- Saturday
- August 8th, 2026
ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ ಮಾಲಕ ನವೀನ್ ಗೌಡ ಅವರನ್ನು ಅಪರಿಚಿತ ತಂಡವೊಂದು ಬಂದು ಬಲವಂತವಾಗಿ ಆಂಬ್ಯುಲೆನ್ಸ್ ನಲ್ಲಿ ಅಪಹರಣ ಮಾಡಿದ್ದು, ಅಪಹರಣಕಾರರ ವಾಹನಕ್ಕೆ ಸುಂಟಿಕೊಪ್ಪದಲ್ಲಿ ತಡೆದು ಪೋಲೀಸರಿಗೆ ಒಪ್ಪಿಸಲಾಗಿದೆ. ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿತ್ತು. ಇವರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಿಸಲಾಗಿದೆ...
ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ಅಪರಿಚಿತ ತಂಡವೊಂದು ಬಂದು ಬಲವಂತವಾಗಿ ಆಂಬ್ಯುಲೆನ್ಸ್ ನಲ್ಲಿ ಅಪಹರಣ ಮಾಡಿದ್ದು, ಕಿಡ್ನಾಪರ್ ಗಳ ವಾಹನಕ್ಕೆ ಸುಂಟಿಕೊಪ್ಪದಲ್ಲಿ ತಡೆಯೊಡ್ಡಲಾಗಿದೆ. ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿತ್ತು. ಇತ್ತೀಚಿನ ಮಾಹಿತಿಯಂತೆ, ಇವರನ್ನು ಆಂಬ್ಯುಲೆನ್ಸ್ ನಲ್ಲಿ...
ಬೆಳ್ಳಾರೆಯ ಯುವ ಉದ್ಯಮಿಯೋರ್ವರನ್ನು ಅಪರಿಚಿತ ತಂಡವೊಂದು ಕಿಡ್ನಾಪ್ ಮಾಡಿರುವ ಬಗ್ಗೆ ವರದಿಯಾಗಿದೆ. ಮನೆಗೆ ಬಂದ ಅಪರಿಚಿತ ತಂಡವೊಂದು ಮನೆಗೆ ನುಗ್ಗಿ ಉದ್ಯಮಿ ನವೀನ್ ಮಲ್ಲಾರರನ್ನು ಕಿಡ್ನಾಪ್ ಮಾಡಿದ್ದು, ಅವರ ತಾಯಿಯನ್ನು ತಳ್ಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮಾಸಿಕ ಗೌರವಧನವನ್ನು ಸರಕಾರವು ದುಪ್ಪಟ್ಟುಗೊಳಿಸಿರುವುದನ್ನು ಅರಂತೋಡು ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ ಸ್ವಾಗತಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರ ಬಹಳ ವರ್ಷದ ಬೇಡಿಕೆ ಈಡೇರಿದಂತಾಗಿದ್ದು ಇದರಿಂದ ಗ್ರಾಮ ಪಂಚಾಯತ್ ಸದಸ್ಯರುಗಳು ಪಂಚಾಯತ್ ವ್ಯವಸ್ಥೆಯಲ್ಲಿ ನಂಬಿಕೆ ಬಂದು ಪ್ರಾಮಾಣಿಕವಾಗಿ ಆಡಳಿತ ನಡೆಸಲು ಉತ್ಸುಕರಾಗಿದ್ದಾರೆ.
ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಪಾಜೆ ವಾರ್ಷಿಕೋತ್ಸವ ಸಮಾರಂಭ ಮತ್ತು ಪೋಷಕರ ಸಮ್ಮಿಲನವು ದಿನಾಂಕ 15.12.2012ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಯು ಬಿ ಚಕ್ರಪಾಣಿರವರು ದ್ವಜಾರೋಹಣಗೈದರು. ನೂಜಿಬೈಲು ಮೇಜರ್ ವೆಂಕಟ್ರಾಮಯ್ಯ ಫೌಂಡೇಶನ್ ಉದಾರ ಕೊಡುಗೆ ನೀಡಿದ ನವೀಕೃತ ಕ್ರೀಡಾ ಕಟ್ಟಡದ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಚೆಂಬು ಗ್ರಾಮ...
