ಸ್ವರ್ಣಶ್ರೀ ಸೊಸೈಟಿ ಸುಳ್ಯ 2026 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇಲ್ಲಿ ನ.29 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ  2026 ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ,  ಅಧ್ಯಕ್ಷರಾದ ಜನಾರ್ದನ ದೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ...

ಮಾಜಿ ತಾ.ಪಂ. ಸದಸ್ಯೆ ವಿಮಲ ರಂಗಯ್ಯ ಅವರ ಮೊಬೈಲ್ ನಂಬರ್ ಹ್ಯಾಕ್ – ಹಣ ಹಾಕಿ ಎಂದು ಸಂದೇಶ ಬಂದರೇ ಹಾಕಬೇಡಿ

ಸುಬ್ರಹ್ಮಣ್ಯ : ತಾಲೂಕು ಪಂಚಾಯತ್ ಮಾಜಿ ಸದಸ್ಯೆ, ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ ಅವರ ಮೊಬೈಲ್ ನಂಬರ್ ಹಾಗೂ ವಾಟ್ಸಾಪನ್ನು ಹ್ಯಾಕರ್ ಗಳು ದುರ್ಬಳಕೆ ಮಾಡುತ್ತಿದ್ದು ತುರ್ತಾಗಿ ಹಣ ಹಾಕಿ ಎಂಬ ಸಂದೇಶ ಎಲ್ಲರಿಗೆ ಹೋಗುತ್ತಿದೆ. ಇದು ಹ್ಯಾಕರ್ ಗಳ ಕೆಲಸವಾಗಿದ್ದು ಹಣ ಯಾರು ಹಾಕಬೇಡಿ ಎಂದು ರಂಗಯ್ಯ ಶೆಟ್ಟಿಗಾರ್ ತಿಳಿಸಿದ್ದಾರೆ.
Ad Widget

ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡರು ಹಾಗೂ ಸಮಾಜಸೇವಕರಾದ ಕಿರಣ್ ಚಂದ್ರ ಪುಷ್ಪಗಿರಿಯವರು ಇಂದು ಭೇಟಿ ನೀಡಿ ನಿರ್ಮಾಣ ಕಾರ್ಯಗಳ ವೀಕ್ಷಣೆ ನಡೆಸಿದರು.ಮಂದಿರದ ಆಡಳಿತ ಸಮಿತಿಯ ಸದಸ್ಯರೊಂದಿಗೆ ನೂತನ ಮಂದಿರ ನಿರ್ಮಾಣ ಮತ್ತು ಮುಂದಿನ ಅಭಿವೃದ್ಧಿ ಕುರಿತಾಗಿ ಸಮಾಲೋಚನೆ ನಡೆಸಿದ ಅವರು, ಮಂದಿರದ ನಿರ್ಮಾಣ ಕೆಲಸ ಪೂರ್ಣಗೊಳ್ಳಲು ತಾವು ಎಲ್ಲಾ...

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಡಿ.16 ರಂದು “ಕೃಷಿ ಅಧ್ಯಯನ ಪ್ರವಾಸ”

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಡಿ.16 ರಂದು “ಕೃಷಿ ಅಧ್ಯಯನ” ಪ್ರವಾಸ ಹೋಗಲಿದ್ದು, ಬೆಳಿಗ್ಗೆ 7:30ಕ್ಕೆ ಮಡಪ್ಪಾಡಿಯಿಂದ ಹೊರಟು ಮೊದಲು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಪ್ರಗತಿಪರ ಕಾಳುಮೆಣಸು ಕೃಷಿಕರಾದ ಸುರೇಶ್ ಬಲ್ನಾಡು ರವರ ತೋಟವನ್ನು ಭೇಟಿ ಮಾಡಲಿದ್ದು, ಮದ್ಯಾಹ್ನ 1:00 ರಿಂದ 1:30ರ ಭೋಜನ ಅವಧಿ ಮುಗಿದ...

ನಾಳೆ(ನ.29) ಬೆಳ್ಳಾರೆಯಲ್ಲಿ ವಿದ್ಯುತ್ ವ್ಯತ್ಯಯ

33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ನ.29 ರಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆವಿ ಬೆಳ್ಳಾರೆ-1, ಬೆಳ್ಳಾರೆ -2 ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 6:00 ರ ತನಕ ವಿದ್ಯುತ್‌ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು...

