- Thursday
- May 7th, 2026
ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಂದು ಆರಂಭಗೊಂಡಿದ್ದು, ಫೆ.15 ಮಂಗಳವಾರದಂದು ಬೆಳಗ್ಗೆ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ಬಲಿಯೊಂದಿಗೆ ಕೋಲಾಟ...
ಶ್ರೀಕೃಷ್ಣ ಭಜನಾ ಮಂದಿರ ಗುತ್ತಿಗಾರು ಇದರ ನೂತನ ಆಡಳಿತ ಮಂಡಳಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಬಿ ವಿ ರವಿಪ್ರಕಾಶ್ ಬಳ್ಳಡ್ಕ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪೂರ್ಣಚಂದ್ರ ಬಿ ಬೊಮ್ಮದೇರೆ ಉಪಾಧ್ಯಕ್ಷರಾಗಿ ಸತೀಶ ಮೂಕಮಲೆ, ಜತೆ ಕಾರ್ಯದರ್ಶಿಯಾಗಿ ಲೀಲಾಧರ ಅಡ್ಡನಪಾರೆ, ಕೋಶಾಧಿಕಾರಿಯಾಗಿ ಲೋಹಿತ್ ಚೆಮ್ನೂರು, ಗೌರವಾಧ್ಯಕ್ಷರಾಗಿ ಕಿಶೋರ್ ಕುಮಾರ್ ಪಿ ಆರ್ ಆಯ್ಕೆಯಾದರು.ನಿರ್ದೇಶಕರುಗಳಾಗಿ ಪ್ರೀತಮ್ ಮುಂಡೋಡಿ, ನಿತ್ಯಾನಂದ ಕಾಂತಿಲ, ನಾರಾಯಣ...
ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ವಾರ್ಷಿಕ ದಿನದ ಅಂಗವಾಗಿ ಶ್ರೀ ದೈವಗಳಿಗೆ ತಂಬಿಲ ಸೇವೆ ಫೆ.10 ರಂದು ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ರಾಧಾಕೃಷ್ಣ ಶ್ರೀ ಕಟೀಲ್, ಬಾಸ್ಕರ ಬಾಳೆತೋಟ, ಕೃಷ್ಣಪ್ಪ ಗೌಡ ಮಾವಿನಕಟ್ಟೆ, ನಿತ್ಯಾನಂದ ಪಾರೆಪ್ಪಾಡಿ, ರಾಮಚಂದ್ರ ನಾಗನಗದ್ದೆ, ಜಗತ್ ಪಾರೆಪ್ಪಾಡಿ, ಪರಿಚಾರಕರಾದ ತೀರ್ಥರಾಮ ಹಲಸಿನಡ್ಕ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಯುವ ಸ್ಪೂರ್ತಿ ಸೇವಾ ಸಂಘ ಕಲ್ಮಡ್ಕ ಇದರ ವತಿಯಿಂದ ಎರಡನೇ ತರಗತಿಯಿಂದ ಹತ್ತನೇ ತರಗತಿವರೆಗೆ ಬಣ್ಣದ ಹೆಜ್ಜೆ ಮೌಲ್ಯಧಾರಿತ ಕರಕುಶಲ ತಯಾರಿ ತರಬೇತಿ ಶಿಬಿರವು ಫೆಬ್ರವರಿ 13ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕದಲ್ಲಿ ನಡೆಯಿತು . ಮಹಾಬಲ ಕೆರೆಕೋಡಿ ರಂಗಕರ್ಮಿ ರಂಗ ಸುರಭಿ ಕಲ್ಮಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಯುವ ಸ್ಪೂರ್ತಿ ಸೇವಾ ಸಂಘ...
ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಫೆ. 20 ರಿಂದ 22 ರ ವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ಜರಗಲಿದೆ. ಫೆ.20 ರಂದು ಬೆಳಿಗ್ಗೆ 9:00 ಗಂಟೆಯಿಂದ ಹಸಿರು ಕಾಣಿಕೆ ಪ್ರಾರಂಭ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ...
ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ- ಆಲೆಟ್ಟಿ ಹಾಗೂ ಕಲಾಭಿಮಾನಿಗಳ ಸಹಕಾರದಿಂದ ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದಂದು 10ನೇ ವರುಷದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಳ್ಳಾರೆ ಸಮೀಪದ ಪಂಜಿಗಾರು ತಿರುವಿನಲ್ಲಿ ರಬ್ಬರ್ ಸಾಗಾಟದ ಲಾರಿ ಭೀಕರ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ಚಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ವೆಲ್ಲೂರು ನಿವಾಸಿ ಮುರುಗೇಶನ್.ಡಿ ಎಂದು ಗುರುತಿಸಿದ್ದು, ಮೃತ ವ್ಯಕ್ತಿಗೆ ಸುಮಾರು 40 ವರ್ಷ ವಯಸ್ಸಾಗಿತ್ತು ಎಂದು ಅಮರಸುದ್ದಿಗೆ...
ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಾರ್ಕಳದ ಉದಯವಾಣಿ ವರದಿಗಾರ ಬಾಲಕೃಷ್ಣ ಭೀಮಗುಳಿಯವರಿಗೆ ಸುಬ್ರಹ್ಮಣ್ಯದಲ್ಲಿ ಫೆ.15 ರಂದು ಸನ್ಮಾನ ಕಾರ್ಯಕ್ರಮ ನಡೆಯಿತು.ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲಾ ವಿಭಾಗ ಇದರ ವತಿಯಿಂದ ವಲ್ಲೀಶ ಸಭಾಭವನದಲ್ಲಿ ನಿವೃತ್ತ ಪ್ರಾಂಶುಪಾಲರು, ಸಿಬಂದಿಗಳಿಗೆ ವಿದಾಯ, ಸನ್ಮಾನ ಕಾರ್ಯಕ್ರಮ, ದತ್ತಿನಿಧಿ ವಿತರಣೆ ಕಾರ್ಯಕ್ರಮದಲ್ಲಿ...
ಬೆಳ್ಳಾರೆ ಸಮೀಪದ ಪಂಜಿಗಾರು ಎಂಬಲ್ಲಿ ರಬ್ಬರ್ ಸಾಗಾಟದ ಲಾರಿ ಭೀಕರ ಅಪಘಾತವಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರ್ ಎಂಬಲ್ಲಿ ಫೆ.15ರಂದು ನಡೆದಿದೆ. ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿ ಪಂಜಿಗಾರು ಎಂಬಲ್ಲಿ ಪಲ್ಟಿಯಾಗಿದೆ.ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ರಬ್ಬರ್ ಎಲ್ಲಾ ಕಡೆ...
ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕುಲ್ಕುಂದದಲ್ಲಿ ಇದೇ ಬರುವ ದಿನಾಂಕ 02-03-2022ರ ಬುಧವಾರದಂದು ಕೊರತಿ ದೈವದ 7ನೇ ವರ್ಷದ ನೇಮೋತ್ಸವ ಹಾಗೂ 03-03-2022ನೇ ಗುರುವಾರದಿಂದ 04-03-2022ನೇ ಶುಕ್ರವಾರದವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ 53ನೇ ವರ್ಷದ ಒತ್ತೆಕೋಲ ನಡೆಯಲಿದ್ದು, ಮೊದಲನೇ ದಿನವಾದ 02-03-2022ನೇ ಬುಧವಾರದಂದು ರಾತ್ರಿ 7:30 ರಿಂದ ಶ್ರೀ ಕೊರತಿ ದೈವದ ನಡಾವಳಿ ಹಾಗೂ ರಾತ್ರಿ 9:30...
Loading posts...
All posts loaded
No more posts
