- Friday
- August 7th, 2026
ಸುಳ್ಯ ವಿಧಾನ ಸಭಾ ಕ್ಷೇತ್ರ ಕ್ಕೊಳಪಟ್ಟ ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಲು ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಈಶ್ವರಪ್ಪರವರಿಗೆ, ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ನೇತೃತ್ವದಲ್ಲಿ ಸುಳ್ಯ ಮಂಡಲ ವತಿಯಿಂದ ಮನವಿ ಸಲ್ಲಿಸಲಾಯಿತು. ಅನುದಾನ ನೀಡುವ...
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಮಾ.27 ರಂದು ಸಂಜೆ 4.30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ರಂಗ ಉಪನ್ಯಾಸ ಮತ್ತು ರಂಗಗೀತೆ ಗಾಯನ ಕಾರ್ಯಕ್ರಮದ ಮೂಲಕ ಆಚರಿಸಲಾಗುವುದು. 2021 ನೇ ವಿಶ್ವ ರಂಗಭೂಮಿ ದಿನದ ಸಂದೇಶ ವಾಚನ ಮತ್ತು ವರ್ತಮಾನ-ರಂಗಭೂಮಿಯ ಅನಿವಾರ್ಯತೆ ಈ ವಿಷಯದಲ್ಲಿ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಳಿಕ ರಂಗಮನೆ ನಾಟಕ...
ಕಳಂಜ ಗ್ರಾಮದ ಮುಂಡುಗಾರು ಮನೆ ಶ್ರೀಮತಿ ಮತ್ತು ಶ್ರೀ ನಾಗಪ್ಪ ಗೌಡರವರ ಪುತ್ರಿ ರೇಶ್ಮಾರವರ ವಿವಾಹ ನಿಶ್ಚಿತಾರ್ಥವು ಶಾಂತಿಗೋಡು ಗ್ರಾಮದ ಮರಕ್ಕೂರು ಮನೆ ಶ್ರೀಮತಿ ಮತ್ತು ಶ್ರೀ ಪೂವಣಿ ಗೌಡರವರ ಪುತ್ರ ನವೀನರೊಂದಿಗೆ ಮಾ.24 ರಂದು ಮುಂಡುಗಾರು ವಧುವಿನ ಮನೆಯಲ್ಲಿ ನಡೆಯಿತು.
ನಾಲ್ಕೂರು ಗ್ರಾಮದ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 𝟴𝟱𝟬 ವರ್ಷಗಳ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿರುವ ವಿಶೇಷ ದೇವರ ಮೀನುಗಳಿಗೆ (ನಾಗಕನ್ನಿಕೆಯರೆಂದು ಪ್ರತೀತಿ ) ನೀರಿನ ಒಳಹರಿವು ಕಡಿಮೆ ಇರುವುದನ್ನು ಅರಿತ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾ.𝟮𝟭 ರಂದು ನೀರಿಗೆ ಅಡ್ಡಲಾಗಿ ಕಟ್ಟ ನಿರ್ಮಾಣ ಮಾಡಿ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ...
ಕೊಲ್ಲಮೊಗ್ರದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮಯೂರ ಕಲಾಮಂದಿರದಲ್ಲಿ ಮಾ.20 ರಂದು ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಯೋಜನೆಯಡಿ ಕೊಡುವ ತಾಲೂಕು ಕೃಷಿ ಪ್ರಶಸ್ತಿಯನ್ನು ಸುಳ್ಯ ತಾಲೂಕಿನ 7 ಮಂದಿ ಕೃಷಿಕರಿಗೆ ನೀಡಲಾಯಿತು. ಹೈನುಗಾರಿಕೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ವಿಶ್ವನಾಥ್ ಪೈ, ಸಮಗ್ರ ಕೃಷಿ ಪದ್ಧತಿ ಘಟಕದಡಿ ನೀಡುವ ಪ್ರಶಸ್ತಿಗೆ ಕೊಲ್ಲಮೊಗ್ರದ ಜಯಪ್ರಕಾಶ್ ಕಟ್ಟ, ತೋಟಗಾರಿಕ...
