ವಾಲ್ಮೀಕಿ ಶಾಖೆ ಬೆಳ್ಳಾರೆ ವತಿಯಿಂದ ಆಯುಷ್ಮಾನ್ ನೋಂದಣಿ ಶಿಬಿರ

ವಿಶ್ವ ಹಿಂದೂ ಪರಿಷದ್ ಭಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ವತಿಯಿಂದ ಇಂದು(ಸೆ.06) ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಂಗಣದಲ್ಲಿಆಯುಷ್ಮಾನ್ ನೋಂದಣಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಯುಷ್ಮಾನ್ ಆರೋಗ್ಯ ಮಿತ್ರ ಕಾರ್ಯನಿರ್ವಾಹಕರಾದ ಮುರಳೀ.ಎನ್ ದೀಪ ಬೆಳಗುವ ಮೂಲಕ ಶಿಬಿರದ ಉದ್ಘಾಟನೆಗೈದರು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್-ಭಜರಂಗದಳ ಸುಳ್ಯ ಪ್ರಖಂಡ ವಿದ್ಯಾರ್ಥಿ ಪ್ರಮುಖ್ ಶರಣ್ ಕರ್ಮಜೆ, ಧಾರ್ಮಿಕ...

ಪಯಸ್ವಿನಿ ಸಹಕಾರಿ ಸಂಘ & ಊರುಬೈಲು ಭಗವಾನ್ ಸಂಘದ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಅಭಿಯಾನ

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಂಪಾಜೆ ಕೊಡಗು ಮತ್ತು ಶ್ರೀ ಭಗವಾನ್ ಸಂಘ (ರಿ) ಊರುಬೈಲು ಇವರ ಜಂಟಿ ಆಶ್ರಯದಲ್ಲಿ ತಾ.1ರಿಂದ 5 ರವರೆಗೆ ಸಂಪಾಜೆ ಮತ್ತು ಚೆಂಬು ಸಹಕಾರಿ ಭವನಗಳಲ್ಲಿ ನಡೆದ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಅಭಿಯಾನದ ಸಮಾರೋಪ ಸಮಾರಂಭ ತಾ.5 ಶನಿವಾರದಂದು ಬಾಲಂಬಿಯಲ್ಲಿ...
Ad Widget

ಬಾಳಿಲ: ಬಂಟರ ಸಂಘ ಬಾಳಿಲ ವಲಯ ವತಿಯಿಂದ ಪ್ರತಿಭಾನ್ವಿತರಿಗೆ ಸನ್ಮಾನ

ಬಂಟರ ಯಾನೆ ನಾಡವರ ಸಂಘ ಸುಳ್ಯ ಇದರ ಬಾಳಿಲ ವಲಯದ ವತಿಯಿಂದ 2019-20 ರ ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಬಾಳಿಲ ವಲಯ ವ್ಯಾಪ್ತಿಯ ಜಾತಿ ಬಾಂಧವರಿಗೆ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಅನುಷ್ ಎಣ್ಣೆಮಜಲು, ಬಂಟರ ಸಮಾಜದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ...

ಆತ್ಮ ನಿರ್ಭರ ಭಾರತಕ್ಕಾಗಿ ವಳಲಂಬೆಯಲ್ಲಿ ಸೆ.20 ರಿಂದ 26 ರವರೆಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ರಿ),ಗುತ್ತಿಗಾರು ಇವುಗಳ ಸಹಭಾಗಿತ್ವದಲ್ಲಿ,ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದೊಂದಿಗೆಸೆಪ್ಟೆಂಬರ್ 20 ರಿಂದ 26 ರವರೆಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಿತ್ಯ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತರಬೇತಿ ನಡೆಯಲಿರುವುದು. 15 ವರ್ಷ...

ಪೈಲಾರ್ ನಲ್ಲಿ ಇಂದು (ಸೆ.6 ರಂದು) ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಸುಳ್ಯ ಹಾಗೂ ಪೈಲಾರು ಒಕ್ಕೂದ ಆಶ್ರಯದಲ್ಲಿ ಸೆ.6 ಆದಿತ್ಯವಾರ ದಂದು ಮಿತ್ರ ವೃಂದ ಪೈಲಾರ್ ಕಟ್ಟಡದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ನಡೆಯಲಿದೆ. ಆಯುಷ್ಮಾನ್ ಕಾರ್ಡ್ ಮಾಡಲು ಬರುವವರು ಒರಿಜಿನಲ್ ಆಧಾರ್ ಕಾರ್ಡ್ & ರೇಷನ್ ಕಾರ್ಡ್ ತರಬೇಕಾಗಿ ಸಂಘಟಕರು ತಿಳಿಸಿದ್ದಾರೆ.

