ಪೆರುವಾಜೆ : ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

ರಾಷ್ಟ್ರೀಯ ವಿಪತ್ತು ಪರಿಹಾರ ಸೇವಾ ದಿನದ ಅಂಗವಾಗಿ ಬೆಳ್ಳಾರೆ ವಲಯ ವಿಪತ್ತು ನಿರ್ವಹಣಾ ಘಟಕದಿಂದ ಅ.13 ರಂದು ಶ್ರಮದಾನ ನಡೆಯಿತು.ಪೆರುವಾಜೆಯ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯಗೈಯುವ ಮೂಲಕ ಶ್ರಮದಾನ ನಡೆಸಲಾಯಿತು.

ಸಂಪಾಜೆಯಲ್ಲಿ ಚರಂಡಿ ಕುಸಿತ : ಹೆದ್ದಾರಿ ಹಾಗೂ ಮನೆ ಆವರಣಕ್ಕೆ ಹಾನಿಯಾಗುವ ಮೊದಲೇ ಕ್ರಮಕ್ಕೆ ಜಿ.ಕೆ. ಹಮೀದ್ ಒತ್ತಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ಮಳೆಗೆ ಒಳ ಚರಂಡಿ ಕುಸಿದು ಹೆದ್ದಾರಿ ಹಾಗೂ ಮನೆ ಆವರಣ ಕುಸಿಯುವ ಭೀತಿ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ತುರ್ತು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಪಾಜೆ ಗ್ರಾ.ಪಂ‌. ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಒತ್ತಾಯಿಸಿದ್ದಾರೆ.
Ad Widget

ಕಟ್ಟ : ವಿಪತ್ತು ನಿರ್ವಹಣೆ ಘಟಕದಿಂದ ಶ್ರಮದಾನ

ರಾಷ್ಟ್ರೀಯ ವಿಪತ್ತು ತಡೆ ದಿನಾಚಣೆಯ ಅಂಗವಾಗಿ ಸುಬ್ರಮಣ್ಯ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣೆ ಘಟಕದ ಶ್ರಮದಾನ ನಡೆಯಿತು. ಕಟ್ಟ ದೇವಸ್ಥಾನದ ಆವರಣ ಸ್ವಚ್ಛತೆ ಹಾಗೂ ಮಳೆ ನೀರಿಗೆ ಹಾನಿಗೊಳಗಾಗಿದ್ದ ಕಟ್ಟ ಕೊಲ್ಲಮೊಗ್ರು ಸಂಪರ್ಕ ರಸ್ತೆಯ ಮೈಲಾ ಕಿರು ಸೇತುವೆ ಯನ್ನು ಸಂಚಾರ ಯೋಗ್ಯವನ್ನಾಗಿಸುವಲ್ಲಿ ಶ್ರಮಸೇವೆ ನಡೆಸಿದರು. ಸಂಯೋಜಕರಾದ ಸತೀಶ್ ಟಿ.ಎನ್.,...

ಅಜ್ಜಾವರ ಬಿಜೆಪಿ ಶಕ್ತಿಕೇಂದ್ರದ ಕುಟುಂಬ ಮಿಲನ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಜಾಲ್ಸೂರು ಮಹಾಶಕ್ತಿಕೇಂದ್ರ ಇದರ ಅಜ್ಜಾವರ ಶಕ್ತಿ ಕೇಂದ್ರದ ಕುಟುಂಬ ಮಿಲನ ಕಾರ್ಯಕ್ರಮವು ಅ.13 ರಂದು ಶ್ರೀ ಕೃಷ್ಣ ಭಜನಾ ಮಂದಿರ ಮೇನಾಲ ಇದರ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಮಾಜಿ ಯೋಧ, ಪ್ರಗತಿಪರ ಕೃಷಿಕರಾದ ಕಿರಣ್ ರೈ ಮೇನಾಲ ಉದ್ಘಾಟಿಸಿದರು.ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಪಂಚಾಯತ್ ನ ಅಧ್ಯಕ್ಷ ಚನಿಯ ಕಲ್ತಡ್ಕ ವಹಿಸಿದ್ದರು. ಮುಖ್ಯ...

ಕೊಲ್ಲಮೊಗ್ರದ ಶಶಿ ಮಲ್ಲಾಜೆ ನೇಣುಬಿಗಿದು ಆತ್ಮಹತ್ಯೆ

ಕೊಲ್ಲಮೊಗ್ರದಲ್ಲಿ ಹೋಟೆಲ್ ನಡೆಸುತ್ತಿದ್ದ ಶಶಿ ಮಲ್ಲಾಜೆ ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ . ಅವರಿಗೆ 50 ವರ್ಷ ವಯಸ್ಸಾಗಿತ್ತು. ಶಶಿಯವರು ಪತ್ನಿ , ಇಬ್ಬರು ಮಕ್ಕಳ, ಸಹೋದರ ಐವರ್ನಾಡಿನಲ್ಲಿ ಅಂಗಡಿ ನಡೆಸುತ್ತಿರುವ ವೇಣು ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಖಾಸಗಿ ಸ್ಕೂಲ್ ಬಸ್ ನ ಚಾಲಕರಾಗಿ...