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ಅಡಿಯಲ್ಲಿ ಬಾಳಿಲ ವಿದ್ಯಾಭೋದಿನಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ತರಬೇತಿಯನ್ನು ಮಾ.19 ರಂದು ನಡೆಸಲಾಯಿತು. ಅಡುಗೆ ಪ್ರಾವಿಣ್ಯತಾ ನಿಟ್ಟಿನಲ್ಲಿ ಈ ಅಡುಗೆ ತರಬೇತಿಯನ್ನು ನಡೆಸಲಾಗಿದ್ದು ಹಲವು ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.ಸ್ಕೌಟ್ ಮಾಸ್ಟರ್ ಶಿವಪ್ರಸಾದ್ ಜಿ., ಗೈಡ್ ಕ್ಯಾಪ್ಟನ್ ಯಶೋಧ...
ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿಯು ಮಾ. 19 ಮತ್ತು ಮಾ. 20 ರಂದು ವೈಭವೋಪೇತವಾಗಿ ನಡೆಯಿತು. ಒತ್ತೆಕೋಲ ನಡಾವಳಿಯ ಅಂಗವಾಗಿ ಮಾ. 19 ರಂದು ಸಂಜೆ ಗಂಟೆ 6.00ಕ್ಕೆ ಸ್ಥಾನದಿಂದ ಭಂಡಾರ ತೆಗೆದು, ರಾತ್ರಿ ಗಂಟೆ 7.30ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 8.00ರಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ...
ಗುತ್ತಿಗಾರು ಗ್ರಾಮದ ಹೊಸೊಳಿಕೆ ವಿಶ್ವನಾಥ ಗೌಡ ಮತ್ತು ಲಲಿತಾ ದಂಪತಿಗಳ ಪುತ್ರ ನವೀನ್ ಹೊಸೊಳಿಕೆ ಇವರು ಉದ್ಯೋಗ ನಿಮಿತ್ತ ಮಸ್ಕತ್ ಗೆ ಪ್ರಯಾಣ ಮಾ.25ರಂದು ಬೆಳೆಸಲಿದ್ದಾರೆ. ಇವರು ಮಂಗಳೂರಿನ ಲೋಬೋ ಇಂಜಿನಿಯರಿಂಗ್ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಸ.ಹಿ.ಪ್ರಾ ಶಾಲೆ ವಳಲಂಬೆ ಹಾಗೂ ಸ.ಪ.ಪೂ ಕಾಲೇಜು ಗುತ್ತಿಗಾರು ಇದರ ಹಳೆ ವಿದ್ಯಾರ್ಥಿ.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಆಯೋಗದ ಜಿಲ್ಲಾಧ್ಯಕ್ಷರಾಗಿ ಸಂಪಾಜೆ ಗ್ರಾಮದ ಕಲ್ಲುಂಗುಂಡಿಯ ರಿಯಾಝ್ ರವರನ್ನು ಅಯ್ಕೆ ಮಾಡಲಾಗಿದೆ. ಮಾನವ ಹಕ್ಕುಗಳ ಅಯೋಗದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಪೆರಿಗೇರಿಯವರ ಶಿಫಾರಸ್ಸು ಮೇರೆಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ರಾಷ್ಟ್ರೀಯ ನಾಯಕರಾದ ಡಾ.ಅವಿನಾಶ್ ಸಕುಂದೆ ರವರು ನೇಮಕಗೊಳಿಸಿದರು. ಇವರು ಸಂಪಾಜೆ ಗ್ರಾಮದ ಪೇರಡ್ಕ ಮುಹಿಯದ್ದೀನ್ ಜುಮ್ಮಾಮಸೀದಿ ಅಧ್ಯಕ್ಷರಾದ ಎಸ್.ಅಲಿ...
ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ, ಎಸ್.ಪಿ.ಬಾಲಸುಬ್ರಹ್ಮಣ್ಯ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಗೀತ ಜ್ಞಾನವಿರುವ ವಾದ್ಯಗೋಷ್ಠಿಯೊಂದಿಗೆ ಹಾಡುವ 12 ರಿಂದ 20 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಈ ಕೆಳಕಂಡ ಚಲನ ಚಿತ್ರಗಳಾದ ನ್ಯಾಯವೇ ದೇವರು, ಸಾಕ್ಷಾತ್ಕಾರ, ಬೆಂಕಿಯ ಬಲೆ, ದೇವರ ಮಕ್ಕಳು, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಬಂಧನ, ನೀ...
Loading posts...
All posts loaded
No more posts
