ಕನಕಮಜಲು : ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಸಚಿವ ಅಂಗಾರ ಭೇಟಿ

ಕನಕಮಜಲು - ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರು ಉಪಸ್ಥಿತರಿದ್ದರು.

ಗುತ್ತಿಗಾರು : ಅಮರ ಚಾರಿಟೇಬಲ್ ಟ್ರಸ್ಟ್ ಸಹಾಯ ನಿಧಿ ಕೂಪನ್ ವಿಜೇತರ ಆಯ್ಕೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ಆಯೋಜನೆ ಮಾಡಿದ ಸಹಾಯ ನಿಧಿ ಕೂಪನ್ ವಿಜೇತರನ್ನು ಪುಟಾಣಿ ಅಧಿಕ್ಷ ಕುಲ್ಲಚೆಟ್ಟಿ ಮತ್ತು ಪುಟಾಣಿ ಮಯೂರ್ ಗುಡ್ಡೆಮನೆ ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ ರಾಷ್ಟ್ರಿಯ ಕ್ರೀಡಾಪಟು ಗುತ್ತಿಗಾರ್ ಗ್ರಾ. ಪಂಚಾಯತ್ ಸದಸ್ಯ, ಮಾಯಿಲಪ್ಪ ಕೊಂಬೆಟ್ಟು, ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಭಾರತೀಯ ಭೂ ಸೇನಾ ಸೈನಿಕ...
Ad Widget

ಕಾಂಕ್ರೀಟೀಕರಣಗೊಂಡ ತಳೂರು ದೈವಸ್ಥಾನದ ರಸ್ತೆ ಉದ್ಘಾಟನೆ ನೆರವೇರಿಸಿದ ಸಚಿವರಾದ ಅಂಗಾರ

ತಳೂರು ಮುಖ್ಯರಸ್ತೆಯಿಂದ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ಮಾಡದವರೆಗಿನ ರಸ್ತೆ ಸುಮಾರು 30 ಲಕ್ಷದಲ್ಲಿ ಕಾಂಕ್ರಿಟೀಕರಣಗೊಂಡಿದ್ದು ಇಂದು ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಬಂದರು,ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ,...

ಕಾಲಾವಧಿ ನೇಮೋತ್ಸವಕ್ಕೆ ಗೊನೆ ಮುಹೂರ್ತ
ಎ.1 ರಿಂದ ಎ.2 ರವರೆಗೆ ಕೊರಂಬಡ್ಕ ಕ್ಷೇತ್ರದಲ್ಲಿ ದೈವಗಳ ನೇಮೋತ್ಸವ

ಜಯನಗರ:ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ,ಶ್ರೀ ಗುಳಿಗ ದೈವ,ಶ್ರೀ ಕೊರಗತನಿಯ ದೈವಸ್ಥಾನ ಶ್ರೀ ಕ್ಷೇತ್ರ ಕೊರಂಬಡ್ಕ ಜಯನಗರದಲ್ಲಿ ಎ.1 ಮತ್ತು ಎ.2 ರಂದು ನಡೆಯುವ ಕಾಲಾವಧಿ ನೇಮೋತ್ಸವಕ್ಕೆ ಮಾ.25 ಶನಿವಾರದಂದು ಗೊನೆ ಮುಹೂರ್ತ ನಡೆಯಿತು. ಪ್ರತಿ ವರ್ಷದಂತೆ ಈ ಭಾರಿಯೂ ಮಹಾಲಕ್ಷ್ಮಿ ಕೊರಂಬಡ್ಕ ಅವರ ತೋಟದಲ್ಲಿ ಮುಹೂರ್ತದ ಗೊನೆ ಕಡಿಯುವುದನ್ನು ದೈವದ ಪಾತ್ರಿ ಮೋಹನ್ ಹೊಸಗದ್ದೆ ಮತ್ತು...

ಗುರುಂಪು ಬರೆ ಜರಿತ ಘಟನೆ : ಮೂವರು ಕಾರ್ಮಿಕರ ಮೃತದೇಹವೂ ಪತ್ತೆ

ಸುಳ್ಯದ ಗುರುಂಪು ಬಳಿ ಸಂಭವಿಸಿದ ಬರೆ ಕುಸಿತ ದುರ್ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರ ಮೃತದೇಹವೂ ಪತ್ತೆಯಾಗಿದೆ.ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿತು. ಅಬೂಬಕ್ಕರ್ ಎಂಬವರ ಮನೆಯ ಹಿಂದೆ ಬೃಹತ್ತಾದ ಬರೆ ತೆಗೆಯಲಾಗಿದ್ದು, ಅದರ ಕೆಳಗೆ ಫಿಲ್ಲರ್ ಹಾಕಿ ತಡೆಗೋಡೆಯ ಕಾಮಗಾರಿ ನಡೆಯುತ್ತಿತ್ತು. ಮಧ್ಯಾಹ್ನ ವೇಳೆಗೆ ಇಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಇಬ್ಬರು...

