ಪಿಕಪ್ ಗೆ ನಿಯಂತ್ರಣ ಕಳೆದು ಗುದ್ದಿದ ಸ್ಕೂಟಿ , ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲು.

ಚಲಿಸುತ್ತಿದ್ದ ಪಿಕಪ್ ಗೆ ಸ್ಕೂಟಿ ಸವಾರನೊಬ್ಬ ಹಿಂಬದಿಯಿಂದ ಗುದ್ದಿ ರಸ್ತೆಗೆ ಎಸೆಯಲ್ಪಟ್ಟ ಘಟನೆ ಶುಕ್ರವಾರ ರಾತ್ರಿ ಪರಿವಾರಕಾನ ಬಳಿ ನಡೆದಿದೆ. ಅರಂಬೂರು ಕಡೆಯಿಂದ ಪಿಕಪ್ ಹಾಗೂ ಸ್ಕೂಟಿ ಒಂದೇ ಪಥದಲ್ಲಿ ಸಾಗಿ ಬರುತ್ತಿದ್ದವು. ಈ ವೇಳೆ ಪಿಕಪ್ ಹಿಂದೆ ಇದ್ದ ಕಬ್ಬಿಣದ ರಾಡ್ ಅನ್ನು ಸರಿಯಾಗಿ ಗಮನಿಸದೆ ಸ್ಕೂಟಿ ಸವಾರ ಬಂದು ಗುದ್ದಿದ್ದಾನೆ. ಈ ವೇಳೆ...

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಶವ ಕೊಂಡೊಯ್ಯಲು ಬಾರದ ಸಂಬಂಧಿಕರು – ಪೋಲಿಸರಿಂದ ಅಯ್ತಕ್ರಿಯೆ.

ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಹೋಟೆಲ್ ಕಾರ್ಮಿಕನ ಮೃತ ದೇಹವನ್ನು ಕೊಂಡೊಯ್ಯಲು ಸಂಬಂಧಿಕರು ಯಾರೂ ಬಾರದ ಹಿನ್ನೆಲೆಯಲ್ಲಿ ಸುಳ್ಯ ಠಾಣಾ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ. ರಥಬೀದಿಯಲ್ಲಿ ಕಾರ್ಯಚರಿಸುತ್ತಿದ್ದ ಸ್ವಾಮಿ ಪ್ರಸಾದ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಲೂಲು ಎಂಬುವವರು ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು....
Ad Widget

ಐಸ್ ಕ್ರೀಂ ಕಪ್‌ನಲ್ಲಿ ‘ಹಲ್ಲಿನ ಸೆಟ್ ಹಲ್ಲು ಸಿಕ್ಕಿತೆಂದು ಆರೋಪ ಪರಸ್ಪರ ಹಲ್ಲೆ – ಠಾಣೆಯಲ್ಲಿ ರಾಜಿಯಲ್ಲಿ ಇತ್ಯರ್ಥ.‌

ಐಸ್ ಕ್ರೀಂ ಪುಟಾಣಿ ಮಗುವಿಗೆ ಕೋಡಿಸಿದ ಸಂದರ್ಭದಲ್ಲಿ ಆ ಕಪ್ ನಲ್ಲಿ ಹಲ್ಲಿನ ಸೆಟ್ ನ ಹಲ್ಲು ಇದೆ ಎಂದು ಆರೋಪಿಸಿ ಪರಸ್ಪರ ಹಲ್ಲೆಯಾಗುತ್ತಿದ್ದನ್ನು ಗಮನಿಸಿದ ಇನ್ನೋರ್ವ ವ್ಯಕ್ತಿ ಹಲ್ಲೆ ಬಿಡಿಸಲು ಹೋಗಿ ಇಬ್ಬರಿಂದ ತಾನೇ ಹಲ್ಲೆಗೊಳಗಾಗಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದರು. ಘಟನೆಯ ವಿವರ....

