Ad Widget

ದೇವ ಗೆಳೆಯರ ಬಳಗದಿಂದ ರಕ್ಷಾಬಂಧನ

ದೇವ ಗೆಳೆಯರ ಬಳಗದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಆ. 3ರಂದು ನಡೆಯಿತು. ರಕ್ಷಾಬಂಧನದ ಮಹತ್ವದ ಬಗ್ಗೆ ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ದೇವ, ಪೂರ್ವಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ ಮಾತನಾಡಿದರು.

ಐವರ್ನಾಡು ದೇವಸ್ಥಾನದಲ್ಲಿ ರಕ್ಷಾಬಂಧನ

ವಿಶ್ವ ಹಿಂದೂ ಪರಿಷತ್- ಬಜರಂಗದಳ ಪಂಚಾಕ್ಷರಿ ಶಾಖೆ ದೇರಾಜೆ, ಐವರ್ನಾಡು ಇದರ ಕಾರ್ಯಕರ್ತರಿಂದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೋದರತೆಯ ಬೆಸೆಯುವ, ಸಮರತೆ ಸಾರುವ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಅಜಿತ್ ಗುತ್ತಿಗಾರುಮೂಲೆ ಇವರು ರಕ್ಷಾಬಂಧನದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶಾಖೆಯ ಅಧ್ಯಕ್ಷರು, ಸಂಚಾಲಕರು ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Ad Widget

ಅಬೂಬಕ್ಕರ್ ಉಸ್ತಾದ್ ಕನಕಮಜಲು ನಿಧನ

ಕನಕಮಜಲಿನ ಅಬೂಬಕ್ಕರ್ ಉಸ್ತಾದ್ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸಮಸ್ತದ ಹಿರಿಯ ಗುರುಗಳಾಗಿದ್ದು ಅಪಾರ ಅನುಯಾಯಿಗಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.

ಆರ್ ಟಿ ಇ ಮೂಲಕ ದಾಖಲಾತಿ ಪಡೆದ ವಿದ್ಯಾರ್ಥಿಗಳಿಂದ ಹಣ ವಸೂಲಿಗಿಳಿದ ಶಿಕ್ಷಣಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

ಸುಳ್ಯ ತಾಲೂಕಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬಡಕುಟುಂಬದ ಉತ್ತಮ ಶಿಕ್ಷಣಕ್ಕಾಗಿ ಜಾರಿಗೊಳಿಸಿದ ಆರ್.ಟಿ.ಇ(ಕಡ್ಡಾಯ ಶಿಕ್ಷಣ ಕಾಯ್ದೆ)ಯೋಜನೆ ಮೂಲಕ ದಾಖಲಾದ ವಿದ್ಯಾರ್ಥಿಗಳ ಪೋಷಕರಿಂದ ಪುಸ್ತಕದ ಶುಲ್ಕವು ವಸೂಲಿ ಮಾಡುತ್ತಿದೆ.ಸರಕಾರದ ಆದೇಶದಂತೆ ಯಾವುದೇ ಶುಲ್ಕವು ಪಾವತಿಸಬೇಕಾಗಿಲ್ಲ.ಆದರೆ ಪಠ್ಯಪುಸ್ತಕಕ್ಕೆ ಶುಲ್ಕ ಪಾವತಿಸದೇ ಪುಸ್ತಕವು ನೀಡುವುದಿಲ್ಲ.ಇದೀಗ 'ಆನ್ ಲೈನ್'ಮೂಲಕ ತರಗತಿ ಆರಂಭಗೊಂಡಿದೆ. ಪಠ್ಯಪುಸ್ತಕ ಖರೀದಿಸಲಾಗದ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ಭೇಟಿ

ಕಡಬ ತಾಲೂಕಿನ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆ. 3 ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಅವರು ಪ್ರತಾಪ್ ಸಿಂಹರನ್ನು ಬರಮಾಡಿಕೊಂಡರು.

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(04.08.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಆ.5 ರಾಮಮಂದಿರ ಶಿಲಾನ್ಯಾಸ ಪ್ರಯುಕ್ತ ಮನೆಮನೆಗಳಲ್ಲಿ ದೀಪಬೆಳಗಿ, ಕೇಸರಿ ಧ್ವಜ ಹಾರಿಸಿ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ವಿಶ್ವಹಿಂದೂ ಪರಿಷತ್ ಕರೆ

