ಶುಭವಿವಾಹ: ಚಿ|ರಾ|ದೀಕ್ಷಿತ್-ಚಿ|ಸೌ|ಲಾವಣ್ಯ

ಕಡಬ ತಾಲೂಕು ಐತ್ತೂರು ಗ್ರಾಮದ ಪೆರಿಯಡ್ಕ ಬಾಲಕೃಷ್ಣ ಗೌಡರ ಪುತ್ರ ಚಿ|ರಾ| ದೀಕ್ಷಿತ್ ರವರ ವಿವಾಹವು ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕೊಟ್ಟೆಕಾಯಿ ದಿ॥ಶ್ರೀ ಈಶ್ವರ ಗೌಡರ ಪ್ರಥಮ ಪುತ್ರಿ ಚಿ|ಸೌ| ಲಾವಣ್ಯ ರವರೊಂದಿಗೆ ಮೇ.29ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಾಲಯದ ಸಭಾಭವನದಲ್ಲಿ ನಡೆಯಿತು.

ನಾರ್ಣಕಜೆಯ ರಾಮಚಂದ್ರರವರಿಗೆ ರಾಷ್ಟ್ರಪತಿಯವರ ಭೇಟಿಗೆ ಅವಕಾಶ

ದೆಹಲಿಯಲ್ಲಿ ಜೂ. 11ರಿಂದ 13 ರವರೆಗೆ ನಡೆಯಲಿರುವ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾರ್ಣಕಜೆಯ ರಾಮಚಂದ್ರರವರಿಗೆ ಅವಕಾಶ ಒದಗಿ ಬಂದಿದೆ. ನೈಜ ದುರ್ಬಲ ಬುಡಕಟ್ಟು ಜೇನು ಕುರುಬ, ಕೊರಗ ಬುಡಕಟ್ಟು ಜನರನ್ನು ರಾಷ್ಟ್ರಪತಿಯವರು ಭೇಟಿ ಮಾಡಿ ಸಂದರ್ಶನ ನಡೆಸಲಿದ್ದಾರೆ. ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಪ್ರತಿನಿಧಿಗಳಿಗೆ ಈ ಅವಕಾಶವಿದ್ದು...
Ad Widget

ಎಡಮಂಗಲ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಅಂಬೆಕಲ್ಲು ಮೇ.31ರಂದು ನಿವೃತ್ತಿ

ಎಡಮಂಗಲ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಅಂಬೆಕಲ್ಲು ಮೇ. 31ರಂದು ನಿವೃತ್ತಿ ಹೊಂದಲಿದ್ದಾರೆ.ಜಗದೀಶ್ ಅಂಬೆಕಲ್ಲುರವರು ತಾ. 16.07.1985ರಲ್ಲಿ ಬೆಳ್ತಂಗಡಿ ತಾಲೂಕಿನ ಪೆರಿಯಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, ಗೇರುಕಟ್ಟೆ ಬಳಿಯ ಕೂರಂಜ ಸ.ಹಿ.ಪ್ರಾ. ಶಾಲೆ, ಪುತ್ತೂರು ತಾಲೂಕಿನ ಬೊಬ್ಬೆಕೇರಿ, ದೋಳ್ಪಾಡಿ ಬಳಿಕ ಸುಳ್ಯ ತಾಲೂಕಿನ ಎಣ್ಮೂರು ಶಾಲೆಗೆ ವರ್ಗಾವಣೆಗೊಂಡು, ಅಲ್ಲಿಂದ ಮುಖ್ಯೋಪಾಧ್ಯಾಯರಾಗಿ ಭಡ್ತಿಪಡೆದು...

ಮತ್ತೆ ರಂಗಕ್ಕೆ “ಸಾಹೇಬ್ರು ಬಂದವೇ!!” ಅರೆಭಾಷೆ ಬಲ್ಲವರಿಗೆ ನಟಿಸಲು ಅವಕಾಶ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕಳೆದ ವರ್ಷ ನಿರ್ಮಿಸಲ್ಪಟ್ಟ, ಖ್ಯಾತ ರಂಗ ನಿರ್ದೇಶಕ ಡಾ|| ಜೀವನ್ ರಾಂ ಸುಳ್ಯ ನಿರ್ದೇಶನದ "ಸಾಹೇಬ್ರು ಬಂದವೇ " ಪ್ರಥಮ ಪೂರ್ಣಪ್ರಮಾಣದ ಅರೆಭಾಷೆ ನಾಟಕವು ಮತ್ತೆ ರಂಗದ ಮೇಲೆ ಬರಲು ತಯಾರಿ ನಡೆದಿದೆ.. ಇದೇ ಮೇ. 31 ರಿಂದ ಸುಳ್ಯದ ರಂಗಮನೆಯಲ್ಲಿ ಹೊಸ ಕಲಾವಿದರ ಕೂಡುವಿಕೆಯಲ್ಲಿ...

