⛔ದ.ಕ. ಜಿಲ್ಲಾದ್ಯಂತ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

🔴 ಅಂಗನವಾಡಿ,ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ🔴 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ರೆಡ್ ಅಲರ್ಟ್ ಘೋಷನೆಯಾಗಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಸೇರಿದಂತೆ ಪ್ರಾಥಮಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಸೇರಿದಂತೆ ಎಲ್ಲಾ ಸರಕಾರಿ ಅನುದಾನಿತ...

ಪೆರುವಾಜೆ : ಗುರು ಪೂರ್ಣಿಮೆಯಂದೇ ಗುರುವಿನ ವಿರುದ್ದ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು – ಕಾಲೇಜು ಜಂಟಿ ನಿರ್ದೇಶಕರ ಆಗಮನ –  ಒಂದು ವಾರದೊಳಗೆ ಕ್ರಮದ ಭರವಸೆ

ಪೆರುವಾಜೆಯ ಡಾ. ಕೆ. ಶಿವರಾಮ ಕಾರಂತ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಉಪನ್ಯಾಸಕಿಯೋರ್ವರು ಕಾಲೇಜು ವಿದ್ಯಾರ್ಥಿ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಹಾಗೂ ಜಂಟಿ ನಿರ್ದೇಶಕರು ಆಗಮಿಸಿ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೈಬಿಟ್ಟ ಘಟನೆ ಜೂ.03 ರಂದು ನಡೆದಿದೆ. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನಿತಾ ರವರು ಎಂ.ಕಾಂ....
Ad Widget

ಅಜ್ಜಾವರ : ಕೆರೆಗೆ ಬಿದ್ದು ಮೃತಪಟ್ಟ ಅಬ್ದುಲ್ಲ ರವರ ಕುಟುಂಬಕ್ಕೆ ಕೃಷಿ ಇಲಾಖೆಯಿಂದ ರೂ 2 ಲಕ್ಷ ಬಿಡುಗಡೆ

ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲು ನಿವಾಸಿ ಅಬ್ದುಲ್ಲ ಎಂಬವರು ಕಳೆದ ಜನವರಿ 29 ರಂದು ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮರಣ ಹೊಂದಿದ್ದರು, ಮೃತರ ಕುಟುಂಬಕ್ಕೆ ಕರ್ನಾಟಕ ಸರಕಾರದ ರಾಜ್ಯ ಕೃಷಿ ಇಲಾಖೆ ವತಿಯಿಂದ ಕೃಷಿಕರ ಆಕಸ್ಮಿಕ ಮರಣ ಪರಿಹಾರ ಯೋಜನೆಯಡಿ ರೂ 2 ಲಕ್ಷ ಪರಿಹಾರ ಮೊತ್ತ ಬಿಡುಗಡೆಗೊoಡಿರುತ್ತದೆ....

ಕುರುಂಜಿಭಾಗ್ ದ ಕೊರಗಜ್ಜ ವಿಡಿಯೋ ತುಳು ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ

ಚಿತ್ತೆಶ್ ಕ್ರಿಯೇಷನ್ಸ್ ಸುಳ್ಯ ಅರ್ಪಿಸುವ ಕುರುಜಿಭಾಗ್ ದ ಕೊರಗಜ್ಜ ವಿಡಿಯೋ ತುಳು ಭಕ್ತಿಗೀತೆಯನ್ನು ಕುರುಂಜಿಭಾಗ್ ನಲ್ಲಿರುವ ಶ್ರೀ ಕೊರಗಜ್ಜ ದೇವಾಲಯದಲ್ಲಿ ಬಿಡುಗಡೆ ಮಾಡಲಾಯಿತು . ದೇವಸ್ಥಾನದ ಅರ್ಚಕರಾಗಿರುವ ನಾರಾಯಣ ಪೂಜಾರಿ ಯವರು ಭಕ್ತಿಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಸುಳ್ಯದ ಖ್ಯಾತ ಜ್ಯೋತಿಷಿ ಹಾಗೂ ಸಾಹಿತಿಗಳು ಮತ್ತು ಗಾಯಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮ...

ಸಂಪಾಜೆ: ವನಮಹೋತ್ಸವ ಕಾರ್ಯಕ್ರಮ

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಂಪಾಜೆ ಕೊಡಗು. ವನಮಹೋತ್ಸವ ಆಚರಿಸಲಾಯಿತು. ಶಾಲೆ ಅಧ್ಯಕ್ಷರಾದಂತಹ. ಶ್ರೀಧರ್ ಪಡ್ಪು. ಶಾಲೆಯ ಮುಖ್ಯೋಪಾಧ್ಯಾಯರು . ಸಾವಿತ್ರಿ..ವಲಯಅರಣ್ಯ ಅಧಿಕಾರಿ ಮಧುಸೂದನ್. ಹಾಗೂ ಸಿಬ್ಬಂದಿ ವರ್ಗದವರು .ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.. ಮಕ್ಕಳಿಗೆ ಹಣ್ಣಿನ ಗಿಡವು ಕೊಡಲಾಯಿತು. ಹಾಗೂ.ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು.

