ಪಂಜ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಾಲತಾಣ ವಿಭಾಗದಿಂದ ಕೊಡುಗೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7ನೇ ವರ್ಷ ಹಿನ್ನೆಲೆಯಲ್ಲಿ ಭಾಜಪ ಸುಳ್ಯ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಕೈಗವಚ, ಜಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳು, ಹ್ಯಾಂಡ್ ಸ್ಯಾನಿಟೈಝೆರ್ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕರಾದ ಫಯಾಜ್ ಕಡಬ,...

ಸುಳ್ಯದಲ್ಲಿ ಇಂದು 40 ಪಾಸಿಟಿವ್

ಸುಳ್ಯದಲ್ಲಿ ಇಂದು 40 ಕೋವಿಡ್ ಪಾಸಿಟಿವ್ಸುಳ್ಯದಲ್ಲಿ ನಿನ್ನೆ ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು ಇಂದು ಕಡಿಮೆಯಾಗಿದೆ. ಇಂದು ಸುಳ್ಯ ತಾಲೂಕಿನಲ್ಲಿ 40 ಪಾಸಿಟಿವ್ ಬಂದಿದೆ. ನಿನ್ನೆ 102 ಪಾಸಿಟಿವ್ ಬಂದಿತ್ತು. 34 ಮಂದಿ ಗುಣಮಖರಾಗಿದ್ದಾರೆ. ಒಟ್ಟು 541 ಸಕ್ರೀಯ ಪ್ರಕರಣಗಳಿವೆ.
Ad Widget

ಕರ್ಮ ತಿರುಗಿದಾಗ…..

ಕೊರೊನ ಎಂದಾಕ್ಷಣ ನೆನಪಾಗುವುದೇ ಅದೆಷ್ಟೋ ದಿನಗಳನ್ನು ಕತ್ತಲೆಯ ಕೊಣೆಯೊಳಗೆ ಕಳೆದಂತೆ, ಬಂಧಿಸಲ್ಪಟ್ಟ ಚಿಟ್ಟೆಯಂತೆ ಕೆಲಸಕಾರ್ಯವಿಲ್ಲದೆ ನಾಳೆಯ ಬಗ್ಗೆ ಯೋಚಿಸುತ್ತ ಕಳೆದ ದಿನಗಳು. ನಮ್ಮ ಜೀವನವನೊಮ್ಮೆ ಹಿಂತಿರುಗಿ ನೋಡಿದಾಗ ಉರುಳುತಿದ್ದ ದಿನಗಳು ಹೊರೆತು ಬೇರೇನು ಇಲ್ಲ. ಸಾವಿನ ಎದುರಲೊಮ್ಮೆ ನಿಂತು ಅದರೆಡೆಗೆ ಕಣ್ಣು ಹಾಯಿಸಿದಂತೆ ಕಳೆದ ದಿನಗಳು ಹಾಗೂ ಕಳೆಯುತ್ತಿರುವ ದಿನಗಳು. ಅದೆಷ್ಟೋ ಕುಟುಂಬಗಳಲ್ಲಿ ಹೊಟ್ಟೆಯ ಹಿಟ್ಟಿಗಾಗಿ...

ಸುಳ್ಯದಲ್ಲಿಂದು ಅತೀ ಹೆಚ್ಚು ಪಾಸಿಟಿವ್

ಸುಳ್ಯದಲ್ಲಿಂದು ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು 102 ಕೊರೊನಾ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ 535 ಸಕ್ರೀಯ ಪ್ರಕರಣಗಳಿವೆ.ಸುಳ್ಯದಲ್ಲಿ 2, ಏನಕಲ್ಲಿನಲ್ಲಿ 5, ಬಳ್ಪದಲ್ಲಿ 14, ಕೊಲ್ಲಮೊಗ್ರದಲ್ಲಿ 16, ಅಮರಮುಡ್ನೂರಿನಲ್ಲಿ 5, ಐವರ್ನಾಡಿನಲ್ಲಿ 19, ಕೂತ್ಕುಂಜದಲ್ಲಿ 4, ಕಲ್ಮಕಾರಿನಲ್ಲಿ 6, ನಾಲ್ಕೂರಿನಲ್ಲಿ 2, ಎಣ್ಮೂರುನಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 2,...

ನಡುಗಲ್ಲು :- ಸೇವಾ ಭಾರತಿ ವತಿಯಿಂದ ಮನೆಗೊಂದು ಗಿಡ ಕಾರ್ಯಕ್ರಮ

ಸೇವಾ ಭಾರತಿ ಸುಳ್ಯ ಇದರ ಆಶ್ರಯದಲ್ಲಿ ಲಾಕ್ ಡೌನ್ ನಡುವೆ ಸುಳ್ಯ ತಾಲೂಕಿನಲ್ಲಿ ಏಕಕಾಲದಲ್ಲಿ 2,000 ಗಿಡ ನೆಡುವ ಭೂಮಿ ಸುಪೋಷಣ್ ಎಂಬ ಕಾರ್ಯಕ್ರಮದ ಪ್ರಯುಕ್ತ ಮೇ.30 ರಂದು ನಡುಗಲ್ಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಅಂಜೇರಿ ಹಾಗೂ ಸ್ಥಳೀಯರಾದ...

