Ad Widget

ಸುಬ್ರಹ್ಮಣ್ಯ :- ಹಾಲುತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- ಶೇ 10 ಡಿವಿಡೆಂಡ್ ವಿತರಣೆ

ಸುಬ್ರಹ್ಮಣ್ಯ ಹಾಲುತ್ಪಾದಕರ ಮಹಿಳಾ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀಮತಿ ಶೋಭಾ ನಲ್ಲೂರಾಯ ಅವರ ಸಭಾಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ನ ರಾಜೀವ್ ಗಾಂಧಿ ಸಭಾಭವನದಲ್ಲಿ ಡಿ.07 ರ ಮಂಗಳವಾರದಂದು ಬೆಳಿಗ್ಗೆ 10:00 ಗಂಟೆಗೆ ನೆರವೇರಿತು. ಸಂಘದ ನಿರ್ದೇಶಕರು ದ.ಕ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಶ್ರೀ ಹರೀಶ್ ಕುಮಾರ್ ಮತ್ತು...

ಕುಕ್ಕುಜಡ್ಕ : ಶ್ರೀ ಭಗವಾನ್ ಸೇವಾ ಸಂಘ ವತಿಯಿಂದ ಶ್ರಮದಾನ

ಶ್ರೀ ಭಗವಾನ್ ಸೇವಾ ಸಂಘ ಚೆಂಬು ಮತ್ತು ಗರುಡ ಯುವಕ ಮಂಡಲ ಚೊಕ್ಕಾಡಿ ಸದಸ್ಯರ ಜಂಟಿ ಆಶ್ರಯದಲ್ಲಿ ಕುಕ್ಕುಜಡ್ಕ ಪಿಲಿಕಜೆ ಶ್ರೀ ಧರ್ಮಶಾಸ್ತ್ರಾ ಭಜನಾ ಮಂದಿರದಲ್ಲಿ ಶ್ರಮದಾನವು ನಡೆಯಿತು.
Ad Widget

ಒಡಿಯೂರು ಶ್ರೀ ಗುರುವಂದನೆ, ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

ಒಡಿಯೂರು ಶ್ರೀಗಳ ಷಷ್ಟಬ್ಧ ಸಂಭ್ರಮ ಸಮಿತಿ, ಜೈ ಗುರುದೇವಾ ಸೇವಾ ಬಳಗ ಸುಳ್ಯ ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆ, ಭಜನೆ ಕಾರ್ಯಕ್ರಮ, ಶ್ರೀ ಗುರುವಂದನೆ ಮತ್ತು ಸಮಾರೋಪ ಸಮಾರಂಭ ಡಿ.೨೦ರಂದು ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿರುವುದು.ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು...

ವಿದ್ಯಾಬೋಧಿನೀ ಬಾಳಿಲ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣೆ, ಬಡ ಮಕ್ಕಳಿಗೆ ನೆರವಾದ ಮಾಜಿ ಎಸ್ಡಿಎಂಸಿ ಅಧ್ಯಕ್ಷೆ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಇಲ್ಲಿ ಕಲಿಯುತ್ತಿರುವ ತೀರಾ ಬಡಮಕ್ಕಳಿಗೆ ತಾಲೂಕು ಪಂಚಾಯತ್ ನಿಕಟ ಪೂರ್ವಸದಸ್ಯೆ ಹಾಗೂ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲಾ ಮಾಜಿ ಎಸ್ಡಿಎಂಸಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಉಚಿತ ಸಮವಸ್ತ್ರ ವಿತರಿಸಿದರು. ಈ ಮೂಲಕ ಅವರು ಬಡ ಮಕ್ಕಳಿಗೆ ನೆರವಾದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಸುಬ್ಬಯ್ಯ.ವೈ.ಬಿ ಹಾಗೂ ಅಧ್ಯಾಪಕ ವೃಂದದವರು ಹಾಜರಿದ್ದರು.

ಯಾವುದೇ ಅವ್ಯವಹಾರ ಮಾಡಿಲ್ಲ, ಮುಕ್ತ ಚರ್ಚೆಗೆ ಸಿದ್ಧ ; ಕೋಟ ಶ್ರೀನಿವಾಸ ಪೂಜಾರಿ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಪೆರುವಾಜೆಯ ಜೆಡಿ ಆಡಿಟೋರಿಯಂನಲ್ಲಿ ಜರುಗಿತು.ಸಭೆಯನ್ನು ಉದ್ದೇಶಿಸಿಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತಾಡುತ್ತ, "ಹಿಂದೆ ಪಂಚಾಯತ್ ಆಡಳಿತ ತೀರಾ ತಳಮಟ್ಟದಲ್ಲಿತ್ತು. ಪಂಚಾಯತ್ ನಲ್ಲಿ ನಿರ್ಣಯ ಪುಸ್ತಕಗಳಿರಲಿಲ್ಲ. ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ್ ನಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ...

