ಕಾಂಕ್ರೀಟೀಕರಣಗೊಂಡ ಹೊನ್ನೆಮೂಲೆ ಮಾವಿನಗೊಡ್ಲು ರಸ್ತೆಯ ಉದ್ಘಾಟನೆ

ಕಾಂಕ್ರೀಟೀಕರಣಗೊಂಡ ಹೊನ್ನೆಮೂಲೆ ಮಾವಿನಗೊಡ್ಲು ರಸ್ತೆಯ ಉದ್ಘಾಟನೆ ಶಾಸಕರ ಅನುದಾನದಲ್ಲಿ ರೂ 20 ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡ ಹೊನ್ನೆಮೂಲೆ ಮಾವಿನಗೊಡ್ಲು ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮ ಇಂದು ನೆರವೇರಿತು. ಊರಿನ ಹಿರಿಯರಾದ ನಾರಾಯಣ ಗೌಡ ಮಾವಿನಗೊಡ್ಲು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಎ ವಿ ತೀರ್ಥರಾಮ ಬಿಜೆಪಿ ಜಿಲ್ಲಾ‌ ಮುಖಂಡರಾದ ವೆಂಕಟ್ ವಳಲಂಬೆ...

ಮಾರ್ಚ್ 24 ರಿಂದ 26 ರವರೆಗೆ ಕನಕಮಜಲಿನಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನ ಸನ್ನಿಧಿಯಲ್ಲಿ ಅಡ್ಕಾರು ಕುಟುಂಬಸ್ಥರ ಮುಂದಾಳತ್ವದಲ್ಲಿ, ದೈವಂಕಟ್ಟು ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಊರ ಹಾಗೂ ಪರವೂರ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಮಾರ್ಚ್ 24, 25 ಹಾಗೂ 26 ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಲಿದೆ. ಫೆ. 27 ರಂದು ಧಾನ್ಯ ಅಳೆಯುವುದು (ಕೂವಂ ಅಳಕ್ಕಲ್),...
Ad Widget

ಬೆಳ್ಳಾರೆ : ಗೋಡೆ ಕುಸಿದು ಕಾರ್ಮಿಕ ಮೃತ್ಯು

ಬೆಳ್ಳಾರೆಯಲ್ಲಿ ಹಳೆ ಸರಕಾರಿ ಆಸ್ಪತ್ರೆ ಕಟ್ಟಡ ಕೆಡವುತ್ತಿರುವಾಗ ಗೋಡೆ ಕುಸಿದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಿಸಲು ಹಳೆಯ ಕಟ್ಟಡವನ್ನು ಕೆಡವಲಾಗುತ್ತಿದೆ. ಹಾಗಾಗಿ ಕೆಲವು ಕಾರ್ಮಿಕರು ಕಟ್ಟಡ ಕೆಡವುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಕಾರ್ಮಿಕ ಮಂಜುನಾಥ್ ಅವರ ಮೇಲೆ ಗೋಡೆಗಳು ಕುಸಿದು ಬಿದ್ದು ಗಂಭೀರ ಗಾಯಗಳಾಗಿವೆ. ಕೂಡಲೇ...

ಜಾಲ್ಸೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ಗುಡ್ಡಕ್ಕೆ ವ್ಯಾಪಿಸಿದ ಬೆಂಕಿ ಪುತ್ತೂರು ಹಾಗೂ ಸುಳ್ಯ ಅಗ್ನಿಶಾಮಕ ದಳದ ಕಾರ್ಯಾಚರಣೆ

ಜಾಲ್ಸೂರಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆಯಲ್ಲಿ ಗುಡ್ಡಕ್ಕೆ ಬೆಂಕಿ ತಗುಲಿದ ಪರಿಣಾಮವಾಗಿ ಹಲವು ಪ್ರದೇಶಗಳಿಗೆ ವ್ಯಾಪಿಸಿ ಹೊತ್ತಿ ಉರಿದ ಘಟನೆ ಮಾ.6ರಂದು ಅಪರಾಹ್ನ ಸಂಭವಿಸಿದೆ. ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಬಳಿಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿರುವ ಗುಡ್ಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಬೆಂಕಿಯ ಕಿಡಿ ಒಣಗಿದ ತರಗೆಲೆಗೆ ಬಿದ್ದು, ಹಲವಾರು ಪ್ರದೇಶಗಳನ್ನು ವ್ಯಾಪಿಸಿ ಹೊತ್ತಿ ಉರಿಯತೊಡಗಿತು....

