ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ವತಿಯಿಂದ ಅಮರಶ್ರೀ ಸಭಾಂಗಣದಲ್ಲಿ ಅಮರಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು ಒಟ್ಟಾಗಿ 300 ಜನ ಏಕಕಾಲದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿದರು. ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾಪ್ರಸಾದ್ ಕೆ ವಿ ಯವರು ಶುಭ ಹಾರೈಸಿದರು.ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್...

ಸುಳ್ಯ : ಸೇವಾ ಭಾರತಿ ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆ :  ಸಮಾಜ ಸೇವೆಯೇ ಸೇವಾ ಭಾರತಿಯ ಧ್ಯೇಯ – ಮಾಜಿ ಸಚಿವ ಅಂಗಾರ ಅಭಿಮತ

ಸಮಾಜ ಸೇವೆಯೇ ಸೇವಾ ಭಾರತಿಯ ಧ್ಯೇಯ. ಕೊರೋನಾ ಕಾಲದಲ್ಲಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸೇವಾ ಭಾರತಿ ತನ್ನ ಸೇವೆ ಏನು ಎಂಬುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದೆ. ಇದೀಗ ಜಿವರಕ್ಷಕ ಆಂಬುಲೆನ್ಸ್‌ನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾದ ಕೊಡುಗೆ ನೀಡಿದೆ ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯ ಕೇರ್ಪಳದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ...
Ad Widget

ಬೊಳುಬೈಲು : ಸುಳ್ಯದ ಏಕೈಕ ಸಂಸ್ಥೆ ಶ್ರೀ ಗುರು ಹೈಡ್ರೋಲಿಕ್ ಇಂಜಿನಿಯರಿಂಗ್ ವರ್ಕ್ಸ್

ವಾಹನಗಳ ಹೈಡ್ರೋಲಿಕ್ ಸಿಲಿಂಡರ್ ಗಳ ದುರಸ್ತಿ ಮಾಡಲು ಇದುವರೆಗೆ ಮಂಗಳೂರಿಗೆ ತೆರಳಬೇಕಿತ್ತು ಆದರೇ ಇದೀಗ ಸುಳ್ಯದ ಬೊಳುಬೈಲಿನಲ್ಲಿರುವ ಶ್ರೀ ಗುರು ಹೈಡ್ರೋಲಿಕ್ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಎಲ್ಲಾ ಹೈಡ್ರೋಲಿಕ್ ಸಿಲಿಂಡರ್ ಗಳ ಸರ್ವೀಸ್ ಲಭ್ಯ. ಇಲ್ಲಿ ಜೆ.ಸಿ.ಬಿ., ಟಿಪ್ಪರ್, ಟ್ರಾಕ್ಟರ್, ಹಿಟಾಚಿ ಹಾಗೂ ಎಲ್ಲಾ ರೀತಿಯ EARTH MOVING, CONSTRUCTION ವಾಹನಗಳ ಹೈಡೋಲಿಕ್ ಸಿಲಿಂಡರ್‌ನ PUMP,...

ಬಡವರಿಗೆ ನೀಡುವ ಅಕ್ಕಿಯಲ್ಲಿ ಕೇಂದ್ರ ಸರಕಾರ ರಾಜಕೀಯ ಮಾಡುವುದು ಸರಿಯಲ್ಲ _ ವೆಂಕಪ್ಪ ಗೌಡ

ಕೇಂದ್ರ ಸರಕಾರ ಬಡ ವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡುವುದು ಸರಕಾರದ ಈ ಕ್ರಮ ಸರಿಯಲ್ಲ. ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ಜುಲೈ 1 ರಿಂದ 10 ಕೆ.ಜಿ. ಅಕ್ಕಿ ಕೊಡುವುದಂತೂ‌ ಖಚಿತ ಎಂದು‌ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.ಜೂ.20 ರಂದು‌ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ‌ನಡೆಸಿದ ಅವರು, ಕಾಂಗ್ರೆಸ್ ಸರಕಾರದ...

ಅರಂತೋಡು : ಸಿರಿ ಸಂಸ್ಥೆಯ ಉತ್ಪನ್ನಗಳ ದರ ಕಡಿತ ಮಾರಾಟ ಆರಂಭ

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ದರ ಕಡಿತ ಮಾರಾಟ ಅರಂತೋಡು ಕಚೇರಿಯಲ್ಲಿ ಜೂ.20 ರಂದು ಆರಂಭಗೊಂಡಿತು. ನಿವೃತ್ತ ಶಿಕ್ಷಕರಾದ ಜತ್ತಪ್ಪ ಶಿಕ್ಷಕರು ಉದ್ವಾಟಿಸಿ, ಶುಭಹಾರೈಸಿದರು. ಅರಂತೋಡು ಗ್ರಾಮ ಪಂಚಾಯತ್ ಪಿಡಿಓ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಜನಜಾಗೃತಿ ವಲಯ ಅಧ್ಯಕ್ಷರಾದ ಸೋಮಶೇಖರ ಪೈಕ, ಕಚೇರಿಯ ಕಟ್ಟಡ ಮಾಲಕರಾದ ಗೋಪಾಲ ಗೌಡ, ಒಕ್ಕೂಟದ ಅಧ್ಯಕ್ಷರಾದ...

