ಕಾಣಿಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ದೇವರಾಜ್ ಮುಂಡೋಡಿ

ಕಾಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ದೇವರಾಜ್ ಎಂ. ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಾಣಿಯೂರು ಗ್ರಾ.ಪಂ. ಕಾರ್ಯದರ್ಶಿಯಾಗಿದ್ದ ಯೋಗಿನಿ ಎಸ್. ಶೆಟ್ಟಿ ಅವರನ್ನು ಕಡಬ ತಾಲೂಕು ಪಂಚಾಯತ್‌ನಲ್ಲಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸಲು ಮೇಲಾಧಿಕಾರಿಯವರ ಸೂಚನೆ ನೀಡಿದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ನೆಲ್ಯಾಡಿ ಗ್ರಾ. ಪಂ.ನ ಅಭಿವೃದ್ಧಿ ಅಧಿಕಾರಿಯಾಗಿದ್ದ ದೇವರಾಜ್ ಅವರನ್ನು ನೇಮಕಗೊಳಿಸಿ ಕಡಬ...

ಸಂಪಾಜೆ ವಲಯ ಮೇಲ್ವಿಚಾರಕರಾಗಿ ಸುಧೀರ್ ನೆಕ್ರಾಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ರವರಿಗೆ ಸಂಪಾಜೆ ವಲಯಕ್ಕೆ ವರ್ಗಾವಣೆಯಾಗಿದೆ.
Ad Widget

18ರಿಂದ 44 ವರ್ಷದವರಿಗೆ ಸದ್ಯಕ್ಕೆ ಕೊರೋನಾ ಲಸಿಕೆ ಸಿಗಲ್ಲ – ಸಚಿವ ಸುಧಾಕರ್ ಸ್ಪಷ್ಟನೆ

ರಾಜ್ಯದಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿತ್ತು. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಸಧ್ಯ 18ರಿಂದ 44 ವರ್ಷದವರಿಗೆ ಕೊರೋನಾ ಡೋಸ್ ಸಿಗುವುದು ಅನುಮಾನ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕೃತ ಮಾಹಿತಿ ನೀಡಿದ್ದಾರೆ 18 ವಯಸ್ಸಿನಿಂದ ದಿಂದ 44 ವಯಸ್ಸಾದವರು ಡೋಸ್ ಪಡೆಯಲು ಅರ್ಹರು....

ಕೊಲ್ಲಮೊಗ್ರ : ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಆರೋಗ್ಯ ರಕ್ಷಾ ಕಾರ್ಡ್ ವಿತರಣೆ

ಕೊಲ್ಲಮೊಗ್ರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರಿಗೆ ಆರೋಗ್ಯದ ರಕ್ಷಣೆಗಾಗಿ ಯೋಜನೆಯ ಮುಖಾಂತರ ಸಂಪೂರ್ಣ ಸುರಕ್ಷಾ ಹಾಗೂ ಆರೋಗ್ಯ ರಕ್ಷಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಯೋಜನೆಯಲ್ಲಿ ಈ ವರ್ಷ ಆರೋಗ್ಯ ರಕ್ಷಾ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು...

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸರಳ ವಿವಾಹವಾದ ದಂಪತಿಗಳಿಗೆ ಸಹಾಯಧನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಾಮೂಹಿಕ ವಿವಾಹ ಈ ವರ್ಷ ಕೋವಿಡ್ 19 ಕಾರಣದಿಂದಾಗಿ ರದ್ದುಗೊಂಡಿರುತ್ತದೆ. ಈಗಾಗಲೇ ನೋಂದಾವಣೆ ಯಾಗಿರುವ ಜೋಡಿಗಳಿಗೆ ವಿವಾಹ ನಡೆಸಿದ್ದಲ್ಲಿ ಅವರಿಗೆ ಶ್ರೀಕ್ಷೇತ್ರದಿಂದ ಚಿನ್ನದ ತಾಳಿ ದಂಪತಿಗಳಿಗೆ ವಸ್ತ್ರ ಉಡುಗೊರೆ ಹಾಗೂ ಪ್ರತಿ ಜೋಡಿಗೆ ಹತ್ತು ಸಾವಿರದಂತೆ ಸಹಾಯಧನ ನೀಡಲಾಗುತ್ತಿದೆ. ಅದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...

