ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ನಲ್ಲಿ ದೀಪಾ ವಸಂತ ಅಂಬೆಕಲ್ಲು ಪ್ರಥಮ

ಹುಬ್ಬಲ್ಲಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರುಷಾಧಿಕಾರಿಗಳ ಸಂಘ (ರಿ)ಕ್ರೀಡಾಕೂಟದಲ್ಲಿ ದೀಪಾ ವಸಂತ ಅಂಬೆಕಲ್ಲು ಶೇಣಿ ಯವರು ಐಎನ್ ಯು ರೋಯಲ್ ಟೈಗರ್ಸ್ ಹುಡುಗಿಯರ ಶಟಲ್ ಬ್ಯಾಂಡ್ಮಿಂಟನ್ ನಲ್ಲಿ ಟೀಮ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ವಸಂತ ಅಂಬೆಕಲ್ಲು ಶೇಣಿ ರವರ ಪತ್ನಿ.

ಹರಿಹರ‌ ಪಲ್ಲತಡ್ಕ ಗ್ರಾ.ಪಂ ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆ

ಹರಿಹರ‌ ಪಲ್ಲತಡ್ಕ ಗ್ರಾ.ಪಂ ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಮಾ.24 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2022-23 ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದಕ್ಕಾಗಿ ಈ ಪ್ರಶಸ್ತಿ ದೊರೆಯಲಿದೆ.ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು ಹಾಗೂ ಪಿಡಿಒ ಪುರುಷೋತ್ತಮ ಮಣಿಯಾನ ಮನೆ ಬೆಂಗಳೂರಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
Ad Widget

ಬಚ್ಚನಾಯಕನ ಹುಟ್ಟೂರಿಗೆ ಅಧ್ಯಯನ ಪ್ರವಾಸ

ಯೇನೆಕಲ್ಲಿನಲ್ಲಿ ನೆಲೆನಿಂತಿರುವ ಬಚ್ಚನಾಯಕ ದೈವವು ಮೂಲತಃ ಇಲ್ಲಿಯದಲ್ಲ . ಆತನ ಅಂತ್ಯವಾಗಿರುವುದು ಯೇನೆಕಲ್ಲು ಮಾಗಣೆಯ ಬಾನಡ್ಕ ಎಂಬಲ್ಲಿ .ಆದರೆ ಆತನು ಅಕಾಸ್ಮತ್ತಾಗಿ ಹತನಾಗುತ್ತದೆ. ಆತನ ಪೂರ್ವ ಇತಿಹಾಸದ ಬಗ್ಗೆ ಅಧ್ಯಯನ ನಡೆಸುವ ಉzಶದಿಂದ ಆಸ್ತಕರ ತಂಡವೊಂದು ಬಚ್ಚನಾಯಕನ ಹುಟ್ಟೂರಿಗೆ ಭೇಟಿ ನೀಡಿದೆ . ತಂಡದಲ್ಲಿ ಪ್ರಸಿದ್ಧ ಜಾನಪದ ವಿದ್ವಾಂಸ ಶ್ರೀ ಪರ್ಲ ಆನಂದ ಗೌಡ, ಇತಿಹಾಸ...

ಸುಳ್ಯದ ಯುವಕ ಪಾವಗಡದಲ್ಲಿ ರಸ್ತೆ ಅಪಘಾತಕ್ಕೆ ಬಲಿ

ಸುಳ್ಯದ ಯುವಕ ಪಾವಗಡದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಕಳೆದ ರಾತ್ರಿ ನಡೆದಿದೆ.ಸುಳ್ಯ ಕೇರ್ಪಳ ನಿವಾಸಿ ಪ್ರಜ್ವಲ್ ಮೃತಪಟ್ಟ ದುರ್ದೈವಿ. ತುಮಕೂರು ಜಿಲ್ಲೆಯ ಪಾವಗಡದಲ್ಲಿ ಉದ್ಯೋಗಿಯಾಗಿದ್ದರು. ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ರವರ ಪುತ್ರ. ಪಾವಗಡದಲ್ಲಿ ಟೋಲ್‌ ಸುಪರ್‌ವೈಸ‌ರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತ ಪರಿಣಾಮ ತಲೆ ರಸ್ತೆಗೆ...

ಬೆಂಗಳೂರಿನಲ್ಲಿ ಭೀಮರಾವ್ ವಾಷ್ಠರ್ ಅವರಿಗೆ ಸನ್ಮಾನ

ಬೆಂಗಳೂರಿನ ಕಾಡು ಹಕ್ಕಿಯ ಗೂಡು ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಸುಳ್ಯದ ಗಾಯಕ , ಸಾಹಿತಿ , ನಟ , ನಿರ್ದೇಶಕ ಮತ್ತು ಜ್ಯೋತಿಷಿಯಾದ ಎಚ್ ಭೀಮರಾವ್ ವಾಷ್ಠರ್ ಅವರ ಅಪಾರ ಸಾಧನೆ ಪರಿಗಣಿಸಿ ಬೆಂಗಳೂರಿನ ಜಿ ಕೆ ಸ್ಟುಡಿಯೋದಲ್ಲಿ ಸನ್ಮಾನಿಸಿ ಗೌರವಿಸಿದರು . ಈ ಸಂದರ್ಭದಲ್ಲಿ ಕಾಡು ಹಕ್ಕಿಯ ಗೂಡು ಬಳಗದ ಸಂಚಾಲಕರು ಮತ್ತು...

