Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಲೀಸ್ ಗೆ ಕೊಡಬಾರದೆಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಯಾವುದೇ ಜಮೀನುಗಳನ್ನು ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಲೀಸ್‌ಗೆ ಕೊಡುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿ ದೇವಸ್ಥಾನದ ಹಿತರಕ್ಷಣಾ ವೇದಿಕೆ ವತಿಯಿಂದ ಇಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಎಂ.ಹೆಚ್. ಅವರಿಗೆ ಮನವಿ ಸಲ್ಲಿಸಿದ್ದಾರೆ.ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾರ್ವಜನಿಕ ಸರಕಾರಿ ದೇವಸ್ಥಾನವಾಗಿದ್ದು, ಸದ್ರಿ ದೇವಸ್ಥಾನದ ಅಧೀನದ...

ಪಂಜ ಸಹಕಾರಿ ಸಂಘದ ವತಿಯಿಂದ ಸೆ.1 ರಂದು ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೆ.1 ರಂದು ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರ ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ 5 ರ ವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ತಿಳಿಸಿದ್ದಾರೆ.
Ad Widget

ಮನವೇ….

ಮನವೇ ಯೋಚಿಸದಿರು ಈಗ ನಿನ್ನ ಸಮಯ ಕೆಟ್ಟಿದೆ ಎಂದು…ಮನವೇ ಚಿಂತಿಸದಿರು ನಿನ್ನ ಮುಂದೆ ಹಲವಾರು ನೋವುಗಳಿದೆ ಎಂದು… ಮನವೇ ಹೆದರದಿರು ನಿನ್ನ ಮುಂದೆ ವಿಭಿನ್ನ ಸಮಸ್ಯೆಗಳಿದೆ ಎಂದು…ಮನವೇ ಕಿವಿಗೊಡದಿರು ಸಮಾಜದ ನಕಾರಾತ್ಮಕ ಮಾತುಗಳಿಗೆ ಎಂದೆಂದು… ಮನವೇ ಮರುಗದಿರು ಮೋಸದ ಮಾತುಗಳಿಗೆ ಎಂದೆಂದು…ಮನವೇ ಕುಗ್ಗದಿರು ನಿನ್ನಲ್ಲಿ ಶಕ್ತಿ ಸಾಮರ್ಥ್ಯ ಇಲ್ಲ ಎಂದು… ಮನವೇ ಆತ್ಮಸ್ಥೈರ್ಯ ಕಳೆದುಕೊಳ್ಳದಿರು ನಿನಗಾದ...

ಮುಕ್ಕೂರು : ಆಯುಷ್ಮಾನ್ ಕಾರ್ಡ್ ನೋಂದಣಿ – ಸಾಮಾಜಿಕ ಬದ್ದತೆ ಸಂಘಟನೆಯ ಶಕ್ತಿ: ತಿರುಮಲೇಶ್ವರ ಭಟ್ ಕಾನಾವು

ಸಂಘಟನೆಗಳು ಸಮಾಜಮುಖಿ ಚಿಂತನೆಯೊಂದಿಗೆ ಸಾಮಾಜಿಕ ಬದ್ಧತೆಗೆ ಪೂರಕ ಚಟುವಟಿಕೆಯಲ್ಲಿ ತೊಡಗಿದಾಗ ಅದರಿಂದ ಯಶಸ್ಸು ಸಾಧ್ಯ ಎಂದು ಪ್ರಗತಿಪರ ಕೃಷಿಕ ತಿರುಮಲೇಶ್ವರ ಭಟ್ ಕಾನಾವು ಹೇಳಿದರು.ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಸವಣೂರು ತನುಷ್ ಎಂಟರ್ಪ್ರೈಸ್ ಇದರ ಆಶ್ರಯದಲ್ಲಿ ಆ.30 ರಂದು ನಡೆದ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ...

ಧರ್ಮಸ್ಥಳದ ಲಕ್ಷ್ಮೀ ಆನೆಯ ಮರಿಗೆ “ಶಿವಾನಿ” ಎಂದು ನಾಮಕರಣ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಆನೆಯು ಜು.1 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು , ಈ ಆನೆಯ ಮರಿಯ ನಾಮಕರಣ ಕಾರ್ಯಕ್ರಮ ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನ ಸುಮೂರ್ತದಲ್ಲಿ ನಡೆಯಿತು . ಆನೆ ಮರಿಗೆ ' ಶಿವಾನಿ ” ಎಂಬ ಹೆಸರಿಡಲಾಯಿತು . ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು...

