- Friday
- May 8th, 2026
ಮಾಹಿತಿ ಹಕ್ಕು ಕಾರ್ಯಕರ್ತ ಡಿ.ಎಂ.ಶಾರೀಕ್ ವೆನ್ಲಾಕ್ ಆಸ್ಪತ್ರೆಯ ಆಧಿಕಾರಿಗಳಿಗೆ ಪತ್ರ ಬರೆದು ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ, ಹಾಗೂ ಎಷ್ಟು ಖರ್ಚು ಆಗಿದೆ ಮತ್ತು ಸರಕಾರದಿಂದ ಎಷ್ಟು ಅನುದಾನ ಬಿಡುಗಡೆ ಯಾಗಿದೆ ಎಂದು ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕೋವಿಡ್ ರೋಗಿಗಳಿಗೆ ಟೆಸ್ಟ್ ಮತ್ತು ಎಲ್ಲಾ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ. ಚಿಕಿತ್ಸೆಯ ಉಪಕರಣಗಳ ಖರೀದಿಗೆ ರೂ...
ನಾಳೆ ಕೋಟೆಮುಂಡುಗಾರು ಪ್ರಾ.ಕೃ .ಪ.ಸಹಕಾರಿ ಸಂಘದ ಹತ್ತಿರ ಅರಳಿಕಟ್ಟೆ ವೆಜಿಟೇಬಲ್ಸ್ ಶುಭಾರಂಭಗೊಳ್ಳಲಿದೆ. ಉದ್ಘಾಟನೆಯನ್ನು ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಧರ್ಮದರ್ಶಿಗಳು ಹಾಗೂ ಗೌರವ ಪ್ರಧಾನ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ ನೆರವೇರಿಸಲಿದ್ದಾರೆ. ಗ್ರಾಹಕರಿಗೆ ಇಲ್ಲಿ ಎಲ್ಲಾ ಬಗೆಯ ಉತ್ತಮ ಗುಣಮಟ್ಟದ ತರಕಾರಿ ಹಾಗೂ ಇನ್ ವರ್ಟರ್ ಮತ್ತು ಬ್ಯಾಟರಿ ಸೇವೆಗಳೂ ಲಭ್ಯವಿರಲಿದೆ ಎಂದು ಮಾಲಕ ನವೀನ...
ಸುಬ್ರಹ್ಮಣ್ಯದ ಉದ್ಯಮಿ ಆರ್ಯಭಟ, ಜೇಸೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವುರವರ ಮನೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳನ್ನು ಪಡೆದ ಅನುಷ್ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ವಿದ್ಯಾರತ್ನ ಸೇರಿದಂತೆ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜೇಸೀ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಸುಬ್ರಹ್ಮಣ್ಯ ಜೇಸೀ ಮೂಲಕ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಜೇಸಿ ವಲಯಾಧ್ಯಕ್ಷ...
ಕಲ್ಲುಗುಂಡಿ ಹೊರಠಾಣೆಯ ಸಿಬ್ಬಂದಿ ಸುನಿಲ್ ತಿವಾರಿ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಸೇವೆಯನ್ನು ಗುರುತಿಸಿ ಸುಳ್ಯ ತಾಲೂಕು ನಾಡಹಬ್ಬಗಳ ಸಮಿತಿ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಸಕ ಎಸ್.ಅಂಗಾರ ಕೊರೊನಾ ವಾರಿಯರ್ ಸುನಿಲ್ ತಿವಾರಿಯನ್ನು ಸನ್ಮಾನಿಸಿದರು.
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ಶಾಲಾ ವಿಧ್ಯಾರ್ಥಿನಿ ಪುಣ್ಯ ಎಂ.ಪಿ. 543 ಅಂಕ (88%) ಪಡೆದಿರುತ್ತಾಳೆ. ಈಕೆ ಬೆಳ್ಳಾರೆಯ ಪ್ರೇಮ್ ಸ್ಟುಡಿಯೋ ಮಾಲಕ ಪ್ರೇಮಚಂದ್ರ ಮತ್ತು ಗೀತಾ ದಂಪತಿಗಳ ಪುತ್ರಿ.
ಕೊರೊನಾ ಕಾರಣದಿಂದಾಗಿ ಈ ಬಾರಿಯ ಗಣೇಶೋತ್ಸವ ಆಚರಣೆ ಮಾಡಲು ನಿರ್ಬಂಧ ಹೊರಡಿಸಲಾಗಿತ್ತು. ಮತ್ತೆ ಈಗ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿ ಸಂಘ- ಸಂಸ್ಥೆಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ...
ಕೊಲ್ಲಮೊಗ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ರಾಂಡಮ್ ಟೆಸ್ಟ್ ವೇಳೆ ಹರಿಹರ ಪಲ್ಲತ್ತಡ್ಕದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಧೃಡಪಟ್ಟಿದೆ.ನಿನ್ನೆ ಹಾಲೆಮಜಲಿನ ಮಹಿಳೆಯೊಬ್ಬರು ಚಿಕಿತ್ಸೆ ಗಾಗಿ ಮಂಗಳೂರಿಗೆ ಹೋಗಿದ್ದ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಹಾಗೂ ಅರಂತೋಡಿನ ಅಂಚೆ ವಿತರಕರಿಗೆ ಕೂಡ ಪಾಸಿಟಿವ್ ಧೃಡಪಟ್ಟಿದೆ. ಜನತೆ ಭಯಪಡುವ ಭಯಪಡುವ ಅಗತ್ಯವಿಲ್ಲ, ಸಾಮಾಜಿಕ ಅಂತರ, ಮಾಸ್ಕ್...
ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಹಿತೇಶ್ ಕುಂಚಡ್ಕ ಈ ಬಾರಿಯ ಎಸ್ . ಎಸ್.ಎಲ್.ಸಿ.ಪರೀಕ್ಷೆಯಲ್ಲಿ ( 611 ) ಶೇ .97.76 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ . ಈತ ಆಲೆಟ್ಟಿ ಗ್ರಾಮದ ಕುಂಚಡ್ಕ ಲೋಲಜಾಕ್ಷ ಕೆ.ಸಿ.ಮತ್ತು ಶ್ರೀಮತಿ ಪದ್ಮಾವತಿ ಕೆ ದಂಪತಿಗಳ ಪುತ್ರ .
ಬೆಳ್ಳಾರೆ : ಪಾಸಿಟಿವ್ ಆಗಿದ್ದ ಮೊಟುಕಾನದ ಪತ್ರಕರ್ತರ ಪ್ರಾಥಮಿಕ ಸಂಪರ್ಕಿತರಾಗಿ ಕಾರಂಟೈನ್ ನಲ್ಲಿದ್ದ ಮನೆಯ ಎಲ್ಲರ ಪರೀಕ್ಷೆ ಇಂದು ನಡೆದಿದ್ದು ವರದಿ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.
Loading posts...
All posts loaded
No more posts
