- Monday
- March 31st, 2025

ಪ್ರಸ್ತುತ ಸುಳ್ಯ ತಾಲೂಕು ಆರೋಗ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವಂತಹ ಡಾ| ನಂದಕುಮಾರ್ ಬಾಳಿಕಳ ರವರು ಮಾ.31 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದು, ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಕಡ್ಯ ತರವಾಡು ರಾಘವ ರೇಂಜರ್ ಎಂದೇ ಖ್ಯಾತಿ ಹೊಂದಿದ್ದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಳಿಕಳ ಶ್ರೀ ರಾಘವ ಗೌಡ ಮತ್ತು ಶ್ರೀಮತಿ ಯಶೋಧ ದಂಪತಿಯ ಪುತ್ರರಾಗಿ 23...
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು 41 ನೇ ದಿನಕ್ಕೆ ಕಾಲಿರಿಸಿದೆ. ಮಾ.31ರಂದು ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
ಸುಳ್ಯದಲ್ಲಿ ಸಂಚಲನ ಮೂಡಿಸಿದ್ದ ಮಹಿಳೆಗೆ ಹಲ್ಲೆ ಪ್ರಕರಣಲ್ಲಿ ಅರೋಪಿಯಾಗಿರುವ ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರಿಗೆ ಮಧ್ಯಕಾಲಿಕ ನಿರೀಕ್ಷಣಾ ಜಾಮೀನು ನ್ಯಾಯಾಲಯ ಮಂಜೂರು ಮಾಡಿದೆ.ಶರೀಫ್ ಕಂಠಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿ, ಅರ್ಜಿಯನ್ನು ಅತೀ ತುರ್ತಾಗಿ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು. ಈ ಬಗ್ಗೆ ವಿಚಾರಣೆಗೆ ತೆಗೆದುಕೊಂಡ 5 ನೇ ಹೆಚ್ಚುವರಿ ನ್ಯಾಯಾಲಯವು...

ಮಡಪ್ಪಾಡಿ ಗುತ್ತಿಗಾರು ರಸ್ತೆಯ ಚಿರೆಕಲ್ಲು ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೊ ರವಿ ಎಂಬವರ ಮನೆಯ ಮೇಲೆ ಉರುಳಿ ಬಿದ್ದ ಘಟನೆ ಇಂದು ನಡೆದಿದೆ. ಸ್ಕಾರ್ಪಿಯೋ ನಿತ್ಯಾನಂದ ಮುಂಡೋಡಿ ಯವರದ್ದು ಎಂದು ತಿಳಿದುಬಂದಿದೆ. ವಾಹನದಲ್ಲಿದ್ದವರು ಹಾಗೂ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಜಾಲತಾಣದ ಅನಾವರಣ, ಕೃಷಿಕರಿಗಾಗಿ ಜೇನು ಪೆಟ್ಟಿಗೆ ನಿರ್ವಹಣಾ ಸೇವೆಯ ಲೋಕಾರ್ಪಣೆ ಮತ್ತು ಜೇನು ಕೃಷಿಕರ ಸಮ್ಮಿಲನ ಕಾರ್ಯಕ್ರಮ ಪುತ್ತೂರಿನ ಜಿ. ಎಲ್. ರೋಟರಿ ಸಭಾಭವನದಲ್ಲಿ ಮಾ.29 ರಂದು ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಅಶೋಕ ಕುಮಾರ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜೇನು ಕೃಷಿಯ ಸಾಧಕರನ್ನು...

ಸುಳ್ಯದ ನಾವೂರಿನ ಶ್ರೀಮತಿ ಚಂದ್ರಿಕಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯವರ ಮೇಲೆ ಮಾ.26 ರಂದು ಎಫ್.ಐ.ಆರ್ ದಾಖಲಾಗಿದ್ದು ಈ ತನಕ ಬಂಧಿಸದೇ ಇರುವುದನ್ನು ಖಂಡಿಸಿ ಶೀಘ್ರವಾಗಿ ಆತನನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಯವರು ಸುಳ್ಯದ ವೃತ್ತ ನಿರೀಕ್ಷರಿಗೆ ಮನವಿ ಸಲ್ಲಿಸಿದರು. ಮಾ.30...

