ಕೊಲ್ಲಮೊಗ್ರು : ಜಯಪ್ರಕಾಶ್ ಕಜ್ಜೋಡಿ ಎಂಬುವವರ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ; ಅಪಾರ ಹಾನಿ

ಕೊಲ್ಲಮೊಗ್ರು ಗ್ರಾಮದ ಜಯಪ್ರಕಾಶ್ ಕಜ್ಜೋಡಿ ಎಂಬುವವರ ರಬ್ಬರ್ ಸ್ಮೋಕ್ ಹೌಸ್ ಗೆ ಫೆ.15 ರಂದು ರಾತ್ರಿ 10 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.ಈ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಮುಳ್ಳುಬಾಗಿಲು ಬೈಲಿನ ಜನರು, ಹರಿಹರ ಹಾಗೂ ಐನೆಕಿದು ಭಾಗದ ಕೆಲವು ಯುವಕರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದು,...

ಶುಭವಿವಾಹ: ಚಿ|ರಾ| ಗಗನ್ – ಚಿ|ಸೌ| ವಿದ್ಯಾ

ಕಳಂಜ ಗ್ರಾಮದ ನಾಲ್ಗುತ್ತು ಶ್ರೀಮತಿ ಪಾರ್ವತಿ ಮತ್ತು ದಿ|ಮೋನಪ್ಪ ಗೌಡರ ಪುತ್ರ ಚಿ|ರಾ| ಗಗನ್ ರವರ ವಿವಾಹವು ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಬುಡಾರಮನೆ ಶ್ರೀಮತಿ ಪುಷ್ಪಾವತಿ ಮತ್ತು ಶ್ರೀ ಹೊನ್ನಪ್ಪ ಗೌಡರ ಪುತ್ರಿ ಚಿ|ಸೌ| ವಿದ್ಯಾ ರೊಂದಿಗೆ ಫೆ.16ರಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜರುಗಿತು. ಪೆರುವಾಜೆ ಜೆ.ಡಿ. ಆಡಿಟೋರಿಯಂನಲ್ಲಿ ಮಧ್ಯಾಹ್ನ ಅತಿಥಿ ಸತ್ಕಾರ...
Ad Widget

ಅರಂತೋಡು ಎಲಿಮಲೆ ರಸ್ತೆ ವೀಕ್ಷಿಸಿದ ಸಚಿವ ಸತೀಶ್ ಜಾರಕಿಹೊಳಿ – ಶೀಘ್ರ ಅನುದಾನ ನೀಡುವ ಭರವಸೆ

ಕರ್ನಾಟಕ ಘನ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರು ಬಹು ಬೇಡಿಕೆಯ ಅರಂತೋಡು ಎಲಿಮಲೆ ರಸ್ತೆ ಯನ್ನು ವೀಕ್ಷಿಸಿ ಆರಂತೋಡಿನಿಂದ ಮರ್ಕಂಜದ ಸನಿಹವರೆಗೆ ಸುಮಾರು 8ಕಿ. ಮೀ ರಸ್ತೆ ಸ್ವತಃ ವೀಕ್ಷಿಸಿದರು. ಶೀಘ್ರದಲ್ಲಿ ರಸ್ತೆಯನ್ನು ಸಂಪೂರ್ಣ ಅಗಲೀಕರಣಗೊಳಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ, ಕಾಂಗ್ರೆಸ್ ಮುಖಂಡ ಟಿ....

ಹರಿಹರ ಪಳ್ಳತ್ತಡ್ಕ : ಸಂಧ್ಯಾರಶ್ಮಿ ಸಾಹಿತ್ಯ ಸಂಘದ “ತಿಂಗಳ ಸಾಹಿತ್ಯ ಸಂವಾದ ಮಾಲಿಕೆ” – ಲೇಖಕಿ ಶ್ರೀಮತಿ ಲಲಿತಾಜ ಮಲ್ಲಾರ ರವರ “ಸಾಹಿತ್ಯ ವಿಚಾರ ಮಂಡನೆ”

ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಫೆ.15 ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆದ ಸಂಧ್ಯಾರಶ್ಮಿ ಸಾಹಿತ್ಯ ಸಂಘದ “ತಿಂಗಳ ಸಾಹಿತ್ಯ ಸಂವಾದ ಮಾಲಿಕೆ” ಕಾರ್ಯಕ್ರಮದಲ್ಲಿ “ಲೇಖಕಿ ಶ್ರೀಮತಿ ಲಲಿತಾಜ ಮಲ್ಲಾರ ರವರ ಸಾಹಿತ್ಯ ವಿಚಾರ ಮಂಡನೆ” ನಡೆಯಿತು.ಸಂಧ್ಯಾರಶ್ಮಿ ಸಾಹಿತ್ಯ...

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಡಾ| ಕೆ.ವಿ.ಚಿದಾನಂದ ಹಾಗೂ ಎ.ಕೆ.ಹಿಮಕರ ಸೇರಿ ಆರು ಮಂದಿ ಆಯ್ಕೆ –

ಅರೆಭಾಷಾ ಸಾಹಿತ್ಯ, ಸಂಸ್ಕೃತಿ ಮತ್ತು ಅದರ ಬೆಳವಣಿಗೆಯಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು. ಅವರು ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಶೋಧನಾ ಪ್ರಬಂಧಗಳ ಬಿಡುಗಡೆ ಕಾರ್ಯಕ್ರಮದ...