ಶಿಕ್ಷಕ ಹರೀಶ್ ಕುಮಾರ್ ವೈ. ಪ್ರೌಢಶಾಲಾ ಶಿಕ್ಷಕರಾಗಿ ಪದೋನ್ನತಿ

ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇನಾಲ ಇಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಹರೀಶ್ ಕುಮಾರ್ ವೈ ಪದೋನ್ನತಿ ಹೊಂದಿದ್ದು, ಇದೀಗ ಸರಕಾರಿ ಪ್ರೌಢಶಾಲೆ ಮಂಜುನಾಥನಗರ ಇಲ್ಲಿನ ಆಂಗ್ಲಭಾಷಾ ಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ. ಇವರು ಕಳೆದ 17 ವರ್ಷಗಳಿಂದ ಸ.ಹಿ.ಪ್ರಾಥಮಿಕ ಶಾಲೆ ಮೇನಾಲದಲ್ಲಿ ಕರ್ತವ್ಯ ನಿರ್ವಹಿಸಿ ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿ...

ಎಸ್ ಎಸ್ ಎಫ್ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ಕುಶಾಲನಗರ ಸೆಕ್ಟರ್ ನೂತನ ಕಚೇರಿಯ ಶಿಲಾನ್ಯಾಸ

ಎಸ್ ಎಸ್ ಎಫ್ .ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ಕುಶಾಲನಗರ ಸೆಕ್ಟರ್ ನೂತನ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮ ಸೆಪ್ಟಂಬರ್ 5 ರಂದು ನಡೆಯಿತು. ಈ ಸಂದರ್ಭದಲ್ಲಿ ಸೈಯದ್ ಕುಟುಂಬದ ಮಹಾನರು, ಉಮಾರ ನೇತಾರರು ಎಸ್ ವೈ ಎಸ್. ಮತ್ತು ಎಸ್ಎಸ್ಎಫ್ ಇದರ ರಾಜ್ಯ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಲ್ಲುಗುಂಡಿ : ಅಪ್ರಾಪ್ತೆಯ ಅತ್ಯಾಚಾರ, ಇಬ್ಬರು ಪೋಲೀಸ್ ವಶಕ್ಕೆ

ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಲೈಂಗಿಕ ದೌರ್ಜನ್ಯ ನಡೆಸಿರುವ ಆಪಾದನೆಯ ಮೇಲೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡ ಕುರಿತು ಕಲ್ಲುಗುಂಡಿಯಿಂದ ವರದಿಯಾಗಿದೆ. ಕಲ್ಲುಗುಂಡಿ ಸಮೀಪದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿ ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಕಲ್ಲುಗುಂಡಿಯ ನಿವಾಸಿಗಳಾದ ಭರತ್ ಹಾಗೂ ರಾಕೇಶ್ ಎಂದು ತಿಳಿದುಬಂದಿದೆ.

ಮೃತಪಟ್ಟ ನ.ಪಂ. ಕಾರು ಚಾಲಕ ಖಾಲಿದ್ ರನ್ನು ಕೊರೊನಾ ವಾರಿಯರ್ಸ್ ಆಗಿ ಪರಿಗಣಿಸಿ, ಸರಕಾರದಿಂದ ಸಿಗುವ ನೆರವು ಒದಗಿಸಲು ಮನವಿ

ನಗರ ಪಂಚಾಯತ್ ಕಾರು ಚಾಲಕರಾಗಿದ್ದು , ಕೋವಿಡ್ ಸೋಂಕಿತರಾಗಿ ಮೃತಪಟ್ಟ ಖಾಲಿದ್ ರವರನ್ನು ಕೊರೊನಾ ವಾರಿಯರ್ಸ್ ಆಗಿ ಪರಿಗಣಿಸಿ ಅವರ ಕುಟುಂಬಕ್ಕೆ ಸರಕಾರದಿಂದ ಸಹಾಯ ಕೊಡಿಸಲು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಮತ್ತು ನಗರ ಪಂಚಾಯತ್ ಆಡಳಿತಾಧಿಕಾರಿ ಸುಳ್ಯ ತಹಶಿಲ್ದಾರ್ ಅನಂತಶಂಕರ್ ರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸೆ .5 ರಂದು ಮನವಿ ಸಲ್ಲಿಸಿದರು. ಕಳೆದ ನಾಲ್ಕೈದು...

ಕೆ.ಪಿ.ಎಸ್. ಬೆಳ್ಳಾರೆ : ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಪುಷ್ಪಾವತಿ ಪಿ ಪದೋನ್ನತಿ

ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭಕ್ತಕೋಡಿ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಪುಷ್ಪಾವತಿ ಪಿ ಪದೋನ್ನತಿ ಹೊಂದಿದ್ದು, ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್) ಬೆಳ್ಳಾರೆ ಇಲ್ಲಿನ ಪ್ರೌಢಶಾಲಾ ವಿಭಾಗಕ್ಕೆ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಭಡ್ತಿಗೊಂಡಿರುತ್ತಾರೆ. ಇವರು 1998 ರಿಂದ ಸ.ಹಿ.ಪ್ರಾಥಮಿಕ ಶಾಲೆ ಭಕ್ತಕೋಡಿಯಲ್ಲಿ ಸೇವೆಯನ್ನು ಆರಂಭಿಸಿ 22 ವರ್ಷಗಳ...
Loading posts...

All posts loaded

No more posts

error: Content is protected !!