ಮನೆಯಿಂದ ಮೊಬೈಲ್ ಕಳ್ಳತನ- ಪೊಲೀಸ್ ದೂರು ನೀಡಿ ಬರುವ ವೇಳೆ ಹಿಂತಿರುಗಿ ತಂದಿಟ್ಟ ಕಳ್ಳ

ಸುಳ್ಯ ಹಳೆಗೇಟು ಪರಿಸರದಲ್ಲಿ ಬೆಟ್ಟಂಪಾಡಿ ಎಂಬಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಯ ಸಮಯ ಮನೆಯ ಒಳಗೆ ಇರಿಸಲಾಗಿದ್ದ ಸುಮಾರು ಹದಿನೈದು ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲ್ ಫೋನನ್ನು ಕಳ್ಳ ತನ್ನ ಕೈಚಳಕದಿಂದ ಕದ್ದೊಯ್ದಿದ್ದ. ನಂತರ ಮನೆಯವರು ವಿಷಯ ತಿಳಿದು ಸಂಜೆ 4 ಗಂಟೆಯ ಸಮಯ ಸುಳ್ಯ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿ ಹಿಂತಿರುಗಿದ ವೇಳೆ...

ಉದ್ಯೋಗದ ತರಬೇತಿ ಪಡೆದುಕೊಳ್ಳುವುದರಿಂದ ಸ್ವಾಭಿಮಾನಿಗಳಾಗಿ ಬದುಕಬಹುದು – ಶಾಸಕ ಅಂಗಾರ

ಉದ್ಯೋಗ ನೈಪುಣ್ಯ ತರಬೇತಿಯನ್ನು ಪಡೆದುಕೊಳ್ಳುವುದರಿಂದ ನಾವು ಸ್ವಾಭಿಮಾನಿಗಳಾಗಿ ಬದುಕು ಕಟ್ಟಿಕೊಳ್ಳಬಹುದೆಂದು ಶಾಸಕ ಅಂಗಾರ ಹೇಳಿದರು.ಅವರು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು, ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ ಹಾಗೂ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇದರ ಸಹಯೋಗದಲ್ಲಿ‌ ಇಂದು ನಡೆದ...

ಎಸ್.ಎಂ.ಎ ಜಿಲ್ಲಾ ಮಟ್ಟದ ಲೀಡರ್ಸ್ ಮೀಟ್ ಕಾರ್ಯಕ್ರಮ

ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್ಎಂಎ)ದ.ಕ ಜಿಲ್ಲಾ ಈಸ್ಟ್ ಅಲರ್ಟ್ 2020 ಜಿಲ್ಲಾ ಮಟ್ಟದ ಲೀಡರ್ಸ್ ಮೀಟ್ ಕಾರ್ಯಕ್ರಮ ಅ.13ರಂದು ಪುತ್ತೂರು ಕರ್ನಾಟಕ ಮುಸ್ಲಿಂ ಜಮಾಅತ್ ಕಮಿಟಿಯ ಕಚೇರಿಯಲ್ಲಿ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ರವರು ಅಧ್ಯಕ್ಷತೆ ಯಲ್ಲಿ ನಡೆಯಿತು.ಸಭಾ ಕಾರ್ಯಕ್ರಮ ವನ್ನು ಜಿಲ್ಲಾ ಸಮಿತಿ ನೇತಾರ ಸೈಯ್ಯದ್ ಸಾದಾತ್ ತಂಙಳ್ ಉದ್ಘಾಟಿಸಿ ದುವಾ...

ಕಾಯರ್ತೊಡಿ : ಶ್ರೀ ಮಹಾವಿಷ್ಣು ದೇವಸ್ಥಾನ ಆವರಣದ ಸ್ವಚ್ಛತೆ

ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ವತಿಯಿಂದ ದಿನಾಂಕ 13/10/2020 ರಂದು ಅಂತರರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕ್ರಮವನ್ನು ನಡೆಸಲಾಯಿತು.ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿದ್ದ ಕಾಡು ಸಸಿಗಳನ್ನು ಕಡಿದು ಸ್ವಚ್ಛತೆ ಗೊಳಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಸ್ವಯಂಸೇವಕರು ಕೆಲಸವನ್ನು ನಿರ್ವಹಿಸಿರುತ್ತಾರೆ .ವಿಪತ್ತು ನಿರ್ವಹಣಾ ಘಟಕದ...

ಕಡಬ : ಮಿಥುನ್ ರೈ ವಿರುದ್ಧ ಸುಳ್ಯ ಬಿಜೆಪಿ ಯುವ ಮೋರ್ಚಾ ದೂರು ದಾಖಲು

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಬಗ್ಗೆ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಪ್ರೆರೇಪಿಸಿರುವಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ಇಂದು (ಅ.13) ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲದ ವತಿಯಿಂದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು...
Loading posts...

All posts loaded

No more posts

error: Content is protected !!