ಐವರ್ನಾಡು : ಯುವಕ ಆತ್ಮಹತ್ಯೆ

ಐವರ್ನಾಡಿನಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಕರುಣಾಕರ ಕಟ್ಟತ್ತಾರು ( 32) ಎಂಬವರು ಮನೆಯ ಸಮೀಪದ ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಎರಡು ವರ್ಷಗಳ ಹಿಂದೆ ಅವರಿಗೆ ಮದುಗೆಯಾಗಿದ್ದು ಬಳಿಕ ವಿಚ್ಛೇದನವಾಗಿತ್ತು.ಮೃತರು ತಂದೆ ಹುಕ್ರಪ್ಪ,ತಾಯಿ ಪೊನ್ನಕ್ಕ, ಸಹೋದರಿ ಶ್ರೀಮತಿ ಪವಿತ್ರ ರನ್ನು ಅಗಲಿದ್ದಾರೆ

ಇಂದು(ಜ.10) ಜಾತ್ರೋತ್ಸವದ ಪ್ರಯುಕ್ತ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಗಾಯಕ ವಿಜಯಕುಮಾ‌ರ್ ಮತ್ತು ಬಳಗದಿಂದ ಸಂಗೀತ ರಸಮಂಜರಿ

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೆಯ ಪ್ರಯುಕ್ತ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಗಾಯಕ ವಿಜಯಕುಮಾ‌ರ್ ಸುಳ್ಯ ಮತ್ತು ಬಳಗದವರಿಂದ “ವಿಜಯ್ ಮ್ಯೂಸಿಕಲ್ ನೈಟ್ - 2026” ಅದ್ದೂರಿ ಸಂಗೀತ ರಸಮಂಜರಿ ಕರೋಕೆ ಕಾರ್ಯಕ್ರಮ ಜ.10 ರಂದು ಸಂಜೆ 5 ಗಂಟೆಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ವಠಾರದಲ್ಲಿ ಆರಂಭವಾಗಲಿದೆ.ಕೇರಳ ಮತ್ತು ಕರ್ನಾಟಕದ ಪ್ರಸಿದ್ಧ ಗಾಯಕ ಗಾಯಕಿಯರಿಂದ...
Ad Widget

ಅಡಿಕೆ ಕೃಷಿಕರು ಸಂಕಷ್ಟದಲ್ಲಿದ್ದು ಸರಕಾರ ಬೆಳೆ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡುವಂತೆ ಬೆಳೆಗಾರರ ಸಂಘ ಒತ್ತಾಯ – ಎಲೆಚುಕ್ಕಿ ಬಾಧಿತ ರೈತರ ಸಮೀಕ್ಷೆ ನಡೆಸಲು ತೀರ್ಮಾನ

ಸುಳ್ಯ ತಾಲೂಕು ಕೃಷಿ ಪ್ರಧಾನವಾಗಿದ್ದು ಶೇ80 ಕ್ಕೂ ಹೆಚ್ಚು ಜನ ಅಡಿಕೆ ಕೃಷಿಯನ್ನೇ ನಂಬಿದ್ದಾರೆ. ಆದರೇ ಇದೀಗ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಸುಳಿ ಕೊರೆಯುವ ಹುಳು ಸಮಸ್ಯೆ ಸೇರಿದಂತೆ ರೈತರು ಸಂಕಷ್ಟದಲ್ಲಿದ್ದು ಸರಕಾರ ಸರಕಾರ ರೈತರ ನೆರವಿಗೆ ಬರಬೇಕು. ರೈತರ ಸಂಪೂರ್ಣ ಬೆಳೆಸಾಲ, ದೀರ್ಘಾವಧಿ ಸಾಲದ ಬಡ್ಡಿ ಮನ್ನಾ ಮಾಡುವಂತೆ ಹಾಗೂ...

ಅಮರ ಸಂಘಟನಾ ಸಮಿತಿ ವತಿಯಿಂದ ಪೈಲಾರು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಳ್ಯ : ಜನವರಿ 10 ರಂದು ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ವತಿಯಿಂದ ಪೈಲಾರು ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಕಾಂತ್ ಮಿತ್ತೂರು ಅಧ್ಯಕ್ಷರು ಅಮರ ಸಂಘಟನಾ ಸಮಿತಿ ಸುಳ್ಯ ಇವರು ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೈಲಾರು ಒಕ್ಕೂಟ ಇದರ ಅಧ್ಯಕ್ಷರಾದ ದಯಾನಂದ ಗುಡ್ಡೆಮನೆ ಇವರು...

ಕಟ್ಟಡ, ನಿವೇಶನ ಮತ್ತು ಅಪಾರ್ಟ್‌ಮೆಂಟ್ ಗಳಿಗೆ “ಎ” ಖಾತಾ ಭಾಗ್ಯ – ಸೂಡ ಅಧ್ಯಕ್ಷ ಕೆ.ಎಂ ಮುಸ್ತಫ ಸ್ವಾಗತ

“ಕರ್ನಾಟಕ ಸರ್ಕಾರ ಹಲವಾರು ಜನ ಪರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸುತ್ತಿದ್ದು, ಈ ಪೈಕಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕಟ್ಟಡ, ಅನುಮೋದನೆ ಪಡೆಯದೆ ರಚಿಸಿದ ಬಡಾವಣೆ, ಅಪಾರ್ಟ್ಮೆಂಟ್, ಬಹು ಮಹಡಿ ಕಟ್ಟಡಗಳಲ್ಲಿ ಓನರ್ ಶಿಪ್ ನಲ್ಲಿ ಪಡಕೊಂಡಿರುವ ವಾಸ್ತವ್ಯ, ವಾಣಿಜ್ಯದ ಕೊಠಡಿಗಳಿಗೆ "ಎ" ಖಾತಾ ನೀಡುವ ಸರ್ಕಾರದ ನಿರ್ದಾರ ಸ್ವಾಗತಾರ್ಹ” ಎಂದು ಸುಳ್ಯ ನಗರ ಯೋಜನಾ...

ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ಕೊಲ್ಲಮೊಗ್ರು ಗ್ರಾ.ಪಂ ಉಪಾಧ್ಯಕ್ಷ ಮಾಧವ ಚಾಂತಾಳ ಖಂಡನೆ

“ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ವ್ಯಕ್ತಿಯನ್ನು ಶೀಘ್ರವಾಗಿ ಬಂಧಿಸಬೇಕು” ಎಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಧವ ಚಾಂತಾಳ ರವರು ಹೇಳಿದ್ದು, “ಉತ್ತಮ ನೇರ ನಡೆಯ ಪ್ರಾಮಾಣಿಕ ಶಾಸಕರಿಗೆ ಈ ರೀತಿಯ ಅವಹೇಳನ ಮಾಡಿದ ವ್ಯಕ್ತಿ ಯಾರೇ ಆಗಿದ್ದರೂ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ...

ಪೆರಾಜೆ ಚಿಗುರು ಯುವಕಮಂಡಲ ಪೆರಾಜೆ ಇದರ ಸಂಕ್ರಾಂತಿ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ

ಪೆರಾಜೆ : ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ(ರಿ.) ಇದರ ವತಿಯಿಂದ ಸಂಕ್ರಾಂತಿ ಸಂಭ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಹಾಗೂ ಗ್ರಾಮಸ್ಥರ ಕ್ರೀಡಾ ಸ್ಪರ್ಧೆಗಳು ಮತ್ತು ಗ್ರಾಮದ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜ.18 ಭಾನುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಜೆ ಕುಂಬಳಚೇರಿ ಇಲ್ಲಿ ಆಯೋಜಿಸಲಾಗಿದೆ. ಇದರ ಪ್ರಯುಕ್ತ ಕಾರ್ಯಕ್ರಮದ...

“ಇನ್ನೊಬ್ಬರಿಗೆ ಅವಮಾನ ಮಾಡುವ ಮನೋರೋಗಿಗಳು ಸಮಾಜದ ನಡುವೆ ಇರಲು ಯೋಗ್ಯರಲ್ಲ”  – ಎನ್.ಎ ರಾಮಚಂದ್ರ

“ಕಡುಬಡತನದ ನಡುವೆ ತನ್ನ ಕಠಿಣ ಪರಿಶ್ರಮದ ಮೂಲಕ ಓರ್ವ ಕಾರ್ಯಕರ್ತೆಯಾಗಿ ಪ್ರಾರಂಭಿಸಿ, ಗ್ರಾಮ ಪಂಚಾಯತ್ ,ಜಿಲ್ಲಾ ಪಂಚಾಯತ್ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ,  ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ನಮ್ಮ ನೆಚ್ಚಿನ ಶಾಸಕಿ ಕು. ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಾಲಗೆ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ...

ಶಾಸಕಿ ಭಾಗೀರಥಿ ಮುರುಳ್ಯರಿಗೆ ಜಾಲತಾಣದಲ್ಲಿ ಅವಹೇಳನ – ಸುಳ್ಯ ತಾಲೂಕು ಗ್ರಾ.ಪಂ ಸದಸ್ಯರ ಒಕ್ಕೂಟ ಖಂಡನೆ

“ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಅವಮಾನ ಮಾಡಿದ್ದನ್ನು ನಾವು ತೀವ್ರ ವಾಗಿ ಖಂಡಿಸುತ್ತೇವೆ. ಶಾಸಕರಾದ ಬಳಿಕ ಸುಳ್ಯ ತಾಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸಿ,  ರಾಜಕೀಯ, ಜಾತಿ ಭೇಧ ಇಲ್ಲದೆ ಸುಳ್ಯ ತಾಲೂಕಿಗೆ ಸರ್ಕಾರದಿಂದ ಹಲವಾರು ಅನುದಾನಗಳನ್ನು ತಂದು ಜನಮೆಚ್ಚುಗೆ ಪಡೆದಿದ್ದಾರೆ.  ಅಂತಹ ದಲಿತ ಶಾಸಕರ ಬಗ್ಗೆ ಅವಮಾನ ಮಾಡಿದಾತನ...

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕ ಕ್ರೀಡಾಕೂಟ ಅಪರಾಜಿತ-2026

ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಜನವರಿ 8ರಂದು ಎನ್‌ಎಂಸಿ ಕ್ರೀಡಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್‌ಇ(ರಿ.) ಸುಳ್ಯ ಅಧ್ಯಕ್ಷರು ಹಾಗೂ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ. ಚಿದಾನಂದ ವಹಿಸಿ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಾವತಿ ಕೆ.ಎಸ್....
Loading posts...

All posts loaded

No more posts

error: Content is protected !!