ಸುಳ್ಯ : ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆ – ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ನಡೆದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಡಿ. 7 ರಂದು ನಡೆಯಿತು. ಈ ಸಂದರ್ಭದಲ್ಲಿ ಸಚಿವ ಎಸ್. ಅಂಗಾರ ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್...

ಕವನ : ಸಾವಿನ ಆಚೆಗೂ ಸಾವಿರ ನೋವಿದೆ…

ಸಾವಿನ ಆಚೆಗೂ ಸಾವಿರ ನೋವಿದೆ,ಬದುಕಲು ಇಲ್ಲಿ ಕಾರಣ ಏನಿದೆ…ಸಾಗುವ ದಾರಿಯಲ್ಲೂ ಸಾವಿರ ನೋವಿದೆ,ಸಾಧನೆಯ ಹಾದಿಯಲ್ಲೂ ಸಾವಿರ ನೋವಿದೆ…ಅನುಭವಿಸಿ ಅನುಭವಿಸಿ ಸಾಕಾಗಿ ಹೋಗಿದೆ… ಹತ್ತಾರು ವರ್ಷದ ಕನಸು ಮಣ್ಣಾಗಿ ಹೋಗಿದೆ,ಮುಂದಿನ ಬದುಕಿನ ಹಾದಿ ಕಾಣದಾಗಿದೆ,ಸುತ್ತ-ಮುತ್ತ ಎಲ್ಲವೂ ಕತ್ತಲಾಗಿ ಹೋಗಿದೆ…ಸಾಗುವ ದಾರಿಯ ತುಂಬಾ ನೋವುಗಳೇ ತುಂಬಿವೆ…ಕಷ್ಟಗಳು-ನಷ್ಟಗಳು ಸುತ್ತ, ಮುತ್ತ ಮುತ್ತಿವೆ…ಎತ್ತ ನೋಡಿದರತ್ತ ಅಂಧಕಾರವೇ ತುಂಬಿದೆ… ಸಾವಿನ ಆಚೆಗೂ ಸಾವಿರ...

ಮಡಪ್ಪಾಡಿ : ಅಣಬೆ ಬೇಸಾಯ ತರಬೇತಿ ಶಿಬಿರ

ಮಡಪ್ಪಾಡಿ ಗ್ರಾಮ ಪಂಚಾಯತ್ ನ ಅಕ್ಷಯ ಸಂಜೀವಿನಿ ಒಕ್ಕೂಟದ ವತಿಯಿಂದ ಡಿ.6 ರಂದು ಅಣಬೆ ಬೇಸಾಯ ತರಬೇತಿ ಶಿಬಿರ ನಡೆಯಿತು. ವೇದಿಕೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಹಾನ, ತೋಟಗಾರಿಕೆ ಸಹಾಯಕ ಅಧಿಕಾರಿ ಅರಬಣ್ಣ ಪೂಜಾರಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾ ವಿನೋದ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಕುಂತಳ ಕೇವಳ ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷರು...

ಮಡಪ್ಪಾಡಿ : ಶೀರಡ್ಕ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆ

ಮಡಪ್ಪಾಡಿ ಗ್ರಾಮದ ಉಳ್ಳಾಕುಲು ಮತ್ತು ಮಲೆಭೂತಗಳ ದೈವಸ್ಥಾನ ಶೀರಡ್ಕದಲ್ಲಿ ಅವಶ್ಯಕ ಇರುವ ವಿಷಯಗಳ ಚಿಂತಿಸುವ ಸಲುವಾಗಿ ತಾಂಬೂಲ ಪ್ರಶ್ನೆ ಕಾರ್ಯಕ್ರಮವು ಡಿ.6 ರಂದು ಶೀರಡ್ಕ ಚಾವಡಿಯಲ್ಲಿ ಎ.ವಿ ತಂಬನ್ ಪೊದುವಾಳ್ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಶೀರಡ್ಕ ಬೈಲಿನವರು ಉಪಸ್ಥಿತರಿದ್ದರು.

ಡಿ.08 – ಡಿ.12: ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮಶ್ರೀ ಕೆ.ಯು ದಾಮೋದರ ತಂತ್ರಿಗಳವರ (ನೀಲೇಶ್ವರ) ನೇತೃತ್ವದಲ್ಲಿ ಡಿ.08 ಬುಧವಾರದಿಂದ ಷಷ್ಠಿ ಮಹೋತ್ಸವ ಆರಂಭಗೊಳ್ಳಲಿದ್ದು ಡಿ.12 ಆದಿತ್ಯವಾರದ ತನಕ ಜರುಗಲಿದೆ. ಡಿ.08 ಬುಧವಾರದಂದು ಪಂಚಮಿ ಪ್ರಯುಕ್ತ ಸಂಜೆ 06.30ರಿಂದ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಆಸ್ತಿಕ ಬಂಧುಗಳು, ಸಂಘ ಸಂಸ್ಥೆಗಳು ಹಾಗೂ ಕಾಂಚೋಡು...
Loading posts...

All posts loaded

No more posts

error: Content is protected !!