- Friday
- August 7th, 2026
ಅಮರಪಡ್ನೂರು ಗ್ರಾಮದ ಶ್ರೀ ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ಭೂತ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ.ಸದಸ್ಯರಾಗಿ ಐತಪ್ಪ ನಾಯ್ಕ ಮುಂಡಕಜೆ, ಶ್ರೀಮತಿ ಧನಲಕ್ಷ್ಮೀ ಕುಸುಮಾಧರ ಕೊಳಂಬೆ, ಶ್ರೀಮತಿ ಪುಷ್ಪವೇಣಿ ಯಶವಂತ ಕಾನಡ್ಕ ಮನೆ, ಶ್ರೀನಾಥ ನೆಲ್ಲಿಕುಂಜ ಮನೆ, ಪ್ರದೀಪ್ ಬೊಳ್ಳೂರು, ಹರಿಶ್ಚಂದ್ರ ಗೌಡ ಮೋಂಟಡ್ಕ ಗಂಗಾಧರ ಹಿರಿಯಡ್ಕ, ಕೇಶವ ಗೌಡ...
ಮಕ್ಕಳು ಹಾಗೂ ಯುವಜನತೆಯನ್ನು ತಂಬಾಕು ಹಾಗೂ ಇತರ ಮಾದಕ ವಸ್ತುಗಳಿಂದ ರಕ್ಷಿಸುವ ಸಲುವಾಗಿ ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ ತಂಬಾಕು ಮುಕ್ತ ಶಾಲೆ - ಗುಲಾಬಿ ದಿನಾಚರಣೆಯನ್ನು ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ ಫೆ. 24 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಸ್ಥಳೀಯ ಶಾಲಾ ಪರಿಸರದಲ್ಲಿ ಜಾಥಾವನ್ನು ನಡೆಸಿದರು ಹಾಗೂ ತಂಬಾಕು ವಿರೋಧಿ ಘೋಷಣೆಗಳನ್ನು...
ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದ ಉದ್ಘಾಟನಾ ಸಮಾರಂಭವು ಇಂದು (ಫೆ.26) ರಂದು ನಡೆಯಲಿದ್ದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.ಸುಳ್ಯ ಶಾಸಕ ಹಾಗೂ ಮೀನುಗಾರಿಕಾ, ಬಂದರು ಇಲಾಖಾ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಜರಾಯಿ...
ಐವರ್ನಾಡಿನ ಕಾರ್ಕಳ ಕಾಂಪ್ಲೆಕ್ಸ್ ನಲ್ಲಿ ಅರುಣ್ ಗುತ್ತಿಗಾರ್ಮೂಲೆ ಮಾಲಕತ್ವದ ಶಿವಕೃಪಾ ಆಯಿಲ್ ಮತ್ತು ಫ್ಲೋರ್ ಮಿಲ್ ಫೆ.26ರಂದು ಶುಭಾರಂಭಗೊಳ್ಳಲಿದೆ.
ಸರಕಾರದ ಆದೇಶದಂತೆ ಎಲ್ಲೆಡೆ ದ್ವಿಚಕ್ರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ದಾಯ ವಾಗಿದ್ದು. ಹೆಲ್ಮೆಟ್ ಧರಿಸದೆ ಸಂಚಾರ ಮಾಡುವ ದ್ವಿಚಕ್ರ ಸವಾರರಿಗೆ ಪೊಲೀಸರ ದಂಡ ಒಂದೆಡೆಯಾದರೇ, ಹೆಲ್ಮೆಟ್ ಕಳ್ಳರಿಂದ ರಕ್ಷಿಸಿಕೊಳ್ಳುವುದು ತಲೆನೋವಾಗಿ ಪರಿಣಮಿಸಿದೆ.ಸುಳ್ಯ ನಗರದ ರಥಬೀದಿಯಲ್ಲಿ ನಿಲ್ಲಿಸಿದ ಬೈಕ್ ನಲ್ಲಿದ್ದ ಹೆಲ್ಮೆಟ್ ಕಳ್ಳತನ ವಾಗಿತ್ತು. ಕಳ್ಳತನ ಮಾಡಿ ತೆಗೆದುಕೊಂಡು ಹೊಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.ಸುಳ್ಯ ಪತ್ರಕರ್ತರೊಬ್ಬರು...
ಬೆಳ್ಳಾರೆ-ತಡಗಜೆ ಹಾಗೂ ಬೆಳ್ಳಾರೆ- ಗಟ್ಟಿಗಾರು ಸಂಪರ್ಕಿಸುವ ರಸ್ತೆಯು ರೂ. 5.16 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿದ್ದು, ಕಾಮಗಾರಿಗೆ ಬೆಳ್ಳಾರೆ ಗ್ರಾ.ಪಂ. ಸದಸ್ಯ ದಿನೇಶ್ಚಂದ್ರ ಹೆಗ್ಡೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ವೀಣಾ, ಜಯಶ್ರೀ, ಭವ್ಯ, ಗ್ರಾಮ ಸ್ವರಾಜ್ಯ ತಂಡದ ಮುಖಂಡ ರಾಮಕೃಷ್ಣ ಭಟ್ ಕುರುಂಬುಡೇಲು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸಭೆ ಫೆ. 19 ರಂದು ಸುಬ್ರಮಣ್ಯದಲ್ಲಿ ನಡೆಯಿತು. ಸಭೆಯಲ್ಲಿ ಕೃಷಿಕರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಾದ ನುಸಿರೋಗ, ಅತಿವೃಷ್ಠಿ, ಹಳದಿ ರೋಗ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಹಳದಿ ರೋಗಕ್ಕೆ ಪರಿಹಾರ ನೀಡುವಂತೆ ಸರಕಾರದ ಗಮನ ಸೆಳೆಯಲು ಮತ್ತು ರೈತಪರ ಹೋರಾಟ ನಡೆಸಲು...
ಸುಳ್ಯ ನಗರದ ಬೂಡು - ಪನ್ನೆಬೀಡು ಭಗವತೀ ಅಮ್ಮನಿಗೆ ಕಲಶೋತ್ಸವದ ಸಂಭ್ರಮ. ಮಾ.8 ರಿಂದ 10 ರ ವರೆಗೆ ಕ್ಷೇತ್ರದಲ್ಲಿ ಉತ್ಸವಗಳನ್ನು ನಡೆಸಲು ಈಗಾಗಲೇ ಕ್ಷೇತ್ರದ ತಂತ್ರಿಗಳು ದಿನ ಗೊತ್ತುಪಡಿಸಿದ್ದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಸಮಿತಿ ರಚನೆ ಮಾಡಲಾಗಿದೆ.ಪೂರ್ವಭಾವಿ ಸಭೆ, ಊರಿನ ಭಕ್ತಾದಿಗಳ ಸಹಭಾಗಿತ್ವದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಯುತ್ತಿದೆ. ಮಾ.8ರಿಂದ ಕಲಶೋತ್ಸವ ಆರಂಭಗೊಳ್ಳಲಿದ್ದು,...
ಹರಿಹರಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಯಂತ ಬಾಳುಗೋಡು ಅವರನ್ನು ಬಾಳುಗೋಡು ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರು ಉಪಸ್ಥಿತರಿದ್ದರು.
Loading posts...
All posts loaded
No more posts
