- Thursday
- March 12th, 2026
📝 *ಪೂರ್ಣಿಮಾ ಪಂಜ ಚೊಕ್ಕಾಡಿ* ಹಿಂದಿನಿಂದಲೂ ಶಿಕ್ಷಣದ ಮಹತ್ವವನ್ನು ಅರಿತಿರುವ ಜನ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ಕಾಳಜಿ ವಹಿಸಿರುವುದು ನಿಜ. ಗುರುಕುಲ ಪದ್ಧತಿಯಲ್ಲಿ ಕಾರ್ಯ ಚಟುವಟಿಕೆಗಳನ್ನು ಆಧಾರಿಸಿಕೊಂಡು ಗುರುವಿನ ಬಳಿ ಬಂದು ಶಿಷ್ಯ ಶಿಕ್ಷಣ ಪಡೆಯುವಂತ ಪದ್ಧತಿ, ತದನಂತರ ಕ್ರಮೇಣ ಶಿಕ್ಷಣದಲ್ಲಿ ಬದಲಾವಣೆ ಕಂಡು ಗುರು ಶಿಷ್ಯರು ಒಂದೇಡೆ ಸೇರಿ ಅಲ್ಲಿಯೇ ಶಿಕ್ಷಣವನ್ನು ಮುಂದುವರಿಸುವ...
ಗೂನಡ್ಕ ಪೇರಡ್ಕ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರಿದ್ ಹಬ್ಬದ ಅಂಗವಾಗಿ ಈದ್ ನಮಾಝ್ ಹಾಗೂ ಪ್ರಾರ್ಥನಾ ಸಂಗಮ ನಡೆಯಿತು. ಸ್ಥಳೀಯ ಮಸೀದಿ ಖತೀಬರಾದ ಸುಹೇಲ್ ದಾರಿಮಿ ನೇತೃತ್ವವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜಮಾಹತ್ ಸದಸ್ಯರು,ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊರೋನವೈರಸ್ ಹಿನ್ನೆಲೆಯಲ್ಲಿ ಪ್ರಾರ್ಥನಾ ಸಂಗಮದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತು.
ಎಡಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ತಾರಾವತಿ ಎ ಜು .31 ರಂದು ಸೇವೆಯಿಂದ ನಿವೃತ್ತರಾದರು. ಎಡಮಂಗಲ ಗ್ರಾಮದ ದೇವಸ್ಯ ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ತಿಮ್ಮಪ್ಪ ಗೌಡ ದೇವಸ್ಯ ಇವರ ಪತ್ನಿಯಾದ ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ . ಇವರು ಗುತ್ತಿಗಾರು ಗ್ರಾಮದ ಆರ್ನೋಜಿ...
ಪಯಸ್ವಿನಿ ಯುವಕ ಮಂಡಲ ಕೇರ್ಪಳದ ಸದಸ್ಯರಿಂದ ಕೋರ್ಟ್ ಸಮೀಪದಿಂದ ಕುರುಂಜಿಗುಡ್ಡೆಗೆ ಹೋಗುವ ರಸ್ತೆಯನ್ನು ಶ್ರಮದಾನದ ಮೂಲಕ ಜುಲೈ 26 ರಂದು ದುರಸ್ತಿಗೊಳಿಸಿದರು. ನ.ಪಂ.ಸದಸ್ಯ ವಿನಯಕುಮಾರ್ ಕಂದಡ್ಕ, ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ ನೇತೃತ್ವ ವಹಿಸಿದ್ದರು. ಈ ಕಾರ್ಯದಲ್ಲಿ ದಯಾನಂದ್ ಕೇರ್ಪಳ, ವಿನ್ಯಾಸ ಕುರುಂಜಿ,ಮನೋಜ್, ಸುಧೀರ್, ದಯಾನಂದ ಕೇರ್ಪಳ, ಮೋಹನ ಕೇರ್ಪಳ, ಗೋಪಾಲ ನಡುಬೈಲು, ಲಕ್ಷ್ಮೀಶ...
ಪೈಂಬೆಚ್ಚಾಲು; ತ್ಯಾಗ ಬಲಿದಾನಗಳ ಮಹಾ ಸಂಕೇತವಾದ ಬಕ್ರೀದ್ ಹಬ್ಬವನ್ನು , ಪೈಂಬೆಚ್ಚಾಲಿನಲ್ಲಿ ಸರ್ಕಾರದ ನಿಯಮಗಳನ್ನೂ, ಉಲಮಾಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಹಳ ಸರಳ ಸಂಭ್ರಮದಿಂದ ಆಚರಿಸಲಾಯಿತು. ಪೆರ್ನಾಳ್ ನಮಾಝ್ ಹಾಗು ಖುತುಬ ಕ್ಕೆ ಖತೀಬ್ ಉಸ್ತಾದ್ ಬಹು ಅಬ್ದುನ್ನಾಸಿರ್ ಸುಖೈಫಿ ನೇತೃತ್ವ ನೀಡಿದರು. ಪೆರ್ನಾಳ್ ಸಂದೇಶ ಭಾಷಣ ಮಾಡಿದ ಅವರು ಸಮಸ್ಯೆಗಳು, ಸಂಕಷ್ಟಗಳು ಸದಾ ಮನುಷ್ಯರನ್ನು...
