ಸುಬ್ರಹ್ಮಣ್ಯದಲ್ಲಿ ವೇಗ ಪಡೆದ ಸ್ವಚ್ಛತಾ ಅಭಿಯಾನ

ಸೆಪ್ಟೆಂಬರ್ 18 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ ಪ್ರತೀ ವಾರವು ಡಾlರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನಿಂದ ನಡೆಯುತ್ತಿದ್ದು, ಇದೀಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ದಿನದಿಂದ ನಿರಂತರವಾಗಿ 15 ದಿನಗಳ ಕಾಲ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಪುಣ್ಯ ದಿನದವರೆಗೆ ನಡೆಯಲಿರುವುದು.ಬುಧವಾರ ಸುಬ್ರಹ್ಮಣ್ಯ...

ಸುಬ್ರಹ್ಮಣ್ಯ : ಕೆ.ಎಸ್.ಎಸ್.‌ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಪ್ರಾರಂಭಿಸುವಂತೆ ಸಚಿವರಿಗೆ ಮನವಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವತಿಯಿಂದ ನಡೆಸಲ್ಪಡುವ ಕೆ ಎಸ್ ಎಸ್ ಕಾಲೇಜ್ ನಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಬಿ ಎಸ್ ಸಿ ಪದವಿಯನ್ನು ಪ್ರಾರಂಭಿಸುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ನಾಯರ್ ಹಾಗೂ ಶಿಕ್ಷಕ ರಕ್ಷಕ ಸಂಘದ ನಿರ್ದೇಶಕ ಶಿವರಾಮ...
Ad Widget

ಸುಳ್ಯ : ಜೂನಿಯರ್ ಕಾಲೇಜಿನ ಜಮೀನಿನಲ್ಲಿ  ಹಾದುಹೋಗುವ ವಿದ್ಯುತ್ ಲೈನ್ ತೆರವುಗೊಳಿಸಲು ಸ್ಪೀಕರ್ ಯು. ಟಿ. ಖಾದರ್ ಗೆ ಮನವಿ

ಅಮೃತ ಮಹೋತ್ಸವ ಸಂಭ್ರಮ ದಲ್ಲಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಜಮೀನಿನಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವು ಗೊಳಿಸುವಂತೆ ಸ್ಪೀಕರ್ ಯು. ಟಿ. ಖಾದರ್ ರವರಿಗೆ ಮನವಿ ಸಲ್ಲಿಸಲಾಯಿತುಪುತ್ತೂರು ಉಪ ವಿಭಾಗ ದ ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಗೆ ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ...

ಕಲ್ಲುಗುಂಡಿಯ ಸವೇರಪುರ ಶಾಲೆಗೆ ಕರಾಟೆಯಲ್ಲಿ ಹಲವು ಪ್ರಶಸ್ತಿ

ಇತ್ತೀಚಿಗೆ ಉಡುಪಿಯಲ್ಲಿ ಉಡುಪಿಯಲ್ಲಿ ನಡೆದ ಹಂಶಿ ಪ್ರವೀಣ್ ಕುಮಾರ್ ಸ್ಮಾರಕ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ. ಅಶ್ವನ್ ಕುಮಾರ್ ಎ. ಪಿ 16ರ ವಯೋಮಾನದ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟ ವಿಭಾಗದಲ್ಲಿ ಪ್ರಥಮ, ತನ್ವಿತ್ ಯು....

ಬಿದ್ದು ಸಿಕ್ಕಿದ ಬ್ರೇಸ್ ಲೈಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಕುರುಂಜಿಬಾಗ್ ನಿಲ್ದಾಣದಿಂದ ಪ್ರಯಾಣಿಸಿದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಬ್ರೇಸ್ ಲೈಟ್ ಆಟೋ ರಿಕ್ಷಾದಲ್ಲಿ ಕಳೆದುಹೋಗಿತ್ತು. ಇದನ್ನು ಬಿಎಂಎಸ್ ಸಂಯೋಜಿತ ಆಟೋ ಚಾಲಕರ ಸಂಘದ ಸದಸ್ಯ ಭರತ್ ಮುಳ್ಯ ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ.ಇವರ ಪ್ರಾಮಣಿಕತೆಯನ್ನು ಗುರುತಿಸಿ ಬಿ ಎಂ ಎಸ್ ಸಂಯೋಜಿತ ನಿಲ್ದಾಣದ ನಿರ್ದೇಶಕರಾದ ವೇಣುಗೋಪಾಲ ಹಾಗೂ ಶಂಕರಪ್ಪ ಅವರ ನೇತೃತ್ವದಲ್ಲಿ ಗೌರವಿಸಲಾಯಿತು.‌ ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ...