ಲಸಿಕೆ ಇಲ್ಲದೆ ಪರೀಕ್ಷೆ ಬೇಡ – ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು – ಎನ್ ಎಸ್ ಯು ಐ ಆಗ್ರಹ

ಲಸಿಕೆ ಇಲ್ಲದೆ ಪರೀಕ್ಷೆ ಬೇಡ, ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು ಹಾಗೂ ಕೋರೋನ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.ಕೋರೋನ ಮೂರನೇ ಅಲೆಯ ಮುನ್ಸೂಚನೆ ಇದ್ದು ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಲ್ಲಿ...

ಗುತ್ತಿಗಾರು – ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಿದ ಕೆಪಿಸಿಸಿ ಸದಸ್ಯ ಡಾ.ರಘು

ಕೆಪಿಸಿಸಿ ಸದಸ್ಯ ಡಾ.ರಘು ಅವರಿಂದ ಗುತ್ತಿಗಾರು ಗ್ರಾಮದ ಆಚಳ್ಳಿ ಕಾಲನಿಗಳ ಹಾಗೂ ಇತರ ಮನೆ ಮನೆಯ ಹಿರಿಯ ನಾಗರಿಕರ ಬೇಟಿ ನೀಡಿ ಉಚಿತವಾಗಿ ಆರೋಗ್ಯ ತಪಾಸಣೆ ನೀಡಿ ಅಗತ್ಯ ಇದ್ದವರಿಗೆ ಔಷದ ವಿತರಿಸಿದರು. ಈ ಸಂದರ್ಭದಲ್ಲಿ ಪರಮೇಶ್ವರ ಕೆಂಬಾರೆ , ಸುರೇಶ್ ಉಜಿರಡ್ಕ , ಸಿರಿಯಾಕ್ ಮ್ಯಾಥ್ಯೂ ಆಚಳ್ಳಿ, ಪರಮೇಶ್ವರ ಚನಿಲ ,ಸುರೇಶ್ ಚತ್ರಪ್ಪಾಡಿ, ಮೋಹನ...

ಮಂಡೆಕೋಲು : ರಸ್ತೆಗೆ ಬಿದ್ದ ಮರ ತೆರವುಗೊಳಿಸಿದ ವಿಖಾಯ ಸದಸ್ಯರು

ಅಜ್ಜಾವರ ಮಂಡೆಕೋಲು ರಸ್ತೆಯ ಗುರುವಮೊಟ್ಟೆ ಎಂಬಲ್ಲಿ ಇಂದು ರಸ್ತೆಗೆ ಅಡ್ಡವಾಗಿ ಮರಬಿದ್ದು ಸಂಚಾರ ಸ್ಥಗಿತವಾಗಿತ್ತು. ಅಜ್ಜಾವರ ವಿಖಾಯ ಕಾರ್ಯಕರ್ತರು ಮರ ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಸುಳ್ಯ ವಲಯ ವಿಖಾಯ ಚೇರ್ಮೆನ್ ಷರೀಫ್ ಅಜ್ಜಾವರ, ಮುಸ್ತಫಾ ಅಜ್ಜಾವರ ಖತ್ತಾರ್ ಇಬ್ರಾಹಿಂ ಹಾಜಿ ಮಂಡೆಕೋಲು ಪಾಲ್ಗೊಂಡಿದ್ದರು.

ಕೊಲ್ಲಮೊಗ್ರ: ವಿಪತ್ತು ನಿರ್ವಹಣಾ ಘಟಕದಿಂದ ಕೊರೊನಾ ಬಾಧಿತರ ಮನೆ ಭೇಟಿ

ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನಿರಂತರ ಕೊರೋನಾ ಬಾಧಿತರ ಬೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದೇ ರೀತಿ ಮೇ.27 ಮತ್ತು 28 ರಂದು ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೊಲ್ಲಮೊಗ್ರ ಗ್ರಾಮದ 5 ಮನೆಗಳಿಗೆ...

ಕೃಷಿಕರಿಗೆ 50 ಸಾವಿರದವರೆಗೆ ಬಡ್ಡಿ ರಹಿತ ಸಾಲ ನೀಡಲು ಗುತ್ತಿಗಾರು ಸಹಕಾರಿ ಸಂಘ ತೀರ್ಮಾನ

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಕೊರೊನಾ ಸಂಕಷ್ಟ ದಲ್ಲಿರುವ ಕೃಷಿಕರಿಗೆ 50 ಸಾವಿರದ ವರೆಗೆ ಬಡ್ಡಿರಹಿತ ಸಾಲ ನೀಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ ಕೊರೋನಾ ಲಾಕ್ ಡೌನ್ ಇದ್ದೂ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರ, ಗೊಬ್ಬರ ಹಾಕುವ ಸಮಯವಾಗಿರುವ ಕಾರಣ ಕೃಷಿಕರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಇತ್ತೀಚೆಗೆ ನಡೆದ ಸೊಸೈಟಿಯ ಆಡಳಿತ ಮಂಡಳಿಯ...
Loading posts...

All posts loaded

No more posts

error: Content is protected !!