- Saturday
- June 20th, 2026
ರಾಜ್ಯ ಸರಕಾರ ಕೊರೊನಾ ಸೋಂಕು ಹರಡುತ್ತಿರುವ ಬೆನ್ನಲ್ಲೇ ಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸಿದೆ. ರಾಜ್ಯ ಸರಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪೋಷಕರು ಸಹಿ ಸಂಗ್ರಹ ಅಭಿಯಾನ ಜೊತೆಗೆ ಆನ್ ಲೈನ್ ಅಭಿಯಾನವನ್ನು ಕೈಗೊಂಡಿದ್ದಾರೆ. ಪೋಷಕರ ಅಭಿಯಾನಕ್ಕೀಗ ಬಾರೀ ಬೆಂಬಲ ವ್ಯಕ್ತವಾಗಿದೆ.ಜೂನ್ 5ರಿಂದಲೇ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದ್ದು,...
ಕಳೆದ ಕೆಲವು ದಿನಗಳ ಹಿಂದೆ ಕೊರೋನ ಸೋಂಕಿತ ವೈದ್ಯರೊಬ್ಬರು ಅರಂತೋಡಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದು ,ಆ ಮನೆಯವರು ಅಂದು ಮದುವೆ ಮನೆ ಹಾಗೂ ಇತರೆಡೆ ಸಂಚರಿಸಿರುವ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಮುಂಜಾಗೃತ ದೃಷ್ಟಿಯಲ್ಲಿ ಅರಂತೋಡು ಗ್ರಾಮದ ಒಂದು ಮತ್ತು ಎರಡನೇ ವಾರ್ಡಿನ ಎಲ್ಲಾ ವಾಣಿಜ್ಯ ವ್ಯವಹಾರಗಳನ್ನು ಜೂನ್...
ಅರಂತೋಡಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಸುಮಾರು ಐವತ್ತಕ್ಕೂ ಅಧಿಕ ಮಂದಿಗೆ ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ ವಿಧಿಸಿರುವ ಘಟನೆ ನಡೆದಿದೆ.ಮಲೇಷ್ಯಾದಿಂದ ಬಂದು ಮಂಗಳೂರಿನಲ್ಲಿ ಹೋಟೆಲ್ ಕ್ವಾರಂಟೈನಲ್ಲಿದ್ದ ವೈಧ್ಯ ರಿಪೋರ್ಟ್ ಬರುವ ಮುನ್ನ ಅರಂತೋಡು ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಅರಂತೋಡಿನಲ್ಲಿರುವ ವೇಳೆ ವರದಿ ಬಂದ ಹಿನ್ನಲೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ೫೨ಕ್ಕೂ ಅಧಿಕ ಮಂದಿಗೆ...
ಕೊರೊನಾ ತಡೆಗಟ್ಟಲು ಇಲ್ಲಿನ ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿರುವಾಗ ಗಾಂಧಿನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ, ಸುಳ್ಯದ ಇಕ್ಬಾಲ್ ಜಿ ಎ ರವರ ಪುತ್ರ ಮೊಹಮ್ಮದ್ ಶಿಬಿಲಿ ತನ್ನ ಕೈ ಚಳಕದ ಮೂಲಕ ಸ್ಯಾನಿಟೈಝರ್ ಸ್ಟ್ಯಾಂಡ್ ತಯಾರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ಟ್ಯಾಂಡ್ನ ಪ್ರಾತ್ಯಕ್ಷಿಕೆ - ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಮತ್ತು...
ಜೂನ್01 ಬಂದರೆ ಸಾಕು ಪ್ರತಿ ವರ್ಷವೂ ಎಂದಿನಂತೆ ಶಾಲಾ ಮಕ್ಕಳು ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಹುರುಪಿನಿಂದ ಶಾಲೆಯ ಅಂಗಳಕ್ಕೆ ಬರುತ್ತಿರುತ್ತಾರೆ... *ಆಹಾ!!* ಬೇಸಿಗೆ ರಜೆಯಲ್ಲಿ ಅವ್ವನ ಮನೆಗೋ,ಮಾವನ ಮನೆಯೋ ಹೀಗೇ ಸಂಸಾರದ ಸಂಬಂಧಿಗಳ ಮನೆಗೆ ಪ್ರಯಾಣ ಮಾಡಿ ಏಳೆಂಟು ದಿನ ಅಲ್ಲೇ ತಮ್ಮಂತಹ ಜೊತೆಗಾರೊಂದಿಗೆ ಆಟ ತುಂಟಾಟ ಜೊತೆಗೆ ಖುಷಿ ಖುಷಿಯಾಗಿ ದಿನಕಳೆಯುತ್ತಾ ಮತ್ತೆ...