ಚೊಕ್ಕಾಡಿ : ಮಯೂರಿ ಯುವತಿ ಮಂಡಲದ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಆಂದೋಲನ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು  ಅಜ್ಜನಗದ್ದೆ ಶಾಲೆಯ ವಠಾರದಲ್ಲಿ ಕಾಡು ಕಡಿದು ತೆರೆಯುವ ಮೂಲಕ ಹಾಗೂ  ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ನಡೆಸಲಾಯಿತು.ಯುವತಿ ಮಂಡಲದ ಅಧ್ಯಕ್ಷರು ಹೇಮಾವತಿ ತಂಟೆಪ್ಪಾಡಿ,...

ಐವರ್ನಾಡು : “ಗ್ರಾಮ ಪಂಚಾಯತ್ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025” ಸಮಾರೋಪ ಸಮಾರಂಭ ; “ಅಂಕಗಳು ಯಾವತ್ತೂ ಶಾಶ್ವತವಲ್ಲ, ಭವಿಷ್ಯಕ್ಕಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು” : ಅಭಿಲಾಷಾ ಮೋಟ್ನೂರು

ಐವರ್ನಾಡು ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಐವರ್ನಾಡು ಇವುಗಳ ಸಂಯುಕ್ತಾಶ್ರಯದಲ್ಲಿ ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025” ಕಾರ್ಯಕ್ರಮವು ನ.22 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಾವತಿ ಅವರು ಮಾತನಾಡುತ್ತಾ “ಮಕ್ಕಳು...

ಬೆಳ್ಳಾರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025 ಸಮಾರೋಪ ಸಮಾರಂಭ ;   “ಗ್ರಂಥಾಲಯಗಳು ಜ್ಞಾನ ಕೇಂದ್ರಗಳಾಗಲಿ” : ಬಿ.ವಿ ಸೂರ್ಯನಾರಾಯಣ

“ಓದಿನಿಂದ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ. ಪ್ರತಿಯೊಂದು ಗ್ರಂಥಾಲಯಗಳು ಜ್ಞಾನ ಪಸರಿಸುವ ಕೇಂದ್ರಗಳಾಗಲಿ” ಎಂದು ವಿಶ್ರಾಂತ ಪ್ರಾಂಶುಪಾಲರಾದ ಬಿ.ವಿ ಸೂರ್ಯನಾರಾಯಣ ಹೇಳಿದರು. ಅವರು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ  ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ...

ಬೆಳ್ಳಾರೆ : ದಕ್ಷ ಜ್ಯೂಸ್ ಸೆಂಟರ್ ಮತ್ತು ಜನರಲ್ ಸ್ಟೋರ್ ಶುಭಾರಂಭ

ಬೆಳ್ಳಾರೆ ಕೆಳಗಿನ ಪೇಟೆಯಲ್ಲಿ ಸುನಿಲ್ ಕುಮಾರ್ ಆಲಂಕಾರು ಮಾಲಕತ್ವದ ದಕ್ಷ ಜ್ಯೂಸ್ ಸೆಂಟರ್ ಮತ್ತು ಜನರಲ್ ಸ್ಟೋರ್ ನ.27 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ತರದ ಲೈವ್ ಜ್ಯೂಸ್ ಐಟಂಗಳು ಮತ್ತು ದಿನಬಳಕೆಯ ವಸ್ತುಗಳು ದೊರೆಯುತ್ತವೆ ಎಂದು ಮ್ಹಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

ಡಿ.01 ರಂದು ನಾವೂರಿನಲ್ಲಿ ಭಟ್ಸ್ ಕ್ಯಾಂಟೀನ್ ಶುಭಾರಂಭ

ಸುಳ್ಯ ಗಾಂಧಿನಗರದ ನಾವೂರು ರಸ್ತೆಯ ಬಯಂಬು ಕಾಂಪ್ಲೆಕ್ಸ್ ನಲ್ಲಿ  ಭಟ್ಸ್ ಕ್ಯಾಟರರ್ಸ್‌ ರವರ  ಭಟ್ಸ್ ಕ್ಯಾಂಟೀನ್(ಸಸ್ಯಾಹಾರಿ) ಡಿ.01 ರಂದು ಶುಭಾರಂಭಗೊಳ್ಳಲಿದೆ ಎಂದು  ಕೆ.ಹರೀಶ್ ಭಟ್ (ನಿವೃತ್ತ ಮೈನಿಂಗ್ ಇಂಜಿನಿಯರ್)  ತಿಳಿಸಿದ್ದಾರೆ. ಶುದ್ಧ ಸಸ್ಯಹಾರಿ ಕ್ಯಾಟರಿಂಗ್ ವ್ಯವಸ್ಥೆಗಾಗಿ  9544414805, 7034610444 ಸಂಪರ್ಕಿಸಬಹುದು.
Loading posts...

All posts loaded

No more posts

error: Content is protected !!