ಅ. 5 ರಂದು ರಾಮಜನ್ಮ ಭೂಮಿಯಲ್ಲಿ ನಡೆಯಲಿರುವ ಭವ್ಯ ರಾಮಮಂದಿರದ ಶಂಕುಸ್ಥಾಪನೆಯ ಅಂಗವಾಗಿ ಸುಳ್ಯದ ಅಂಬಟೆಡ್ಕ ವೆಂಕಟ್ರಮಣ ದೇವಸ್ಥಾನದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಭಜನೆ ,ಧಾರ್ಮಿಕ ಉಪನ್ಯಾಸ ಆಯೋಜಿಸಿದೆ. ಹಾಗೂ ಶಿಲಾನ್ಯಾಸ ಕಾರ್ಯಕ್ರಮದ ಲೈವ್ ಆಗಿ ನೋಡಲು ವ್ಯವಸ್ಥೆ ಮಾಡಲಾಗಿದೆ. ಹಲವಾರು ವರ್ಷಗಳಿಂದ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಭಾಗವಹಿಸಿದ ತಾಲೂಕಿನ ಕರಸೇವಕರಿಗೆ ಸನ್ಮಾನ, ಈ...

ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷರಾಗಿ ಭರತ್ ಬೊಮ್ಮಾರ್ – ಕಾರ್ಯದರ್ಶಿ ಹರೀಶ್ ಕಾವಿನಮೂಲೆ

ಯುವವಾಹಿನಿ(ರಿ) ಸುಳ್ಯ ಘಟಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸುಳ್ಯದ ಸಾನ್ವಿ ಕಂಪ್ಯೂಟರ್ ಸಂಸ್ಥೆಯ ಕಛೇರಿಯಲ್ಲಿ ಜುಲೈ 30ರಂದು ಜರುಗಿತು. ಹರೀಶ್ ಕಾವಿನಮೂಲೆ ಘಟಕದ ನೂತನ ಅಧ್ಯಕ್ಷರಾಗಿ ಭರತ್ ಬೊಮ್ಮಾರ್, ಕಾರ್ಯದರ್ಶಿಯಾಗಿ ಹರೀಶ್ ಕಾವಿನಮೂಲೆ ಬೆಳ್ಳಾರೆ, ಉಪಾಧ್ಯಕ್ಷರುಗಳಾಗಿ ಮಹೇಶ್ ಕಲ್ಪಣೆ ಬೆಳ್ಳಾರೆ ಹಾಗೂ ಶ್ರೀಮತಿ ಶಶಿಕಲಾ ಎ ನೀರಬಿದ್ರೆ, ಜೊತೆ ಕಾರ್ಯದರ್ಶಿಯಾಗಿ ಗುರುನಾಥೇಶ್ವರ ಸುಳ್ಯ,...

ಹಿಂದು ಜಾಗರಣ ವೇದಿಕೆ ತಾಲೂಕು ಸಮಿತಿ ರಚನೆ- ಅಧ್ಯಕ್ಷರಾಗಿ ಮಹೇಶ್ ಉಗ್ರಾಣಿಮನೆ,ಪ್ರ.ಕಾರ್ಯದರ್ಶಿ ಸಂತೋಷ್ ಕೊಡಿಯಾಲ

ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ನೂತನ ತಾಲೂಕು ಸಮಿತಿಯು ಆ. 3 ರಂದು ಗಾಂಧಿನಗರದ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ರಚನೆಯಾಯಿತು. ಈ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ರಾಜೇಶ್ ಭಟ್ ನೆಕ್ಕಿಲ, ಅಧ್ಯಕ್ಷರಾಗಿ ಮಹೇಶ್ ಉಗ್ರಾಣಿಮನೆ, ಉಪಾಧ್ಯಕ್ಷರಾಗಿ ಪ್ರಶಾಂತ್ ಕಾಯರ್ತೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ನಾಯಕ್ ಕೊಡಿಯಾಲ, ಕಾರ್ಯದರ್ಶಿಗಳಾಗಿ ಗಣೇಶ್ ಮಂಡೆಕೋಲು, ಸಂದೀಪ್ ರೈ...

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸುಳ್ಯ ಭೇಟಿ : ಸುಳ್ಯ ಬಿಜೆಪಿ ಅಭಿನಂದನೆ

ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇಂದು ಸುಳ್ಯಕ್ಕೆ ಭೇಟಿ ನೀಡಿದರು. ನೂತನ ಸದಸ್ಯರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಸುಳ್ಯ ವಿಧಾನಸಭಾ ಕ್ಷೇತ್ರ ಬೇಟಿ ಮಾಡಿದರು. ಬೆಳಗ್ಗೆ ಕಡಬದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸುಳ್ಯಕ್ಕೆ ಆಗಮಿಸಿದರು. ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ...
Loading posts...

All posts loaded

No more posts

error: Content is protected !!