ಎಲಿಮಲೆ :  ಬಸ್ ನಿಲ್ದಾಣದ ಒಳಗೆ ಕಸದ ರಾಶಿಗೆ ಬೆಂಕಿ ಹಾಕಿ ಅನಾಗರಿಕತೆ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎತ್ತಿನಹೊಳೆ ಬಸ್ ನಿಲ್ದಾಣದಲ್ಲಿ ಕಸದ ರಾಶಿ ತುಂಬಿದ್ದು ಕಾಡುಬಳ್ಳಿ ಹಬ್ಬಿದೆ. ಅಲ್ಲಿಯೇ ಒಂದು ಮೂಲೆಯಲ್ಲಿ ಕಸದ ರಾಶಿಗೆ ಬೆಂಕಿ ಹಾಕಿದ್ದು  ಅನಾಗರಿಕತೆ ಎದ್ದು ಕಾಣುತ್ತಿದೆ. ಬಸ್ ನಿಲ್ದಾಣದ ಎದುರು ಭಾಗದಲ್ಲಿ ಇಂಡಸ್ಟ್ರಿ ಕಾರ್ಮಿಕರು ಸ್ವಚ್ಚತೆ ಮಾಡಿ ಸಾಮಾಜಿಕ ಕಳಕಳಿ ತೋರುತ್ತಾರೆ. ಬಸ್ ನಿಲ್ದಾಣದ ಪರಿಸ್ಥಿತಿ ಬಗ್ಗೆ ಗ್ರಾಮ ಪಂಚಾಯತ್...

ಪಂಚ ಗ್ಯಾರಂಟಿ ಯೋಜನೆಯಿಂದ ಕಂಗಾಲಾದ ಬಿಜೆಪಿ – ಸುಳ್ಯದಲ್ಲಿ ಆಗಿರುವ ಕಾಮಗಾರಿ ಹರೀಶ್ ಕಂಜಿಪಿಲಿಯವರು ಮನೆಯ ಅಡಿಕೆ ಮಾರಿ ಮಾಡಿದ್ದಾರೆಯೇ ? –  ಪತ್ರಿಕಾ ಹೇಳಿಕೆ ನೀಡಿದ ಕಾಂಗ್ರೆಸ್ 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಡಬಲ್ ಇಂಜಿನ್ ಸರಕಾರದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಇದನ್ನು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಬಿಜೆಪಿಯವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ. ಮುಂದಿನ...

ಅರಂತೋಡು : ಪಂಚಾಯತ್ ಮುಂಭಾಗ ಚರಂಡಿಯ ಸ್ಲಾಬ್ ಕುಸಿತ – ಪಾದಚಾರಿಗಳಿಗೆ ಸಂಕಷ್ಟ

ಅರಂತೋಡು ಗ್ರಾಮ ಪಂಚಾಯತ್ ನಿಂದ ಕೂಗಳತೆ ದೂರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಪುಟ್ ಪಾತ್ ಮಲ್ಲಿಕಾ ಹೋಟೆಲ್‌ ಮುಂಬಾಗದಲ್ಲಿ ಕುಸಿತಗೊಂಡಿದ್ದು, ಇಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರಡಯಾಗುತ್ತಿದೆ. ಹಲವು ಸಮಯಗಳಿಂದ ಮುರಿದು ಬಿದ್ದಿರುವ ಸ್ಲಾಬ್ ಅನ್ನು ಇನ್ನಾದರೂ ಎಚ್ಚೆತ್ತು ಗ್ರಾಮ ಪಂಚಾಯತ್ ಮತ್ತು ಹೆದ್ದಾರಿ ಪ್ರಾಧಿಕಾರವು ಸರಿ ಪಡಿಸುವುದೇ ಎಂದು ಕಾದು ನೋಡಬೇಕಿದೆ.