ವಿದ್ವತ್ ಪರೀಕ್ಷೆಯಲ್ಲಿ ವಿಭಾಶ್ರೀ ಪಿಂಡಿಮನೆ‌ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

2023 ನೇ ಸಾಲಿನಲ್ಲಿ ನಡೆದ ಭಾರತನಾಟ್ಯ ವಿದ್ವತ್ ಅಂತಿಮ ಪದವಿಗೆ ನಡೆದ ಪರೀಕ್ಷೆಯಲ್ಲಿ ವಿಭಾಶ್ರೀ ಪಿಂಡಿಮನೆ ಯವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು ಗಾನ-ನೃತ್ಯ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು ವಿದುಷಿ ವಿದ್ಯಾರಾಧಾಕೃಷ್ಣ ಇವರ ಶಿಷ್ಯೆ. ಇವರು ಅರಂತೋಡು ಗ್ರಾಮದ ಅನಂತಶಯನ ಪಿಂಡಿಮನೆ, ದೇವಕಿ ದಂಪತಿಗಳ ಪುತ್ರಿಯಾಗಿದ್ದು, ಎಂಎಸ್ಸಿ ಪದವೀದರೆಯಾಗಿದ್ದಾರೆ.

ಕೊಡಿಯಾಲ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾ.ಪಂ. ನ ಸ್ವಚ್ಚತಾ ಅಭಿಯಾನ ಸಂಭ್ರಮ - 2, ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ, ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ...

ಸುಳ್ಯ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ ಸಭೆ, ಸೈಬರ್ ಕ್ರೈಂ ಬಗ್ಗೆ ಮಾಹಿತಿ

ಹೊರಗಿನವರನ್ನು ಕೆಲಸಕ್ಕೆ ಸೇರಿಸುವಾಗ ದಾಖಲೆ ಪಡೆದುಕೊಳ್ಳಿ, ಸೈಬರ್ ಕ್ರೈಂ ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎಂದು ಎಸ್.ಐ. ದಿಲೀಪ್ ಅವರು ಹೇಳಿದರು.ಸುಳ್ಯ ಪೊಲೀಸ್ ಠಾಣೆಯಲ್ಲಿ ನಡೆದ ಹಿರಿಯ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು ಮಾನವ ಸಂಬಂಧಗಳು ದೂರವಾಗುವುದರಿಂದ ಹಣ, ಭೋಗ ಜೀವನದ ಆಮಿಷದಿಂದಾಗಿ ಸೈಬರ್ ಕ್ರೈಂ ಗಳು ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.ತಾಲೂಕು ಪಿಂಚಣಿದಾರರ...

ದ್ವೇಷದ ರಾಜಕಾರಣದಿಂದ ಅಭಿವೃದ್ಧಿ ಸಾಧ್ಯವಿಲ್ಲ, ದೇಶಕ್ಕೆ ಕಾಂಗ್ರೆಸ್ ಮಾತ್ರ ಸಮರ್ಥ : ಪಿ.ಸಿ ಜಯರಾಮ್

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ, ಬ್ಲಾಕ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುಳ್ಯ ಪರಿವಾರಕಾನ ಗ್ರಾಂಡ್ ಪರಿವಾರ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಜರಗಿತುಅಧ್ಯಕ್ಷತೆ ಯನ್ನು ಸುಳ್ಯ ಬ್ಲಾಕ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಇಸ್ಮಾಯಿಲ್ ಪಡಿಪಿನoಗಡಿವಹಿಸಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಪದಗ್ರಹಣ ನೆರವೇರಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ...

ಸುಳ್ಯ : ಮಾದಕ ವಸ್ತು ಮಾರಾಟ – ಆರೋಪಿ ಬೆಟ್ಟಂಪಾಡಿಯ ಕಬೀರ್ ಬಂಧನ

ಕುರುಂಜಿಗುಡ್ಡೆ ಸಮೀಪ  ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಸುಳ್ಯ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಬೀರ್‌‌ ಎಸ್‌ ಎ  ಎಂದು ತಿಳಿದುಬಂದಿದ್ದು, ಈತ ಸುಳ್ಯ ನಗರದ ಬೆಟ್ಟಂಪಾಡಿ ನಿವಾಸಿ. ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತು MDMA 44.ಗ್ರಾಂ ತೂಕವುಳ್ಳದ್ದಾಗಿದ್ದು, ₹1,32,000 ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 2 ಮೊಬೈಲ್ ಫೋನ್ ಗಳು ಒಂದು ಕಾರು,...
Loading posts...

All posts loaded

No more posts

error: Content is protected !!