ಅರಂತೋಡು : ಪಿಂಡಿಮನೆ ಸಮೀಪ ತಡೆಗೋಡೆ ಕಾಮಗಾರಿಗೆ ಗುದ್ದಲಿ ಪೂಜೆ

ಆರಂತೋಡು ಗ್ರಾಮದ ಪಿಂಡಿಮನೆ ಕುಟುಂಬದ ದೈವಸ್ಥಾನದ ಬಳಿ ಜಿಲ್ಲಾ ಪಂಚಾಯತ್ ನ 2.5ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಬಿ. ಜೆ. ಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಅ.5 ರಂದು ಗುದ್ದಲಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆರಂತೋಡು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಉಪಾಧ್ಯಕ್ಷೆ ಕು. ಶ್ವೇತಾ...

ಚಿನ್ನಮ್ಮ ಅಂಬೆಕಲ್ಲು ನಿಧನ

ನಾಲ್ಕೂರು ಗ್ರಾಮದ ದಿ.ಮೇದಪ್ಪ ಅಂಬೆಕಲ್ಲು ಅವರ ಪತ್ನಿ ಚಿನ್ನಮ್ಮ ಅಂಬೆಕಲ್ಲು ಅವರು ಅ.04 ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಹರ್ಷನಾಥ ಅಂಬೆಕಲ್ಲು, ಗಂಗಾಧರ ಅಂಬೆಕಲ್ಲು, ಮೂವರು ಪುತ್ರಿಯರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. (ವರದಿ :- ಉಲ್ಲಾಸ್ ಕಜ್ಜೋಡಿ)
Ad Widget

ನಿಂತಿಕಲ್ಲು : ಮಯೂರ ಗೋಲ್ಡ್ ಫ್ಯಾಲೇಸ್ ಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್

ಇಂದು ಸುಳ್ಯಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ . ಶಿವಕುಮಾರ್ ಅವರು ಬಳಿಕ ಕುಕ್ಕೆ ಸುಬ್ರಹ್ಮಣ್ಯ ಹೋಗಿ ನಂತರ ನಿಂತಿಕಲ್ಲಿನ ಎಂ.ಮಾಧವ ಗೌಡ ಕಾಮಧೇನು ಅವರ ಧರ್ಮಶ್ರೀ ಆರ್ಕೇಡ್ ನಲ್ಲಿರುವ ಮಯೂರ ಗೋಲ್ಡ್ ಫ್ಯಾಲೇಸ್ ಗೆ ಭೇಟಿ ನೀಡಿದರು. ಉದ್ಯಮಿ ಹಾಗೂ ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ , ಮಯೂರ ಗೋಲ್ಡ್ ಮಾಲಕ ದೀಕ್ಷಿತ್...

ಮಡಪ್ಪಾಡಿ : ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿದ್ದ ಬಳ್ಳಿ ಸಿಲುಕಿ ಮೃತ್ಯು

ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿ ಇದ್ದ ಬಳ್ಳಿಯೊಂದು ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೇವಳದಲ್ಲಿ ನಡೆದಿದೆ. ಕೇವಳ ಹೂವಪ್ಪ ಗೌಡರವರು ಮಧ್ಯಾಹ್ನ ವೇಳೆ ತನ್ನ ಮನೆಯ ಎದುರಿನ ಸಣ್ಣ ಗಾತ್ರದ ಮರದ ಗೆಲ್ಲು ಕಡಿಯಲು ಹತ್ತಿದ್ದರು. ಗೆಲ್ಲು ಬೀಳುವ ಸಂದರ್ಭದಲ್ಲಿ ಮರದಲ್ಲಿದ್ದ ಹಬ್ಬಿದ್ದ ಬಳ್ಳಿಗೆ ಅವರು ಆಕಸ್ಮಿಕವಾಗಿ ಸಿಲುಕಿದರೆನ್ನಲಾಗಿದೆ....

