Ad Widget

ಕಾರಿಂಜ ದೇವಸ್ಥಾನ ದಲ್ಲಿ ಸಾಮಾಜಿಕ ಅಂತರ ಕಾಪಾಡಿದ ಆದಿ ಮಾನವ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜದ ಕಾರೀಂಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ ವಾನರ ಸೇನೆಯ ಸದಸ್ಯರು ಸಾಮಾಜಿಕ ಅಂತರ ಕಾಪಾಡಿ ಕೊರೊನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಮಾನವನ ತನ್ನ ಮನಸ್ಸಿನೊಳಗೆ ಎಚ್ಚರಿಕೆ ಪಾಠ ಮಾಡಿತು.ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡಲು ಗುರುತು ಹಾಕಿದ ಜಾಗದಲ್ಲಿ ಕುಳಿತ ಆದಿ ಮಾನವ ಏನೋ ಹೆಕ್ಕಿ ತಿನ್ನುತ್ತಿದ್ದವು.ಇದು ಜಾಲತಾಣದಲ್ಲಿ ಸಖತ್ ವೈರಲ್...

ಜೆ.ಸಿ.ರಸ್ತೆಯಲ್ಲಿದ್ದ ಅಪಾಯಕಾರಿ ಮರಗಳ ತೆರವು

ಕಳೆದ ಹಲವಾರು ವರ್ಷಗಳಿಂದ ಸುಳ್ಯ ನಗರ ಪಂಚಾಯಿತಿ ಮುಂಭಾಗದ ಹಳೆ ಸಂತೆ ಮಾರುಕಟ್ಟೆಯ ಸಮೀಪದಲ್ಲಿದ್ದ ಬೃಹತ್ ಮರಗಳ ತೆರವು ಕಾರ್ಯಾಚರಣೆ ನಡೆಯಿತು. ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗಬಾರದೆಂಬ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಮರಗಳ ತೆರವು ಕಾರ್ಯ ನಡೆಯಿತು. ಸುಮಾರು 30 ವರ್ಷಗಳ ಮರಗಳು ಇದಾಗಿದ್ದು ಸುಳ್ಯ ಅರಣ್ಯ...
Ad Widget

ರಾಜ್ಯ ಬಿಜೆಪಿ ಅಧ್ಯಕ್ಷರು ನಾಮಾಕಾವಸ್ತರಾದರೇ ..? ಎಂ.ವೆಂಕಪ್ಪ ಗೌಡ ಪ್ರಶ್ನೆ

ಮೇಲಿನ ಮಾತು ರಾಜ್ಯ ಬಿಜೆಪಿಯ ನಿರ್ಧಾರಕ್ಕೆ ಸೂಕ್ತವಾದ ಮಾತುಗಳೆಂಬುದಾಗಿ ಸಾರ್ವಜನಿಕರ ಅನಿಸಿಕೆಯಾಗಿದೆ. ಕಾರಣವೇನೆಂದರೇ ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಅವರ ಕೋರ್ ಕಮಿಟಿ ತಂಡವು ರಾಜ್ಯ ಸಭೆ ಸದಸ್ಯರ ಅಭ್ಯರ್ಥಿ ತನಕ್ಕೆ ಸುಮಾರು 5 ಹೆಸರುಗಳನ್ನು ಹೈ ಕಮಾಂಡಿಗೆ ಶಿಫಾರಸ್ಸು ಮಾಡಿತ್ತು. ಆದರೆ ಅವುಗಳಲ್ಲಿ ಒಂದೂ ಹೆಸರನ್ನು ಪರಿಗಣಿಸದೇ ಇವರಾರ...

ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಮಾಡುವ ಬಗ್ಗೆ ಕೇಂದ್ರ ಚಿಂತನೆ

ಯುವತಿಯರ ಮದುವೆಗೆ ನಿಗದಿಪಡಿಸಿದ ಕನಿಷ್ಟ ವಯೋಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ . ಈ ಕುರಿತಾಗಿ ವರದಿ ನೀಡಲು ಸಮಿತಿಯನ್ನು ರಚಿಸಲಾಗಿದೆ . ಸಮತಾ ಪಕ್ಷದ ಮಾಜಿ ಅಧ್ಯಕ್ಷರಾದ ಜಯಾ ಜೇಟ್ಲಿ ನೇತೃತ್ವದಲ್ಲಿ 10 ಜನರ ಕಾರ್ಯಪಡೆಯನ್ನು ರಚಿಸಲಾಗಿದೆ . ಪುರುಷರಿಗೆ ಸಮಾನವಾಗಿ 21 ವರ್ಷಕ್ಕೆ ಯುವತಿಯರ...

ಶಾಲೆಗಳನ್ನು ಪ್ರಾರಂಭಿಸಬೇಕೆ ? ಬೇಡವೇ ? ಬರಹಗಾರ ವಿವೇಕಾನಂದ ಹೆಚ್.ಕೆ. ಅನಿಸಿಕೆ

ಶಾಲೆಗಳನ್ನು ಪ್ರಾರಂಭಿಸಬೇಕೆ ? ಬೇಡವೇ ? ಅಥವಾ ಯಾವಾಗ ಪ್ರಾರಂಭಿಸಬೇಕು ? ಹೇಗೆ ಪ್ರಾರಂಭಿಸಬೇಕು ? ಅದಕ್ಕೆ ರೂಪಿಸಬೇಕಾದ ನಿಯಮಗಳೇನು ? ಆನ್ ಲೈನ್ ಶಿಕ್ಷಣ ಎಷ್ಟು ಸೂಕ್ತ ? ಯಾವ ವಯಸ್ಸಿನವರೆಗೆ ಆನ್ ಲೈನ್ ಶಿಕ್ಷಣ ಆರಂಭಿಸಬೇಕು ? ಈ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ.ಈ ಪ್ರಶ್ನೆಗಳಿಗೆ ಉತ್ತರಗಳು ಸಹ ಅಷ್ಟು ಸುಲಭವಲ್ಲ. ಕೊರೋನಾ...