ಗೂನಡ್ಕ ತೆಕ್ಕಿಲ್ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಇರ್ಫಾನ್, ಕಾರ್ಯದರ್ಶಿಯಾಗಿ ನಿಹ್ಮಾತುಲ್ಲಾ ಇಸಾಕ್ ಹಾಗೂ ಕೋಶಾಧಿಕಾರಿಯಾಗಿ ಉಬೈಸ್ ಪಿ ಯು ಆಯ್ಕೆ ಗೂನಡ್ಕ ತೆಕ್ಕಿಲ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಭೆಯು ದಿನಾಂಕ 17.01.2022 ರಂದು ತೆಕ್ಕಿಲ್ ಶಾಲೆಯಲ್ಲಿ ನಡೆಯಿತು. ಮುಖ್ಯಶಿಕ್ಷಕಿ ಶ್ರೀಮತಿ ವಾಣಿ ಕೆ. ರವರ ಉಪಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚಿಸಲಾಯಿತು.ಅಧ್ಯಕ್ಷರಾಗಿ...
ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ಸ್ ಸಂಸ್ಥೆಯ ವಿನೂತನ "ಲಕ್ಕೀ ಡ್ರಾ" ಯೋಜನೆಯ ಬಂಪರ್ ಬಹುಮಾನದ ಡ್ರಾ ಇತ್ತೀಚೆಗೆ ನಡೆಯಿತು. ಬಂಪರ್ ಬಹುಮಾನವಾದ ಟಿ.ವಿ.ಎಸ್ ಜ್ಯುಪಿಟರ್ ಸ್ಕೂಟರ್ ಅದೃಷ್ಟಶಾಲಿ ವಿಜೇತರಾದ ನವೀನ್ ಮುಂಡಾಜೆ(ಹರಿಹರ) ಇವರಿಗೆ ಲಭಿಸಿದ್ದು, ವಿಜೇತರಿಗೆ ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು ಬಹುಮಾನವನ್ನು ಹಸ್ತಾಂತರಿಸಿದರು.
ಮಂತ್ರ ಶ್ಲೋಕವಿಲ್ಲದೆ ಪೂಜಾ ವಿಧಾನಗಳು ಅಪೂರ್ಣವಾಗುವುದಾದರೆ ಸಂಧಿ ಪಾಡ್ದನವಿಲ್ಲದೆ ನೇಮ ಕೋಲಗಳು ಅಪೂರ್ಣವಾಗುವುದಿಲ್ಲವೇ ?? ಹೀಗೊಂದು ಪ್ರಶ್ನೆ ..... ತುಳುನಾಡಿನಲ್ಲಿ ದೈವರಾಧನೆಗೆ ಅತ್ಯಂತ ಪೂಜ್ಯನೀಯ ಸ್ಥಾನಮಾನ ಇದೆ. ದೈವರಾಧನೆಯು ತುಳುನಾಡಿನಲ್ಲಿ ಪ್ರತಿಯೊಬ್ಬರು ಆರಾಧಿಸಿಕೊಂಡು ಬರುತ್ತಿರುವ ಶಕ್ತಿಗಳಾಗಿದ್ದು , ತನ್ನದೆ ಆದ ಕಟ್ಟುಪಾಡುಗಳನ್ನು ಹೊಂದಿದೆ. ದೇವರ ವೈದಿಕ ಪೂಜಾ ವಿಧಾನಗಳಲ್ಲಿ ಮಂತ್ರ ಶ್ಲೋಕಗಳು ಎಷ್ಟು ಮುಖ್ಯವೊ ,ದೈವದ...
ಆರಂತೋಡು ಗ್ರಾಮದ ಕೋಡಂಕೇರಿ ಲಿಂಗಪ್ಪ ಗೌಡ ಕೇನಾಜೆ ಯವರ ಧರ್ಮಪತ್ನಿ ಶ್ರೀಮತಿ ಈಶ್ವರಿ (57)ಯವರು ಇಂದು ನಿಧನರಾದರು. ಮೃತರು ಪತಿ, ಮಕ್ಕಳಾದ ಪವನ್ ಕೋಡಂಕೇರಿ, ಕಿಶೋರ್ ಕೋಡಂಕೇರಿ ಹಾಗೂ ಮಗಳು ವಿಜಯಲಕ್ಷ್ಮಿ ಯವರನ್ನು ಅಗಲಿದ್ದಾರೆ.
ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ ಡಿ.20 ರಂದು ಮಂಗಳವಾರ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ. ಸುಳ್ಯ -1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಆರಂತೋಡು, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ...
Loading posts...
All posts loaded
No more posts