ಕೇನ್ಯ: “ಸ್ವಚ್ಚತಾ ಹೀ ಸೇವಾ” ಕಾರ್ಯಕ್ರಮ

ಹಿಂದೂ ಜಾಗರಣ ವೇದಿಕೆ ಕಣ್ಕಲ್ ಕೇನ್ಯ ಇದರ ವತಿಯಿಂದ ಅ.3ರಂದು ಸ್ವಚ್ಚತಾ ಶ್ರಮದಾನ ನಡೆಸಲಾಯಿತು. ನೇಲ್ಯಡ್ಕದಿಂದ ಐನಡ್ಕ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಇರುವ ಪೊದೆಗಳನ್ನು ಕಳೆ ಕೊಚ್ಚುವ ಯಂತ್ರದಲ್ಲಿ ಸ್ವಚ್ಚಗೊಳಿಸಲಾಯಿತು. ಈ ಶ್ರಮದಾನದಲ್ಲಿ ಜಾಗರಣ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ಅಡ್ತಲೆ : ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜನ್ಮದಿನಾಚರಣೆ

ಅಡ್ತಲೆ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಯಂತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಸ್ಪಂದನ ಗೆಳೆಯರ ಬಳಗ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆಯಿತು. ನಿವೃತ್ತ ಯೋಧ ಕಮಲಾಕ್ಷ ಪಿಂಡಿಮನೆಯವರು ಗಾಂಧಿ ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ. ಸಿ. ಅಧ್ಯಕ್ಷ ಗೋಪಾಲಕೃಷ್ಣ ಪಿಂಡಿಮನೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಜಯಾ ಲೋಹಿತ್...

ದೇವಚಳ್ಳ : ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ರಮಾನಂದ ಎಲಿಮಲೆ

ದೇವಚಳ್ಳ (ಎಲಿಮಲೆ) ಸ.ಹಿ.ಪ್ರಾ. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ರಮಾನಂದ ಎಲಿಮಲೆ, ಉಪಾಧ್ಯಕ್ಷರಾಗಿ ಸವಿತಾ ಸಿ. ಆಯ್ಕೆಯಾದರು. ಸದಸ್ಯರಾಗಿ ಲಲಿತಾ ಎನ್., ಸುನೀತಾ ಎಂ.ಆರ್., ಆಯಿಷಾ, ದಿವ್ಯಾ ಬಿ.ಎಲ್., ಸುನಂದ, ಕೋಮಲಾಂಗಿ, ವನಿತಾ ಪಿ., ಸೂಫಿ ಜೆ.ಎಂ., ಪುರುಷೋತ್ತಮ ಎಸ್.,ಓಂಪ್ರಸಾದ್ ಕೆ., ಜಯಪ್ರಕಾಶ್ ಕೆ., ಜಯಾನಂದ ಪಿ., ಜಯಂತ ಹರ್ಲಡ್ಕ, ಕುಸುಮಾಧರ ಎ.,...

ಐವರ್ನಾಡು : ಭಾರಿ ಮಳೆಗೆ ತಡೆಗೋಡೆ ಕುಸಿತ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ತಡೆಗೋಡೆ ಅ. 2 ರಂದು ಸುರಿದ ಭಾರಿ ಮಳೆಗೆ ಕುಸಿದಿದೆ.

ಸಂಪಾಜೆ : ನೇತಾಜಿ ಗೆಳೆಯರ ಬಳಗ ಚೆಡಾವು ಇವರ ವತಿಯಿಂದ ಗಾಂಧಿ ಜಯಂತಿ

ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ ಇವರ ವತಿಯಿಂದ ಗಾಂಧಿ ಜಯಂತಿ ಆಚರಣೆಯನ್ನು ಚೆಡಾವು ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಶ್ರೀ ಮಾಚಯ್ಯ, ಸಹಾಯಕ ಉಪ ನಿರೀಕ್ಷಕರು ಸಂಪಾಜೆ ಪೊಲೀಸ್ ಹೊರ ಠಾಣೆ, ಇವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.ಪ್ರಾಸ್ತಾವಿಕವಾಗಿ ಮಾತಾನಾಡಿದ ಶ್ರೀ ಪಿ.ಎಲ್ ಸುರೇಶ್ ,ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ, ಯುವಕ ಮಂಡಲದ...

ಕಲ್ಮಡ್ಕ : ಗಾಂಧಿ ಜಯಂತಿ ಆಚರಣೆ

ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ಅ.2 ರಂದು ಅಜಾದಿ ಕಾ ಅಮೃತ ಮಹೋತ್ಸವದ ಮತ್ತು ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತಿನ ಸ್ವಚ್ಛವಾಹಿನಿ ವಾಹನಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕುಮಾರ್ ಕೆ. ಎಸ್ ಇವರು ಚಾಲನೆಯನ್ನು ನೀಡಿದರು....
Loading posts...

All posts loaded

No more posts

error: Content is protected !!