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ಆಯ್ಕೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ಅವರನ್ನು ಕೆಪಿಸಿಸಿ ಆಯ್ಕೆ ಮಾಡಿದೆ. ತಾ.ಪಂ.ಮಾಜಿ ಸದಸ್ಯರಾಗಿ,ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಅಮರ ಮುಡ್ನೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಗ್ರಾಮೀಣ ಮಟ್ಟಕ್ಕೂ ಬಂತು ಅಧುನಿಕ ಚುನಾವಣಾ ತಂತ್ರಗಾರಿಕಾ ತಂಡ – ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಯೋಗ

ಹಲವು ಸಹಕಾರ ಸಂಘಗಳಿಗೆ ಚುನಾವಣೆ ನಡೆಯುತ್ತಿದ್ದು ಸಹಕಾರಿಗಳಿಗೆ ಚುನಾವಣಾ ಪರ್ವವಾಗಿದೆ. ಚುನಾವಣೆ ಎಂದ ಕೂಡಲೇ ಸಾಂಪ್ರದಾಯಿಕ ಶೈಲಿಯಲ್ಲಿ ಮನೆ ಮನೆ ಭೇಟಿ ಯ ಮತಪ್ರಚಾರ ಮಾಡುವುದು ಸಾಮಾನ್ಯವಾದರೇ ಬಿಳಿನೆಲೆ ಯ ರೈತಾಪಿ ಸಹಕಾರಿ ಅಭಿವೃದ್ಧಿ ರಂಗ ಚುನಾವಣೆಗೆ ಅಧುನಿಕ ತಂತ್ರಗಾರಿಕೆಯ ಸ್ಪರ್ಷ ನೀಡಿದೆ. ತಂತ್ರಜ್ಞಾನ ಬಳಸಿಕೊಂಡು ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು ಗ್ರಾಮಾಂತರದಲ್ಲಿ ಹೊಸತನವನ್ನು ಪರಿಚಯಿಸಿದ್ದಾರೆ. ಸಹಕಾರ...

ದ.ಕ. ಜಿಲ್ಲಾ ಕೃಷಿಕ ಸಮಾಜದ ಸಭೆ ಫೆ.18 ಕ್ಕೆ ಮುಂದೂಡಿಕೆ

ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಮಂಗಳೂರು ಇದರ ಸಭೆ ಮುಂದೂಡಿಕೆಯಾಗಿದ್ದು, ಫೆ 18 ರಂದು ಕೃಷಿಕ ಸಮಾಜದ ಅಧ್ಯಕ್ಷರಾದ ವಿಜಯ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿ ಅಗತ್ಯ ಸಲಹೆಗಳನ್ನು ನೀಡುವಂತೆ ಹಾಗೂ ಜಿಲ್ಲೆಯ ಕೃಷಿ ಚಟುವಟಿಕೆ...

ಜಗದೀಶ್ ಬುಡ್ಲೆಗುತ್ತು ನಿಧನ

ಕನಕಮಜಲು ಗ್ರಾಮದ ಬುಡ್ಲೆಗುತ್ತು ದಿ. ಕೆ.ಬಿ. ಸಂಕಪ್ಪ ಗೌಡರ ಪುತ್ರ ಜಗದೀಶ್‌ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.14ರಂದು ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಜಗದೀಶ್‌ ಅವರು ಕಳೆದ 50 ವರ್ಷದಿಂದ ಮೈಸೂರಿನಲ್ಲಿ ರೂಪಕಲಾ ಡಿಸೈನ್‌ ಸಂಸ್ಥೆ ನಡೆಸುತ್ತಿದ್ದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಿಜಯ, ಪುತ್ರ ಯಶಸ್, ಸಹೋದರರಾದ ಜಯರಾಮ ಗೌಡ, ರಾಮಚಂದ್ರ ಗೌಡ,...

ಸೈನಿಕರ ಹುತಾತ್ಮ ದಿನದ ಅಂಗವಾಗಿ ಕೆವಿಜಿ ದಂತ ಮಹಾವಿದ್ಯಾಲಯ & ಆಸ್ಪತ್ರೆಯಲ್ಲಿ ಕರಾಳ ದಿನ ಆಚರಣೆ

ಸೈನಿಕರ ಹುತಾತ್ಮ ದಿನದ ಅಂಗವಾಗಿ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಕರಾಳ ದಿನ ವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸೈನಿಕರ ಫೋಟೋಗಳಿಗೆ ಮೊಂಬತ್ತಿಯನ್ನು ಉರಿಸಿ ಸೈನಿಕರನ್ನು ಸ್ಮರಿಸಿ, ಹುತಾತ್ಮ ಸೈನಿಕರಿಗೆ ಭಾವಪೂರ್ವಕ ಗೌರವ ನಮನ ಸಲ್ಲಿಸಿದರು. ಮತ್ತು ಸೈನಿಕರ ನೆನಪಿನ ಗೌರವದ ಸಲುವಾಗಿ ದೇಶದ ಸೈನಿಕ ವಲಯಕ್ಕೆ ಗೌರವಿಸುವ ಪತ್ರವನ್ನು ಬರೆದು ರವಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ...
Loading posts...

All posts loaded

No more posts

error: Content is protected !!