ಸುಳ್ಯ: ಭಾರೀ ಮಳೆ ಜಯನಗರದಲ್ಲಿ ಕಾಂಪೌಂಡ್ ಕುಸಿದು‌ ಹಾನಿ

ಸುಳ್ಯ: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.ಸುಳ್ಯದ ಜಯನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ಎರಡು ಮನೆಗಳ ಕಾಂಪೌಂಡ್ ಕುಸಿದು ಮನೆಯೊಂದರ ಛಾವಣಿಗೆ ಹಾನಿಯಾದ ಘಟನೆ ವರದಿಯಾಗಿದೆ.ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿ ದಾಮೋದರ ಪಡಂಬೈಲು ಎಂಬವರ ಮನೆಯ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ನೂತನವಾಗಿ ನಿರ್ಮಿಸಿದ್ದ ಮನೆಯ...

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರ ತಹಶಿಲ್ದಾರ್ ಗೆ ನೀಡಿದ ಡಿಸಿ

ದ.ಕ.ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯ ಹಿನ್ನೆಲೆ ಮತ್ತು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಘೋಷಿಸುವ ಅಧಿಕಾರವನ್ನು ಆಯಾ ತಾಲೂಕಿನ ತಹಶೀಲ್ದಾರ್ ಗೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಫ್ ಮುಹಿಲನ್ ತಿಳಿಸಿದ್ದಾರೆ.ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಕಾಲೇಜಿನ ಪ್ರಾಂಶುಪಾಲರಿಂದ ವರದಿ ತಯಾರಿಸಿ ತಹಶೀಲ್ದಾರರಿಗೆ ಸಲ್ಲಿಸಬೇಕು. ತಹಶೀಲ್ದಾರರು ಪ್ರತಿದಿನ ಬೆಳಗ್ಗೆ 6...

ಪೆರಾಜೆ ಸೊಸೈಟಿ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಪುನರಾಯ್ಕೆ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ ಆಯ್ಕೆಯಾಗಿದ್ದಾರೆ.ನಾಗೇಶ್ ಕುಂದಲ್ಪಾಡಿ ಹೆಸರನ್ನು ಕಿರಣ್ ಬಂಗಾರಕೋಡಿ ಸೂಚಿಸಿ, ಜಯರಾಮ ನಿಡ್ಯಮಲೆ ಅನುಮೋದಿಸಿದರು.ಅಶೋಕ ಪೆರುಮುಂಡರವರ ಹೆಸರನ್ನು ಶೇಷಪ್ಪ ಎನ್.ವಿ. ಸೂಚಿಸಿ, ಹೊನ್ನಪ್ಪ ಅಮೆಚೂರು ಅನುಮೋದಿಸಿದರು.ಜೂ.25 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 13 ಸ್ಥಾನಗಳನ್ನು ಗೆದ್ದುಕೊಂಡಿದ್ದರು.

ಅಜ್ಜಾವರ : ಮನೆ ಮೇಲೆ ಬಿದ್ದ ಮರ – ಹಾನಿ

ಸುಳ್ಯ ತಾಲೂಕಿನಾದ್ಯಂತ ಇಂದು ಭಾರಿ ಮಳೆ ಸುರಿಯುತ್ತಿದ್ದು ಹಲವೆಡೆ ಹಾನಿ ಸಂಭವಿಸಿದೆ.   ಭಾರಿ ಮಳೆಗೆ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಮನೆ ಮೇಲೆ ಮರ ಉರುಳಿಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ. ದೊಡ್ಡೇರಿ ಬಳಿಯ ಬೂಡುಮಕ್ಕಿ ಸುಧಾಮರ ಹಳೆ ಮನೆಯಲ್ಲಿ ಅವರ ಸಹೋದರಿ ವಾಸ್ತವ್ಯವಿದ್ದು, ಮನೆಯ ಮೇಲೆ ಮರ ಬಿದ್ದು ಹಾನಿಸಂಭವಿಸಿದೆ ಎಂದು ತಿಳಿದು ಬಂದಿದೆ. ಹಾನಿಯಾದ...

ಐವರ್ನಾಡು : ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ  ಮುಂಜಾಗೃತ ಸಮಿತಿ ಸಭೆ

ಐವರ್ನಾಡು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ  ಮುಂಜಾಗೃತ ಸಮಿತಿ ಸಭೆ ಜು.3 ರಂದು  ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ  2023-24 ನೇ ಸಾಲಿನ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ  ಮುಂಜಾಗೃತ ಸಮಿತಿ ಸಭೆ ನಡೆಯಿತು.
Loading posts...

All posts loaded

No more posts

error: Content is protected !!