Ad Widget

ಕವನ : ಸಾಗೋಣ ಮತ್ತೆ ಶಾಲೆಯ ಕಡೆಗೆ…

ಬೇಸಿಗೆಯ ರಜೆಯೀಗ ಮುಗಿಯುತ್ತಾ ಬಂದಿದೆ, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸುವ ಸಮಯ ಇದೀಗ ಹತ್ತಿರವಾಗಿದೆ…ಎರಡು ತಿಂಗಳುಗಳ ಸುಧೀರ್ಘ ರಜೆಯದು ಕಣ್ಮುಚ್ಚಿ ಬಿಡುವಷ್ಟರಲ್ಲಿ ಮುಕ್ತಾಯಗೊಂಡಿದೆ, ಸ್ನೇಹಿತರ ಜೊತೆಗೂಡಿ ಆಟಗಳ ಆಡುತ್ತಾ ಪಾಠಗಳ ಕಲಿಯುವ ಸಮಯವೀಗ ಮತ್ತೆ ಮರಳಿ ಬಂದಿದೆ…ರಜೆಯ ದಿನಗಳ ಮೆಲುಕನ್ನು ಹಾಕುತ್ತಾ, ತಂದೆ-ತಾಯಿಯ ಆಶೀರ್ವಾದವ ಪಡೆಯುತ್ತಾ ಪುಸ್ತಕದ ಚೀಲವನ್ನು ಬೆನ್ನಿಗೆ ಹಾಕಿ ಸಾಗೋಣ ಮತ್ತೆ...

ಸುಳ್ಯ : ಬಿಜೆಪಿಯ ಚುನಾಯಿತ ಸಹಕಾರಿಗಳ ಸಮಾವೇಶ ಉದ್ಘಾಟನೆ

ಭಾರತೀಯ ಜನತಾ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾಯಿತ ಸಹಕಾರಿಗಳ ಸಮಾವೇಶ ಸುಳ್ಯದ ಸಿಎ ಬ್ಯಾಂಕ್ ನಲ್ಲಿ ಮೇ.17 ರಂದು ನಡೆಯಿತು.‌ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಸಮಾವೇಶ ಉದ್ಘಾಟಿಸಿದರು. ವೇದಿಕೆಯಲ್ಲಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಸತೀಶ್ಚಂದ್ರ, ಬಿಜೆಪಿ ಜಿಲ್ಲಾ ಪ್ರಧಾನ...
Ad Widget

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ವೆಂಕಟೇಶ್.ಎಚ್.ಎಲ್., ಕಾರ್ಯದರ್ಶಿಯಾಗಿ ಗೋಪಾಲ್ ಎಣ್ಣೆಮಜಲ್, ಕೋಶಾಧಿಕಾರಿಯಾಗಿ  ಮೋನಪ್ಪ ಡಿ.

ಸುಬ್ರಹ್ಮಣ್ಯ ಮೇ 16: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕುಕ್ಕೆ ಸುಬ್ರಹ್ಮಣ್ಯ ಲೀಜನ್ ನ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸೀನಿಯರ್ ವೆಂಕಟೇಶ್.ಎಚ್.ಎಲ್ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಸೀನಿಯರ್ ಗೋಪಾಲ್ ಎಣ್ಣೆಮಜಲ್, ಕೋಶಾಧಿಕಾರಿಯಾಗಿ ಸೀನಿಯರ್ ಮೋನಪ್ಪ.ಡಿ, ನಿಕಟ ಪೂರ್ವ ಅಧ್ಯಕ್ಷರಾಗಿ ಸೀನಿಯರ್ ರವಿ ಕಕ್ಕೆ ಪದವು, ಉಪಾಧ್ಯಕ್ಷರುಗಳಾಗಿ ಸೀನಿಯರ್ ಪ್ರಕಾಶ್ ಕಟ್ಟೆಮನೆ, ಹಾಗೂ ಸೀನಿಯರ್ ಅಶೋಕ್ ಮೂಲೆ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ತೆರವಾದ ಸ್ಥಾನಕ್ಕೆ ಬಿಜೆಪಿಯ ಶ್ರೀಮತಿ ಮೋಹಿನಿ ಶ್ರೀಧರ ಅಂಙಣ ನಾಮಪತ್ರ ಸಲ್ಲಿಕೆ, ಅವಿರೋಧ ಆಯ್ಕೆ ಸಾಧ್ಯತೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಐನೆಕಿದು ವಾರ್ಡ್ ನ ತೆರವಾದ ಒಂದು ಸ್ಥಾನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿಜೆಪಿಯ ಶ್ರೀಮತಿ ಮೋಹಿನಿ ಶ್ರೀಧರ ಅಂಙಣ ರವರು ಮೇ.14 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಾಮಪತ್ರ ಸಲ್ಲಿಕೆ ಮಾಡಲು ನಿನ್ನೆ ಕೊನೆಯ ದಿನವಾಗಿದ್ದು, ಇತರೆ ಯಾವುದೇ ಪಕ್ಷಗಳು ಅಥವಾ ವ್ಯಕ್ತಿಗಳು ನಾಮಪತ್ರ ಸಲ್ಲಿಸದೇ ಇರುವ...