ಹರಿಹರಪಲ್ಲತ್ತಡ್ಕ ಕಿರಿಭಾಗ ಬಾಳುಗೋಡು ರಸ್ತೆಯಲ್ಲಿರುವ ಕೊಪ್ಪತ್ತಡ್ಕ ಕಿರು ಸೇತುವೆ ತಡೆಬೇಲಿ ಕಿತ್ತು ಹೋಗಿದ್ದು ಸ್ವಲ್ಪವೇ ಉಳಿದಿದೆ,ಒಂದು ಭಾಗದ ತಡೆಗೋಡೆ ಕೂಡ ಕುಸಿಯುವ ಭೀತಿಯಲ್ಲಿದೆ.ಈ ಸೇತುವೆ ಕಿರಿದಾಗಿದ್ದು ಒಂದು ಲಘು ವಾಹನ ಮಾತ್ರ ಸಂಚರಿಸಲು ಅವಕಾಶವಿದೆ. ಈ ರಸ್ತೆಯಲ್ಲಿ ದಿನದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ,ಕಾಲೇಜು ವಿದ್ಯಾರ್ಥಿಗಳು ಕೂಡ ನಡೆದುಕೊಂಡು ಹೋಗುತ್ತಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ವೇಳೆ...
ಅರಂತೋಡು ಲಿಂಕ್ ಇರುವ ದೇವಚಳ್ಳ ಗ್ರಾಮದ ತಳೂರಿನ ಎರಡು ಕುಟುಂಬವನ್ನು ಹೋಂ ಕ್ವಾರೆಂಟೇನ್ ಮಾಡಲಾಗಿದೆ . ಅರಂತೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಭಾರತ ಲಾಕ್ ಡೌನ್ ಗೊಂಡ ಹಿನ್ನೆಲೆಯಲ್ಲಿ ಶೈಕ್ಷಣಿಕ ಕೇಂದ್ರಗಳು ಮುಚ್ಚಲ್ಪಟ್ಟಿದೆ. ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಗಳು ನಿಗದಿ ಗೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಹಾಯವಾಗುವಂತೆ ಆನ್ಲೈನ್ ತರಬೇತಿಗಳು ಆರಂಭಗೊಂಡಿದೆ.ಈ ನಿಟ್ಟಿನಲ್ಲಿ ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ತೇರ್ಗಡೆಯಾದ ಬಡ ವಿದ್ಯಾರ್ಥಿನಿಗೆ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಎಂಬಿ ಫೌಂಡೇಶನ್...
ಕರ್ನಾಟಕದಲ್ಲಿ ಕೊರೋನಾ ತಾಂಡವವಾಡುತ್ತಿದ್ದು, ಇತ್ತೀಚೆಗೆ ಪ್ರತಿದಿನ ಶತಕ ಬಾರಿಸುತ್ತಲೇ ಬರುತ್ತಿದೆ. ಯಾವಾಗ ಹೊರರಾಜ್ಯ, ದೇಶಗಳಿಂದ ಕರ್ನಾಟಕಕ್ಕೆ ಜನ ಬಂದರೋ ಅಗಲೇ ಕೊರೊನ ರುದ್ರ ನರ್ತನ ಆರಂಭಿಸಿದೆ. ಇಂದು ಕೃಷ್ಣ ನಗರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 210 ಪ್ರಕರಣಗಳು ಪತ್ತೆಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ . ಇದರಿಂದ ಉಡುಪಿ ಸೇರಿದಂತೆ...
Loading posts...
All posts loaded
No more posts