ಮೀಸಲಾತಿ ಕ್ಷೇತ್ರವಾದ ಸುಳ್ಯದಲ್ಲಿ 30 ವರ್ಷದಿಂದ ನಮ್ಮ ಸಮುದಾಯದವರನ್ನು ಕಡೆಗಣಿಸಲಾಗುತ್ತಿದೆ :ಆದಿ ದ್ರಾವಿಡ ಸಮುದಾಯ ಅಸಮಧಾನ

ರಾಜಕೀಯ ಪ್ರಮುಖ ಪಕ್ಷಗಳು ಈ ಬಾರಿ ಆದಿ ದ್ರಾವಿಡ ಸಮುದಾಯದವರನ್ನು ಸುಳ್ಯದಲ್ಲಿ ಅಭ್ಯರ್ಥಿ ಪಕ್ಷಗಳು ಘೋಷಿಸಬೇಕು ಗೆಲ್ಲುವ ಮುಂಚೂಣಿ ಪಕ್ಷಗಳು ಸೀಟು ನೀಡ ಬೇಕು ತಾಲೂಕಿನಲ್ಲಿ 25000 ಮತ ಆದಿದ್ರಾವಿಡ ಸಮುದಾಯದವರಿದ್ದು,ಈ ಭಾರಿ ರಾಷ್ಟ್ರೀಯ ಪಕ್ಷಗಳು ಸುಳ್ಯದಲ್ಲಿ ಆದಿದ್ರಾವಿಡ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘ ಆಗ್ರಹ ವ್ಯಕ್ತಪಡಿಸಿದೆ....

ಮಾ.30ರಂದು ರೋಟರಿ ಕ್ಲಬ್ ಸುಳ್ಯ ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ: ಡಾ.ರಘುರಾಮ ಮಾಣಿಬೆಟ್ಟು ಅವರಿಗೆ ರೋಟರಿ ಜೀವಮಾನ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ

ಸುಳ್ಯ:ರೋಟರಿ ಕ್ಲಬ್ ಸುಳ್ಯ ಸಿಟಿಗೆ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಮಾ. 30ರಂದು ನಡೆಯಲಿದೆ ಎಂದು ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಪಿ.ಮುರಳೀಧರ ರೈ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಟರಿ ಜಿಲ್ಲಾ ಗವರ್ನರ್ ಭೇಟಿ ಅಂಗವಾಗಿ ರೋಟರಿ ಸಮುದಾಯ ಭವನದಲ್ಲಿ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ 100 ವಸತಿಗೆ ಮಂಜೂರಾತಿ

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತ್ ಗೆ ಬಸವ ವಸತಿ ಯೋಜನೆ ಅಡಿ 80 ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ನಿವಾಸ ಯೋಜನೆ ಅಡಿ 20 ಹೀಗೆ ಆರ್ಥಿಕವಾಗಿ ಹಿಂದುಳಿದ ಜನರಿಗಾಗಿ 100 ಮನೆಗಳನ್ನು ಕಟ್ಟಲು ಮಂಜೂರಾತಿ ನೀಡಲಾಗಿದೆ‌ ಎಂದು ತಿಳಿದು ಬಂದಿದೆ. ಒಬಿಸಿ, ಮೈನಾರಿಡಿ, ಇತರೇ ವರ್ಗದವರಿಗೆ ಸಿಗುವ ಬಸವ ವಸತಿ ಯೋಜನೆಯಲ್ಲಿ ಆಯ್ಕೆಯಾದವರಿಗೆ ₹120000 ದೊರೆತರೆ,...

ಅರಂತೋಡು ಗ್ರಾಮ ಪಂಚಾಯತ್ ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿರುವ ಅರಂತೋಡು ಗ್ರಾಮ ಪಂಚಾಯತ್ ನ ಆಡಳಿತ ಮಂಡಳಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದರು. ಇಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುರಸ್ಕಾರ ಪ್ರದಾನ ಮಾಡಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಪಿ.ಡಿ.ಒ.ಜಯಪ್ರಕಾಶ್, ಸದಸ್ಯರುಗಳಾದ ಶಿವಾನಂದ...

ಕಂದ್ರಪ್ಪಾಡಿ ಅರೋಗ್ಯ ಮತ್ತು ಕ್ಷೇಮ ಕೇಂದ್ರ ಸೇವೆ ಪ್ರಾರಂಭ

ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕೇಂದ್ರವಾಗಿರಿಸಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸೇವೆಯು ಕಂದ್ರಪ್ಪಾಡಿ ಅಂಗನವಾಡಿ ಕೇಂದ್ರದ ಎದುರುಗಡೆ ಇರುವ ದೇವಿದಾಸ್ ಕುತ್ಯಾಳ ಅವರ ಕಟ್ಟಡದಲ್ಲಿ ಪ್ರಾರಂಭವಾಗಿರುತ್ತದೆ. ಇಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಆಗಿ ಕು. ಧನ್ಯ ಕೆದ್ಕರ್ ಅವರು ನಿಯೋಜನೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದು ಸೇವೆಯಲ್ಲಿದ್ದಾರೆ.
Loading posts...

All posts loaded

No more posts

error: Content is protected !!