- Tuesday
- August 4th, 2026
ಸುಳ್ಯದ ಮೊಗರ್ಪಣೆ ಸಮೀಪ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದು ತಡೆಬೇಲಿಗೆ ಗುದ್ದಿದ ಘಟನೆ ಇಂದು ಮಂಜಾನೆ ನಡೆದಿದೆ. ಕಾರು ಬೆಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿತ್ತು. ಕಾರಿನಲ್ಲಿ ಪತಿ,ಪತ್ನಿ ಮಗು ಇದ್ದು ಅಪಾಯದಿಂದ ಪಾರಾಗಿದ್ದಾರೆ.
ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿರುವ ಸ್ಕಂದಶ್ರೀ ಕಾಂಪ್ಲೆಕ್ಸ್ ನಲ್ಲಿ ಸುರೇಶ್ ಮುಂಡಕಜೆ ಹಾಗೂ ವಿಶ್ವೇಶ್ ಚೌಟಾಜೆ ಮಾಲಕತ್ವದ ರಸಗೊಬ್ಬರ ಮತ್ತು ಕೀಟನಾಶಕ ಮಳಿಗೆ ವಿ.ಎಸ್. ಆಗ್ರೋ ಫೆ. 06 ರಂದು ಶುಭಾರಂಭಗೊಂಡಿತು. ವಿಶ್ವನಾಥ್ ಚೌಟಾಜೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶೇಷಮ್ಮ ಚೌಟಾಜೆ, ಮೋಹನ್ ದಾಸ್ ಚೌಟಾಜೆ, ದಿವ್ಯಲತಾ ಚೌಟಾಜೆ, ಪ್ರಜ್ಞಾ ಚೌಟಾಜೆ, ವೀಕ್ಷಿತ್...
“ಮೊಗೇರ ದುಡಿ ಆಯನ - 2026” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆಯಲ್ಲಿ ದಿನಾಂಕ ಫೆ.06ರಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷರಾದ ನಂದರಾಜ್ ಸಂಕೇಶ ಮತ್ತು ದುಡಿ ಆಯನ ಕಾರ್ಯಕ್ರಮದ ಕಾರ್ಯಾಧ್ಯಕ್ಷರಾದ ಕರುಣಾಕರ ಪಲ್ಲತ್ತಡ್ಕ ಇವರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿಯ...
ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು 60 ಕಿ.ಮೀ ವರೆಗೆ ಉಚಿತ ಬಸ್ ಪಾಸ್ ಸೌಲಭ್ಯ ವಿರುತ್ತದೆ, ಹಲವಾರು ವರ್ಷ ಗಳ ಹಿಂದೆ 50 ಕಿ.ಮೀ ಗಳಿಂದ 60 ಕಿ.ಮೀ ವರೆಗೆ ವಿಸ್ತರಿಸಿದ್ದು, ಆನಂತರ ಪರಿಷ್ಕರಣೆ ಮಾಡಿರುವುದಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ಹಾಸ್ಟೆಲ್ ಸೌಲಭ್ಯ ಇಲ್ಲದೇ ಇರುವುದರಿಂದ ಗ್ರಾಮಾಂತರ ಪ್ರದೇಶಗಳಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವುದು ಕಷ್ಟಕರವಾಗಿದೆ. ವಿಶೇಷ...
ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಮಡಪುರ ಶಾಂತಿನಗರ ಪೈಚಾರ್ ಶ್ರೀ ಮುತ್ತಪ್ಪ ತಿರುವಪ್ಪ ದೈವದ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.06 ರಂದು ನಡೆಯಿತು.ನೇಮೋತ್ಸವವು ಮಾರ್ಚ್ 14ರಂದು ಆರಂಭಗೊಂಡು 15ರ ಸಂಜೆ ತನಕ ನಡೆಯಲಿದೆ.ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಪಿ.ಎಂ, ಪ್ರದಾನ ಕಾರ್ಯದರ್ಶಿ ಕೆ.ಕೆ ಬಾಲಕೃಷ್ಣ, ಮೊಕ್ತೇಸರರಾದ...
