- Monday
- August 10th, 2026
ಸುಳ್ಯದ ಪೈಚಾರಿನಲ್ಲಿರುವ ರಾಜೇಶ್ ಕಿರಿಭಾಗ ರವರ ಮಾಲಕತ್ವದ ಆದಿಲಕ್ಷ್ಮಿ (ಆರ್.ಕೆ) ಟ್ರಾನ್ಸ್ ಪೋರ್ಟ್ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮ ಹಾಗೂ ವಾಹನ ಪೂಜೆಯು ಅ.4 ರಂದು ನಡೆಯಿತು. ಪುರೋಹಿತರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಬಂಧು ಮಿತ್ರರು ಮತ್ತು ನೌಕರ ವರ್ಗದವರು ಉಪಸ್ಥಿತರಿದ್ದರು.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ದೇವಳದ ಮೊಕ್ತಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು ಹಾಗೂ ತಕ್ಕಮುಖ್ಯಸ್ಥರು, ಮಾಜಿ ಮುಕ್ತೆಸರ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಸುಳ್ಯ ರಥಬೀದಿಯಲ್ಲಿಯ ಭಾಸ್ಕರ ಗೌಡ ರವರ ಮಾಲಕತ್ವದ ಐಡಿಯಲ್ ಅಟೋ ವರ್ಕ್ಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜೆ ಅ.3 ರಂದು ನಡೆಯಿತು.ಪುರೋಹಿತ್ ಕೃಷ್ಣ ಶಾಸ್ತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಭಾಸ್ಕರ ಗೌಡ ಗುರುರಾಜ್ ಮತ್ತು ಮನೆಯವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸ್ವತಂತ್ರ ಮಾನ್ಯತೆ ಪಡೆದ ಶಾಲಾ ಶಿಕ್ಷಕರ ಒಕ್ಕೂಟದ ಪಸ್ಟ್ ಕರ್ನಾಟಕ ಸಂಸ್ಥೆ (ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರ ವೇದಿಕೆ) ಅ. 1ರಂದು ಡಾ.ಎಸ್. ರಾಧಾಕೃಷ್ಣನ್ ಅವರ ಸ್ಮರಣಾರ್ಥ ಶಿಕ್ಷಕ್ ಸಮ್ಮಾನ್ 2022 ಅನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀ ಪುಟ್ಟಣ್ಣ ಅವರಿಂದ ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ಶೂಪರ್ ಸಾಧಕಿ ಪ್ರಶಸ್ತಿ ಸ್ವೀಕರಿಸಿದರು. ಈ...
ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 14 ನೇ ವಿಶೇಷ ವಾರ್ಷಿಕ ಶಿಬಿರ ಅರಂತೋಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. "ವಿದ್ಯಾರ್ಥಿಯುವಜನರ ದೃಷ್ಟಿ ಭಾರತದಲ್ಲಿ ಸರ್ವೋದಯದ ಸೃಷ್ಟಿ" ಅನ್ನುವ ಧ್ಯೇಯ ವಾಕ್ಯದಡಿ ಶಿಬಿರ ನಡೆಯಿತು. ಏಳು ದಿನಗಳ ಶಿಬಿರವೂ ಪ್ರಾರ್ಥನೆ , ಯೋಗ, ಧ್ಯಾನ, ಧ್ವಜಾರೋಹಣ, ಶ್ರಮದಾನ, ಶೈಕ್ಷಣಿಕ...
ನಿಟ್ಟೆ ಸದಾನಂದ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಕೇಂದ್ರ ಸುಬ್ರಹ್ಮಣ್ಯ ಇಲ್ಲಿ ಅ.04 ರಂದು ಆಯುಧ ಪೂಜೆಯ ಪ್ರಯುಕ್ತ ಗಣಹೋಮ ಮತ್ತು ಆಯುಧ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
ನವರಾತ್ರಿ ಮತ್ತು ವಿಜಯದಶಮಿ ಪ್ರಯುಕ್ತ ಅಕ್ಟೋಬರ್ 04ರಂದು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಾಗೂ ಕೆವಿಜಿ ಆಯುರ್ವೇದ ಫಾರ್ಮ ಮತ್ತು ರಿಸರ್ಚ್ ಸೆಂಟರ್ ನಲ್ಲಿ ಆಯುಧ ಪೂಜೆ ಆಚರಣೆ ಮಾಡಲಾಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದಡಾ. ಕೆ. ವಿ. ಚಿದಾನಂದ, ಶ್ರೀ. ಹೇಮನಾಥ ಕೆ. ವಿ., ಕೆ.ವಿ.ಜಿ.ಆಯುರ್ವೇದ...
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ದಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ದೇವಳದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು ಹಾಗೂ ತಕ್ಕಮುಖ್ಯಸ್ಥರು, ಮಾಜಿ ಮೊಕ್ತೇಸರರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಎಲಿಮಲೆಯ ಸಮೀಪದ ಜಬಳೆ ಬಳಿ ಮಾರುತಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಅಣ್ಣ ಮತ್ತು ತಂಗಿ ಇಬ್ಬರೂ ಮೃತಪಟ್ಟ ಹೃದಯವಿದ್ರಾಹಕ ಘಟನೆ ಇಂದು ವರದಿಯಾಗಿದೆ. ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಎಲಿಮಲೆಗೆ ಆಯುಧಪೂಜೆಗೆ ಹೋಗಿದ್ದ ನಿಶಾಂತ್ ತನ್ನ ತಂಗಿ ಮೋಕ್ಷಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ...
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.04ರಂದು ನಡೆಯಿತು. ಪ್ರಶಾಂತ್ ಕಿಲಂಗೋಡಿ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಹಾಗೂ ರಮೇಶ್ ಮಠತ್ತಡ್ಕ, ಸಿಬ್ಬಂದಿಗಳಾದ ಮಧುಸೂದನ್, ಅಲೆಕ್ಸ್ ಡಿ'ಸೋಜ, ಪ್ರವೀಣ್, ರಮೇಶ್ ಹಾಗೂ ಚಂದ್ರಶೇಖರ ತಂಟೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
Loading posts...
All posts loaded
No more posts