ಕಣ್ವ ವೃಕ್ಷ ಚಾರಿಟೇಬಲ್ ಟ್ರಸ್ಟ್ ಸುಳ್ಯ, ಗ್ರಾಮ ವಿಕಾಸ ಸಮಿತಿ ಜಾಲ್ಸೂರು ವತಿಯಿಂದ ಪ್ರಕೃತಿ ವಂದನಾ ಕಾರ್ಯಕ್ರಮ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಯೋಜನೆ ಯಂತೆ ಕಣ್ವ ವೃಕ್ಷ ಚಾರಿಟೇಬಲ್ ಟ್ರಸ್ಟ್ ಸುಳ್ಯ, ಗ್ರಾಮ ವಿಕಾಸ ಸಮಿತಿ ಜಾಲ್ಸೂರು ವತಿಯಿಂದ ಪ್ರಕೃತಿ ವಂದನಾ ಕಾರ್ಯಕ್ರಮ ಅಡ್ಕಾರು ಶ್ರೀ ಸುಬ್ರಮಣ್ಯ ದೇವಸ್ಥಾನ ವಠಾರ ದಲ್ಲಿ ನಡೆಯಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್, ಉಡುಪಿ ಜಿಲ್ಲಾ ಸಂಘ ಚಾಲಕ್ ನಾರಾಯಣ ಶೆಣೈ,...

ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ – ಅಧ್ಯಕ್ಷರಾಗಿ ಕರೀಮ್ ಕೆ.ಮ್., ಪ್ರಧಾನ ಕಾರ್ಯದರ್ಶಿಯಾಗಿ ಅಬೂಸಾಲಿ ಕೆ.ಪಿ.

ಕರೀಮ್ ಕೆ.ಮ್. ಅಬೂಸಾಲಿ ಕೆ.ಪಿ. ಅಶ್ರಫ್ ಪೈಚಾರ್ ಮುಜೀಬ್ ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ 14 ನೇ ವಾರ್ಷಿಕ ಮಹಾಸಭೆಯು ಆ. 30 ರಂದು ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು  ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷರಾದ ಕರೀಮ್ ಕೆ.ಎಮ್. ವಹಿಸಿದ್ದರು. ಕಾರ್ಯಕ್ರಮದ...

ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅಶೋಕ್ ಕುಮಾರ್ ರೈ ಊರುಸಾಗು

ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಅಲೆಕ್ಕಾಡಿ ಇದರ ನೂತನ ಅಧ್ಯಕ್ಷರ ಆಯ್ಕೆಯು ಆ.26 ರಂದು ಸಂಘದ ಕಛೇರಿಯಲ್ಲಿ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ತಾಲೂಕು ಅಭಿವೃದ್ಧಿ ಅಧಿಕಾರಿ ಕೆ. ಶಿವಲಿಂಗಯ್ಯನವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ರೈ ಊರುಸಾಗು ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಗುತ್ತಿಗಾರು ಭಗತ್ ಸಿಂಗ್ ಶಾಖೆಯ ಅಧ್ಯಕ್ಷರಾಗಿ ಜಯಪ್ರಕಾಶ್ ಮೊಗ್ರ

ವಿಶ್ವಹಿಂದೂ ಪರಿಷತ್ ಬಜರಂಗದಳ ಗುತ್ತಿಗಾರು ಭಗತ್ ಸಿಂಗ್ ಶಾಖೆಯ ಉದ್ಘಾಟನೆ ಆ. 30 ರಂದು ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಸಹಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಗುತ್ತಿಗಾರು ಪ್ರಾ.ಕೃ‌.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಭಜರಂಗದಳ ಜಿಲ್ಲಾ ಸಂಯೋಜಕ ಲತೀಶ್ ಗುಂಡ್ಯ, ಭಜರಂಗದಳ ಸುಳ್ಯ ಪ್ರಖಂಡದ ಸಹಸಂಯೋಜಕ ವಿಘ್ನೇಶ್...

ನೊಂದ ಜೀವಕ್ಕೆ ಹರಿದು ಬಂತು ಸಹಾಯದ ಆಸರೆ – ಕೃತಜ್ಞತೆ ಸಲ್ಲಿಸಿದ ನವೀನ್ ನ ತಾಯಿ

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ಪುಷ್ಪಾವತಿ ಅವರ ಮಗ ನವೀನ್ ಗೆ ಮೆದುಳಿನ ಸಮಸ್ಯೆ ಬಾಧಿಸಿ ಶೀಘ್ರವಾಗಿ ಚಿಕಿತ್ಸೆ ಒದಗಿಸುವ ಅಗತ್ಯವಿತ್ತು. ಬಡತನದಲ್ಲಿದ್ದ ಇವರಿಗೆ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿ ಸಹೃದಯಿ ದಾನಿಗಳು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ನಲ್ಲಿ ನವೀನ್ ನ ಚಿಕಿತ್ಸೆಗೆ ನೆರವಾಗುವಿರಾ? ಎಂದು...
Loading posts...

All posts loaded

No more posts

error: Content is protected !!