ಸುಳ್ಯ ನಗರ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಶರೀಫ್ ಕಂಠಿಯವರ ಮೇಲೆ ಮಹಿಳೆಯ ಮೇಲೆ ಹಲ್ಲೆ ಎಂಬ ಸುಳ್ಳು ಆರೋಪವನ್ನು ಹೊರಿಸಿ ದೂರು ಕೊಟ್ಟಿರುವುದು ಖಂಡನೀಯ. ನಗರ ಪಂಚಾಯತ್ ಸದಸ್ಯನಾಗಿ ತಮ್ಮ ವಾರ್ಡಿನಲ್ಲಿ ಜಾತ್ಯತೀತವಾಗಿ ಅಬಿವೃದ್ದಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಒಬ್ಬ ಜನಪ್ರತಿನಿಧಿಯಾಗಿರುವ ಇವರ ಮೇಲೆ ಈ ರೀತಿಯ ಸುಳ್ಳು ಆರೋಪ ಮಾಡಿದ್ದು ಈ ಬಗ್ಗೆ...

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನೂತನ ಅಧ್ಯಕ್ಷರಾಗಿ 3ನೇ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾದ ಅಜಿತ್ ರಾವ್ ಕಿಲಂಗೋಡಿ ಅಧ್ಯಕ್ಷರಾಗಿಯೂ, ಹರ್ಷ ಜೋಗಿಬೆಟ್ಟು ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫೆ. 7ರಂದು ಚುನಾವಣೆ ನಡೆದಿದ್ದರೂ, ಕಾಂಗ್ರೆಸ್ ಕಡೆಯಿಂದ 200 ಮತ್ತು ಬಿಜೆಪಿ ಕಡೆಯಿಂದ 266 ಸದಸ್ಯರು ಕೋರ್ಟ್ ಮೂಲಕ ಮತದಾನದ ಹಕ್ಕನ್ನು ಪಡೆದುಕೊಂಡು ಬಂದು ಮತ ಚಲಾಯಿಸಿದ್ದರಿಂದ ವಿಜೇತ ಅಭ್ಯರ್ಥಿಗಳ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ವಲಯದ ನೆಟ್ಟಾರು ಕಾರ್ಯ ಕ್ಷೇತ್ರದ ಧನ್ಯಶ್ರೀ ಸಂಘದ ಸದಸ್ಯರಾದ ನೆಸಿಮಾರವರು ಮೈಕ್ರೋ ಬಚತ್ ಪಾಲಿಸಿ ಮಾಡಿಸಿದ್ದು ಅನಾರೋಗ್ಯದ ಕಾರಣ ಮರಣ ಹೊಂದಿದ್ದು, ಮೈಕ್ರೋ ಬಚತ್ ಮರಣ ಸಾಂತ್ವನ ಮೊತ್ತ ಎರಡು ಲಕ್ಷ ರೂಪಾಯಿ ಮಂಜೂರಾತಿ ಪತ್ರವನ್ನು ವಿನಿಯೋಗದಾರದ ರಫೀಕ್ ರವರಿಗೆ ಒಕ್ಕೂಟದ ಅಧ್ಯಕ್ಷರಾದ ಅಣ್ಣುರವರು ಮಾ.29 ರಂದು...

ಸುಳ್ಯ ನಗರ ಪಂಚಾಯ್ ವ್ಯಾಪ್ತಿಯ ಬಹುಬೇಡಿಕೆಯ ರಸ್ತೆ ಕೊಡಿಯಾಲಬೈಲು- ನೀರಬಿದಿರೆ- ದುಗಲಡ್ಕ- ರಸ್ತೆಯು 45ಲಕ್ಷದ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು ಇದರ ಗುದ್ದಲಿಪೂಜೆಯನ್ನು ಶಾಸಕರಾದ ಭಾಗೀರಥಿ ಮುರುಳ್ಯ ನೆರವೆರಿಸಿದರು.ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಉಪಾಧ್ಯಕ್ಷ ಬುದ್ದನಾಯ್ಕ, ಸದಸ್ಯರಾದ ಕಿಶೋರಿ ಶೇಟ್,ಬಾಲಕೃಷ್ಣ ರೈ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಭಾಜಪ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,...

All posts loaded
No more posts