Ad Widget

ತೊಡಿಕಾನ : ಮರಬಿದ್ದು ಮನೆ ಸಂಪೂರ್ಣ ಹಾನಿ

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಚಂದ್ರಶೇಖರ ಆಚಾರ್ಯರ ಮನೆಗೆ ಮರ ಬಿದ್ದು ಮನೆ ಹಾನಿಯಾದ ಘಟನೆ ವರದಿಯಾಗಿದೆ.ಸುಳ್ಯ ತಾಲೂಕಿನ ಎಲ್ಲೆಡೆ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿರುವ ಮಳೆಗೆ ಮನೆ ಮೇಲೆ ಮರ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಇಲಾಖೆಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯಾದ್ಯಂತ ಇನ್ನೊಂದು ವಾರ ಮುಂದುವರೆಯಲಿದೆ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ – ದ.ಕ. & ಉಡುಪಿ ರೆಡ್‌ ಅಲರ್ಟ್

ರಾಜ್ಯಾದ್ಯಂತ ಇನ್ನೊಂದು ವಾರ ಕಾಲ ಭಾರಿ ಮಳೆಯಾಗಲಿದೆ. ರಾಜ್ಯದಲ್ಲಿ ಮಾನ್ಸೂನ್ ಚುರುಕಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಇತರೆ ಜಿಲ್ಲೆಯಲ್ಲಿ ಇನ್ನೊಂದು ವಾರ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿ ಭಾಗದಲ್ಲಿ ಇಂದಿನಿಂದ ಸೆಪ್ಟೆಂಬರ್ 17 ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ...
Ad Widget

ಬಾಳಿಲ – ಶಾರದೋತ್ಸವ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ- ಮುಪ್ಪೇರ್ಯ ಇದರ ಆಶ್ರಯದಲ್ಲಿ ಅ. 25 ರಂದು ಶ್ರೀ ಶಾರದೋತ್ಸವ ಕಾರ್ಯಕ್ರಮ ನಡೆಯಲಿದ್ದು , ಈ ಬಗ್ಗೆ 2 ನೇ ಪೂರ್ವಭಾವಿ ಸಭೆಯು ಸೆ . 13 ರಂದು ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಯು . ರಾಧಾಕೃಷ್ಣ ರಾವ್ ,...

ಮನೆಮದ್ದಿನಲ್ಲಿ ಗೆಂದಾಳೆಗೆ ಹೆಚ್ಚಿನ ಮಹತ್ವ – ನಗರದಲ್ಲಿ ಜೋರಾಗಿದೆ ಗೆಂದಾಳೆ ಬೇಡಿಕೆ

ಪ್ರಾಚೀನ ಕಾಲದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯು ನಾಟಿ ವೈದ್ಯ ಪದ್ಧತಿಯನ್ನು ಬಹಳ ಮುಖ್ಯವಾಗಿ ಅನುಸರಿಸಿಕೊಂಡು ಬಂದಿದೆ. ಪ್ರಾಕೃತಿಕ ರಮಣೀಯವಾಗಿ ಕಂಗೊಳಿಸುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳಿಂದ ಆವರಿಸಿಕೊಂಡಿದೆ. ಈ ಕಾರಣದಿಂದಾಗಿ ಕಾಡಿನಲ್ಲಿ ಸಿಗುವ ಆಯುರ್ವೇದ ಔಷಧಿಗಳು, ಮದ್ದಿನ ಗಿಡಬಳ್ಳಿಗಳು, ಔಷಧೋಪಚಾರಕ್ಕೆ ಬೇಕಾದ ಎಲೆ ಮತ್ತು ಕಾಯಿಗಳು ಧಾರಾಳವಾಗಿ ನಮ್ಮ ಜಿಲ್ಲೆಗಳಲ್ಲಿ ಬೇಡಿಕೆಯಲ್ಲಿ...

ಅರಾಧನಾ ಕೇಂದ್ರಗಳು ಸಾಧನಾ ಕೇಂದ್ರಗಳಾಗಬೇಕು : ಶ್ರೀ ಯೋಗೇಶ್ವರನಂದಾ ಸರಸ್ವತಿ ಸ್ವಾಮಿ

ಆರಾಧನಾ ಕೇಂದ್ರಗಳು ಸಾಧನಾ ಕೇಂದ್ರಗಳಾಗಬೇಕೆಂದು ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರನಾಂದ ಸರಸ್ವತಿ ಸ್ವಾಮಿ ಹೇಳಿದರು. ಅವರು ತನ್ನ ಸೇವಾಶ್ರಮದ ವತಿಯಿಂದ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿಮಾತನಾಡಿದರು. ಶಾಲೆಗಳಲ್ಲಿ ಧರ್ಮ ಶಿಕ್ಷಣ ಬೋಧಿಸುವ ಶಿಕ್ಷಕರ ಅಗತ್ಯ ಇಂದು ಕಾಡುತ್ತಿದೆ. ಎಲ್ಲರಿಗೆ ಧರ್ಮದ ಬಗ್ಗೆ ತಿಳಿದಿದೆ. ವಿದ್ಯಾರ್ಥಿಗಳಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡುವ ಅಗತ್ಯ ಇದೆ ಎಂದು...