ಚಿಲ್ತಡ್ಕ ದೈವಸ್ಥಾನದ ಬ್ರಹ್ಮಕಲಶೋತ್ಸವ ಮುಂದೂಡಿಕೆ

ಜೂ. 9 ಮತ್ತು 10 ರಂದು ನಡೆಯಬೇಕಾಗಿದ್ದ ನಾಲ್ಕೂರು ಗ್ರಾಮದ ಚಿಲ್ತಡ್ಕ ಶ್ರೀ ಉಳ್ಳಾಕುಲು ಮತ್ತು ಉಪ ದೈವಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ವನ್ನು ಕರೋನಾ ಹಿನ್ನೆಲೆ ಲಾಕ್ ಡೌನ್ ನಿಂದಾಗಿಕಾರ್ಯಕ್ರಮ ನಡೆಸಲು ಸರ್ಕಾರದ ನಿರ್ಬಂಧವಿರುವುದರಿಂದ ಮುಂದೂಡಲಾಗಿದೆ ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.

ಹರಿಹರದ ಯುವತಿ – ಚಾರ್ವಾಕದ ಯುವಕ ನಾಪತ್ತೆ : ಪೋಲೀಸ್ ದೂರು

ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಹಾಗೂ ಕಡಬ ತಾಲೂಕು ಚಾರ್ವಾಕ ಗ್ರಾಮದ ಕುಂಬ್ಲಾಡಿಯ ಯುವಕ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 5 ದಿನಗಳ ಹಿಂದೆ ಯುವಕ – ಯುವತಿ ಒಂದೇ ದಿನ ಕಾಣೆಯಾಗಿದ್ದು ಮನೆಯವರು ಹುಡುಕಾಡಿದ ಬಳಿಕ ಅವರಿಬ್ಬರು ಪತ್ತೆಯಾಗದಿರುವುದರಿಂದ ಜೂ. 8 ರಂದು ಸುಬ್ರಹ್ಮಣ್ಯ ಠಾಣೆಯಲ್ಲಿನಾಪತ್ತೆಯಾಗಿರುವ ಯುವಕ ಅಭಿಲಾಷ್...

ಮಂಡೆಕೋಲು ಗ್ರಾ.ಪಂ.ಸಿಬ್ಬಂದಿ ವಾಣಿಶ್ರೀ ನಿಧನ

ಮಂಡೆಕೋಲು ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಮತಿ ವಾಣಿಶ್ರೀ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ನಿಧನರಾದರು.ಅವರಿಗೆ 35 ವರ್ಷ ವಯಸ್ಸಾಗಿತ್ತು.ಕೆಲ ತಿಂಗಳ ಹಿಂದೆ ಅಸೌಖ್ಯಕ್ಕೊಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದರು. ವಾರದ ಹಿಂದೆ ಮತ್ತೆ ಅಸೌಖ್ಯ ಉದ್ಭವಿಸಿದಾಗ ಮಂಗಳೂರಿಗೆ ದಾಖಲಿಸಲಾಗಿತ್ತು. ಆದರೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.ಮೃತರು ಪತಿ ಸಂತೋಷ್ ಮಾವಂಜಿ ಹಾಗೂ ಇಬ್ಬರು...

ರಾಜ್ಯದಲ್ಲಿ ಪ್ರಬಲ ಗೋ ಹತ್ಯಾ ನಿಷೇಧ ಮಸೂದೆ ಶೀಘ್ರ

ಗೋ ರಕ್ಷಕರಿಗೆ ಮತ್ತು ಗೋಹತ್ಯೆಯನ್ನು ವಿರೋಧಿಸುತ್ತಾ ಬಂದ ವಿವಿಧ ಹಿಂದೂ ವೇದಿಕೆಗಳಿಗೆ ತಾವು ಇಷ್ಟು ದಿನ ಮಾಡಿದ ಹೋರಾಟ ಸಾರ್ಥಕವಾಗುವ ಕ್ಷಣ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲೇ ಗುಜರಾತ್ ಮಾದರಿಯಲ್ಲಿ ಪ್ರಬಲವಾದ ಹೊಸ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಹಿಂದೆ...

ಕ್ಯಾಂಪ್ಕೋ ಇಂದಿನ ರೇಟ್ ಹೀಗಿದೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(09.06.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 255 - 300ಹಳೆ ಅಡಿಕೆ 265 - 320ಡಬಲ್ ಚೋಲ್ 265 - 320 ಫಠೋರ 200 - 245ಉಳ್ಳಿಗಡ್ಡೆ 110 - 150ಕರಿಗೋಟು 110 - 140 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
Loading posts...

All posts loaded

No more posts

error: Content is protected !!