ಸಾವಲ್ಲೂ ಸಾರ್ಥಕತೆ ಕಾಣಬೇಕೇ…?

ಸತ್ತ ಬಳಿಕವೂ ಬದುಕುವ ಆಸೆ ಇದೆಯೋ…?

✍️ಡಾ|| ಮುರಲೀ ಮೋಹನ್ ಚೂಂತಾರು

ಆಗಸ್ಟ್ 13 ನ್ನು ವಿಶ್ವದಾದ್ಯಂತ “ಆಂಗಾಂಗ ದಾನಿಗಳ” ಎಂದು ಆಚರಿಸಲಾಗುತ್ತಿದೆ. ಆಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು  ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 140 ಕೋಟಿಗೂ ಜಾಸ್ತಿ ಜನ ಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್...

ಸುಳ್ಯ : ಮಾಸಾಶನ ಮಂಜೂರಾತಿ ಕೈಪಿಡಿ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ಇದರ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸುಳ್ಯ ವಲಯದ ಗಾಂಧಿನಗರ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿರುವ ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ವಾಸವಾಗಿರುವ ತೀರಾ ಸಂಕಷ್ಟದಲ್ಲಿರುವ ಸದಸ್ಯರಾದ ಕಮಲಾಕ್ಷಿ ಎಂಬವರಿಗೆ ರೂಪಾಯಿ 1,000/- ಮಾಶಾಸನ ಮಂಜೂರಾಗಿದ್ದು, ಇದರ ಮಂಜೂರಾತಿ ಕೈಪಿಡಿಯನ್ನು ಶ್ರೀ ಕಲ್ಕುಡ ದೇವಸ್ಥಾನದ ಧರ್ಮದರ್ಶಿಗಳಾದ ತಿಮ್ಮಪ್ಪ ಗೌಡ, ಜ್ಞಾನವಿಕಾಸ...
Ad Widget

ಆಲೆಟ್ಟಿ : ಹಾವು ಕಡಿದು ಮಹಿಳೆ ಮೃತ್ಯು

ಆಲೆಟ್ಟಿ ಗ್ರಾಮದ ಕುಡೆಂಬಿಯಲ್ಲಿ ಮಹಿಳೆಯೊಬ್ಬರು ನಿನ್ನೆ ಸಂಜೆ ಮನೆಯಲ್ಲಿ ಬಿಸಿ ನೀರು ಕಾಯಿಸಲು ಒಲೆಗೆ ಬೆಂಕಿ ಹಾಕುತ್ತಿದ್ದ ಸಂದರ್ಭ ಹಾವೊಂದು ಕಡಿದು ಮೃತಪಟ್ಟ ಘಟನೆ ವರದಿಯಾಗಿದೆ.ಕುಡೆಂಬಿ ಕುತ್ತಿಮುಂಡ ಶಾಂತಪ್ಪ ಎಂಬವರ ಪತ್ನಿ ರಾಧಮ್ಮ ಮೃತ ದುರ್ದೈವಿ‌.ತೆಂಗಿನ ಕಾಯಿ ಸಿಪ್ಪೆ ರಾಶಿಗೆ ಕೈ ಹಾಕಿದಾಗ ಹಾವು  ಕಡಿಯಿತೆಂದು ತಿಳಿದುಬಂದಿದೆ. ಅವರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ...

ಪೆರುವಾಜೆ : ಸರಕಾರಿ ಬಸ್ ನಲ್ಲಿ ನೇತಾಡುತ್ತಿರುವ ಪ್ರಯಾಣಿಕರು – ಅಪಾಯ ಸಂಭವಸುವ ಮುನ್ನ ಎಚ್ಚೆತ್ತುಕೊಳ್ಳಿ..!

ಪೆರುವಾಜೆ ರಸ್ತೆಯಲ್ಲಿ ಸಾಗುತ್ತಿರುವ ಕೆ.ಎಸ್.ಆರ್.ಟಿಸಿ‌. ಬಸ್ ನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಪ್ರಯಾಣಿಸುತ್ತಿರುವ ದೃಶ್ಯ ಆ.11 ರಂದು ಬೆಳಗ್ಗೆ ಕಂಡುಬಂದಿದೆ. ಈ ಸ್ಥಿತಿಯಲ್ಲಿ ಪ್ರಯಾಣಿಸುವುದನ್ನು ಬಸ್ ಚಾಲಕ, ನಿರ್ವಾಹಕರು ಗಮನಿಸಿ ಎಚ್ಚೆತ್ತುಕೊಳ್ಳದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಘಟನೆಗಳು ತಾಲೂಕಿನಾದ್ಯಂತ ಗ್ರಾಮೀಣ ಬಸ್ ಗಳಲ್ಲಿ ಕಂಡುಬರುತ್ತದೆ. ಇನ್ಬಾದರೂ ಇಲಾಖೆ ಈ ಬಗ್ಗೆ ಗಮನಹರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

ಸುಳ್ಯ : ಎರಡು ಕಾಮಗಾರಿಗಳಿಗೆ 2.50 ಕೋಟಿ ಅನುದಾನ ಬಿಡುಗಡೆ

ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಪುರಾತನ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗೆ ಮತ್ತು ಬಹುಕಾಲದ ಬೇಡಿಕೆಯಾಗಿದ್ದ ಸುಳ್ಯ ತಾಲೂಕಿನ ಐವರ್ನಾಡು ಚಲ್ಲತ್ತಡಿ ವೆಂಟೆಡ್ ಡ್ಯಾಮ್ ಸಹಿತ ಸೇತುವೆ ನಿರ್ಮಾಣಕ್ಕೆ ಸಣ್ಣನೀರಾವರಿ ಇಲಾಖೆಯಿಂದ ಒಟ್ಟು 2.50ಕೋಟಿ ರೂ ಅನುದಾನ ಬಿಡುಗಡೆಗೊಂಡಿದೆ.  ಐವರ್ನಾಡು ಗ್ರಾಮದ ದೇವರಕಾನ-ಪಾಂಬಾರು ರಸ್ತೆಯ ಚಲ್ಲತ್ತಡಿ ಎಂಬಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಗಾರಿಗೆ...