ತೀರ್ಥರಾಮ ಗೌಡ ಬಾಳೆತೋಟ ನಿಧನ

ದೇವಚಳ್ಳ ಗ್ರಾಮದ ತಳೂರು ನಿವಾಸಿ ತೀರ್ಥರಾಮ ಗೌಡ ಬಾಳೆತೋಟ ಅಲ್ಪ ಕಾಲದ ಅಸೌಖ್ಯದಿಂದ ಮೇ 13 ರಂದು ಸ್ವಗೃಹ ತಳೂರು ಮನೆಯಲ್ಲಿ ನಿಧನರಾದರು. ಮೃತರು ಪತ್ನಿ ಶಶಿಕಲಾ, ಪುತ್ರರಾರ ಯತಿನ್, ಕಾರ್ತಿಕ್, ದಿವಿನ್ ಹಾಗೂ ಕುಟುಂಬಸ್ಥರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

ಕಥಾ ಸಂಕಲನ “ಇದು ಎಂಥಾ ಲೋಕವಯ್ಯಾ” ಅವಲೋಕನ- ವಿಮಲಾರುಣ ಪಡ್ಡoಬೈಲು

ಶ್ರೀ ಪಿ. ಜಿ ಅಂಬೆಕಲ್ ರವರು ನಿವೃತ್ತ ಮುಖ್ಯಶಿಕ್ಷಕರಾಗಿದ್ದು, "ಇದು ಎಂಥಾ ಲೋಕವಯ್ಯಾ" ಅವರು ರಚಿಸಿದ ಐದನೇ ಕೃತಿ ಯಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಕಥಾ ಸಂಕಲನಕ್ಕೆ ಕೊಟ್ಟ ಶೀರ್ಷಿಕೆಯ ಕಥೆ ಈ ಸಂಕಲನದಲ್ಲಿ ಇಲ್ಲದಿದ್ದರೂ, ಈ ಎಲ್ಲ ಕಥೆಗಳ ಮೂಲಕ ಕಟ್ಟಿರುವ ಬದುಕಿನ ಬಿಂಬ ಈ ಶೀರ್ಷಿಕೆಗೆ ತಕ್ಕಂತೆ ಸೂಕ್ತ...

ಕಲ್ಮಡ್ಕ : ವಾರ್ಷಿಕ ಕ್ರಿಯಾಯೋಜನೆ ಕುರಿತು ವಿಶೇಷ ಸಭೆ

ಕಲ್ಮಡ್ಕ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಕಲ್ಮಡ್ಕ ಗ್ರಾಮ ಪಂಚಾಯತ್ ಸಹಭಾಗಿತ್ವ ವಾರ್ಷಿಕ ಕ್ರಿಯಾಯೋಜನೆ(GPDP) ತಯಾರಿಸುವ ಕುರಿತಾಗಿ ವಿಶೇಷ ಸಭೆಯನ್ನು ಮೇ. 13ರಂದು ಕಲ್ಮಡ್ಕ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಡೆಯಿತು. ಸಹಭಾಗಿತ್ವ ವಾರ್ಷಿಕ(GPDP) ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ,...

ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಅಕ್ಷಯ ಬಾಬ್ಲುಬೆಟ್ಟು

ರೆನ್ಶಿ ಯೋಗ ಸಂಸ್ಥೆ ದುಬೈ ಯ.ಎ.ಇ, ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಸಂಸ್ಥೆ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಮೇ.09 ರಿಂದ 12 ರವರೆಗೆ ದುಬೈಯಲ್ಲಿ ನಡೆದ ದುಬೈ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್-2025 ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಕ್ಷಯ ಬಾಬ್ಲುಬೆಟ್ಟು(ಏನೆಕಲ್ಲು) ಚಿನ್ನದ ಪದಕ ಗಳಿಸಿರುತ್ತಾರೆ.ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏನೆಕಲ್ಲು ಸರಕಾರಿ...

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಕರಾಟೆ ತರಬೇತಿ ಉದ್ಘಾಟನೆ ; ಚೆಸ್ ತರಬೇತಿ ಸಮಾರೋಪ, ದೇಶದ ಸೈನ್ಯದ ಯಶಸ್ಸಿಗೆ ಪ್ರಾರ್ಥನೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ನಡೆದ ಚೆಸ್ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಟ್ರಸ್ಟ್ ವತಿಯಿಂದ ನಡೆಯುವ ಕರಾಟೆ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ಗುತ್ತಿಗಾರಿನ ಪ.ವರ್ಗದ ಸಭಾಭವನದಲ್ಲಿ ನಡೆಯಿತು. ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ, ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಧನಪತಿ, ಶ್ರೀಮತಿ ಪ್ರೀತಿ ನಿಶ್ಚಿತ್ ದೇವಶ್ಯ...

ರಾಜ್ಯ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಚಾರಣ ಶಿಬಿರದ ಸಮಾರೋಪ ಸಮಾರಂಭ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಪಂಜ ಸ್ಥಳೀಯ ಸಂಸ್ಥೆ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇವರುಗಳ ಸಹಭಾಗಿತ್ವದಲ್ಲಿ ನಡೆದ ರಾಜ್ಯ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಚಾರಣ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಾಧವ ಬಿ.ಕೆ...
Loading posts...

All posts loaded

No more posts

error: Content is protected !!