ಬಲ್ಕಜೆ : ಪೌಷ್ಟಿಕಾಹಾರ ಸಪ್ತಾಹ

ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಬಲ್ಕಜೆ ಅಂಗನವಾಡಿ ಕೇಂದ್ರದಲ್ಲಿ ಸೆ.12 ರಂದು ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಅನುಪಮ ಮಾಯಿಪನಮನೆ, ಅಂಗನವಾಡಿ ಕಾರ್ಯಕರ್ತೆ ತಾರಾ ಕೆ.ಎಸ್., ಸಹಾಯಕಿ ನೀಲಾವತಿ, ಆಶಾ ಕಾರ್ಯಕರ್ತೆಯರಾದ ಉಮಾವತಿ, ವೀಣಾ, ಆರೋಗ್ಯ ಸಹಾಯಕಿ ಜಲಜಾಕ್ಷಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಕುಂತಲಾ ಕೇವಳ , ಸ್ತ್ರೀಶಕ್ತಿ ಸಂಘದ ಸದಸ್ಯರು ,...

ಪಂಜ : ಮಕ್ಕಳಲ್ಲಿ ಧಾರ್ಮಿಕ,ಸಂಸ್ಕೃತಿಯ ಅರಿವು ಮೂಡಿಸುವ ಸಲುವಾಗಿ ಮಕ್ಕಳ ಭಜನಾ ತರಬೇತಿ ಶಿಬಿರ ಆರಂಭ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ , ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಅಳ್ಪೆ – ಚಿಂಗಾಣಿಗುಡ್ಡೆ  ಹಾಗೂ ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಮಕ್ಕಳ ಭಜನಾ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 12 ರಂದು ಜೈ ಕರ್ನಾಟಕ ಯುವಕ ಮಂಡಲದ ಸಭಾಭವನದಲ್ಲಿ...

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನಿಂದ ಶಿಕ್ಷಕಿ ಸುವರ್ಣಚಂದ್ರಿಕಾರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ಪ್ರದಾನ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಿ ಇಂದ್ರಾಜೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಸುವರ್ಣಚಂದ್ರಿಕಾರವರಿಗೆ `ನೇಶನ್ ಬಿಲ್ಡರ್ ಪ್ರಶಸ್ತಿ 2020' ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷರಾದ ರೊ| ಮೋನಪ್ಪ ತಂಬಿನಮಕ್ಕಿಯವರು ವಹಿಸಿದ್ದರು. ರೊ| ನವೀನ್ ಕುಮಾರ್ ರೈ ತಂಬಿನಮಕ್ಕಿಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ರೊ| ಕೇಶವ ಮೂರ್ತಿ...

ಕಳಂಜ ಯುವಕ ಮಂಡಲ ಕಟ್ಟಡಕ್ಕೆ ವೆಂಕಪ್ಪಯ್ಯರಿಂದ ಗೇಟ್ ಕೊಡುಗೆ

ಯುವಕ ಮಂಡಲ (ರಿ) ಕಳಂಜ ಇದರ ಕಟ್ಟಡ ಪ್ರವೇಶಿಸುವಲ್ಲಿ ಗೇಟ್ ನ ಅವಶ್ಯಕತೆ ಇದ್ದುದನ್ನು ಗಮನಿಸಿದ ಕಳಂಜ - ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವೆಂಕಪ್ಪಯ್ಯನವರು ಗೇಟ್ ನ್ನು ಕೊಡುಗೆಯಾಗಿ ನೀಡಿದ್ದಾರೆ. ಯುವಕ ಮಂಡಲದ ಪರವಾಗಿ ನಿರ್ದೇಶಕರಾದ ಗಂಗಾಧರ ತೋಟದಮೂಲೆ ಕೊಡುಗೆಯನ್ನು ಸ್ವೀಕರಿಸಿದರು.

ಸಂಪಾಜೆ : ಆಸರೆ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ಮನೆಗೆ ಶಿಲಾನ್ಯಾಸ

ಆಸರೆ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ಅಬ್ದುಲ್ಲ ದರ್ಕಸ್ತು ಅವರ ಮನೆಯ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯಿತು. ಬಡ ನಿರ್ಗತಿಕರಾದ ಅಬ್ದುಲ್ಲ ರವರ ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ ಆಸರೆ ಸಮಿತಿ ನೇತೃತ್ವದಲ್ಲಿ ಅಬ್ದುಲ್ಲ ರವರ ಮನೆಗೆ ಸಮಿತಿ ಸದಸ್ಯ ರಾದ ಮುನೀರ್ ದಾರಿಮಿ ಉಸ್ತಾದ್ ಶಿಲಾನ್ಯಾಸ ನೆರವೇರಿಸಿದರು. ಇನ್ನೋರ್ವ ಸಮಿತಿ ಸದಸ್ಯರಾದ ಲತೀಫ್ ಸಖಾಫಿ ದುಹಾ...
Loading posts...

All posts loaded

No more posts

error: Content is protected !!