ಜೇಸಿಐ ಸುಳ್ಯ ಪಯಸ್ವಿನಿಯ ವತಿಯಿಂದ ಪಿ.ಎಂ.ಶ್ರೀ ಸರಕಾರಿ ಪ್ರಾಥಮಿಕ ಶಾಲೆ, ಸುಳ್ಯ ಹಾಗೂ ಶಾಲಾ ಎಸ್.ಡಿ.ಎಂ.ಸಿ ಇವರ ಸಹಕಾರದೊಂದಿಗೆ “ಸ್ವಚ್ಛ ಶಾಲೆ ನಾಳೆಯ ನಾಯಕತ್ವದ ನೆಲೆ” ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಇವರ ಅಧ್ಯಕ್ಷತೆಯಲ್ಲಿ...
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ರಾಜೀವಗಾಂದಿ ಸೇವಾ ಕೇಂದ್ರ ಸಭಾಭವನದಲ್ಲಿ ಫೆ.05 ಗುರುವಾರದಂದು ನಡೆಯಿತು.ಸಭೆಯಲ್ಲಿ ಬೀದಿ ನಾಯಿ ಸಮಸ್ಯೆ, 24x7 ಆಸ್ಪತ್ರೆ ಬಗ್ಗೆ, ಮಂಗಗಳ ಹಾವಳಿ, ಮರಕತ ಅಣೆಕಟ್ಟು ಸಮಸ್ಯೆ, ಪಶು ಇಲಾಖೆಯ ಕಟ್ಟಡದ ಬಗ್ಗೆ ಚರ್ಚೆ ನಡೆಯಿತು.ಸರ್ಕಾರಿ ಜಾಗ ಒತ್ತುವರಿ ಬಗ್ಗೆ ಚರ್ಚೆ : “ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಗೆ 4.5 ಎಕ್ರೆ...
ಸುಬ್ರಹ್ಮಣ್ಯ : “ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಫೆ.08ರಂದು ತಾಲೂಕು ಭಜನೋತ್ಸವ ನಡೆಯಲಿದೆ. ಸಂಜೆ ಸುಮಾರು 100ಕ್ಕೂ ಅಧಿಕ ತಂಡಗಳಿಂದ ಸಾವಿರಕ್ಕೂ ಮಿಕ್ಕಿ ಭಜಕರಿಂದ ಕುಣಿತ ಭಜನೆ ಪ್ರದರ್ಶಿತವಾಗಲಿದೆ. ಮಧ್ಯಾಹ್ನ 120ಕ್ಕೂ ಅಧಿಕ ಭಜನಾ ತಂಡಗಳಿಂದ ಕುಳಿತು ಭಜನೆ ಬಳಿಕ ಕುಣಿತ ಭಜನೆ ನಡೆಯಲಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ...
ಸುಳ್ಯದ ಪ್ರತಿಷ್ಠಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 1998 ರಂದು ಸ್ಥಾಪನೆಯಾಗಿದ್ದು ಇದೀಗ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಫೆ.09 ರಂದು ಪ್ರತಿ ವರ್ಷ ಸ್ಥಾಪನಾ ದಿನಾಚರಣೆಯನ್ನು ಆಚರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷರಾದ ಕೆ.ಸಿ.ಸದಾನಂದ ಹೇಳಿದರು. ಅವರು ಫೆ.06 ರಂದು ಸೊಸೈಟಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೌಡರ...
ಅರಂತೋಡು ಗ್ರಾಮದ ಅಡ್ತಲೆ ಹಾಗೂ ಕಿರ್ಲಾಯ ಭಾಗದಲ್ಲಿ ಆನೆಗಳ ಹಿಂಡು ನಿರಂತರವಾಗಿ ಕೃಷಿ ತೋಟಗಳಿಗೆ ದಾಳಿ ನಡೆಸುತ್ತಿದ್ದು, ಕೃಷಿಕರನ್ನು ಕಂಗಾಲಾಗಿಸಿದೆ. ಈಗಾಗಲೇ ಎಲೆಚುಕ್ಕಿ, ಕೊಳೆರೋಗ ಹಾಗೂ ಹಳದಿ ಎಲೆ ರೋಗಗಳಿಂದ ನಷ್ಟ ಅನುಭವಿಸುತ್ತಿರುವ ಕೃಷಿಕರನ್ನು ಈ ಆನೆಗಳ ದಾಳಿಯು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಫೆ.05ರಂದು ರಾತ್ರಿ ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಪೊನ್ನಪ್ಪ ಅಜಿಲ ಅವರ...
Loading posts...
All posts loaded
No more posts
