ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ರಂಜಿಸಲಿದ್ದಾರೆ ಮಂಡೆಕೋಲು ಬಾಲಕಲಾವಿದರು – ಸೆ.23 ರಂದು ಅರಿವು ಕೇಂದ್ರದ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡದಿಂದ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನ

ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಡೆಕೋಲು ಗ್ರಂಥಾಲಯದ ಅರಿವು ಕೇಂದ್ರದ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡದ ಬಾಲ ಕಲಾವಿದರಿಂದ ಮಹಿಷ ಮರ್ಧಿನಿ ಎಂಬ ಯಕ್ಷಗಾನ ಸೆ.23 ರಂದು ಪ್ರದರ್ಶನಗೊಳ್ಳಲಿದೆ. ದೇಶ ಹಾಗೂ ವಿದೇಶಗಳಲ್ಲಿ ಪ್ರಸಿದ್ಧಿ ಪಡೆಚ ವಿಶ್ವವಿಖ್ಯಾತ ದಸರಾ ಕಾರ್ಯಕ್ರಮದಲ್ಲಿ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶಗೊಳ್ಳುತ್ತಿರುವುದು ಮಂಡೆಕೋಲು ಗ್ರಾಮಕ್ಕೂ ಸುಳ್ಯಕ್ಕೂ ಹೆಮ್ಮೆಯ...

ನಾರಾಯಣ ಕಾಮತ್ ಅಡ್ಡನಪಾರೆ ನಿಧನ

ದೇವಚಳ್ಳ ಗ್ರಾಮದ ಅಡ್ಡನಪಾರೆ ನಾರಾಯಣ ಕಾಮತ್ (65) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಮೃತರುಪತ್ನಿ ಲಲಿತ, ಪುತ್ರಿಯರಾದ ರೋಹಿಣಿ, ಶುಭಮಂಗಳ, ಪುತ್ರ‌ ದಯಾನಂದ ಕಾಮತ್, ಅಳಿಯಂದಿರು, ಮೊಮ್ಮಕ್ಕಳು, ಸಹೋದರರಾದ ಚಂದ್ರಶೇಖರ ಕಾಮತ್, ಪ್ರಭಾಕರ ಕಾಮತ್, ಸಹೋದರಿಯರಾದ ಪ್ರೇಮಲತಾ, ಗುಲಾಬಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.
Ad Widget

ಪೆರುವಾಜೆ ಜಲದುರ್ಗಾದೇವಿ ಕ್ಷೇತ್ರದಲ್ಲಿ  ನವರಾತ್ರಿ ಉತ್ಸವ ಮೊದಲ ದಿನ ; ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ವತಿಯಿಂದ ಬಂಟಿಂಗ್ಸ್ ಅಳವಡಿಕೆಗೆ ಕರಸೇವೆ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ‌ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಸೆ.21 ರಿಂದ ಪ್ರಾರಂಭಗೊಂಡಿದ್ದು, ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ವತಿಯಿಂದ ಕರಸೇವೆ ನಡೆಯಿತು.ರವಿವಾರ ರಾತ್ರಿ ರಥಬೀದಿಯ ಒಂದು ಬದಿಯಲ್ಲಿ ಬಂಟಿಂಗ್ಸ್ ಅಳವಡಿಕೆ ನಡೆಯಿತು.

ನಡುಗಲ್ಲು ಜವಾಹರ್ ಯುವಕ ಮಂಡಲಕ್ಕೆ 2024-25ನೇ ಸಾಲಿನ “ಗಮನಾರ್ಹ ಸಾಧನೆ ಮಾಡಿದ ಯುವಕ ಮಂಡಲ ಪ್ರಶಸ್ತಿ”

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಮಹಾಸಭೆಯಲ್ಲಿ ಅತ್ಯುತ್ತಮ ಯುವಕ ಹಾಗೂ ಯುವತಿ ಮಂಡಲಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮವು ಸೆ.20 ರಂದು ಯುವಜನ ಸಂಯುಕ್ತ ಮಂಡಳಿ ಸಭಾಭವನ ಯುವಸದನ ಸುಳ್ಯ ಇಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನಡುಗಲ್ಲು ಜವಾಹರ್ ಯುವಕ ಮಂಡಲವು “2024-25ನೇ ಸಾಲಿನ ಗಮನಾರ್ಹ ಸಾಧನೆ ಮಾಡಿದ ಯುವಕ...

ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಸ. ಹಿ. ಪ್ರಾ. ಶಾಲೆ ಶೇಣಿ, ಚೊಕ್ಕಾಡಿಯಲ್ಲಿ ಹಸಿರು ಉಸಿರು ಕಾರ್ಯಕ್ರಮ

ಮಕ್ಕಳಿಗೆ ಪರಿಸರವನ್ನು ಪ್ರೀತಿಸುವ ಜೀವನ ಮೌಲ್ಯಗಳನ್ನು ಕಲಿಸಿ: ಅಶೋಕ್ ಚೂಂತಾರ್ ಶಾಲಾ ಆವರಣದಲ್ಲಿ ಹಣ್ಣಿನ ತೋಟ, ಔಷಧಿಯ ಸಸ್ಯೋದ್ಯಾನ ನಿರ್ಮಾಣ ಗಿಡಗಳ ಅತ್ಯುತ್ತಮ ಪೋಷಣೆಗೆ ಬಹುಮಾನ ಘೋಷಣೆ ಎನ್ನೆಂಸಿ, ಸೆ.22; ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಶೇಣಿ ಶಾಲಾ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ...

ಸುಳ್ಯ ನಗರದ ಕಸಕ್ಕೆ ಮುಕ್ತಿ – ನಗರ ಪಂಚಾಯತ್ ಆವರಣದಲ್ಲಿ ರಾಶಿ ಬಿದ್ದಿದ್ದ ಕಸ ಈಗ ಖಾಲಿ ಖಾಲಿ –  ಕಸ ರಾಜಕೀಯಕ್ಕೆ ತೆರೆ ಎಳೆದ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದ್ರೆ

ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿರುವ ಶೆಡ್ ನಲ್ಲಿ ಹಲವಾರು ವರ್ಷಗಳಿಂದ ರಾಶಿ ಬಿದ್ದಿದ್ದ ಕಸಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ನಗರ ಪಂಚಾಯತ್ ಈಗಿನ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಪ್ರಯತ್ನದಿಂದ ಮೊದಲ ಬಾರಿಗೆ ಕಸ ಸಂಪೂರ್ಣ ಖಾಲಿಯಾಗಿದೆ. ಶಶಿಕಲಾ ನೀರಬಿದಿರೆ ಅಧ್ಯಕ್ಷರಾದ ಕೂಡಲೇ ಸುಳ್ಯದ ಕಸದ ಸಮಸ್ಯೆ ಪರಿಹಾರಕ್ಕೆ ಸಂಸದರು, ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಅಧಿಕಾರಿಗಳ...

ಸುಳ್ಯ: ಸೈಂಟ್ ಜೋಸೆಫ್ ಶಾಲಾ ಯೋಗ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಸೆಪ್ಟೆಂಬರ್ 19ರಂದು   ವಾಮಂಜೂರಿನ ಎಸ್.ಡಿ.ಎಮ್ ಮಂಗಳ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕರ್ 7ನೇ, ಆರ್ಟಿಸ್ಟಿಕ್ ಡಬಲ್ಸ್ ಹಾಗೂ ತಾಳಬದ್ದ ಡಬಲ್ಸ್ ವಿಭಾಗದಲ್ಲಿ  ಹಾರ್ದಿಕ...

ಯೋಗ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಸೆಪ್ಟೆಂಬರ್ 19ರಂದು ವಾಮoಜೂರ್ ನ ಎಸ್. ಡಿ. ಎಮ್. ಮಂಗಳ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕರ್7ನೇ, ಆರ್ಟಿಸ್ಟಿಕ್ ಡಬಲ್ಸ್ ಹಾಗೂ ತಾಳಬದ್ದ ಡಬಲ್ಸ್...

ಬೊಮ್ಮಾರು ಗಜಾನನ ಯುವತಿ ಮಂಡಲಕ್ಕೆ “2024-25ನೇ ಸಾಲಿನ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿ”

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಮಹಾಸಭೆಯಲ್ಲಿ ತಾಲೂಕಿನ ಅತ್ಯುತ್ತಮ ಯುವಕ&ಯುವತಿ ಮಂಡಳಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಿತು.“2024-25ನೇ ಸಾಲಿನ ತಾಲೂಕಿನ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿ”ಯನ್ನು ಬೊಮ್ಮಾರು ಗಜಾನನ ಯುವತಿ ಮಂಡಲವು ಪಡೆದುಕೊಂಡಿತು.

ನೆಕ್ಸ್ಟ್ ಜನರೇಶನ್ ಜಿ.ಎಸ್.ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇಮಕ

ನೆಕ್ಸ್ಟ್ ಜನರೇಶನ್  ಜಿ.ಎಸ್.ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಪಕ್ಷ ನೇಮಕಗೊಳಿಸಿದೆ. ಜಿ.ಎಸ್.ಟಿ ಸ್ಲಾಬ್ ವಿಚಾರವಾಗಿ ರಾಜ್ಯದ್ಯಾಂತ ಜನಸಾಮಾನ್ಯರಿಗೆ ತಿಳಿಸಲು ಈ ಜವಾಬ್ದಾರಿ ನೀಡಲಾಗಿದ್ದು,ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ  ಆಯೋಜಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!