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್  ವತಿಯಿಂದ ಸುಶ್ಮಿತಾಳಿಗೆ ಸನ್ಮಾನ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ವತಿಯಿಂದ  ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಸುಶ್ಮಿತಾ ಬೆದ್ರುಪಣೆ ಅವರನ್ನು ಮನೆಗೆ ತೆರಳಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷೆ ಪುಷ್ಪಾ ಮೇದಪ್ಪ, ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಕಾರ್ಯದರ್ಶಿ ಲೋಲಾಕ್ಷಿ ದಾಸನ ಕಜೆ,  ಸಂಘಟನಾ ಕಾರ್ಯದರ್ಶಿ ಜಯಂತಿ ಜನಾರ್ದನ, ನಿರ್ದೇಶಕಿ...

ವೆಂಕಪ್ಪ ಗೌಡ ಕೋಂದ್ರಮಜಲು ನಿಧನ

ಐವರ್ನಾಡು ಗ್ರಾಮದ ಕೋಂದ್ರಮಜಲು ವೆಂಕಪ್ಪ ಗೌಡರು ಸೆ.17 ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 74 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಶ್ರೀಮತಿ ಸರೋಜಿನಿ,ಪುತ್ರರಾದ ವಿದ್ಯಾಕುಮಾರ್,ವಿನಯ ಕುಮಾರ್ ,ಗಿರೀಶ್ ಕುಮಾರ್ ಕೋಂದ್ರಮಜಲು ಪುತ್ರಿ ಶ್ರೀಮತಿ ಮಾಲಿನಿ ಹಾಗೂ ಸೊಸೆಯಂದಿರು,ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

ಕವನ : ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳೋಣ…

ಇಂದು ವಿದ್ಯಾರ್ಥಿಗಳ ಕೊರತೆಯಿಂದ ನಮ್ಮ ಕಣ್ಣೆದುರೇ ಮುಚ್ಚಿ ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ನೋಡಿಯೂ ನೋಡದಂತೆ ಕಣ್ಮುಚ್ಚಿ ಬೆಚ್ಚಗೆ ಕುಳಿತಿರುವೆವು ನಾವು ಪ್ರಬುದ್ಧ ಮನಸ್ಸಿನ ಬುದ್ಧಿಜೀವಿಗಳು...ಒಂದೇ ಒಂದು ಸಲ ಬದುಕಿನಲ್ಲಿ ಸ್ವಲ್ಪ ಹಿಂದೆ ಹೋಗಿ ನೆನಪಿಸಿಕೊಳ್ಳೋಣ, ಹತ್ತು-ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ನಾವೂ ಕೂಡ ಅಂತಹುದೇ ಒಂದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು...ನಾವಿಂದು ಬದುಕಿನಲ್ಲಿ ಇಷ್ಟೊಂದು ಪ್ರಬುದ್ಧರಾಗಲು, ಸಮಾಜದಲ್ಲಿ ಇಷ್ಟೊಂದು...

ಕೇರಳದಲ್ಲಿ ಕೊಲೆ ನಡೆಸಿದ ಆರೋಪಿಗಳನ್ನು ಕಲ್ಲುಗುಂಡಿಯಲ್ಲಿ ವಶಕ್ಕೆ ಪಡೆಯಲು ಯತ್ನ – ಕೇರಳ ಪೋಲೀಸರ ಕಣ್ತಪ್ಪಿಸಿ ಕಾಡಿನಲ್ಲಿ ಪರಾರಿಯಾದ ಆರೋಪಿಗಳು

ಕೇರಳದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿರುವ ಮಾಹಿತಿ ಮೇರೆಗೆ ಕಲ್ಲುಗುಂಡಿ ಹೊರಠಾಣೆಯ ಬಳಿ ಕೇರಳ ಪೋಲೀಸರು ಕಾದು ಕುಳಿತಿದ್ದರು. ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಕ್ಷಣಮಾತ್ರದಲ್ಲಿ ತಪ್ಪಿಸಿಕೊಂಡ ಪರಾರಿಯಾದ ಘಟನೆ ಕಲ್ಲುಗುಂಡಿಯಿಂದ ಸೆ.17 ರಂದಯ ಸಂಜೆ ವರದಿಯಾಗಿದೆ. ಕೇರಳದ ಪಾಲಕ್ಕಾಡ್ ನಲ್ಲಿ ಕೊಲೆ ನಡೆಸಿದ ಆರೋಪಿಗಳು ತಮ್ಮ ವಾಹನದ ಮೂಲಕ...

ಸುಳ್ಯ : ತಾಲೂಕು ಕಛೇರಿಯಲ್ಲಿ ವಿಶ್ವಕರ್ಮ ದಿನಾಚರಣೆ

ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸುಳ್ಯ, ಮತ್ತು ಸುಳ್ಯ ತಾಲೂಕು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಪನ್ನೆ ಬೆಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ದಿನಾಚರಣೆ ಸೆ.17 ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್...
Loading posts...

All posts loaded

No more posts

error: Content is protected !!