ಮಂಡೆಕೋಲು :   ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

ಮಂಡೆಕೋಲು ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಕಂದಾಯ ಇಲಾಖೆಯ ಸಿಬ್ಬಂದಿ ರಾಧಾಕೃಷ್ಣ ಕನ್ಯಾನ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಹರೀಶ್ ಮೋಹಿತ್ ಸಂತೋಷ್, ಮಕ್ಕಳು ಪೋಷಕರು ಉಪಸ್ಥಿತರಿದ್ದರು.  ಸುರೇಶ್ ಕಣೆಮರಡ್ಕ ಗ್ರಂಥಪಾಲಕರ ದಿನಾಚರಣೆಗೆ ಶುಭಹಾರೖಸಿದರು. ಪಿಡಿಓ ಸ್ವಾಗತಿಸಿ,...

ಆ.15ರಿಂದ ಕುಕ್ಕೆ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ – ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆ ಅಭಿಯಾನ

ಸುಬ್ರಹ್ಮಣ್ಯ: "ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸರಕಾರದ ಆದೇಶದಂತೆ ಮತ್ತು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ಪ್ರಕಾರ ಆ.15ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗುವುದು. ಅಲ್ಲದೆ ಈ ಮೂಲಕ ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆ ಅಭಿಯಾನಕ್ಕೆ ಪುಣ್ಯಕ್ಷೇತ್ರ ದಲ್ಲಿ ಚಾಲನೆ ನೀಡಲಾಗುವುದು. ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಮಾಡದೆ...

ಕಕ್ಕೆಬೆಟ್ಟು : ರಬ್ಬರ್ ತೋಟದಲ್ಲಿ ಕಲರ್ ಕಲ್ಲು – ಅಕ್ರಮ ಸಾಗಾಟ ಪತ್ತೆ ಹಚ್ಚಿದ ಸ್ಥಳೀಯರು

ದೊಡ್ಡತೋಟ ಸಮೀಪದ ಕಕ್ಕೆಬೆಟ್ಟು ನಲ್ಲಿರುವ ಕೆ.ಎಫ್.ಡಿ.ಸಿ ರಬ್ಬರ್ ತೋಟದಲ್ಲಿ ಬೆಲೆಬಾಳುವ ಬಣ್ಣದ ಕಲ್ಲುಗಳ ಅಕ್ರಮ ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.ಕಕ್ಕೆಬೆಟ್ಟು ರಬ್ಬರ್ ಗುಡ್ಡದಲ್ಲಿ ಕೆಂಪು-ನೀಲಿ ಮಿಶ್ರಿತ ಬಂಡೆಕಲ್ಲು ಇದೆ ಎಂದು ತಿಳಿದ ಮೈಸೂರು ಕಡೆಯ ತಂಡವೊಂದು ಪಿಕಪ್ ವಾಹನದಲ್ಲಿ ಬಂದು ಅಕ್ರಮವಾಗಿ ತುಂಡರಿಸಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರಿಗೆ ಅನುಮಾನಗೊಂಡು ಪರಿಶೀಲಿಸಿದಾಗ ವಿಷಯ ಬೆಳಕಿಗೆ...

ಸುಳ್ಯ : ಕೆ. ವಿ. ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ಸಂಸ್ಕೃತ ಸಪ್ತಾಹ

ಕೆ. ವಿ. ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ಸಪ್ತಾಹವು ದಿನಾಂಕ 5/08/2025 ರಿಂದ 11/08/2025 ವರೆಗೆ ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು 5/08/2025ರಂದು ಕಾಲೇಜಿನ ಪ್ರಾಂಶುಪಾಲಾರಾದ ಡಾ. ಲೀಲಾಧರ್ ಡಿ ವಿ ಯವರು ಸಂಸ್ಕೃತ ಪತ್ರದ ಅಂಚೆಪೆಟ್ಟಿಗೆ ಅನಾವರಣ ಗೊಳಿಸುವ ಮೂಲಕ ನೆರವೇರಿಸಿದರು.ಒಂದು ವಾರಗಳ ಕಾಲ...

ಪ.ಜಾತಿ/ಪ.ಪಂಗಡದ ಕಾನೂನು ಪದವೀಧರರ ಶಿಷ್ಯ ವೇತನ & ವೃತ್ತಿಯ ಪ್ರಾಯೋಗಿಕ ತರಬೇತಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯ ವೇತನಕ್ಕಾಗಿ ಆಯ್ಕೆಯಾಗಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ವೆಬ್ ಸೈಟ್: swd.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನುಸಲ್ಲಿಸಬಹುದಾಗಿದೆ. ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಪಂಗಡದ ಕಾನೂನು...
Loading posts...

All posts loaded

No more posts

error: Content is protected !!