ಬೈಕ್ ಡಿಕ್ಕಿ ಹೊಡೆದು ವೃದ್ಧ ಮೃತ್ಯು – ಸವಾರ ಉಬರಡ್ಕದ ಯುವಕನಿಗೆ ಗಂಭೀರ ಗಾಯ

ಬೈಕ್ ಅಪಘಾತದಿಂದಾಗಿ ಪಾದಚಾರಿ ವೃದ್ಧರೋರ್ವರು ಮೃತಪಟ್ಟು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪುತ್ತೂರಿನ ಕೌಡಿಚ್ಚಾರ್‌ನಲ್ಲಿ ಕಳೆದ ರಾತ್ರಿ ನಡೆದಿದೆ. ಮೃತರನ್ನು ಕಾವು ಮಿನೋಜಿಕಲ್ಲು ನಾರಾಯಣ ನಾಯ್ಕ ಎಂದು ಗುರುತಿಸಲಾಗಿದ್ದು, ಗಾಯಾಳು ಬೈಕ್ ಸವಾರ ಉಬರಡ್ಕ ಕಕ್ಕೆಬೆಟ್ಟು ನಿವಾಸಿ ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಅಪಘಾತವಾಗಿ ಬಿದ್ದಿದ್ದ ಗಾಯಾಳುಗಳನ್ನು ಅದೇ ದಾರಿಯಾಗಿ ಬರುತ್ತಿದ್ದ...

ಪಂಜ: ಶ್ರೀ ಆದಿ ಬೈದೇರುಗಳ ನೇಮೋತ್ಸವ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಶ್ರೀ ಆದಿ ಬೈದೇರುಗಳ ಗರಡಿಯಲ್ಲಿ ಮಾ.6.ರಂದು ಶ್ರೀ ಆದಿ ಬೈದೇರುಗಳ ನೇಮೋತ್ಸವವು ಜರುಗಿತು. ರಾತ್ರಿ ಬೈದೇರುಗಳು ಗರಡಿ ಇಳಿದು ದೇವಳಕ್ಕೆ ತೆರಳಿ ಶ್ರೀ ದೇವರಿಗೆ ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ರಂಗ ಸ್ಥಳ ಪ್ರವೇಶ ,ಕಿನ್ನಿದಾರು ಇಳಿದು ರಂಗಸ್ಥಳ ಪ್ರವೇಶ , ಉತ್ಸವ ಜರುಗಿತು.ಪ್ರಸಾದ ವಿತರಣೆ,ರಾತ್ರಿ...

ಏನೆಕಲ್ಲು ಹಿ.ಪ್ರಾ.ಶಾಲೆಗೆ ಸುಬ್ರಹ್ಮಣ್ಯ ರೋಟರಿಯಿಂದ ಕಂಪ್ಯೂಟರ್ ಕೊಡುಗೆ

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ಇಂದು ನೀಡಲಾಯಿತು. ಕಂಪ್ಯೂಟರ್ ಸೆಟ್ಟನ್ನು ಹಾಸನದ ಉದ್ಯಮಿ ಶ್ರೀ ಕೃಷ್ಣ ಶೆಟ್ಟಿಗಾರ್ ನೀಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಗೋಪಾಲ್ ಎಣ್ಣೆಮಜಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ...

ನಾಗಪಟ್ಟಣ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವಕ್ಕೆ ಗೊನೆ ಮುಹೂರ್ತ

ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ.12 ರಿಂದ 14 ರ ತನಕ ನಡೆಯಲಿರುವ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ನಡೆಯಲಿದ್ದು ಇದರ ಪೂರ್ವ ಭಾವಿಯಾಗಿ ಮುಹೂರ್ತದ ಗೊನೆ ಕಡಿಯುವ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ಅರ್ಚಕ ದಿವಿಜೇಶ್ ಕೆದಿಲಾಯ,ರಾಜೇಂದ್ರ ಪ್ರಸಾದ್ ಮೂಡತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಸದಸ್ಯರಾದ ಸುಧಾಮ ಆಲೆಟ್ಟಿ, ಬಾಬು...

ಅಕ್ರಮ ಮರ ಸಾಗಾಟ – ಲಾರಿ ಸಹಿತ ಆರೋಪಿ ವಶಕ್ಕೆ

ಸಂಪಾಜೆ ವಲಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಂಪಾಜೆಯಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಯಾದ ಮಹಮ್ಮದ್ ಸಫ್ಯಾನ್ ನನ್ನು ಬಂಧಿಸಿದ್ದು, ವಾಹನ ಹಾಗೂ 12 ಹೆಬ್ಬಲಸು ಮರದ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಉಪ...

ರಾಷ್ಟ್ರ ಮಟ್ಟದ ಹಾಫ್ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿ ದ್ವಿತೀಯ ಸ್ಥಾನ

ಮಾರ್ಚ್ 5 ರಂದು ಬೆಳಗಾವಿ ಯಲ್ಲಿ ನಡೆದ ರಾಷ್ಟ್ರ ಮಟ್ಟದ ಹಾಫ್ ಮ್ಯಾರಥಾನ್ (21 ಕಿ. ಮೀ.)ಸ್ಪರ್ಧೆಯಲ್ಲಿ ಬಳ್ಪ ಗ್ರಾಮದ ಜಸ್ಮಿತಾ ಕೊಡೆಂಕಿರಿ ಇವರು ದ್ವಿತೀಯ ಸ್ಥಾನದೊಂದಿಗೆ ₹10,000 ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ ಪಡೆದುಕೊಂಡಿದ್ದಾರೆ.ಮಂಗಳೂರಿನ ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ...
Loading posts...

All posts loaded

No more posts

error: Content is protected !!