- Sunday
- May 3rd, 2026
ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಜಮೀಯ್ಯತ್ತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ಘಟಕದ ವತಿಯಿಂದ ಡಿಸೆಂಬರ್ 20 ರಂದು ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ನಡೆಯಲಿರುವ ಸ್ಕಾಲರ್ಷಿಪ್ ವಿತರಣೆ, ಪ್ರತಿಭಾ ಪುರಸ್ಕಾರ, ಮತ್ತು ಮಾದಕ ವ್ಯಸನ ಗಳ ವಿರುದ್ಧ ಜನ ಜಾಗೃತಿ ಅಭಿಯಾನದ ಆಹ್ವಾನ ಪತ್ರ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿರುವ...
ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಮೀಫ್ ಶೈಕ್ಷಣಿಕ ಒಕ್ಕೂಟ ದಾನಿಗಳಾದ ಉದ್ಯಮಿ ಭಾರತ್ ಮುಸ್ತಫ ಮಂಗಳೂರು ಇವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ.ವಿಯನ್ನು ಅಳವಡಿಸಿಹುಬ್ಬಳ್ಳಿ ಡಿಜಿಟೆಕ್ ಎಂ.ಡಿ ಅನ್ವರ್ ರವರು ಶಾಲಾ ಶಿಕ್ಷಕರಿಗೆ ಬಳಕೆಯ ವಿಧಾನ ಗಳನ್ನು, ಸಾಫ್ಟ್ ವೇರ್ ಕಂಟೆಂಟ್, ಉಪಗ್ರಹ ಆಧಾರಿತ ಬೋಧನೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ...
ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ದ.ಕ, ವಲಯ ಕಾಂಗ್ರೆಸ್ ಸಮಿತಿ ಪಂಜ ಇದರ ಆಶ್ರಯದಲ್ಲಿ ಪಂಜ ಪಂಚಾಯತ್ ನಲ್ಲಿ ನಡೆದ ಅವ್ಯವಹಾರದ ಕೂಲಂಕುಷ ತನಿಖೆಗೆ ಆಗ್ರಹಿಸಿ ಭ್ರಷ್ಟಾಚಾರದ ವಿರುದ್ಧ ಬೃಹತ್ ಪ್ರತಿಭಟನೆಯು ಡಿ.17 ಬುಧವಾರದಂದು ಬೆಳಿಗ್ಗೆ 10-30ಕ್ಕೆ ಸರಿಯಾಗಿ ಪಂಜ ಬಸ್ ನಿಲ್ದಾಣದ ಬಳಿ ನಡೆಯಲಿದೆ.ಈ ಸಭೆಗೆ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ,...
ಸುಬ್ರಹ್ಮಣ್ಯ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ಕೇಂದ್ರ ಕಚೇರಿ, ಮಂಗಳೂರು ಪ್ರಾದೇಶಿಕ ಕಚೇರಿ ಇದರ ವತಿಯಿಂದ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಡಿಸೆಂಬರ್ 21 ರಂದು ರವಿವಾರ ಕುಕ್ಕೆ ಸುಬ್ರಹ್ಮಣ್ಯದ ವಿಶಾಲವಾದ ರಥ ಬೀದಿಯಲ್ಲಿ ನಡೆಯಲಿರುವುದು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಕೋಲಾರ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ,...
ಕುಕ್ಕೆ ಸುಬ್ರಮಣ್ಯದ ನೂಚಿಲ ಪಂಜುರ್ಲಿಗುಡ್ಡೆ ಎಂಬಲ್ಲಿ ಪ್ರತೀ ವರ್ಷ ವಿಜೃಂಭಣೆಯಿಂದ ದೈವಗಳ ನೇಮೋತ್ಸವವು ನಡೆಯುತಿದ್ದು, ಈ ಧೈವಸ್ಥಾನಕ್ಕೆ ಸುಮಾರು 150 ವರ್ಷಕ್ಕೂ ಅಧಿಕ ಇತಿಹಾಸವಿರುತ್ತದೆ. ಈ ದೈವಸ್ಥಾನಕ್ಕೆ ಊರ ಹಾಗೂ ಪರ ಊರಿನಿಂದ ಸಾವಿರಾರು ಭಕ್ತರು ತಮ್ಮ ಕಷ್ಟ ನಿವಾರಣೆಗೆಂದು ಹರಕೆ ಹೊತ್ತು ಬರುತಿದ್ದು, ಇದಕ್ಕೆ ಪ್ರತಿಫಲವನ್ನು ಕಂಡುಕೊಂಡ ಉದಾಹರಣೆ ಹಲವಾರು ಇವೆ. 2026ನೇ ಸಾಲಿನ...
ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ(ಮೀಫ್) ಕೇಂದ್ರ ಸಮಿತಿ ಮೂಲಕ ಆನಿವಾಸಿ ಉದ್ಯಮಿ ಎಸ್.ಎಂ. ಮುಸ್ತಫ ಭಾರತ್ ರವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ.ವಿಯನ್ನು ಮೀಫ್ ಒಕ್ಕೂಟದ ಅಧ್ಯಕ್ಷ ಮೂಸಬ್ಬ.ಪಿ ಬ್ಯಾರಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು "ಇಂದಿನ ಡಿಜಿಟಲ್ ಯುಗ ದಲ್ಲಿ ವಿದ್ಯಾರ್ಥಿ ಗಳ ಕೌಶಲ್ಯ ಪೂರ್ಣ ಕಲಿಕೆಗೆ ವಿದ್ಯುನ್ಮಾ...
ಸುಳ್ಯ ಬೀರಮಂಗಲ ನಿವಾಸಿ ಉದ್ಯಮಿ ಸುಳ್ಯದಲ್ಲಿ ಸುದರ್ಶನ ಕೃಷಿ ಏಜೆನ್ಸಿಯ ಮಾಲಕರಾಗಿದ್ದ ಸುದೇಶ್ ಕುಮಾರ್ ಶೆಟ್ಟಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.16ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಕ್ಷತಾ ಶೆಟ್ಟಿ ಹಾಗೂ ಇಬ್ಬರು ಪುತ್ರರರಾದ ಸಮನ್ಯು ಹಾಗೂ ಶುಶಾನ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಇಂದಿನಿಂದ(ಡಿ.16) ಧನುಪೂಜೆ ಪ್ರಾರಂಭಗೊಂಡಿದ್ದು, ಧನುರ್ಮಾಸದ ಮೊದಲ ದಿನವಾದ ಇಂದು ಸುಮಾರು 120 ಭಕ್ತಾದಿಗಳು ಉಪಸ್ಥಿತರಿದ್ದರು.ಇಂದು ಡಿ.16 ರಿಂದ ಜ.14 ರವರೆಗೆ ಪ್ರತೀದಿನ ಪ್ರಾತಃಕಾಲ 5:30ಕ್ಕೆ ಧನುಪೂಜೆ ನಡೆಯಲಿದ್ದು, ಜ.14 ಮಕರ ಸಂಕ್ರಮಣದ ದಿನ ಪ್ರಾತಃಕಾಲ 4:00 ಗಂಟೆಯಿಂದ ಉದ್ಯಾಪನ ಧನುಪೂಜೆ ಹಾಗೂ ಧನುಪೂಜೆ ಸಮಾಪ್ತಿ ಹಾಗೂ ಮದ್ಯಾಹ್ನ...
ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಆವರಣದಲ್ಲಿ ಡಿ.10ರಂದು "ವಿದ್ಯಾ ವೈಭವ" ವಿನೂತನ ಸಾಂಸ್ಕೃತಿಕ ಹಬ್ಬ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ಬಿ.ವಿ ಶಗ್ರಿತ್ತಾಯ ತೆಂಗಿನ ಮರದ ಹಿಂಗಾರವನ್ನು ಅರಳಿಸುವುದರ ಮೂಲಕ ನಡೆಸಿದರು.ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಯು.ರಾಧಾಕೃಷ್ಣರಾವ್ ಸ್ವಾಗತಿಸಿದರು. ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾಬೋಧಿನೀ ಪ್ರೌಢಶಾಲೆಯ ಸುಮಾರು 400...
ಚೊಕ್ಕಾಡಿ ಪೇಟೆಯ ಪರಿಸರದ ಮಾರ್ಗದಲ್ಲಿ ಜೀಪಿನಡಿಗೆ ಬಿದ್ದು ಮೃತಪಟ್ಟಿದ್ದ ನಾಯಿಯ ಶವದಿಂದ ಪರಿಸರಕ್ಕೆ ಅಸೌಚ್ಯ ಉಂಟಾಗುತ್ತಿದ್ದುದನ್ನು ಗಮನಿಸಿದ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇದರ ಸದಸ್ಯರು ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದರು.ನಾಯಿಯ ಶವವನ್ನು ಸುರಕ್ಷಿತವಾಗಿ ತೆರವುಗೊಳಿಸಿ, ಅದನ್ನು ಹೊಂಡ ತೆಗೆದು ಹೂತು ಹಾಕಿ ಯುವತಿ ಮಂಡಲದ ಸದಸ್ಯರು ಪರಿಸರದ ಸ್ವಚ್ಛತೆಯನ್ನು ಕಾಪಾಡಿದರು. ಗರುಡ ಯುವಕ ಮಂಡಲದ...
Loading posts...
All posts loaded
No more posts
