀಸ್ ಎನ್‍ಸೆಫಲೈಟಿಸ್ ವೈರಸ್ ಎಂಬ ವೈರಾಣುವಿನಿಂದ ಈ ರೋಗ ಹರಡುತ್ತದೆ. ಮೊದಲ ಬಾರಿ ಈ ರೋಗ ಜಪಾನಿನಲ್ಲಿ 1871ರಲ್ಲಿ ಕಂಡು ಬಂದ ಕಾರಣ ಈ ಜ್ವರಕ್ಕೆ ಜಪಾನೀಸ್ ಎನ್‍ಸೆಫಲೈಟಿಸ್ ಎಂದು ನಾಮಕರಣ ಮಾಡಲಾಯಿತು. ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡು ಬರುವ (ಕೆಲವೊಂದು ಪ್ರಬೇಧದ ಹಕ್ಕಿಗಳಲ್ಲಿಯೂ ಕಂಡು ಬರುತ್ತದೆ) ಈ ವೈರಾಣು, ಹಂದಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಈ...
Loading posts...

All posts loaded

No more posts

error: Content is protected !!