- Saturday
- June 20th, 2026
ಬೈಕ್ ಸವಾರನಿಗೆ ಕಾರು ಗುದ್ದಿ ಪರಾರಿ ಬೈಕ್ ಸವಾರ ಗಂಭೀರ ಸ್ವರೂಪದ ಗಾಯಗೊಂಡ ಘಟನೆ ಕಲ್ಚೆರ್ಪೆಯಲ್ಲಿ ನಡೆದಿದೆ ಗಾಯ ಗೊಂಡ ಬೈಕ್ ಸವಾರ ಪೆರಾಜೆ ಗ್ರಾಮದ ಪೀಚೆ ಮನೆ ಯಶೋಧರ ಎಂದು ತಿಳಿದು ಬಂದಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದ ಮುಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್.ಜಿ. ಕೆ. ಹಾಗೂ ಸಂಪಾಜೆ ಕ್ರಷಿ ಪತ್ತಿನ ಸಂಘದ ನಿರ್ದೇಶಕಿ ಸುಮತಿ ಶಕ್ತಿವೇಲು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಪಂಚಾಯತ್ ಸಿಬ್ಬಂದಿಗಳಾದ ಭರತ್ ಕೆ.ಎಸ್. ಗೋಪಮ್ಮ.ಮಲ್ಲಿಕಾ,...
ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ ಅಧಿಕಾರಿಗಳು ಅವರ ಆರಿಗ ದೊಳ ಮನೆಯ ಸುತ್ತಲಿನ ಏಳು ಮನೆಗಳನ್ನು ಸೀಲ್ ಡೌನ್ ಮಾಡಿದ್ದಾರೆ . ಅವರ ಮನೆಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್ , ಪಿಡಿಒ ಚೆನ್ನಪ್ಪ ಗೌಡ , ಕಡಬ ಠಾಣಾ ಪೋಲಿಸ್ ಆರೋಗ್ಯ ಸಿಬ್ಬಂದಿಗಳು ಆ...
ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಿ . ಅವರು ಹೆಡ್ ಕಾನ್ಸ್ಟೇಬಲ್ ಆಗಿ ಮುಂಭಡ್ತಿಗೊಂಡು ಪುತ್ತೂರು ಮಹಿಳಾ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಅವರು ಅಬಕಾರಿ ಮತ್ತು ಲಾಟರಿ ಸ್ಕ್ವಾಡ್, ಬಂದರ್ ಪೊಲೀಸ್ ಠಾಣೆ ( ಉತ್ತರ ಮಂಗಳೂರು ) ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು...
ಹಳೆಗೇಟು ಪೆಟ್ರೋಲ್ ಬಂಕ್ ಮುಂಬಾಗ ಎಸ್ ಎಂ ಶಂಸುದ್ದೀನ್ ರವರ ಮಾಲಕತ್ವದಲ್ಲಿ ಫ್ಯಾಮಿಲಿ ನರ್ಸರಿ ಜೂನ್ 5ರಂದು ಶುಭಾರಂಭಗೊಂಡಿತು. ಲಭ್ಯವಿರುವ ಗಿಡ ನಮ್ಮಲ್ಲಿ ಎಲ್ಲಾ ತರಹದ ಹೂವಿನ ಗಿಡಗಳು ತೆಂಗು ಅಡಿಕೆ ಗಿಡಗಳು ಹಣ್ಣಿನ ಗಿಡಗಳು ಔಷಧಿ ಗಿಡಗಳು ಹೋಲ್ಸೇಲ್ ಮತ್ತು ರಖಂ ದರದಲ್ಲಿ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದರು.
ಕ್ಯಾಂಪ್ಕೊ ನಿಯಮಿತ ಮಂಗಳೂರು ಇದರ ಸುಳ್ಯ ಶಾಖೆಯ ಇಂದಿನ ಧಾರಣೆ ಹೀಗಿದೆ 05.06.2020 ಶುಕ್ರವಾರಹೊಸ ಅಡಿಕೆ 255 - 300ಹಳೆ ಅಡಿಕೆ 265 - 320ಡಬಲ್ ಚೋಲ್ 265 - 320ಫಠೋರ 200 - 245ಉಳ್ಳಿಗಡ್ಡೆ 110 - 150ಕರಿಗೋಟು 110 - 140ಕಾಳುಮೆಣಸು 250 - 300ಕೊಕ್ಕೋ (ಒಣ) 150 - 175ಹಸಿ ಕೊಕ್ಕೊ...
ನಾಳೆ ಜೂ ೬ ಶನಿವಾರ ದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11 ಕೆವಿ ಬೆಳ್ಳಾರೆ , ನೆಟ್ಟಾರು , ಕಳಂಜ , ಮುರುಳ್ಳ , ಪೆರ್ಲಂಪಾಡಿ , ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ...
ಜೂನ್ 5 ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ . ಮತ್ತು ವಿಶ್ವ ಪರಿಸರ ದಿನದ ಆಚರಣೆಯನ್ನು ವನಮಹೋತ್ಸವ ಎಂದೂ ಕರೆಯುತ್ತಾರೆ . ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು 1972-73ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು . 1974 ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು . ಜೂನ್ 5 ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ...
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಸ್ ಎಸ್ ಎಫ್ ರಾಜ್ಯದಾದ್ಯಂತ ಹಮ್ಮಿಕೊಂಡಂತಹ ಕಾರ್ಯಕರ್ತರ ಮನೆಯಲ್ಲಿ ನಾಳೆಗೊಂದು ನೆರವು ಸಸಿ ನೆಡುವ ಕಾರ್ಯಕ್ರಮಕ್ಕೆ ಮೊಗರ್ಪಣೆ ಎಸ್ಎಸ್ಎಫ್ ವತಿಯಿಂದ ಚಾಲನೆ ನೀಡಲಾಯಿತು.ಪ್ರಥಮವಾಗಿ ಸುಳ್ಯ ಎಸ್ಎಸ್ಎಫ್ ಡಿವಿಜನ್ ಸದಸ್ಯರಾದ ಶಮೀರ್ ಡಿ ಎಚ್ ರವರ ಜಯನಗರ ನಿವಾಸದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಮಿತಿಯ...
ಸಂಪಾಜೆಯ ವಲಯ ವ್ಯಾಪ್ತಿಯ ದಬ್ಬಡ್ಕ ಉಪವಲಯದ ಆನೆಹಳ್ಳ ಸಮುದಾಯ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ , ಸದಸ್ಯರು,ಅರಣ್ಯ ಸಮಿತಿಯ ಸದಸ್ಯರುಗಳು , ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಮಾತನಾಡಿ ಪರಿಸರ ಸಂರಕ್ಷಣೆ ಹಾಗೂ ಅರಣ್ಯ ರಕ್ಷಣೆ ಕಾರ್ಯವನ್ನು ಗ್ರಾಮಸ್ಥರಾದ...
Loading posts...
All posts loaded
No more posts