🔴ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ🔴

ಗುತ್ತಿಗಾರು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ನಡೆಯಿತು. ಮೇ.19 ರಂದು ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು ಈ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು. ಬೇಸಿಗೆ ಶಿಬಿರದ ಎರಡನೇ ದಿನ ಸ.ಹಿ.ಪ್ರಾ ಶಾಲೆ ವಳಲಂಬೆ...

ಮೇ.31- ಜೂ.1: ಕುಕ್ಕೇಟಿ ತರವಾಡು ಮನೆ ಗೃಹಪ್ರವೇಶ. ಶ್ರೀ ವಿಷ್ಣುಮೂರ್ತಿ, ಧರ್ಮದೈವ, ನಾಗದೇವರು, ಮುನಿಸ್ವಾಮಿ, ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಸುಳ್ಯ ತಾಲೂಕಿನ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ ಕುಕ್ಕೇಟಿ ತರವಾಡಿನಲ್ಲಿ ನೂತನವಾಗಿ ನಿರ್ಮಿಸಲಾದ ತರವಾಡು ಮನೆಯ ಗೃಹಪ್ರವೇಶ ಮತ್ತು ಶ್ರೀ ವಿಷ್ಣುಮೂರ್ತಿ, ಧರ್ಮದೈವ, ನಾಗದೇವರು, ಮುನಿಸ್ವಾಮಿ ಹಾಗೂ ಉಪದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಮೇ. 31 ಮತ್ತು ಜೂ.1ರಂದು ವಿವಿಧ ತಾಂತ್ರಿಕ ಹಾಗೂ ವೈದಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ. ಬ್ರಹ್ಮಶ್ರೀ ವೇ. ಮೂ. ಕುಂಟಾರು ವಾಸುದೇವ...

💐ಕಿರಿಯ ಪ್ರಾಥಮಿಕ ಶಾಲೆ ಸೇವಾಜೆ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟನೆ💐

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇವಾಜೆಯು 13-06-1998ರಲ್ಲಿ ಸ್ಥಾಪನೆಗೊಂಡು ಪ್ರಸ್ತುತ 25 ವರ್ಷ ಪೂರೈಸಿದ ಸವಿನೆನಪಿಗಾಗಿ ಈ ದಿನ ಬೆಳ್ಳಿ ಹಬ್ಬ ಸಂಭ್ರಮ ನಡೆಯುತ್ತಿದ್ದು ಇದರ ಅಂಗವಾಗಿ ಪೂರ್ವಾಹ್ನ 9.45. ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಧರ ಗೌಡ.ಕೆ ಅಧ್ಯಕ್ಷರು ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು...

💐ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ ಸುಳ್ಯದ ವಿದ್ಯಾರ್ಥಿಗಳು💐

ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ ಸುಳ್ಯದ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿಗಳು.ಗೀತಾ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಆಯೋಜಿಸಿದ್ದ ಒಂದು ನಿಮಿಷದಲ್ಲಿ ಅತೀ ಹೆಚ್ಚು ಬಾರಿ ಭುಜಂಗಾಸನ ಮತ್ತು ಪರ್ವತಾಸನ ಮಾಡುವುದರಲ್ಲಿ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯದ ವಿದ್ಯಾರ್ಥಿಗಳಾದ ದಿಗಂತ್.ಎ.ಸಿ, ಸುಭಿಕ್ಷಾ ಅನೀಲ್.ಎ,...

ಆರ್ ಕೆ ನಾಯರ್ ಗೆ ರೋಟರಿ ವನ ಸಿರಿ ಪ್ರಶಸ್ತಿ ಪ್ರದಾನ

ಪರಿಸರದ ಪ್ರತಿಯೊಂದು ಜೀವಿಗೂ ಪ್ರಾಮುಖ್ಯತೆಯನ್ನು ನೀಡುವ ಜವಾಬ್ದಾರಿ ಮಾನವನಿಗೆ ಇದ್ದರೆ ಮಾತ್ರ ಪರಿಸರ ಸಂರಕ್ಷಣೆ ಮಾಡಬಹುದು. ಇದರ ಸೂಕ್ಷ್ಮತೆಯನ್ನು ಅರಿತು ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿ ಬದುಕಬೇಕು ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಆರ್ ಕೆ ನಾಯರ್ ಇವರು ಕಾಡುಗಳು ಹಾಗೂ ಪರಿಸರ ಪ್ರಜ್ಞೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ಪ್ರತಿ ರೋಟರಿ...

ಸುಳ್ಯ: ಅರಳು ಮಲ್ಲಿಗೆ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಬಾಲಭವನ ಸಮಿತಿ ಸುಳ್ಯ, ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ ಸುಳ್ಯ ದ.ಕ. ಸ್ವರ ಮಾಧುರ್ಯ ಬಳಗ ಪುತ್ತೂರು ದ.ಕ. ವತಿಯಿಂದ ಸುಳ್ಯ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ಒಂದು ವಾರ ನಡೆದ ಅರಳು ಮಲ್ಲಿಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ.26ರಂದು ನಡೆಯಿತು....
Loading posts...

All posts loaded

No more posts

error: Content is protected !!