Ad Widget

“ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸುವ ಯುವಶಕ್ತಿ ಆಧಾರಿತ ಬಜೆಟ್” : ಕ್ಯಾಪ್ಟನ್ ಬ್ರಿಜೇಶ್ ಚೌಟ

ನವದೆಹಲಿ : “ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ ಸಿದ್ಧಗೊಂಡ 'ಯುವ ಶಕ್ತಿ' ಆಧಾರಿತ ದೂರದೃಷ್ಟಿಯ ಬಜೆಟ್” ಎಂಬುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಣ್ಣಿಸಿದ್ದಾರೆ. ...

ಪಂಜದ ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೇವರಿಗೆ ರಂಗಪೂಜೆ

ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಜ.31 ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ಪಂಜ ಶಿವಳ್ಳಿ ವಲಯದ ಮಹಿಳಾ ಸದಸ್ಯರಿಂದ ಭಜನಾ ಸಂಕೀರ್ತನೆ, ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪಲ್ಲೋಡಿ ರವರಿಂದ ಕುಣಿತ ಭಜನೆ, ರಾತ್ರಿ ಶ್ರೀ...
Ad Widget

ಕುಲ್ಕುಂದ – ಬಿಸಿಲೆ ಗಡಿ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಫೆಬ್ರವರಿ 01 : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದಾದ್ಯಂತ ವಿವಿಧ ಭಾಗಗಳಿಂದ ಸಾವಿರಾರು ಜನರು ದಿನಂಪ್ರತಿ ಆಗಮಿಸುತ್ತಿದ್ದಾರೆ‌. ಅದರೊಂದಿಗೆ ರಸ್ತೆಗಳ ಇಕ್ಕೆಲೆಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ವಿವಿಧ ವಾಹನಗಳಲ್ಲಿ ಬರತಕ್ಕಂತಹ ಪ್ರಯಾಣಿಕರು ಎಲ್ಲಿಂದರಲ್ಲಿ ಕಸ, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ತಟ್ಟೆಗಳನ್ನು ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಹಾಕಿ ಪರಿಸರವನ್ನ ಮಲಿನ ಮಾಡುವಂತದ್ದು ಸರ್ವೇಸಾಮಾನ್ಯವಾಗಿದೆ. ಹಾಗೆಯೇ...

“ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ಕಲೆ, ಸಾಹಿತ್ಯದ ಮೂಲ ಧ್ಯೇಯ” – ಡಾ. ಲಕ್ಷ್ಮೀಶ ತೋಳ್ಪಾಡಿ ; “ಡಾ. ಕೇನಾಜೆ ಸಂವೇದನಾಶೀಲ ಬರಹಗಾರ” : ಅತಿಥಿಗಳ ಅಭಿಮತ  ; ಡಾ. ಸುಂದರ ಕೇನಾಜೆ ಅವರ “ಮಾತಿಲ್ಲದ ಮಾತು” ಕೃತಿ ಬಿಡುಗಡೆ ಹಾಗೂ ಅವರ ಪುಸ್ತಕಗಳ ಪ್ರದರ್ಶನ

ಸುಳ್ಯ : “ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಕಲೆ ಮತ್ತು ಸಾಹಿತ್ಯದ ಮೂಲ ಧ್ಯೇಯ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯವಿಲ್ಲ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್, ಕಾರ್ಯನಿರತ...

