- Saturday
- August 1st, 2026
ಜೇಸಿಐ ಭಾರತದ ವಲಯ 15ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿ ಗುತ್ತಿಗಾರು ಜೇಸಿಐ ಕಾರ್ಯದರ್ಶಿ ರಾಕೇಶ್ ಮೆಟ್ಟಿನಡ್ಕ ಇವರಿಗೆ ಲಭಿಸಿದೆ. ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸಿ ಘಟಕದಿಂದ ಒರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಸೆ. 6 ರಂದು ಬಂಟ್ವಾಳದ ಬಂಟರ ಭವನದಲ್ಲಿ...
ದ.ಕ. ಜಿಲ್ಲಾಡಳಿತ ಕೊಡಮಾಡುವ ಪ್ರೌಢಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಂಜ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪದವೀಧರ ಸಹಾಯಕ ಟೈಟಸ್ ವರ್ಗೀಸ್ ಆಯ್ಕೆಯಾಗಿ ಸೆ. 5ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿರುತ್ತಾರೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಸುಧಾಮ ಆಚಾರಿಪಾಲ್ ನಲ್ಲಿ ಸಿ.ಎಂ. ವರ್ಗೀಸ್ ಮತ್ತು ಶ್ರೀಮತಿ ಮರಿಯಮ್ಮ...
ಆಲೆಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಧಾಕೃಷ್ಣ. ಕೆ.ಎಸ್ ರವರು ಪದೋನ್ನತಿ ಹೊಂದಿದ್ದು ಇದೀಗ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಸೂರ್ಯ, ಇಡ್ಕಿದು ಇಲ್ಲಿಗೆ ಆಂಗ್ಲಭಾಷಾ ಸಹಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಉ.ಹಿ.ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿ 10 ವರ್ಷ, ಸ.ಹಿ.ಪ್ರಾಥಮಿಕ ಶಾಲೆ ಮಿತ್ತಡ್ಕ- ಮರ್ಕಂಜದಲ್ಲಿ 3 ವರ್ಷಗಳ...
ಕಲಾವಿಕಾಸ (ರಿ) ಕಳಂಜ ಇದರ ವತಿಯಿಂದ 30ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ವಿಷ್ಣುನಗರ ಕಳಂಜದಲ್ಲಿ ಇಂದು (ಸೆ.10) ಆಚರಿಸಲಾಯಿತು. ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎನ್.ವಿಶ್ವನಾಥ ರೈ...
ಸುಳ್ಯ ತಾಲೂಕಿನ ಪಂಜದಲ್ಲಿ ಹಾಗೂ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಶಂಕರ ಕುಮಾರ್ ಕರಿಕಳ ಇವರು ಕರ್ನಾಟಕ ಬ್ಯಾಂಕ್ ಕಾನೂನು ಸಲಹೆಗಾರರ ಪ್ಯಾನೆಲ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಪಂಜದಲ್ಲಿ ಕಚೇರಿ ಹೊಂದಿರುವ ನ್ಯಾಯವಾದಿ ಶಂಕರ ಕುಮಾರ್ ಅವರು ಸುಳ್ಯ, ಪುತ್ತೂರಿನಲ್ಲಿಯೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕವಾಗಿಯೂ ವಿವಿಧ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ "ಜೇಸಿಐ ಸಪ್ತಾಹ 2020" ಸೆ.9 ರಂದು ಬಿ. ಸಿ. ಯಂ ಹಾಸ್ಟೆಲ್ ನಲ್ಲಿ ನಡೆಯಿತು. ವಲಯ 15 ರ ಪ್ರಾಂತ್ಯ ಜಿ ಯ ಉಪಾಧ್ಯಕ್ಷರಾದ ಜೆಇಎಫ್ ಪ್ರದೀಪ್ ಬಾಕಿಲರವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲ್ಲೂಕಿನ ಮೂರು ಮಂದಿ ಯುವ ಸಾಧಕೀಯರನ್ನು ಗೌರವಿಸಲಾಯಿತು. ವಲಯ 15 ರ ಕಾರ್ಯಕ್ರಮ...
ಸುಳ್ಯ ಬೇಂಗಮಲೆ ಪರಿಸರದಲ್ಲಿ ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಸುಳ್ಯದಿಂದ ಬೆಳ್ಳಾರೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಸಂಭವಿಸಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ 6 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಸವಾರರು ವಾಹನದಿಂದ ನೆಲಕ್ಕೆ ಉರುಳಿ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆಯಲ್ಲಿ ಚಡಪಡಿಸುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು ಎಂದು ಸ್ಥಳೀಯರು...
PGSN Prasad Navin mupperya ನಾಗರಿಕ ಸೇವಾ ಸಮಿತಿ ಬಾಳಿಲ - ಮುಪ್ಪೇರ್ಯ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಪಿ.ಜಿ.ಎಸ್.ಎನ್. ಪ್ರಸಾದ್, ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಉಪಾಧ್ಯಕ್ಷರಾಗಿ ಕರುಣಾಕರ ದೇವಸ್ಯ, ಕಾರ್ಯದರ್ಶಿಯಾಗಿ ನವೀನ್ ಮುಪ್ಪೇರ್ಯ, ಖಜಾಂಜಿಯಾಗಿ ನಾರಾಯಣ ನಾಯ್ಕ ಕಾಪುತ್ತಡ್ಕ ರನ್ನು ಆಯ್ಕೆ ಮಾಡಲಾಯಿತು. ಇದೇ...
ಕೊಲ್ಲಮೊಗ್ರ ಬಿ.ಜೆ.ಪಿ ಗ್ರಾಮ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಗಳಲ್ಲೊಂದಾದ ಆಯುಷ್ಮಾನ್ ಕಾರ್ಡ್ ಯೋಜನೆಯ ನೋಂದಣಿ ಅಭಿಯಾನ ಸೆಪ್ಟೆಂಬರ್ 15 ಮತ್ತು 16 ರಂದು ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ನೋಂದಣಿ ವೇಳೆ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ತರಬೇಕೇಂದು ಬಿ.ಜೆ.ಪಿಯ ಬೂತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Loading posts...
All posts loaded
No more posts