ಮುಸಲ್ಮಾನ ಬಾಂಧವರ ಪವಿತ್ರ ಹಬ್ಬಗಳಲ್ಲಿ ದೊಡ್ಡ ಹಬ್ಬವೆಂದೇ ಕರೆಯಲ್ಪಡುವ ಬಕ್ರೀದ್ ಹಬ್ಬವು ಇಂದು ತಾಲೂಕಿನಾದ್ಯಂತ ಸಂಭ್ರಮದ ಕಳೆಯನ್ನು ಕಂಡಿತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಮಸೀದಿಗಳ ದ್ವಾರಗಳು ಇಂದು ತೆರೆಯಲ್ಪಟ್ಟವು. ಈ ಬಾರಿಯ ಹಬ್ಬದ ನಮಾಜಿನಲ್ಲಿ ಮಸೀದಿಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸರಕಾರವು ಈಗಾಗಲೇ ಆದೇಶವನ್ನು ನೀಡಿದ್ದು, ತಾಲೂಕಿನ ಎಲ್ಲಾ ಮಸೀದಿಗಳ ಆಡಳಿತ...
ಚೆನ್ನಾವರ ಎಸ್ ವೈಎಸ್ ಬ್ರಾಂಚ್ ಹಾಗೂ ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಈದುಲ್ ಅಝ್ಹಾ ಪ್ರಯುಕ್ತ 50 ಕುಟುಂಬಗಳಿಗೆ ಈದ್ ಆಚರಿಸಲು ಬೇಕಾದ ತುಪ್ಪಕ್ಕಿ,ತುಪ್ಪ , ಸಕ್ಕರೆ ಪಾನೀಯಪದಾರ್ಥ, ತರಕಾರಿ, ಮಸಾಲ ಪದಾರ್ಥಗಳನ್ನೊಳಗೊಂಡ ಕಿಟ್ ವಿತರಿಸಲಾಯ್ತು.ಪ್ರಸ್ತುತ ಕಿಟ್ ಗಳಿಗಾಗಿ ಸಂಘಟನೆಯ ಹೆಚ್ಚಿನ ಕಾರ್ಯಕರ್ತರು ವಿದೇಶದಿಂದಲೂ ಊರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಸಹಕಾರವನ್ನು ನೀಡಿರುತ್ತಾರೆ.ಈ ಕಾರ್ಯ ಪ್ರವೃತ್ತಿಗೆ ಸಹಕರಿಸಿದ...
ಪಂಜ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19 ಕಾರ್ಯ ಪಡೆಯ ಸಭೆಯು ಗ್ರಾ.ಪಂ. ಸಭಾ ಭವನದಲ್ಲಿ ನಡೆಯಿತು . ಪಂಚಾಯತ್ ಆಡಳಿತಾಧಿಕಾರಿ ಡಾ . ದೇವಿಪ್ರಸಾದ್ ಕಾನತ್ತೂರ್ , ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ . ಮಂಜುನಾಥ್ , ಪಿಡಿಒ ಮಣಿಯಾನ ಪುರುಷೋತ್ತಮ , ಕಾರ್ಯದರ್ಶಿ ಪದ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು .
ದೇಶದ ಸಂವಿಧಾನದಲ್ಲಿ ನಾಲ್ಕನೆಯ ಅಂಗವಾಗಿ ಪತ್ರಿಕಾರಂಗವನ್ನು ಗುರುತಿಸಲಾಗುತ್ತಿದೆ. ದೇಶದ ಇನ್ನಿತರ ಅಂಶಗಳಾದ ಆರೋಗ್ಯ, ಕಲೆ,ಸಾಹಿತ್ಯ, ವಿಜ್ಞಾನ,ಇವುಗಳು ಯಾವುದನ್ನು ಉದ್ಯಮವಾಗಿ ಬಿಂಬಿಸ ಲಾಗುತ್ತಿಲ್ಲ. ಅದೇ ರೀತಿ ಪತ್ರಿಕೆಗಳು ಕೂಡ ಪತ್ರಿಕಾರಂಗ ವಾಗಿಯೇ ಇರಬೇಕೇ ವಿನಹ ಯಾವತ್ತಿಗೂ ಪತ್ರಿಕೋದ್ಯಮ ವಾಗ ಬಾರದು. 1843 ರಿಂದ 1947 ರವರೆಗೆ ದೇಶದಲ್ಲಿ ಪತ್ರಿಕಾರಂಗ ದೇಶದಲ್ಲಿ ಜಾಗೃತಿ ಮತ್ತು ಸ್ವಾತಂತ್ರ್ಯ ಕ್ರಾಂತಿಯನ್ನು ಉಂಟು...
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಜು.30 ರಂದು ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು. ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್ .ಭವಾನಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ಅಧ್ಯಕ್ಷತೆ ವಹಿಸಲಿದ್ದರು. ಶಿವರಾಮ ಕಾರಂತ ಬಾಲವನ ಪುತ್ತೂರು ಇದರ ಆಡಳಿತಾಧಿಕಾರಿ...
Loading posts...
All posts loaded
No more posts