ಕವನ : ಪ್ರಕೃತಿಯ ಜೊತೆಗೆ ಬದುಕುವುದೇ ಸಂಸ್ಕೃತಿ… ✍️ಉಲ್ಲಾಸ್ ಕಜ್ಜೋಡಿ

ನಮ್ಮೊಳಗಿನ ಜೀವಕ್ಕೆ ಜೀವಾಳ ಪ್ರಕೃತಿ, ನಮ್ಮೆದೆಯ ಶ್ವಾಸಕ್ಕೆ ಅದು ಉಸಿರ ನೀಡಿ ತೋರುವುದು ಪ್ರೀತಿ, ನಾವುಗಳು ಮಾತ್ರ ಅದರೊಂದಿಗೆ ಸದಾ ಮೆರೆಯುವೆವು ವಿಕೃತಿ...ಕಸ-ಕಡ್ಡಿ-ಪ್ಲಾಸ್ಟಿಕ್ಕುಗಳ ಎಲ್ಲೆಡೆ ಸುರಿಯುವೆವು ಇಲ್ಲದೇ ಯಾವುದೇ ಭವಿಷ್ಯದ ಭೀತಿ, ಮರ-ಗಿಡಗಳ ಎಗ್ಗಿಲ್ಲದೇ ಕಡಿಯುವೆವು ಪ್ರಕೃತಿಯ ಮೇಲೆಯೂ ತೋರದೇ ಪ್ರೀತಿ...ಪ್ರೀತಿ ನೀಡುವವರಿಗೆ ಗೌರವವ ತೋರುವುದು ನಮ್ಮ ನಿಜವಾದ ಸಂಸ್ಕೃತಿ, ಆದರೂ ನಾವ್ಯಾಕೆ ಪ್ರಕೃತಿಯ ಮೇಲೆ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ: 01-02-2026 ಭಾನುವಾರ 📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 01,🐏ಮೇಷ ರಾಶಿ🐏📖,ದೂರದ ಪ್ರದೇಶದಲ್ಲಿರುವ ಆತ್ಮೀಯ ಸ್ನೇಹಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು,ಪರಿಹಾರ:- ಕುಲ ದೇವರ ಸ್ಮರಣೆ ಮಾಡಿ,02,🐂ವೃಷಭ ರಾಶಿ🐂📖,ಮಿತ್ರರ...

ಫೆ.1 ಮತ್ತು 2ರಂದು ವಳಲಂಬೆ ಜಾತ್ರೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಫೆ.1 ಮತ್ತು 2 ರಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ತಿಳಿಸಿದ್ದಾರೆ.ಜ.25 ರಂದು ಶ್ರೀ ದೇವರಿಗೆ ಮತ್ತು ದೈವಗಳಿಗೆ ಗೊನೆ ಮುಹೂರ್ತ ನೆರವೇರಿದ್ದು, ಜ.01 ರಂದು ಬೆಳಿಗ್ಗೆ ಗಂಟೆ 8:00ಕ್ಕೆ ಗಣಪತಿ...

ರಾಮಕೃಷ್ಣ ಭಟ್ ಹೂವನ ವಳಲಂಬೆ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಹೂವನ ಮನೆ  ರಾಮಕೃಷ್ಣ ಭಟ್ ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.31 ರಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೌಭದ್ರೆ, ಪುತ್ರ ಪ್ರಸಾದ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಆರಂಭ

ಕಳೆದ ಮೂವತ್ತು ವರುಷಗಳಿಂದ ಮಂಜೇಶ್ವರದ ಹೊಸಂಗಡಿಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ನೇತ್ರತ್ವದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಕಾರ್ಯಾಚರಿಸುತ್ತಿದ್ದು ಗಡಿನಾಡಿನ ಜನರಿಗೆ ಉತ್ತಮ ದಂತ ಚಿಕಿತ್ಸೆ ನೀಡುತ್ತಾ ಬಂದಿದೆ.ವಕ್ರದಂತ ಚಿಕಿತ್ಸೆ,ಬೇರುನಾಳ ಚಿಕಿತ್ಸೆ,ಇಂಪ್ಲಾಂಟ್ ಚಿಕಿತ್ಸೆ ಹೀಗೆ ಎಲ್ಲಾ ಪರಿಣಿತ ವೈದ್ಯರ ಸೇವೆ ಲಭ್ಯವಿರುತ್ತದೆ.ಇದೀಗ ಹೊಸದಾಗಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಮತ್ತು ಸ್ಲೀಪ್ ಕ್ಲಿನಿಕ್...

ಕೊಲ್ಲಮೊಗ್ರು : ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಒತ್ತೆಕೋಲ ಉತ್ಸವ”

ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಒತ್ತೆಕೋಲ ಉತ್ಸವ”ವು ನಡೆಯಲಿದ್ದು, ಫೆ.08 ಆದಿತ್ಯವಾರದಂದು ಗೊನೆ ಮುಹೂರ್ತ ಹಾಗೂ ಫೆ.12 ಗುರುವಾರದಂದು ಸಂಕ್ರಮಣ ಪೂಜೆ ನೆರವೇರಲಿದೆ.ಒತ್ತೆಕೋಲ ಉತ್ಸವದ ಮೊದಲನೇ ದಿನವಾದ ಫೆ.15 ಆದಿತ್ಯವಾರದಂದು ಪ್ರಾತಃಕಾಲ 5:00 ಗಂಟೆಗೆ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30ಕ್ಕೆ ಗಣಪತಿ ಹೋಮ, ಬೆಳಿಗ್ಗೆ 10:00...
Loading posts...

All posts loaded

No more posts

error: Content is protected !!