- Thursday
- May 15th, 2025

ಸುಳ್ಯ ತಾಲೂಕಿನಲ್ಲಿ 9-11ಗೆ ಸಂಬಂಧಪಟ್ಟ ಸುಮಾರು 160ಕ್ಕಿಂತಲೂ ಹೆಚ್ಚಿನ ಅರ್ಜಿಗಳು ತಾಲೂಕು ಪಂಚಾಯತ್ನಲ್ಲಿ ವಿಲೇವಾರಿಯಾಗದೇ ಬಾಕಿ ಉಳಿದಿದೆ. ಮೂಡಾ ಅನುಮತಿಗಾಗಿ ಪುತ್ತೂರು, ಮಂಗಳೂರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ನೂರಾರು ಜನರ ನಿರೀಕ್ಷೆಗಳು ಕಮರಿಹೋಗಿವೆ. ಮತ್ತು ಗ್ರಾಮೀಣ ಜನರ ಜೀವನ ದುಸ್ತರವಾಗಿದೆ. ಆದುದರಿಂದ ಈಗ ಸುಳ್ಯದಲ್ಲಿ ಸುಳ್ಯ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ರಚನೆಯಾಗಿರುವ...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇದರ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಗೆ ಚೆರ್ ಮೆನ್ ಆಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಭಗವಾನ್ ಬಿ ಸಿ...

ನಗರ ಪಂಚಾಯತ್ ಸದಸ್ಯರಾಗಿರುವ ಶರೀಫ್ ಕಂಠಿ ಯವರು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾರೆಂದು ಮಹಿಳೆಯೊಬ್ಬರು ಸುಳ್ಯ ಠಾಣೆಗೆ ದೂರು ನೀಡಿದ್ದು ಶರೀಫ್ ಕಂಠಿ ವಿರುದ್ಧ ದೂರು ದಾಖಲಾದ ಘಟನೆ ಮಾ.26 ರಂದು ವರದಿಯಾಗಿದೆ. ಮಾ. 25 ರಂದು ನಾನು ನನ್ನ ಬಾಡಿಗೆ ಮನೆಯಲ್ಲಿ ಇರುವಾಗ ಶರೀಫ್ ಕಂಠಿ ಎಂಬವರು ಕಾರನ್ನು ನನ್ನ ಮನೆಯ ಗೇಟಿಗೆ...

ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿ ಯ ಜ್ಞಾನದೀಪ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಒಟ್ಟು 18 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಅಮರಪಡ್ನೂರು ಗ್ರಾಮದ ಮಂಗಲ್ಪಾಡಿ ಮನೋಹರ ಎಂ ಮತ್ತು ಲಲಿತಾ...

ಸುಳ್ಯದ ವಿದ್ಯುತ್ ಸಮಸ್ಯೆ ನಿವಾರಣೆಗೆ ತುರ್ತಾಗಿ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣವಾಗಿಬೇಕಿದ್ದು, ಇದೀಗ ಲೈನ್ ನಿರ್ಮಾಣಕ್ಕೆ ರೈತರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು ರೈತರಿಗೆ ನೊಟೀಸ್ ನೀಡದೇ ಕೃಷಿ ಜಾಗಗಳಿಗೆ ಅಧಿಕಾರಿಗಳು ಬಂದು ದಬ್ಬಾಳಿಕೆ ಹಾಗೂ ಬೆದರಿಕೆ...

ಉಬರಡ್ಕದಲ್ಲಿ ಮಾವಿನ ಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದ ಪರಿಣಾಮ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಜನಾರ್ದನ ಪೂಜಾರಿಯವರು ಮಾ.22ರಂದು ಕೆಲಸಕ್ಕೆ ಹೋಗಿದ್ದರು. ಅಲ್ಲಿ ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ...
ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸುವುದಾಗಿ ಚಿಂತನೆ ನಡೆಸಲಾಗಿದೆ. ಸಾಮೂಹಿಕ ವಿವಾಹವಾಗಲು ಬಯಸುವವರು ಏಪ್ರಿಲ್ ತಿಂಗಳ 5ನೇ ತಾರೀಖಿನೊಳಗೆ ಹೆಸರನ್ನು ನೋಂದಾಯಿಸಬೇಕಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ತೀರ್ಥಕುಮಾರ್ ಕುಂಚಡ್ಕ ತಿಳಿಸಿದ್ದಾರೆ. ವಿವಾಹದ ದಿನಾಂಕವನ್ನುನಿಗದಿಪಡಿಸಿ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗೆ 72598944079483288240, 9449471373 ಇವರನ್ನು ಸಂಪರ್ಕಿಸಬಹುದು.

ಆರಂತೋಡಿನ ಮನೆಯೊಂದರ ಕೆಲಸಕ್ಕೆ ಬಂದು ನಾಯಿ ಕಡಿತದಿಂದ ನಾಲ್ಕೈದು ದಿನಗಳ ಹಿಂದೆ ಸಂಪಾಜೆಯ ಗೂನಡ್ಕದಲ್ಲಿ ಮಹಿಳೆಯೊಬ್ಬರು ಮೃತರಾದ ಹಿನ್ನಲೆಯಲ್ಲಿ ಆರಂತೋಡು ಗ್ರಾಮ ಪಂಚಾಯತ್ ಆಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿ ಸುಳ್ಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ನಿತಿನ್ ಪ್ರಭು ಅವರ ಸಹಕಾರದಿಂದ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ಮಾಡಲಾಯಿತು. ಆರಂತೋಡು ಮತ್ತು ತೊಡಕಾನ...

ಉಡುಪಿಯ ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಶಾಸ್ತನ ಮೇಳದವರಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಮಾ.24 ರಂದು ದಿ. ದೇವಕಿ ದೇರಪ್ಪಜ್ಜನಮನೆ ಸ್ಮರಣಾರ್ಥ "ಸತ್ಯದ ಸ್ವಾಮಿ ಕೊರಗಜ್ಜ" ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಆರಂಭದಲ್ಲಿ ನಡೆದ ಚೌಕಿ ಪೂಜೆ ನಡೆಯಿತು. ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ವ್ಯವಸ್ಥಾಪನಾ...

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಕೂಜುಗೋಡು ಕುಟುಂಬದ ಸದಸ್ಯರೊಬ್ಬರಿಗೆ ಪ್ರಾತಿನಿಧ್ಯ ನೀಡಬೇಕೆಂದು ಕೂಜುಗೋಡು ಕುಟುಂಬಸ್ಥರು ಮುಜರಾಯಿ ಸಚಿವರಿಗೆ ಮನವಿ ಸಲ್ಲಿಕೆ ಮಾಡಿದರು.ಈ ಸಂದರ್ಭದಲ್ಲಿ ಶಿವಕುಮಾರ್ ಕೂಜುಗೋಡು, ನರೇಂದ್ರ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು, ಸೋಮಸುಂದರ ಕೂಜುಗೋಡು, ಶರತ್ ಕೂಜುಗೋಡು, ಅಶೋಕ್ ಕೂಜುಗೋಡು, ಅಜಿತ್ ಕೂಜುಗೋಡು ಉಪಸ್ಥಿತರಿದ್ದರು.

All posts loaded
No more posts