ಏನೆಕಲ್ಲು : ಯೋಗ ತರಬೇತಿ ಉದ್ಘಾಟನೆ

ಏನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಜೂ.15 ರಂದು ಯೋಗ ತರಬೇತಿ ಉದ್ಘಾಟನೆಗೊಂಡಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕರಾದ ಚಂದ್ರಶೇಖರ.ಎನ್.ಕೆ ಉಪಸ್ಥಿತರಿದ್ದರು. ನಿರಂತರ ಯೋಗ ಕೇಂದ್ರದ ಶಿಕ್ಷಕರಾದ ಶರತ್ ಮರ್ಗಿಲಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಗಪಟು ಅನ್ವಿತಾ ಶೆಟ್ಟಿ...

ವಳಲಂಬೆ : ದೇವಣ್ಣ ಗೌಡ ನಡುಮನೆ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ನಡುಮನೆ ದೇವಣ್ಣ ಗೌಡರು ಜೂ. 20 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಸುಧೀರ್, ಕಿಶನ್, ಪುತ್ರಿ ಶ್ರೀಮತಿ ಮಧುರ, ಸಹೋದರ,ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಉತ್ತರಕನ್ನಡದಿಂದ ಸುಳ್ಯಕ್ಕೆ ಬಂದಿದ್ದ ಮಹಿಳೆ ಊರಿನತ್ತ ಪ್ರಯಾಣ

ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಮಹಿಳೆಯೊಬ್ಬರು ನಿನ್ನೆ ಸಂಜೆ ಸುಳ್ಯ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೋಲೀಸರಿಗೆ ಆಕೆಯನ್ನು ಠಾಣೆಗೆ‌ ಕರೆದುಕೊಂಡು ಹೋಗಿ ವಿಚಾರಿಸಿದರೂ ಯಾವುದೇ ಮಾಹಿತಿ ಆಕೆ ನೀಡುತ್ತಿರಲಿಲ್ಲ. ರಾತ್ರಿಯಾದುದರಿಂದ ಪೋಲೀಸರು ಆಕೆಯನ್ನು ಸುಳ್ಯದ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು.ಮಹಿಳೆ ಹೊನ್ನಾವರದರೆಂದು ಆಕೆಯ ಆಧಾರ್ ಕಾರ್ಡ್ ನಿಂದ ಗೊತ್ತಾಗಿ ಅವರ ಮನೆಯವರ ಹುಡುಕಾಟ ನಡೆಸಲಾಗಿತ್ತು. ಮನೆಯವರು ಯಾರೆಂದು ಗೊತ್ತಾಗಿ...

ನಾಗಪಟ್ಟಣ:ಯುವಕ ನೇಣು ಬಿಗಿದು ಆತ್ಮಹತ್ಯೆ

ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್.ಸಿ ಕಾಲನಿಯ ಯವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ನಾಗಪಟ್ಟಣ ಸಿ .ಆರ್ .ಸಿ ಕಾಲನಿ ನಿವಾಸಿ ಮಣಿಕಂಠ ಎಂಬ ಯುವಕ ಸೋಮವಾರ ರಾತ್ರಿ ಮನೆಗೆ ಬಂದು ಬೈಕ್ ನಿಲ್ಲಿಸಿ ತಾಯಿಯ ಸೀರೆಯನ್ನು ತೆಗೆದುಕೊಂಡು ಹೋಗಿ ಸಮೀಪದ ಅಂಗನವಾಡಿ ಬಳಿಯ ಮಾವಿನಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.ಮಣಿಕಂಠ ಕಳೆದ...

ಶಾಸಕಿ ಭಾಗೀರಥಿ ಹಾಗೂ ಎ.ಸಿ.ಗಿರೀಶ್ ನಂದನ್ ಶಾಂತಿನಗರ ಕ್ರೀಡಾಂಗಣಕ್ಕೆ ಭೇಟಿ

ಸುಳ್ಯದ ಶಾಂತಿನಗರದಲ್ಲಿ ಕಾಮಗಾರಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣಕ್ಕೆ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರು ವಿಭಾಗದ ಸಹಾಯಕ ಕಮಿಷನರ್ ಗಿರೀಶ್ ನಂದನ್ ರವರು ಜೂ.19ರಂದು ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು ಕ್ರೀಡಾಂಗಣದ ಒಂದು ಭಾಗದಲ್ಲಿ ಹಾಕಿರುವ ಮಣ್ಣಿನಿಂದ ಸ್ಥಳೀಯ ಜನತೆ ಆತಂಕದಲ್ಲಿದ್ದು ಮಳೆಗಾಲದಲ್ಲಿ...
Loading posts...

All posts loaded

No more posts

error: Content is protected !!