ಸುಳ್ಯ ಪೋಲೀಸ್ ಠಾಣೆಯಲ್ಲಿ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶ ಚತುರ್ಥಿ ಸಮಿತಿಗಳ ಸಭೆ – ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ ಠಾಣಾಧಿಕಾರಿ

ಸುಳ್ಯದಲ್ಲಿ ಶನಿವಾರ ನಡೆಯಲಿರುವ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶ ಚತುರ್ಥಿ ಆಚರಣೆ ಹಿನ್ನಲೆಯಲ್ಲಿ ಸಮಿತಿಗಳ ಪ್ರಮುಖರ ಸಭೆಯನ್ನು ಸುಳ್ಯ ಆರಕ್ಷಕ ಠಾಣೆ ಸುಳ್ಯದಲ್ಲಿ ಜರುಗಿತು‌. ಸುಳ್ಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರಜೋಗಿ ,ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಈರಯ್ಯ ದಂತೂರು ನೇತೃತ್ವದಲ್ಲಿ ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಮತ್ತು...

ಲೇಖನ : ಜೀವನದಲ್ಲಿ “ನಂಬಿಕೆ” ತುಂಬಾ ಅಮೂಲ್ಯವಾದದ್ದು…

ಜೀವನದಲ್ಲಿ ಕೆಲವೊಮ್ಮೆ ನಾವು ಎಲ್ಲರ ಮೇಲೆಯೂ ಕಣ್ಣುಮುಚ್ಚಿ ನಂಬಿಕೆ ಇಡುತ್ತಿರುತ್ತೇವೆ. ನಾವು ನಂಬಿಕೆ ಇಡುವ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಅರ್ಹರಾ…? ಅಂತ ನಾವು ಯೋಚಿಸುವುದೇ ಇಲ್ಲ. ಆದರೆ ಯಾವತ್ತಾದರೂ ಒಂದು ದಿನ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಮೋಸ ಮಾಡಿ ಹೊರಟುಹೋದರೆ ನಂಬಿ ಮೋಸ ಹೋದ ನಾವು ದುಃಖಿಸುತ್ತಾ ಕೂರಬೇಕಾಗುತ್ತದೆ. ಅದಕ್ಕಾಗಿಯೇ ಹಿರಿಯರು ಒಂದು...

ಕುಕ್ಕೆ ದೇವಳಕ್ಕೆ ಬೃಹತ್ ಗಾತ್ರದ ಫ್ಯಾನುಗಳ ಕೊಡುಗೆ

ಕುಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಜಯನಗರದ ಉದ್ಯಮಿ ವಿಕ್ರಮ ಏ.ವಿ.ಅವರು ಸೇವಾ ರೂಪದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಎಸಿಪಿ ಕಂಪನಿಯ ಎರಡು ಬೃಹದಾಕಾರದ ಸೀಲಿಂಗ್ ಫ್ಯಾನ್(HVLS) ಗಳನ್ನು ಕೊಡುಗೆಯಾಗಿ ಶ್ರೀ ದೇವಳಕ್ಕೆ ಗುರುವಾರ ನೀಡಿರುತ್ತಾರೆ. ಕ್ಷೇತ್ರ ಪುರೋಹಿತರಾದ ಮಧುಸೂಧನ ಕಲ್ಲೂರಾಯ ರವರು ಫ್ಯಾನುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು .ಕೊಡುಗೆಯಾಗಿ ನೀಡಿದ ಎಸಿಪಿ ಕಂಪನಿಯ...

ಸುಬ್ರಹ್ಮಣ್ಯ : ಕ್ವಾಲಿಸ್ ಕಾರು ಬೆಂಕಿಗೆ ಆಹುತಿ

ಕುಕ್ಕೆ ಸುಬ್ರಮಣ್ಯದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲೆಯ ಸಮೀಪ ಕ್ವಾಲಿಸ್ ಕಾರು ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿಗೆ ಆಹುತಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಬೆಂಗಳೂರಿನಿಂದ ಸರ್ಪಸಂಸ್ಕಾರಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದಿದ್ದ ಕುಟುಂಬ ಒಂದು ಆದಿ ಸುಬ್ರಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆಯ ಮುಂಭಾಗ ಕಾರು ನಿಲ್ಲಿಸಿದ್ದರು. ಕಾರಿನಲ್ಲಿ ಆಚಾನಕ್ಕಾಗಿ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ಕಾರಿನ ಸಂಪೂರ್ಣ...
Loading posts...

All posts loaded

No more posts

error: Content is protected !!