ಸುಳ್ಯ : ಲಸಿಕೆ ವಿತರಣೆ ಪುರಭವನಕ್ಕೆ ಸ್ಥಳಾಂತರ -ಹೆಚ್ಚಾದ ಲಸಿಕೆ ಪಡೆಯುವವರ ಸಂಖ್ಯೆ

ಸುಳ್ಯದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕೇಂದ್ರವನ್ನು ಜ್ಯೋತಿ ಸರ್ಕಲ್ ಬಳಿಯ ಸ.ಮಾ..ಹಿ.ಪ್ರಾ.ಶಾಲೆಯಿಂದ ಕೆ.ವಿ.ಜಿ. ಪುರಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಸುಳ್ಯದಲ್ಲಿ ಕೊರೊನ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಲಸಿಕೆ ನೀಡುವ ಮೊದಲು ನೋಂದಣಿ ಮಾಡಬೇಕಾಗಿದ್ದು ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಲಸಿಕೆ ನೀಡುವಲ್ಲಿ...

ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆ ಇಂದಿನಿಂದ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿ

ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಮಳಿಗೆಗಳನ್ನು ಇಂದಿನಿಂದ (ಏ.30) ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 6-10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ...

ಅರಂತೋಡು : ಭಾರಿ ಗಾಳಿ ಮಳೆ, ವ್ಯಾಪಕ ಹಾನಿ

ಅರಂತೋಡಿನಲ್ಲಿ ಇಂದು ಸುರಿದ ಭಾರಿ ಗಾಳಿ ಮತ್ತು ಮಳೆಗೆ ಬಿಳಿಯಾರು ಸಮೀಪ ಮರ ಬಿದ್ದು ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬ ಧರೆಗುರುಳಿದೆ.

ರಥಬೀದಿ : ವಿದ್ಯುತ್ ಲೈನ್ ಮೇಲೆ ಬಿದ್ದ ತೆಂಗಿನಮರ – ಲೈನ್ ಗೆ ಹಾನಿ

ಕೆರೆಮೂಲೆ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ತೆಂಗಿನ ಮರ ಬಿದ್ದ ಕೆರೆಮೂಲೆ ಮತ್ತು ರಥಬೀದಿಯ ವಿನಾಯಕ ಕಾಂಪ್ಲೆಕ್ಸ್ ಬಳಿಯ ವಿದ್ಯುತ್ ಕಂಬ ಮುರಿದುಬಿದ್ದಿದೆ. ರಸ್ತೆಯಲ್ಲಿ ಜನ ಸಂಚಾರ ಇಲ್ಲದೇ ಇರುವುದರಿಂದ ಯಾರಿಗೂ ಹಾನಿಯಾಗಿಲ್ಲ. ಇದೇ ಕಂಬದಲ್ಲಿ 4 ಲೈನ್ ಹಾದುಹೋಗುತ್ತಿದ್ದು ಸುಬ್ರಹ್ಮಣ್ಯ, ಕೇನ್ಯ, ಕೇರ್ಪಳ ಹಾಗೂ ಅರಂತೋಡು ಪೀಡರ್ ಗಳಲ್ಲಿ ವಿದ್ಯುತ್ ವಿಳಂಬವಾಗಲಿದೆ. ಸ್ಥಳಕ್ಕೆ ಮೆಸ್ಕಾಂ...

ಹರಿಹರ ಸೊಸೈಟಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಸೇವೆ ಲಭ್ಯ

ಕೊರೋನಾ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ.28 ರಿಂದ ಮೇ.12 ರವರೆಗೆ ಕೊಲ್ಲಮೊಗ್ರ-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನ ವ್ಯವಹಾರ ಲಭ್ಯವಿರುತ್ತದೆ. ✍ವರದಿ:-ಉಲ್ಲಾಸ್ ಕಜ್ಜೋಡಿ
Loading posts...

All posts loaded

No more posts

error: Content is protected !!